ಕಾರ್ತೀಕ

ಅಶ್ವಯುಜ ಸೂರ್ಯ ಚಿಮ್ಮಿದಾಗ
ಕಿರಣಗಳು ಬೆಳಕ ಬೀಜಗಳು
ರೆಂಬೆಕೊಂಬೆಗಳ ಪಣತಿಗಳಲಿ
ಮಿಂಚುಗೊಂಚಲುಗಳು ಪತಂಗಗಳು
ಭೂಮಿ ಬಾನಂಗಳದಲಿ ಚಿನಕುರುಳಿಗಳು.

ಸಂಭ್ರಮದ ಅಲೆಅಲೆಗಳಲಿ ತೇಲಿವೆ
ನಮ್ಮೆಲ್ಲರ ಮಿನುಗು ಕಣ್ಣೋಟಗಳು
ಮಾತು ಹಾಡಿನ ಸಿರಿಶುಭದ ಸುಗ್ಗೀ
ಪೇಟೆತುಂಬ ಹರಡಿಹಾಸಿದ ಗೌಜುಗದ್ದಲ
ಬೀದಿ ತುಂಬ ಮಿನುಗುವ ಜ್ಯೋತಿರ್ಮಯಿಗಳು.

ತೆಳುಫರದೆಯ ತಿಳಿಮಂಜು ಹನಿಗಳು
ತಬ್ಬಿ ಮುದ್ದಿಸಿಕೊಂಡ ಸೂರ್ಯಕಾಂತಿ ಚೆಲುವು
ಬೆಳದಿಂಗಳ ಚಂದಿರ ಮುನಿಸು ಮುರಿದು
ಸೇವಂತಿಗೆ ಹೂಗಳ ಹರಿದ ಗಂಧಗಾಳಿ
ತೇವತೀಡಿ ನೇವರಿಸಿಕೊಂಡ ಗರಿಕೆ ಹಸಿರುಸೂಸಿ.

ಕಾಲ ಕ್ರಿಯೆ ಸ್ಥಳ ಮೇಳೈಸಿ ಸಹಜಪ್ರೀತಿ
ಅರಳಿದ ಪ್ರೇಮ ಅತಿಮಧುರ ಶಿಲೆಸುಂದರ
ಸಾಕ್ಷೀ ಪ್ರಜ್ಞೆಯಲಿ ಹುಟ್ಟಿದ ಬೆಳಕಭಾವ
ಕಲೆ ಸುಂದರ ಅದು ಮಂದಿರ ಸಂತಮರ
ಬಂಗಾರದ ಕಿರಣಗಳ ಸೂಸುವ ದೀಪಾವಳಿ.

ಮಂಜು ಮುಸುಕಿದ ಸಂಜೆ ಇಳಿದ ರಾಗ
ಮಾಲಕಂಸ ಹಾಡಿದ ಹೃದಯ ಇಂಪು
ಹೊಸ ಹುರುಪಿನಲಿ ಕನಸುಗಳು ತೇಲಿ
ಹಗಲು ಹೊಳೆದು ರಾತ್ರಿ ಉಳಿದ ಜಗದಸ್ನಾನ
ಇನ್ನು ಹಾರಬಹುದು ರೆಕ್ಕೆ ಬಿಚ್ಚಿದ ಹಕ್ಕಿ ಬಾನತುಂಬ.

*****

Previous post ಕ್ಷಣಗಳು
Next post ಆಸೆ

ಸಣ್ಣ ಕತೆ

  • ವಿಷಚಕ್ರ

    "ಚಂದ್ರು, ಒಳಗೆ ಬಾಮ್ಮ. ಮಳೆ ಬರುತ್ತೆ." ತಾಯಿ ಕೂಗಿದುದನ್ನು ಕೇಳಿ ಚಂದ್ರು ನಕ್ಕ. ಒಳಕ್ಕೆ ಬರುವುದಿರಲಿ, ಪಕ್ಕದ ಮನೆಯ ಹುಡುಗಿ ವೇದಳೊಂದಿಗೆ ಆಡುತ್ತಿದ್ದುದನ್ನು ನಿಲ್ಲಿಸಲೂ ಇಲ್ಲ. "ನೋಡೇ-ನಾನು… Read more…

  • ಅಮ್ಮ

    ‘ಅಮ್ಮನ್ಗೆ ಯಿಡೀ ರಾತ್ರೆಲ್ಲ ವಾಂತಿ ಭೇದಿ ವುಬ್ಸ ಆಯಾಸ... ಕುತ್ರೂಸಾ... ಬಾಳಾ ಯೆಚ್ಕುಡ್ಮೆಯಾಗಿ ರಾಮ್ಪಾರ್ದ ಡಾಕಿಟ್ರಾತ್ರ ತೋರ್ಸಿದ್ರು ಗುಣಾಗಿಲ್ಲ! ನೀ ಆದಷ್ಟು ಗಡಾನೇ ವೂರ್ಗೆ ಬಾಣ್ಣ...’ ಸೇಕ್ರಿ,… Read more…

  • ದೇವರು

    ನನ್ನ ದೇವರಿಗೆ, ಬಹಳ ದಿನಗಳ ನಂತರ ನಿಮಗೆ ಕಾಗದ ಬರೆಯುತ್ತಿದ್ದೇನೆ. ಏಕೆಂದರೆ ನೀವು ಬರೆದ ಕಾಗದಕ್ಕೆ ಉತ್ತರ ಕೇಳಿದ್ದೀರಿ. ನಾನೀಗ ಉತ್ತರ ಬರೆಯಲೇಬೇಕು ಬರೆಯುತ್ತಿದ್ದೇನೆ. "ಪತಿಯೇ ದೇವರು"… Read more…

  • ಮರೀಚಿಕೆ

    ನಂಬಿದರೆ ನಂಬಿ ಬಿಟ್ಟರೆ ಬಿಡಿ ನನ್ನೆಲ್ಲಾ ಭಾವನೆಗಳೂ ತಬ್ಬಲಿಗಳಾಗಿಬಿಟ್ಟಿವೆ. ಪ್ರೇಮವೆಂದರೆ ತ್ಯಾಗವೆ, ಭೋಗವೆ, ಭ್ರಮೆಯೆ ಆಥವಾ ಕೇವಲ ದಾಸ್ಯವೆ? ಮನಸ್ಸಿಗಾದ ಗ್ಯಾಂಗ್ರಿನ್ ಕಾಯಿಲೆಯೆ? ಇಂತಹ ದುರಾರೋಚನೆಗಳು ಹುಟ್ಟಲು… Read more…

  • ಎರಡು ಮದುವೆಗಳು

    ಮುಂಗಾರು ಮಳೆಗಳು ಸರಿಯಾಗಿ ಬಾರದೇ ಭುವನೇಶ್ವರದ ಹಳ್ಳಿಯ ಜನರಲ್ಲಿ ಒಂದು ರೀತಿಯ ಕಳವಳವಾಗಿತ್ತು. ಮಳೆ ಬಂದರೆ ಬೆಳೆ, ಬೆಳೆ ಆದರೆ ಬಾಳು ಎಂದು ಬದುಕುತ್ತಿದ್ದ ಅವರಿಗೆ ಏನು… Read more…

cheap jordans|wholesale air max|wholesale jordans|wholesale jewelry|wholesale jerseys