Home / ಲೇಖನ / ಇತರೆ / ಉಪದೇಶ

ಉಪದೇಶ

ಪ್ರಿಯ ಸಖಿ,
ಕೆಲವರಿಗೆ ಸದಾ ಉಪದೇಶ ನೀಡುವ ಖಯಾಲಿ. ಯಾರು ಕೇಳಲಿ ಬಿಡಲಿ ಉಪದೇಶ ನೀಡುವ ಸಂದರ್ಭವಿರಲಿ ಬಿಡಲಿ, ಉಪದೇಶ ಕೇಳುವವನು ಅರ್ಹನಿರಲಿ ಬಿಡಲಿ ಉಪದೇಶಿಸುತ್ತಿರುವುದು ಅಂಥವರ ಹವ್ಯಾಸ. ಇಂತಹ ಚಟವನ್ನು ಕಂಡ ಸರ್ವಜ್ಞ ಹೀಗೆ ಹೇಳುತ್ತಾನೆ.
ಕೇಳುವವರಿದ್ದಿಹರೆ ಹೇಳುವುದು ಬುದ್ಧಿಯನು
ಕೋಳದಲಿ ಬಿದ್ದು ನರಳುವಗೆ ಬುದ್ಧಿಯನು
ಹೇಳಿ ಫಲವೇನು? ಸರ್ವಜ್ಞ!
ಹೌದಲ್ಲವೇ ಸಖಿ? ಕೇಳುವವರಿರುವಾಗ ನಾವು ಕೊಟ್ಟ ಉಪದೇಶಕ್ಕೊಂದು ಬೆಲೆ. ತಾನೇ ಕೋಳದಲಿ ಬಿದ್ದು, ಎಂದರೆ ದೌರ್ಬಲ್ಯ, ಕೆಟ್ಟಗುಣ, ಅಹಂಕಾರದ ಬಂಧನದಲ್ಲಿ ಬಿದ್ದು ನರಳುತ್ತಿರುವವನಿಗೆ ಎಷ್ಟು ಬುದ್ಧಿ ಹೇಳಿದರೆ ಏನು ಪ್ರಯೋಜನ? ನೀಚರಿಗೆ, ಮೂರ್ಖರಿಗೆ ಹೇಳಿದ ಉಪದೇಶದಿಂದ ನಮಗೇ ಕೇಡುಂಟಾಗುತ್ತದೆ ಎನ್ನುತ್ತಾರೆ ಹಿರಿಯರು. ಉಪದೇಶದ ಮಹತ್ವವನ್ನು ಅರಿಯದ ಅವರು ಅದು ತಮ್ಮ ಅಭಿಮಾನಕ್ಕೆ ಬಿದ್ದ ಪೆಟ್ಟೆಂದುಕೊಂಡು ಆ ಮಾತುಗಳಿಂದಲೇ ಹಗೆ ಸಾಧಿಸಲು ಪ್ರಾರಂಭಿಸುತ್ತಾರೆ.

ಅದಕ್ಕೆಂದೇ ಕವಿ ಷೇಕ್ಸ್ಪಿಯರ್ ಹೀಗೆ ಹೇಳುತ್ತಾನೆ. Speak when you are spoken to and come when you are called for ನಿನ್ನೊಂದಿಗೆ ಮಾತನಾಡಿದಾಗ ಮಾತನಾಡು ಮತ್ತು ನಿನ್ನನ್ನು ಕರೆದಾಗ ಮಾತ್ರ ಬಾ ಎಂದು. ಉಪದೇಶವನ್ನು ಅಥವಾ ತಿಳುವಳಿಕೆಯನ್ನು ಕೇಳಿದಾಗಷ್ಟೇ ನೀಡಿದಾಗ ಅದಕ್ಕೊಂದು ಘನತೆ ಬರುತ್ತದೆ. ಅದು ಬಿಟ್ಟು ಸಿಕ್ಕವರಿಗೆಲ್ಲಾ ಉಪದೇಶ ನೀಡಿದರೆ ವ್ಯರ್ಥವಾಗುತ್ತದೆ.

