Home / ಕವನ / ಕವಿತೆ / ಕಾರ್ತೀಕ

ಕಾರ್ತೀಕ

ಅಶ್ವಯುಜ ಸೂರ್ಯ ಚಿಮ್ಮಿದಾಗ
ಕಿರಣಗಳು ಬೆಳಕ ಬೀಜಗಳು
ರೆಂಬೆಕೊಂಬೆಗಳ ಪಣತಿಗಳಲಿ
ಮಿಂಚುಗೊಂಚಲುಗಳು ಪತಂಗಗಳು
ಭೂಮಿ ಬಾನಂಗಳದಲಿ ಚಿನಕುರುಳಿಗಳು.

ಸಂಭ್ರಮದ ಅಲೆಅಲೆಗಳಲಿ ತೇಲಿವೆ
ನಮ್ಮೆಲ್ಲರ ಮಿನುಗು ಕಣ್ಣೋಟಗಳು
ಮಾತು ಹಾಡಿನ ಸಿರಿಶುಭದ ಸುಗ್ಗೀ
ಪೇಟೆತುಂಬ ಹರಡಿಹಾಸಿದ ಗೌಜುಗದ್ದಲ
ಬೀದಿ ತುಂಬ ಮಿನುಗುವ ಜ್ಯೋತಿರ್ಮಯಿಗಳು.

ತೆಳುಫರದೆಯ ತಿಳಿಮಂಜು ಹನಿಗಳು
ತಬ್ಬಿ ಮುದ್ದಿಸಿಕೊಂಡ ಸೂರ್ಯಕಾಂತಿ ಚೆಲುವು
ಬೆಳದಿಂಗಳ ಚಂದಿರ ಮುನಿಸು ಮುರಿದು
ಸೇವಂತಿಗೆ ಹೂಗಳ ಹರಿದ ಗಂಧಗಾಳಿ
ತೇವತೀಡಿ ನೇವರಿಸಿಕೊಂಡ ಗರಿಕೆ ಹಸಿರುಸೂಸಿ.

ಕಾಲ ಕ್ರಿಯೆ ಸ್ಥಳ ಮೇಳೈಸಿ ಸಹಜಪ್ರೀತಿ
ಅರಳಿದ ಪ್ರೇಮ ಅತಿಮಧುರ ಶಿಲೆಸುಂದರ
ಸಾಕ್ಷೀ ಪ್ರಜ್ಞೆಯಲಿ ಹುಟ್ಟಿದ ಬೆಳಕಭಾವ
ಕಲೆ ಸುಂದರ ಅದು ಮಂದಿರ ಸಂತಮರ
ಬಂಗಾರದ ಕಿರಣಗಳ ಸೂಸುವ ದೀಪಾವಳಿ.

ಮಂಜು ಮುಸುಕಿದ ಸಂಜೆ ಇಳಿದ ರಾಗ
ಮಾಲಕಂಸ ಹಾಡಿದ ಹೃದಯ ಇಂಪು
ಹೊಸ ಹುರುಪಿನಲಿ ಕನಸುಗಳು ತೇಲಿ
ಹಗಲು ಹೊಳೆದು ರಾತ್ರಿ ಉಳಿದ ಜಗದಸ್ನಾನ
ಇನ್ನು ಹಾರಬಹುದು ರೆಕ್ಕೆ ಬಿಚ್ಚಿದ ಹಕ್ಕಿ ಬಾನತುಂಬ.

*****

Tagged:

ನಾಡಿಗೆ ಸ್ವಾತಂತ್ರ ಬಂದಿದೆ. ಎಲ್ಲೆಲ್ಲೂ ಸ್ವೈರಾಚಾರ ಹೆಚ್ಚಿದೆ. ಸ್ವಾತಂತ್ರವೆಂದರೆ ಸ್ವೇಚ್ಛಾಚಾರ ಎನ್ನುವಂತೆ ನಾಡಿನ ಜನ ವರ್ತಿಸುತ್ತಿದೆ; ಬಹುದಿನದ ಸಾಧನೆಯಿಂದ ಪಡೆದ ಸಿದ್ದಿಯನ್ನು ಮಣ್ಣುಗೂಡಿಸುತ್ತಲಿದೆ. ಇದನ್ನು ತಡೆಯಲಿಕ್ಕೆ ಭಾರತದ “ಹಳ್ಳಿ-ಹಳ್ಳಿಗಳಲ್ಲಿಯೂ ಗ್ರಾಮ ಸುರಕ್ಷಕ...

