ಪ್ರಕೃತಿ ಮತ್ತು ಪುರುಷ

ಬಿಡಿಸಲಾಗದ ಬಂಧವಿದು
ಆದರೂ ಒಗಟು.
ಒಳಗೊಳಗೆ ತುಡಿತ-ಮಿಡಿತ
ತೋರಿಕೆಯ ಹಿಂದೆಗೆತ

ಭಾನು-ಭುವಿಯರ ಮಿಲನ
ಅಂಭವ ಮಧ್ಯಂತರಾಳದೊಳು
ಕ್ಷಿತಿಜದೊಳು ಭಂಗರಹಿತ
ತುಂಬು ಬಿಂದಿಗೆಯಂತೆ
ಹಬ್ಬಿ ನಿಂತಿದೆ ಪ್ರೀತಿ
ಬಿಂಬ ಪ್ರತಿಬಿಂಬವಾಗುವ ಬಯಕೆ
ಆದರೂ ಮನ ಬೆರೆತರೂ
ಬೆರೆಯದಂತೆ, ಒಲಿದರೂ
ಒಲಿಯದಂತೆ ಇರುವುದೇತಕೆ
ಪದ್ಮಪತ್ರದಂತೆ?

ಒಡಲು ತುಂಬಬೇಕು
ಆ ಉರಿ ಜ್ವಾಲೆ ಕಿರಣಗಳಿಂದಷ್ಟೇ
ಗರ್ಭ ಫಲಿತ, ಇಲ್ಲದಿರೆ
ಕೆಟ್ಟು ಸ್ಖಲಿತ, ಈಚೆ ಈ ವಧು
ತೆರೆದುಕೊಂಡರೆ ತಾನೆ
ಈ ಶಾಖ ಶಾಲೆ ಮೌಲ್ಯ ಸಹಿತ
ಇಲ್ಲದಿರೆ ವ್ಯರ್ಥ ಮೊರೆತ

ನೀ ನನಗಾರೆ ನಾ ನಿನಗೆ
ಈ ನಂಟು ಜನ್ಮ ಜನ್ಮದ ಗಂಟು
ಅರಿತು ನಡೆ ಸವಿಯುಂಟು
ಬೆಲ್ಲದ ಅಂಟು.


Previous post ಈ ಒಂದು ಕ್ಷಣದ ಹಿಂದೆ….
Next post ಮಂಡೂಕ ರಾಜ್ಯ

ಸಣ್ಣ ಕತೆ

  • ಪತ್ರ ಪ್ರೇಮ

    ಅಂಚೆ ಇಲಾಖೆಯ ಅದೊಂದು ಸಮಾರಂಭ. ಇಲಾಖೆಯ ಸಿಬ್ಬಂದಿ ವರ್ಗದ ಕಾರ್ಯದಕ್ಷತೆ ಕುರಿತು ಕೇಂದ್ರ ಕಾರ್ಮಿಕ ಸಚಿವ ಆಸ್ಕರ್‍ ಫರ್ನಾಂಡಿಸ್ ಅಮೆರಿಕಾದಲ್ಲಿ ನಡೆದ ಒಂದು ಸತ್ಯ ಘಟನೆ ಎಂದು… Read more…

  • ಅಪರೂಪದ ಬಾಂಧವ್ಯ

    ಹೆತ್ತ ತಾಯಿ ಬಿಟ್ಟುಹೋದ ಎರಡು ಮುಂಗಸಿ ಮರಿಗಳು ಅನಾಥವಾಗಿ ಚೀರಾಡುತ್ತಿದ್ದುದು, ಮನೆಯ ಮಕ್ಕಳ ಕಣ್ಣಿಗೆ ಬಿದ್ದಿತು. "ಅಪ್ಪಾ ಇಲ್ಲಿ ನೋಡು, ಮುಂಗುಸಿ ಮರಿ ಅಳುತ್ತಾ ಇವೆ. ಅದಕ್ಕೆ… Read more…

  • ಎರಡು ಮದುವೆಗಳು

    ಮುಂಗಾರು ಮಳೆಗಳು ಸರಿಯಾಗಿ ಬಾರದೇ ಭುವನೇಶ್ವರದ ಹಳ್ಳಿಯ ಜನರಲ್ಲಿ ಒಂದು ರೀತಿಯ ಕಳವಳವಾಗಿತ್ತು. ಮಳೆ ಬಂದರೆ ಬೆಳೆ, ಬೆಳೆ ಆದರೆ ಬಾಳು ಎಂದು ಬದುಕುತ್ತಿದ್ದ ಅವರಿಗೆ ಏನು… Read more…

  • ಒಂದು ಹಿಡಿ ಪ್ರೀತಿ

    ತೆಂಗಿನ ತೋಟದಲ್ಲಿ ಬಾಗಿಕೊಂಡು ಹಣ್ಣಾಗಿ ಉದುರಿದ ಅಡಕೆಗಳನ್ನು ಒಂದೊಂದಾಗಿ ಹೆಕ್ಕಿ, ಸನಿಹದಲ್ಲಿದ್ದ ಪ್ಲಾಸ್ಟಿಕ್ ಚೀಲಕ್ಕೆ ತುಂಬಿಸುತ್ತಿದ್ದಂತೆ ಪಕ್ಕದಲ್ಲಿ ಸರಕ್ಕನೆ ಹರಿದು ಹೋದ ಕೇರೆ ಹಾವಿನಿಂದಾಗಿ ಒಮ್ಮೆ ವಿಚಲಿತರಾದರು… Read more…

  • ನಿರೀಕ್ಷೆ

    ಆ ಹಣ್ಣು ಮುದುಕ ಎಲ್ಲಿಂದ ಬರುತ್ತಾನೆ, ಎಲ್ಲಿಗೆ ಹೋಗುತ್ತಾನೆ ಎಂದು ಯಾರಿಗೂ ತಿಳಿಯದು. ಆದರೆ ಎಲ್ಲರೂ ಅವನನ್ನು ಕಲ್ಲು ಬೆಂಚಿನ ಮುದುಕ ಎಂದೇ ಕರೆಯುತ್ತಾರೆ. ಪ್ರೈಮರಿ ಶಾಲೆಯ… Read more…