Home / ಕವನ / ಕವಿತೆ / ಈ ಒಂದು ಕ್ಷಣದ ಹಿಂದೆ….

ಈ ಒಂದು ಕ್ಷಣದ ಹಿಂದೆ….

ಈ ಒಂದು ಕ್ಷಣದ ಹಿಂದೆ….
ನಿನ್ನ ಬಾದಾಮಿ ಕಣ್ಣುಗಳ
ಪರಿಚಯ ನನಗಿರಲಿಲ್ಲ.
ನಿನ್ನ ಬೆವರಿನ ಪರಿಮಳಕ್ಕೆ
ನನ್ನ ಮೂಗು ಅರಳುತ್ತದೆಯೆಂದು
ನನಗೆ ಗೊತ್ತಿರಲಿಲ್ಲ.

ಈ ಒಂದು ಕ್ಷಣದ ಹಿಂದೆ….
ನಿನ್ನ ಬೆಚ್ಚನೆಯ ಎದೆಯಲ್ಲಿ
ಮರೆತ ಸಂಗತಿಗಳಿರುತ್ತವೆ
ಎಂದು ನನಗೆ ಗೊತ್ತಿರಲಿಲ್ಲ.
ನನ್ನ ಪ್ರೀತಿವಂಚಿತ ಕವಿತೆಗೆ
ನೀನು ಬಣ್ಣದ ಅಂಗಿ ತೊಡಿಸುತ್ತಿ
ಎಂದು ತಿಳಿದಿರಲಿಲ್ಲ.

ಈ ಒಂದು ಕ್ಷಣದ ಹಿಂದೆ….
ನಿನ್ನ ಭಾರವಾದ ಹೆಜ್ಜೆಗಳು
ನನ್ನ ದಣಿಸುತ್ತವೆ
ಎಂದು ತಿಳಿದಿರಲಿಲ್ಲ.
ನಿನ್ನ ಬಡಿದ ಕೆನ್ನೆಗಳು
ನನ್ನನ್ನು ಕಂಗೆಡಿಸುತ್ತವೆ
ಎಂದುಕೊಂಡಿರಲಿಲ್ಲ.

ಈ ಒಂದು ಕ್ಷಣದ ಹಿಂದೆ….
ನಿನ್ನ ತುಟಿಯಲ್ಲಿ ವಸಂತನ
ನಗುವನ್ನು ಕಂಡು
ಓಡಿಬಂದಿದ್ದೆನಾದರೂ
ಇದೀಗ ಮಂಜಿನಲ್ಲಿ ಇಡಿಯಾಗಿ
ಹೂತುಹೋಗಿದ್ದೇನೆ.

ಈ ಒಂದು ಕ್ಷಣದ ಹಿಂದೆ….
ಬೆಳಗಿನ ಸೂರ್ಯನನ್ನು
ಭೇಟಿಯಾಗೋಣ ಎಂದು
ಕರೆದದ್ದು ನೀನೆ.
ಇದೀಗ ಮುಸ್ಸಂಜೆ
ಹೊರಡೋಣ ಅನ್ನುತ್ತಿದ್ದೀಯಾ….
… ಎಂತಹ ಕೊನೆ??


Tagged:

ನಾಡಿಗೆ ಸ್ವಾತಂತ್ರ ಬಂದಿದೆ. ಎಲ್ಲೆಲ್ಲೂ ಸ್ವೈರಾಚಾರ ಹೆಚ್ಚಿದೆ. ಸ್ವಾತಂತ್ರವೆಂದರೆ ಸ್ವೇಚ್ಛಾಚಾರ ಎನ್ನುವಂತೆ ನಾಡಿನ ಜನ ವರ್ತಿಸುತ್ತಿದೆ; ಬಹುದಿನದ ಸಾಧನೆಯಿಂದ ಪಡೆದ ಸಿದ್ದಿಯನ್ನು ಮಣ್ಣುಗೂಡಿಸುತ್ತಲಿದೆ. ಇದನ್ನು ತಡೆಯಲಿಕ್ಕೆ ಭಾರತದ “ಹಳ್ಳಿ-ಹಳ್ಳಿಗಳಲ್ಲಿಯೂ ಗ್ರಾಮ ಸುರಕ್ಷಕ...