“ವತ್ಸಲಾ……..!” ನಿಟ್ಟುಸುರಿನೊಂದಿಗೆ ಕುಮಾರನು ಆರಾಮ ಕುರ್‍ಚಿಯ ಮೇಲೆ ದೊಪ್ಪನೆ ಬಿದ್ದು ಕೊಂಡನು. ಚಿಕ್ಕಬಾಲಕನೊಬ್ಬನು ಕಿಡಿಕಿಯಲ್ಲಿ ಹಣಿಕಿ ಹಾಕಿ “ಕುಮಾರಣ್ಣ” ಎಂದು ಕೂಗಿದಂತಾಯಿತು. ಎದ್ದು ನೋಡುತ್ತಾನೆ; ಕೆಂಪು ಮಸಿಯಿಂದ ವಿಳಾಸ ಬರೆದ...

“ಭೀಮಾ ಮಾಸ್ತರರನ್ನು ಇಷ್ಟ ಮೋಟರ ಸ್ಟಾಂಡಿನ ತನಕ ಕಳಿಸಿ ಬಾರಪ್ಪಾ.” ಬಾಯಕ್ಕ ನೆರೆಮನೆಯವರ ಆಳಿಗೆ ವಿನಯದಿಂದ ಹೇಳಿ ನನ್ನ ಕಡೆಗೆ ಹೊರಳಿ ಅಂದಳು: “ಬಿಡಿರಿ, ನಿಮ್ಮ ಬ್ಯಾಗ ತಗೊಂಡ ಬರತಾನ ಭೀಮಾ” “ಯಾತಕ್ಕ? ನಾ ಕೈಯೊಳಗ ಸಹಜ ಒಯ್ಯತೇನೆ” ನಾನು ಹೀಗೆ ಹೇಳಿದೆನಾದರೂ ಭೀಮಪ್...

ಸಿಗರೆಟ್‌ನ್ನು ಕೊನೆಯ ಸಲ ಎಳೆದು ಬದಿಗಿದ್ದ ಅಶ್‌ಟ್ರೆಯಲ್ಲಿ ಹಾಕಿದ. ಮೂರು ದಿನಗಳಿಂದ ಹೇಳಲಾಗದಂತಹ ಯಾತನೆ ಅವನನ್ನು ಹಿಂತಿಸುತ್ತಿದೆ. ಇದ್ದಿದ್ದು ಮಿತ್ರನ ಮಾತುಗಳು ಬಂದು ಕಿವಿಗೆ ಅಪ್ಪಳಿಸಿ ಎತ್ತ ನೋಡಿದರೂ ಅವನದೆ ಮುಖ ಕಾಣುತ್ತಿದೆ. “ನಾ ಹೇಳುವದನ್ನು ಅರ್‍ಥಮಾಡಿ ಕೊಳ್ಳು...

ಬೆಳಿಗ್ಗೆಯಿಂದ ಕತ್ತಲೆಯವರೆಗೂ ಬಸ್ ಸ್ಟಾಂಡಿನಲ್ಲಿ ಬಸ್ಸುಗಳಿಗೆ ಹತ್ತಿ ಇಳಿದುಕೊಂಡು ಎಷ್ಟು ಗೋಗರೆದು ಬಿಕ್ಷೆ ಬೇಡಿದರೂ ಆ ಹುಡುಗನಿಗೆ ಮಧ್ಯಾಹ್ನದ ಊಟ ಮಾಡುವಷ್ಟು ಹಣ ಸಂಗ್ರಹವಾಗುತ್ತಿರಲಿಲ್ಲ. ಮಧ್ಯಾಹ್ನ ಬಿಸ್ಕಿಟು ಮತ್ತು ನಲ್ಲಿ ನೀರು ಕುಡಿದು ಹಸಿವು ತಣಿಸಿದರೂ ರಾತ್ರಿಯ ಊಟಕ್ಕ...