ಅದರೆ ಸಖಿ, ನಾವೇ ಉಪದೇಶವನ್ನು ಕೇಳುವವರಾದರೆ ಸದಾ ನಮ್ಮ ಕಿವಿಗಳನ್ನು ತೆರೆದಿಡೋಣ. ಒಳಿತಾದ ಮಾತು ಎಲ್ಲಿಂದಲೇ, ಯಾರಿಂದಲೇ ಬರಲಿ ಕೇಳೋಣ. ಆದರೆ ನಾವೇ ಉಪದೇಶ ಕೊಡುವವರಾದರೆ ಬಹಳಷ್ಟು ಯೋಚಿಸೋಣ. ಷೇಕ್ಸ್ಪಿಯರ್ ಹೇಳುತ್ತಾನೆ, From hearing comes wisdom, from speaking repentance. ಕೇಳುವುದರಿಂದ ಜಾಣತನ ಬರುತ್ತದೆ, ಮಾತನಾಡುವುದರಿಂದ ಪಶ್ಚಾತ್ತಾಪ
ಪಡಬೇಕಾಗುತ್ತದೆ ಎಂದು ಹೇಳಿ ಕೆಟ್ಟವರಾಗುವುದಕ್ಕಿಂತ ಅಥವಾ ಪಶ್ಚಾತ್ತಾಪ ಪಡುವುದಕ್ಕಿಂತಾ ಒಳ್ಳೆಯ ಕೇಳುಗರಾಗುವುದೇ ಮೇಲಲ್ಲವೇ ಸಖಿ?
*****

Tagged:

Leave a Reply

Your email address will not be published. Required fields are marked *

ಅವಳು ಅಡುಗೆ ಮನೆಯ ಕಪ್ಪಾದ ಡಬ್ಬಿಗಳನ್ನು, ಉಳಿದ ಸಾಮಾನುಗಳನ್ನು ತೆಗೆದು ತೊಳೆಯಲು ಆ ಮಣ್ಣಿನ ಮಾಡು ಹಂಚಿನ ಮನೆಯ ಮುಂದಿನ ತೆಂಗಿನಕಟ್ಟೆಯಲ್ಲಿ ಹಾಕಿದ ಅಗಲ ಹಾಸುಗಲ್ಲ ಮೇಲೆ ಕೈಲಿ ಹಿಡಿದಷ್ಟು ತಂದು ತಂದು ಇಡುತ್ತಿದ್ದಳು. ಏಳರ ಬಾಲೆ ಮಗಳು ಕೂಡ ತನ್ನ ಕೈಗೆ ಎತ್ತುವಂತಹ ಡಬ್ಬಿಗಳನ್ನು...

ಆಹಾ! ಏನು ಕಡಲು! ಅ೦ತವಿಲ್ಲದ ಕಡಲು!! ಅಪಾರವಾಗಿಹ ಕಡಲು! ದಿಟ್ಟಿ ತಾಗದ ಕಡಲು!! ಆ ಕಡಲ ಒಡಲಲ್ಲಿ ಏನು ತೆರೆ! ಏನು ನೊರೆ!! ಏನು ಅಂದ! ಎನಿತು ಚಂದ! ಬಿಚ್ಚಿ ಮುಚ್ಚುವ ಅದರ ನಯವಾದ ತುಟಿಗಳು ಹೊನ್ನರವಿ ಎಸೆದಿರುವ ಚಿನ್ನದಲುಗಳೇಸು! ಬಣ್ಣ ಬಣ್ಣಗಳುಗುವ ಅಚ್ಚು ಪಡಿಯಚ್ಚುಗಳ ಹೊಳಪಿನ ಏನ...