“ವತ್ಸಲಾ……..!” ನಿಟ್ಟುಸುರಿನೊಂದಿಗೆ ಕುಮಾರನು ಆರಾಮ ಕುರ್‍ಚಿಯ ಮೇಲೆ ದೊಪ್ಪನೆ ಬಿದ್ದು ಕೊಂಡನು. ಚಿಕ್ಕಬಾಲಕನೊಬ್ಬನು ಕಿಡಿಕಿಯಲ್ಲಿ ಹಣಿಕಿ ಹಾಕಿ “ಕುಮಾರಣ್ಣ” ಎಂದು ಕೂಗಿದಂತಾಯಿತು. ಎದ್ದು ನೋಡುತ್ತಾನೆ; ಕೆಂಪು ಮಸಿಯಿಂದ ವಿಳಾಸ ಬರೆದ...

“ಭೀಮಾ ಮಾಸ್ತರರನ್ನು ಇಷ್ಟ ಮೋಟರ ಸ್ಟಾಂಡಿನ ತನಕ ಕಳಿಸಿ ಬಾರಪ್ಪಾ.” ಬಾಯಕ್ಕ ನೆರೆಮನೆಯವರ ಆಳಿಗೆ ವಿನಯದಿಂದ ಹೇಳಿ ನನ್ನ ಕಡೆಗೆ ಹೊರಳಿ ಅಂದಳು: “ಬಿಡಿರಿ, ನಿಮ್ಮ ಬ್ಯಾಗ ತಗೊಂಡ ಬರತಾನ ಭೀಮಾ” “ಯಾತಕ್ಕ? ನಾ ಕೈಯೊಳಗ ಸಹಜ ಒಯ್ಯತೇನೆ” ನಾನು ಹೀಗೆ ಹೇಳಿದೆನಾದರೂ ಭೀಮಪ್...

ಸಿಗರೆಟ್‌ನ್ನು ಕೊನೆಯ ಸಲ ಎಳೆದು ಬದಿಗಿದ್ದ ಅಶ್‌ಟ್ರೆಯಲ್ಲಿ ಹಾಕಿದ. ಮೂರು ದಿನಗಳಿಂದ ಹೇಳಲಾಗದಂತಹ ಯಾತನೆ ಅವನನ್ನು ಹಿಂತಿಸುತ್ತಿದೆ. ಇದ್ದಿದ್ದು ಮಿತ್ರನ ಮಾತುಗಳು ಬಂದು ಕಿವಿಗೆ ಅಪ್ಪಳಿಸಿ ಎತ್ತ ನೋಡಿದರೂ ಅವನದೆ ಮುಖ ಕಾಣುತ್ತಿದೆ. “ನಾ ಹೇಳುವದನ್ನು ಅರ್‍ಥಮಾಡಿ ಕೊಳ್ಳು...

ಬೆಳಿಗ್ಗೆಯಿಂದ ಕತ್ತಲೆಯವರೆಗೂ ಬಸ್ ಸ್ಟಾಂಡಿನಲ್ಲಿ ಬಸ್ಸುಗಳಿಗೆ ಹತ್ತಿ ಇಳಿದುಕೊಂಡು ಎಷ್ಟು ಗೋಗರೆದು ಬಿಕ್ಷೆ ಬೇಡಿದರೂ ಆ ಹುಡುಗನಿಗೆ ಮಧ್ಯಾಹ್ನದ ಊಟ ಮಾಡುವಷ್ಟು ಹಣ ಸಂಗ್ರಹವಾಗುತ್ತಿರಲಿಲ್ಲ. ಮಧ್ಯಾಹ್ನ ಬಿಸ್ಕಿಟು ಮತ್ತು ನಲ್ಲಿ ನೀರು ಕುಡಿದು ಹಸಿವು ತಣಿಸಿದರೂ ರಾತ್ರಿಯ ಊಟಕ್ಕ...