Home / ಕವನ / ಕವಿತೆ / ……ಹೋಗಿ ಬಿಡು

……ಹೋಗಿ ಬಿಡು

ನೋಡು-
ಕಣ್ಣು ತುಟಿ ಮೂಗು
ಕೈಯಿ ಮೈಯಿ
ಏನಿಲ್ಲದಿದ್ದರೂ
ಇದ್ದ ಹಾಗೆಯೇ ಕಾಣಿಸುವ
ಚಂದ್ರನನ್ನು ಕಡೆಯ ಬಾರಿ
ಎಂಬಂತೆ ನೋಡಿ ಬಿಡು.

ಬೆಂಕಿಯನ್ನು ಬೆಳಕನ್ನು
ಬಣ್ಣವನ್ನು ಬೆಡಗನ್ನು
ತುಂಬಿಕೊಂಡಿರುವ,
ನಿನ್ನೊಳಗೆ
ಬೆರಗನ್ನು ಭಯವನ್ನು
ಹುಟ್ಟಿಸಿದ
ಆಕಾಶವನ್ನು ಕಡೆಯ ಬಾರಿ
ಎಂಬಂತೆ ನೋಡಿ ಬಿಡು.

ನೀನು ಆಟವಾಡಿದ ನೆಲ
ನಿನಗೆ ಪಾಠ ಕಲಿಸಿದ ಹೊಲ
ನಿನ್ನಲ್ಲಿ ಪ್ರೀತಿ ಹುಟ್ಟಿಸಿದ ಹುಡುಗ
ನಿನಗೆ ನೀತಿ ಬೋಧಿಸಿದ ತಂದೆ
ಎಲ್ಲರನ್ನೂ ಕಡೆಯ ಬಾರಿ
ಎಂಬಂತೆ ನೋಡಿ ಬಿಡು.

ಹೋಗು-
ಹುಲ್ಲು ಪೊದೆ ಮರಗಿಡಗಳಲ್ಲಿ
ಹುದುಗಿರುವ
ಹೂವುಗಳನ್ನು ಅರಳಿಸು
ಹಾಡುಗಳನ್ನು ಎಬ್ಬಿಸು.

ನಿನ್ನ ಅಹಂಕಾರನ್ನು
ನಿನ್ನ ಪ್ರೀತಿಯನ್ನು
ನಿನ್ನ ದುಃಖವನ್ನು
ಇಲ್ಲೆ ಈ ದಡದಲ್ಲಿರಿಸಿ
ತಣ್ಣಗೆ, ಕಡಲಿನೊಳಗೆ
ನದಿಯ ಹಾಗೆ
ನಡೆದು ಹೋಗಿಬಿಡು…..


Tagged:

ನಾಡಿಗೆ ಸ್ವಾತಂತ್ರ ಬಂದಿದೆ. ಎಲ್ಲೆಲ್ಲೂ ಸ್ವೈರಾಚಾರ ಹೆಚ್ಚಿದೆ. ಸ್ವಾತಂತ್ರವೆಂದರೆ ಸ್ವೇಚ್ಛಾಚಾರ ಎನ್ನುವಂತೆ ನಾಡಿನ ಜನ ವರ್ತಿಸುತ್ತಿದೆ; ಬಹುದಿನದ ಸಾಧನೆಯಿಂದ ಪಡೆದ ಸಿದ್ದಿಯನ್ನು ಮಣ್ಣುಗೂಡಿಸುತ್ತಲಿದೆ. ಇದನ್ನು ತಡೆಯಲಿಕ್ಕೆ ಭಾರತದ “ಹಳ್ಳಿ-ಹಳ್ಳಿಗಳಲ್ಲಿಯೂ ಗ್ರಾಮ ಸುರಕ್ಷಕ...

“ವತ್ಸಲಾ……..!” ನಿಟ್ಟುಸುರಿನೊಂದಿಗೆ ಕುಮಾರನು ಆರಾಮ ಕುರ್‍ಚಿಯ ಮೇಲೆ ದೊಪ್ಪನೆ ಬಿದ್ದು ಕೊಂಡನು. ಚಿಕ್ಕಬಾಲಕನೊಬ್ಬನು ಕಿಡಿಕಿಯಲ್ಲಿ ಹಣಿಕಿ ಹಾಕಿ “ಕುಮಾರಣ್ಣ” ಎಂದು ಕೂಗಿದಂತಾಯಿತು. ಎದ್ದು ನೋಡುತ್ತಾನೆ; ಕೆಂಪು ಮಸಿಯಿಂದ ವಿಳಾಸ ಬರೆದ...

“ಭೀಮಾ ಮಾಸ್ತರರನ್ನು ಇಷ್ಟ ಮೋಟರ ಸ್ಟಾಂಡಿನ ತನಕ ಕಳಿಸಿ ಬಾರಪ್ಪಾ.” ಬಾಯಕ್ಕ ನೆರೆಮನೆಯವರ ಆಳಿಗೆ ವಿನಯದಿಂದ ಹೇಳಿ ನನ್ನ ಕಡೆಗೆ ಹೊರಳಿ ಅಂದಳು: “ಬಿಡಿರಿ, ನಿಮ್ಮ ಬ್ಯಾಗ ತಗೊಂಡ ಬರತಾನ ಭೀಮಾ” “ಯಾತಕ್ಕ? ನಾ ಕೈಯೊಳಗ ಸಹಜ ಒಯ್ಯತೇನೆ” ನಾನು ಹೀಗೆ ಹೇಳಿದೆನಾದರೂ ಭೀಮಪ್...

ಸಿಗರೆಟ್‌ನ್ನು ಕೊನೆಯ ಸಲ ಎಳೆದು ಬದಿಗಿದ್ದ ಅಶ್‌ಟ್ರೆಯಲ್ಲಿ ಹಾಕಿದ. ಮೂರು ದಿನಗಳಿಂದ ಹೇಳಲಾಗದಂತಹ ಯಾತನೆ ಅವನನ್ನು ಹಿಂತಿಸುತ್ತಿದೆ. ಇದ್ದಿದ್ದು ಮಿತ್ರನ ಮಾತುಗಳು ಬಂದು ಕಿವಿಗೆ ಅಪ್ಪಳಿಸಿ ಎತ್ತ ನೋಡಿದರೂ ಅವನದೆ ಮುಖ ಕಾಣುತ್ತಿದೆ. “ನಾ ಹೇಳುವದನ್ನು ಅರ್‍ಥಮಾಡಿ ಕೊಳ್ಳು...

ಬೆಳಿಗ್ಗೆಯಿಂದ ಕತ್ತಲೆಯವರೆಗೂ ಬಸ್ ಸ್ಟಾಂಡಿನಲ್ಲಿ ಬಸ್ಸುಗಳಿಗೆ ಹತ್ತಿ ಇಳಿದುಕೊಂಡು ಎಷ್ಟು ಗೋಗರೆದು ಬಿಕ್ಷೆ ಬೇಡಿದರೂ ಆ ಹುಡುಗನಿಗೆ ಮಧ್ಯಾಹ್ನದ ಊಟ ಮಾಡುವಷ್ಟು ಹಣ ಸಂಗ್ರಹವಾಗುತ್ತಿರಲಿಲ್ಲ. ಮಧ್ಯಾಹ್ನ ಬಿಸ್ಕಿಟು ಮತ್ತು ನಲ್ಲಿ ನೀರು ಕುಡಿದು ಹಸಿವು ತಣಿಸಿದರೂ ರಾತ್ರಿಯ ಊಟಕ್ಕ...