ಮೋಜ ನೋಡಿರಿ ಗಾಂಜಿಯಮಕಿನ

ಮೋಜ ನೋಡಿರಿ ಗಾಂಜಿಯಮಕಿನ
ತೇಜಿಯೇರಿದ್ಹಾಂಗ ಜುಲಾಸ್ತದ ಅಮಲಾ
ಈ ಜನರಿನ್ನೇನಿದು ಬಲ್ಲರು ದುರ್ಗುಣ ಮಾಡುವಂತಿರಲು
ಸಹಜವಾದ ಸದ್ಬೀಜದ ಮಹಿಜನವನದಲ್ಲು ಫಲವಾಗಿರಲು
ಶ್ರೀಜಗದೀಶನ ಪೂಜಿತ ಮುನಿಜನ ರಾಜೀವನ ಮೋಹಿಸಲು
ಸೋಜಿಗೆನಿಪ ಶುಭವಾದ ವೃಕ್ಷದಲಿ
ಜನಿಸಿದ ಈ ಮುಗುಳು ಚಿಗಿತು ಬೆಳದಿಹುದು ತೇಜಸು ಪುಷ್ಪಗೊಂಚಲ
ಗೊನಿ ಕೆಂಜಾಗಿನ ವರ್ಣದಲಿ ರಾಜಿಸುವದರಿಂದ ಕುಸುಮಾರ್ಗದ ಫಲ
ಕಾಮಿಸಿ ವ್ಯಾಳ್ಯಗಳು ರಾಜಯೋಗಿಗಳು

ನೈಜಾಮದ ಗೋದಾವರಿ ತೀರದ ಜಲದೊಳು ಮರ್ದಿಸಲು
ಶೋಭಿಪ ಸತ್ವ ರಜೋಗುಣ ತತ್ವದ
ತಪ್ಪಲ ಕೂಡಿರಲು ಗುಳಿಗಿಯಾಗಿರಲು
ಸಾಧುಸಂತರನಾದರಿಸುತ ನಿಜಬೋಧದಿ ಮುಳಗಿರಲು ||೧||

ಬೋಧಾಮೃತ ಸಾನಂದದಿ
ಸಾಧಕರು ಕೂಡಿ ಮೋದದಲಿ ನೋಡಿ
ಮೇದಿನಿ ಸ್ಥಲದಂತೆ ಆ ಕೃತಿಯನು ದಂಡಿಸಿದರು ತಿಂಡಿ
ಶೋಭಿಸಿ ಶರೀರ ಬುರುಡಿಗೆ ತನುವಿನ ಮೀರು
ಇದಕೆ ಜೋಡಿ ಜಲದಿ ಒಡಗೂಡಿ
ಶ್ರೀಧರ ಬ್ರಹ್ಮ ಸದಾಶಿವ ಮೂವರು ಆಧಾರವ ಮಾಡಿ
ಕ್ರೋಧಾದಿಗಳನ್ನು ಛೇದಿಸಿ ಜ್ಞಾನದ ಚಿಲುಮೆ-
ಯೊಳಗೆ ನೀಡಿ ಅಗ್ನಿಯನು ತೋಡಿ
ಈ ದಶವಾಯು ಬಿಗಿದು ಸುಷುಮ್ನನಾಳದೊಳಗೆ ಹೂಡಿ
ಆದಿ ಸದ್ಗುರುವಿನ ಕೈಯೊಳಗೊಪ್ಪುವ ನಾದಿನ
ಗುಡಗುಡಿ ಸೇದಿ ನಲಿದಾಡಿ
ಬಾಧಿ ದುರಿತ ಬಹು ಬಂಧನದ ಕರ್ಮವು ಶೋಧಿಸಿ ಈಡ್ಯಾಡಿ ||೨||

ಈ ಪರಿ ಮಹಿಮದ ರೂಪ ನಿರಾಲ
ಪರಂಜ್ಯೋತಿ ನಿರ್ಮಿಸಿದ ರೀತಿ
ಸ್ಥಾಪಿಸಿದನು ಶಿವನಾವ ಪರಲೋಕದ ಕಲ್ಪದ್ರುಮದ ಜಾತಿ
ಕಾಪುರುಷರು ಕುಹಕರಿಗೆ ಸಲ್ಲರು ತಾಪಸಿಯರಿಗೆ ಪ್ರೀತಿ
ತತ್ವದ ನಡತೆ ಸೋಹಂ ಪದಕೇರಿಸಿ ತಾಂ
ಪರವಸ್ತುವ ತೋರಿಕೊಡುವ ರೀತಿ
ಶಾಸ್ತ್ರ ನುಡಿತೈತಿ ಪಾಪರಹಿತ ಪಂಚಾಕ್ಷರಿ ಪಠಿಸುತ
ಜೀವ ಪವನ ಒತ್ತಿ ತ್ರಿಕೂಟದಲ್ಹತ್ತಿ
ತಾ ಚರಿಸ್ಯಾಡುತ ನೋಡಲು ಪಶ್ಚಿಮ ಚಕ್ರದೊಳಗೆ ಸುತ್ತಿ
ಭೂಪತಿ ರಾಜಗೋವಿಂದನ ಅರಮನಿ
ಹೊಳೆವ ಚಂದ್ರಕಾಂತಿ ಮೂಲ ಸಿದ್ಧಾಂತಿ
ಭಾಪುರೆ ಶಿಶುನಾಳಧೀಶನ ವರವಿಲೆ ನಾ ಪಡೆದೆನು ಮುಕ್ತಿ ||೩||

