ಉಪದೇಶ

ಪ್ರಿಯ ಸಖಿ,
ಕೆಲವರಿಗೆ ಸದಾ ಉಪದೇಶ ನೀಡುವ ಖಯಾಲಿ. ಯಾರು ಕೇಳಲಿ ಬಿಡಲಿ ಉಪದೇಶ ನೀಡುವ ಸಂದರ್ಭವಿರಲಿ ಬಿಡಲಿ, ಉಪದೇಶ ಕೇಳುವವನು ಅರ್ಹನಿರಲಿ ಬಿಡಲಿ ಉಪದೇಶಿಸುತ್ತಿರುವುದು ಅಂಥವರ ಹವ್ಯಾಸ. ಇಂತಹ ಚಟವನ್ನು ಕಂಡ ಸರ್ವಜ್ಞ ಹೀಗೆ ಹೇಳುತ್ತಾನೆ.
ಕೇಳುವವರಿದ್ದಿಹರೆ ಹೇಳುವುದು ಬುದ್ಧಿಯನು
ಕೋಳದಲಿ ಬಿದ್ದು ನರಳುವಗೆ ಬುದ್ಧಿಯನು
ಹೇಳಿ ಫಲವೇನು? ಸರ್ವಜ್ಞ!
ಹೌದಲ್ಲವೇ ಸಖಿ? ಕೇಳುವವರಿರುವಾಗ ನಾವು ಕೊಟ್ಟ ಉಪದೇಶಕ್ಕೊಂದು ಬೆಲೆ. ತಾನೇ ಕೋಳದಲಿ ಬಿದ್ದು, ಎಂದರೆ ದೌರ್ಬಲ್ಯ, ಕೆಟ್ಟಗುಣ, ಅಹಂಕಾರದ ಬಂಧನದಲ್ಲಿ ಬಿದ್ದು ನರಳುತ್ತಿರುವವನಿಗೆ ಎಷ್ಟು ಬುದ್ಧಿ ಹೇಳಿದರೆ ಏನು ಪ್ರಯೋಜನ? ನೀಚರಿಗೆ, ಮೂರ್ಖರಿಗೆ ಹೇಳಿದ ಉಪದೇಶದಿಂದ ನಮಗೇ ಕೇಡುಂಟಾಗುತ್ತದೆ ಎನ್ನುತ್ತಾರೆ ಹಿರಿಯರು. ಉಪದೇಶದ ಮಹತ್ವವನ್ನು ಅರಿಯದ ಅವರು ಅದು ತಮ್ಮ ಅಭಿಮಾನಕ್ಕೆ ಬಿದ್ದ ಪೆಟ್ಟೆಂದುಕೊಂಡು ಆ ಮಾತುಗಳಿಂದಲೇ ಹಗೆ ಸಾಧಿಸಲು ಪ್ರಾರಂಭಿಸುತ್ತಾರೆ.

ಅದಕ್ಕೆಂದೇ ಕವಿ ಷೇಕ್ಸ್ಪಿಯರ್ ಹೀಗೆ ಹೇಳುತ್ತಾನೆ. Speak when you are spoken to and come when you are called for ನಿನ್ನೊಂದಿಗೆ ಮಾತನಾಡಿದಾಗ ಮಾತನಾಡು ಮತ್ತು ನಿನ್ನನ್ನು ಕರೆದಾಗ ಮಾತ್ರ ಬಾ ಎಂದು. ಉಪದೇಶವನ್ನು ಅಥವಾ ತಿಳುವಳಿಕೆಯನ್ನು ಕೇಳಿದಾಗಷ್ಟೇ ನೀಡಿದಾಗ ಅದಕ್ಕೊಂದು ಘನತೆ ಬರುತ್ತದೆ. ಅದು ಬಿಟ್ಟು ಸಿಕ್ಕವರಿಗೆಲ್ಲಾ ಉಪದೇಶ ನೀಡಿದರೆ ವ್ಯರ್ಥವಾಗುತ್ತದೆ.

ಅದರೆ ಸಖಿ, ನಾವೇ ಉಪದೇಶವನ್ನು ಕೇಳುವವರಾದರೆ ಸದಾ ನಮ್ಮ ಕಿವಿಗಳನ್ನು ತೆರೆದಿಡೋಣ. ಒಳಿತಾದ ಮಾತು ಎಲ್ಲಿಂದಲೇ, ಯಾರಿಂದಲೇ ಬರಲಿ ಕೇಳೋಣ. ಆದರೆ ನಾವೇ ಉಪದೇಶ ಕೊಡುವವರಾದರೆ ಬಹಳಷ್ಟು ಯೋಚಿಸೋಣ. ಷೇಕ್ಸ್ಪಿಯರ್ ಹೇಳುತ್ತಾನೆ, From hearing comes wisdom, from speaking repentance. ಕೇಳುವುದರಿಂದ ಜಾಣತನ ಬರುತ್ತದೆ, ಮಾತನಾಡುವುದರಿಂದ ಪಶ್ಚಾತ್ತಾಪ
ಪಡಬೇಕಾಗುತ್ತದೆ ಎಂದು ಹೇಳಿ ಕೆಟ್ಟವರಾಗುವುದಕ್ಕಿಂತ ಅಥವಾ ಪಶ್ಚಾತ್ತಾಪ ಪಡುವುದಕ್ಕಿಂತಾ ಒಳ್ಳೆಯ ಕೇಳುಗರಾಗುವುದೇ ಮೇಲಲ್ಲವೇ ಸಖಿ?
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಹಣ್ಣು ಮರಗಳ ಮುಡಿಯಲ್ಲಿ
Next post ಒಮ್ಮೊಮ್ಮೆ ಎನಿಸುವುದು