ಸರ್, ಗುಡ್ ಮಾರ್ನಿಂಗ್, ಮೇ ಐ ಕಮೀನ್ ಸರ್ – ನಿತ್ಯ ಆಫೀಸಿನ ಅವಧಿ ಪ್ರಾರಂಭವಾಗುತ್ತಲೇ ಹಿಂದಿನ ದಿನ ರೆಡಿ ಮಾಡಿದ ಹತ್ತಾರು ಕಾಗದ ಪತ್ರಗಳಿಗೆ ಸಹಿ ಪಡೆಯಲು, ಇಲ್ಲವೇ ಹಿಂದಿನ ದಿನದ ಎಲ್ಲ ಫೈಲುಗಳ ಚೆಕ್ ಮಾಡಿಸಲು, ಕೈಯಲ್ಲಿ ಫೈಲುಗಳ ಕಟ್ಟು ಹಿಡಿದು ಬಾಗಿಲ ಮರೆಯಲ್ಲಿ ನಿಂತು ...

ಕೋತಿಯಿಂದ ನಿಮಗಿನ್ನೆಂಥಾ ಭಾಗ್ಯ! ನೀವು ಹೇಳುವ ಮಾತು ಸರಿ! ಬಿಡಿ! ತುಂಗಮ್ಮನವರೆ. ಇದೇನೆಂತ ಹೇಳುವಿರಿ! ಯಾರಾದರೂ ನಂಬುವ ಮಾತೇನರೀ! ಕೊತೀಂತೀರಿ. ಬಹುಲಕ್ಷಣವಾಗಿತ್ತಿರಿ ಎಂತೀರಿ? ಅದು ಹೇಗೋ ಎನೋ, ನಾನಂತೂ ನಂಬಲಾರನರೀ!” “ಹೀಗೆಂತ ನೆರ ಮನೆ ಪುಟ್ಟಮ್ಮನವರು ಹೇಳಿದರು....

ಹೊರ ಕೋಣೆಯಲ್ಲಿ ಕಾಲೂರಿ ಕೂತು ಬೀಡಿ ಕಟ್ಟುತ್ತಿದ್ದ ಸುಮಯ್ಯಾಗೆ ಕಣ್ಣು ಮತ್ತು ಕಿವಿಯ ಸುತ್ತಲೇ ಆಗಾಗ ಗುಂಯ್.. ಎನ್ನುತ್ತಾ ನೊಣವೊಂದು ಸರಿಸುಮಾರು ಹದಿನೈದು ನಿಮಿಷಗಳಿಂದ ಹಾರಾಡುತ್ತಾ ಕಿರಿಕಿರಿ ಮಾಡುತ್ತಿತ್ತು. ಹಿಡಿದು ಹೊಸಕಿ ಹಾಕಬೇಕೆಂದರೆ ಕೈಗೆ ಸಿಗದೆ ಮೈ ಪರಚಿಕೊಳ್ಳಬೇಕೆನ್ನ...

ಮೂಲ: ಗಾಯ್ ಡಿ ಮೊಪಾಸಾ ಗಗನಚುಂಬಿತವಾದ ಬೀಚ್‌ ವೃಕ್ಷಗಳೊಳಗಿಂದ ತಪ್ಪಿಸಿಕೊಂಡು ಸೂರ್ಯ ಕಿರಣಗಳು ಹೊಲಗಳ ಮೇಲೆ ಬೆಳಕನ್ನು ಕೆಡುವುವುದು ಬಲು ಅಪರೂಪ. ಬೆಳೆದ ಹುಲ್ಲನ್ನು ಕೊಯ್ದುದರಿಂದಲೂ, ದನಗಳೂ ಕಚ್ಚಿ ಕಚ್ಚಿ ತಿಂದುದರಿಂದಲೂ ನೆಲವು ಅಲ್ಲಲ್ಲಿ ತಗ್ಗು ದಿನ್ನೆಯಾಗಿ ಒಡೆದು ಕಾಣುತ್ತಿ...