*****

 

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಮೋಜ ನೋಡಿರಿ ಗಾಂಜಿಯಮಕಿನ
Next post ಒಲವೇ… ಭಾಗ – ೩

ಸಣ್ಣ ಕತೆ

  • ಅಜ್ಜಿ-ಮೊಮ್ಮಗ

    ಅಜ್ಜವಿ-ಮೊಮ್ಮಗ ಇದ್ರು. ಅವ ಅಜ್ಜವಿಕಲ್ ಯೇನೆಂದ? "ತಾನು ಕಾಶಿಗೆ ಹೋಗಬತ್ತೆ. ಮೂರ ರೊಟ್ಟಿ ಸುಟಕೊಡು" ಅಂತ. "ಮಗನೇ, ಕಾಶಿಗೆ ಹೋದವರವರೆ, ಹೋದೋರ ಬಂದೋರಿಲ್ಲ. ನೀ ಕಾಶಿಗೆ ಹೋಗ್ವದೆ… Read more…

  • ಹುಟ್ಟು

    ಶಾದಿ ಮಹಲ್‌ನ ಒಳ ಆವರಣದಲ್ಲಿ ದೊಡ್ಡ ಹಾಲ್‌ನಲ್ಲಿ ಹೆಂಗಸರೆಲ್ಲಾ ಸೇರಿದ್ದರು. ಹೊರಗಡೆ ಹಾಕಿದ್ದ ಶಾಮಿಯಾನದಲ್ಲಿ ಗಂಡಸರು ನೆರೆದಿದ್ದರು. ಒಂದು ಕಡೆಯ ಎತ್ತರವಾದ ವೇದಿಕೆಯ ಮೇಲೆ ಮದುವೆ ಗಂಡು,… Read more…

  • ದಿನಚರಿಯ ಪುಟದಿಂದ

    ಮಂಗಳೂರಿನ ಹೃದಯ ಭಾಗದಿಂದ ಸುಮಾರು ೧೫ ಕಿ.ಮೀ. ದೂರದಲ್ಲಿರುವ ಚಿತ್ರಾಪುರ ಪೇಟೆ ಕೆಲವು ವಿಷಯಗಳಲ್ಲಿ ಪ್ರಖ್ಯಾತಿಯನ್ನು ಹೊಂದಿದೆ. ಸಿಟಿಬಸ್ಸುಗಳು ಇಲ್ಲಿ ಓಡಾಡುತ್ತಿಲ್ಲವಾದರೂ ಬಸ್ಸುಗಳಿಗೇನೂ ಕಮ್ಮಿಯಿಲ್ಲ. ಎಕ್ಸ್‌ಪ್ರೆಸ್ ಬಸ್ಸುಗಳು… Read more…

  • ಎದಗೆ ಬಿದ್ದ ಕತೆ

    ೧೯೯೫. ನಾನಾಗ ಹುಬ್ಬಳ್ಳಿಯ ಕೇಂದ್ರೀಯ ಬಸ್ ನಿಲ್ದಾಣದಲ್ಲಿ ವಿಭಾಗೀಯ ಸಾರಿಗೆ ಅಧಿಕಾರಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದೆ. ಇಲ್ಲಿ ೧೯೯೭ರ ವರೆಗೆ ನರಕ ಅನುಭವಿಸಿದೆ. ಪಾಪದ ಕೂಪವಿದು ಸ್ವರ್ಗ ನರಕ… Read more…

  • ರಣಹದ್ದುಗಳು

    ಗರ್ಭಿಣಿಯರ ನೋವು ಚೀರಾಟಗಳಿಗೆ ಡಾಕ್ಟರ್ ಸರಳಾಳ ಕಿವಿಗಳೆಂದೋ ಕಿವುಡಾಗಿ ಬಿಟ್ಟಿವೆ. ಸರಳ ಮಾಮೂಲಿ ಎಂಬಂತೆ ಆ ಹಳ್ಳಿ ಹೆಂಗಸರನ್ನು ಪರೀಕ್ಷಿಸಿದ್ದಳು. ಹೆಂಗಸು ಹೆಲ್ತಿಯಾಗಿದ್ದರೂ ಒಂದಷ್ಟು ವೀಕ್ ಇದ್ದಾಳೇಂತ… Read more…

cheap jordans|wholesale air max|wholesale jordans|wholesale jewelry|wholesale jerseys