ಸಣ್ಣ ಕತೆ

  • ತೊಳೆದ ಮುತ್ತು

    ಕರ್ನಾಟಕದಲ್ಲಿ ನಮ್ಮ ಮನೆತನವು ಪ್ರತಿಷ್ಠಿತವಾದದ್ದು. ವರ್ಷಾ ನಮಗೆ ಇನಾಮು ಭೂಮಿಗಳಿಂದ ಎರಡು- ಮೂರು ಸಾವಿರ ರೂಪಾಯಿಗಳ ಉತ್ಪನ್ನ. ನಮ್ಮ ತಂದೆಯವರಾದ ರಾವಬಹಾದ್ದೂರ ಅನಂತರಾಯರು ಡೆಪುಟಿ ಕಲೆಕ್ಟರರಾಗಿ ಪೆನ್ಶನ್ನ… Read more…

  • ಸಾವು

    ಈ ಗೊಂಡಾರಣ್ಯದಲ್ಲಿ ನಾನು ಬಂದುದಾದರೂ ಹೇಗೆ? ಅಗೋ ಅಲ್ಲಿ ಲಾಸ್ಯವಾಗಿ ಬಳುಕುತ್ತಾ ನಲಿಯುತ್ತಾ ತುಂತುರು ತುಂತುರಾಗಿ ಮುತ್ತಿನ ಹನಿಗಳನ್ನು ಪ್ರೋಕ್ಷಿಸುತ್ತಿರುವ ಝರಿಯ ರಮಣೀಯತೆಯನ್ನೂ ಮೀರುವಂತಹ ಭಯಾನಕತೆ ವ್ಯಾಪಿಸಿದೆಯಲ್ಲಾ… Read more…

  • ಇರುವುದೆಲ್ಲವ ಬಿಟ್ಟು

    ಕುಮಾರನಿಗೆ ಪಕ್ಕದ ಮನೆಯ ರೆಡಿಯೋದಲ್ಲಿ ಬಸಪ್ಪ ಮಾದರ ಧ್ವನಿ ಕೇಳಿ ಎಚ್ಚರವಾಯ್ತು. ದೇಹಲಿ ಕೇಂದ್ರದಿಂದ ವಾರ್ತೆಗಳು ಬರುತ್ತಿದ್ದವು. ಹಾಸಿಗೆಯಿಂದ ಎದ್ದವನೆ ಕದ ತೆಗೆದ. ಬೆಳಗಿನ ಸೊಗಸು ಕೊರೆವ… Read more…

  • ಬಿರುಕು

    ಚಂಪಾ ಹಾಲು ತುಂಬಿದ ಲೋಟ ಕೈಯಲ್ಲಿ ಹಿಡಿದು ಒಳಗೆ ಬಂದಳು. ಎಂದಿನಂತೆ ಮೇಜಿನ ಮೇಲಿಟ್ಟು ಮಾತಿಲ್ಲದೆ ಹೊರಟು ಹೋಗುತ್ತಿದ್ದ ಅವಳು ಹೊರಡುವ ಸೂಚನೆಯನ್ನೇ ತೋರದಿದ್ದಾಗ ಮೂರ್‍ತಿ ಬೆಚ್ಚಿ… Read more…

  • ಮಲ್ಲೇಶಿಯ ನಲ್ಲೆಯರು

    ಹೇಮರಡ್ಡಿ ಪ್ರಭುಗಳು ಒಂದು ಊರಿನ ದೇಸಾಯರು. ಆ ಗ್ರಾಮದ ಉತ್ಪನ್ನವು ಆರೇಳು ಸಾವಿರ ರೂಪಾಯಿ ಇರುವದಲ್ಲದೆ ದೇಸಾಯರಿಗೆ ತೋಟ ಪಟ್ಟಿ ಮನೆಯ ಒಕ್ಕಲತನಗಳಿಂದಾದರೂ ಪ್ರಾಪ್ತಿಯು ಚನ್ನಾಗಿತ್ತು. ಅವರೊಂದು… Read more…

cheap jordans|wholesale air max|wholesale jordans|wholesale jewelry|wholesale jerseys