ಪ್ರಕೃತಿ ಮತ್ತು ಪುರುಷ

ಬಿಡಿಸಲಾಗದ ಬಂಧವಿದು
ಆದರೂ ಒಗಟು.
ಒಳಗೊಳಗೆ ತುಡಿತ-ಮಿಡಿತ
ತೋರಿಕೆಯ ಹಿಂದೆಗೆತ

ಭಾನು-ಭುವಿಯರ ಮಿಲನ
ಅಂಭವ ಮಧ್ಯಂತರಾಳದೊಳು
ಕ್ಷಿತಿಜದೊಳು ಭಂಗರಹಿತ
ತುಂಬು ಬಿಂದಿಗೆಯಂತೆ
ಹಬ್ಬಿ ನಿಂತಿದೆ ಪ್ರೀತಿ
ಬಿಂಬ ಪ್ರತಿಬಿಂಬವಾಗುವ ಬಯಕೆ
ಆದರೂ ಮನ ಬೆರೆತರೂ
ಬೆರೆಯದಂತೆ, ಒಲಿದರೂ
ಒಲಿಯದಂತೆ ಇರುವುದೇತಕೆ
ಪದ್ಮಪತ್ರದಂತೆ?

ಒಡಲು ತುಂಬಬೇಕು
ಆ ಉರಿ ಜ್ವಾಲೆ ಕಿರಣಗಳಿಂದಷ್ಟೇ
ಗರ್ಭ ಫಲಿತ, ಇಲ್ಲದಿರೆ
ಕೆಟ್ಟು ಸ್ಖಲಿತ, ಈಚೆ ಈ ವಧು
ತೆರೆದುಕೊಂಡರೆ ತಾನೆ
ಈ ಶಾಖ ಶಾಲೆ ಮೌಲ್ಯ ಸಹಿತ
ಇಲ್ಲದಿರೆ ವ್ಯರ್ಥ ಮೊರೆತ

ನೀ ನನಗಾರೆ ನಾ ನಿನಗೆ
ಈ ನಂಟು ಜನ್ಮ ಜನ್ಮದ ಗಂಟು
ಅರಿತು ನಡೆ ಸವಿಯುಂಟು
ಬೆಲ್ಲದ ಅಂಟು.


Previous post ಈ ಒಂದು ಕ್ಷಣದ ಹಿಂದೆ….
Next post ಮಂಡೂಕ ರಾಜ್ಯ

ಸಣ್ಣ ಕತೆ

  • ವಲಯ

    ಅವಳ ಕೈ ಬೆರಳುಗಳು ನನ್ನ ಮುಖದ ಮೇಲೆ ಲಯಬದ್ಧವಾಗಿ ಚಲಿಸುತ್ತಿವೆ. ಕಂಗಳ ಮೇಲೆ ಅದೊಂದು ತರಹ ಮಂಪರು ಮೆತ್ತ-ಮೆತ್ತಗೆ ಹಾರಾಡತೊಡಗುತ್ತಿದೆ! ನಾಳೆ ಹೋಗಬೇಕಾದ ‘ಪಾರ್ಟಿ’ ಗೆ ಈಗಾಗಲೇ… Read more…

  • ಆಮಿಷ

    ರಮಾ ಕುರ್ಚಿಯನ್ನೊರಗಿ ಕುಳಿತಿದ್ದಳು. ದುಃಖವೇ ಮೂರ್ತಿವೆತ್ತಂತೆ ಕುಳಿತಿದ್ದ ಅವಳ ಹೃದಯದಲ್ಲಿ ಭೀಕರ ಕೋಲಾಹಲ ನಡೆದಿತ್ತು. ಕಣ್ಣುಗಳು ಆಳಕ್ಕಿಳಿದಿದ್ದವು. ದೇಹದ ಅಣು ಅಣುವೂ ನೋವಿನಿಂದ ಮಿಡಿಯುತ್ತಿತ್ತು. "ತಾನೇಕೆ ದುಡುಕಿಬಿಟ್ಟೆ?… Read more…

  • ತೊಳೆದ ಮುತ್ತು

    ಕರ್ನಾಟಕದಲ್ಲಿ ನಮ್ಮ ಮನೆತನವು ಪ್ರತಿಷ್ಠಿತವಾದದ್ದು. ವರ್ಷಾ ನಮಗೆ ಇನಾಮು ಭೂಮಿಗಳಿಂದ ಎರಡು- ಮೂರು ಸಾವಿರ ರೂಪಾಯಿಗಳ ಉತ್ಪನ್ನ. ನಮ್ಮ ತಂದೆಯವರಾದ ರಾವಬಹಾದ್ದೂರ ಅನಂತರಾಯರು ಡೆಪುಟಿ ಕಲೆಕ್ಟರರಾಗಿ ಪೆನ್ಶನ್ನ… Read more…

  • ಕರಿ ನಾಗರಗಳು

    ಚಿತ್ರ: ಆಂಬರ್‍ ಕ್ಲೇ ಇಶಾಂ ನಮಾಜಿಗೆ (ರಾತ್ರೆಯ ನಮಾಜು) ಮೊದಲು ಅರಬ್ಬಿ ಪುಸ್ತಕವನ್ನು ಬ್ಯಾಗಿನೊಳಗಿಟ್ಟುಕೊಂಡು, ಅದನ್ನು ದುಪಟ್ಟದೊಳಗೆ ಮರೆ ಮಾಡಿಕೊಂಡು ಓಡಿ ಬಂದ, ತರನ್ನುಮ್‌ ನೀರು ಹರಿಯುತ್ತಿದ್ದ… Read more…

  • ಗೃಹವ್ಯವಸ್ಥೆ

    ಬೆಳಗು ಮುಂಜಾನೆ ಎಂಟು ಗಂಟೆಗೆ ಹೊಗೆಬಂಡಿಯು XX ಸ್ಟೇಶನಕ್ಕೆ ಬಂದು ನಿಂತಿತು. ಸಂತ್ರಾಧಾರವಾಗಿ ಮಳೆ ಹೊಡೆಯುತ್ತಿರುವದರಿಂದ ಪ್ರಯಾಣಸ್ಥರು ಬೇಸತ್ತು ಗಾಡಿಯಿಂದ ಯಾವಾಗ ಇಳಿಯುವೆವೋ ಎಂದೆನ್ನುತ್ತಿದ್ದರು. ನಿರ್ಮಲಾಬಾಯಿಯು ಅವಳ… Read more…

cheap jordans|wholesale air max|wholesale jordans|wholesale jewelry|wholesale jerseys