Home / ಕವನ / ಕವಿತೆ / ಮೋಜ ನೋಡಿರಿ ಗಾಂಜಿಯಮಕಿನ

ಮೋಜ ನೋಡಿರಿ ಗಾಂಜಿಯಮಕಿನ

ಮೋಜ ನೋಡಿರಿ ಗಾಂಜಿಯಮಕಿನ
ತೇಜಿಯೇರಿದ್ಹಾಂಗ ಜುಲಾಸ್ತದ ಅಮಲಾ
ಈ ಜನರಿನ್ನೇನಿದು ಬಲ್ಲರು ದುರ್ಗುಣ ಮಾಡುವಂತಿರಲು
ಸಹಜವಾದ ಸದ್ಬೀಜದ ಮಹಿಜನವನದಲ್ಲು ಫಲವಾಗಿರಲು
ಶ್ರೀಜಗದೀಶನ ಪೂಜಿತ ಮುನಿಜನ ರಾಜೀವನ ಮೋಹಿಸಲು
ಸೋಜಿಗೆನಿಪ ಶುಭವಾದ ವೃಕ್ಷದಲಿ
ಜನಿಸಿದ ಈ ಮುಗುಳು ಚಿಗಿತು ಬೆಳದಿಹುದು ತೇಜಸು ಪುಷ್ಪಗೊಂಚಲ
ಗೊನಿ ಕೆಂಜಾಗಿನ ವರ್ಣದಲಿ ರಾಜಿಸುವದರಿಂದ ಕುಸುಮಾರ್ಗದ ಫಲ
ಕಾಮಿಸಿ ವ್ಯಾಳ್ಯಗಳು ರಾಜಯೋಗಿಗಳು

ನೈಜಾಮದ ಗೋದಾವರಿ ತೀರದ ಜಲದೊಳು ಮರ್ದಿಸಲು
ಶೋಭಿಪ ಸತ್ವ ರಜೋಗುಣ ತತ್ವದ
ತಪ್ಪಲ ಕೂಡಿರಲು ಗುಳಿಗಿಯಾಗಿರಲು
ಸಾಧುಸಂತರನಾದರಿಸುತ ನಿಜಬೋಧದಿ ಮುಳಗಿರಲು ||೧||

ಬೋಧಾಮೃತ ಸಾನಂದದಿ
ಸಾಧಕರು ಕೂಡಿ ಮೋದದಲಿ ನೋಡಿ
ಮೇದಿನಿ ಸ್ಥಲದಂತೆ ಆ ಕೃತಿಯನು ದಂಡಿಸಿದರು ತಿಂಡಿ
ಶೋಭಿಸಿ ಶರೀರ ಬುರುಡಿಗೆ ತನುವಿನ ಮೀರು
ಇದಕೆ ಜೋಡಿ ಜಲದಿ ಒಡಗೂಡಿ
ಶ್ರೀಧರ ಬ್ರಹ್ಮ ಸದಾಶಿವ ಮೂವರು ಆಧಾರವ ಮಾಡಿ
ಕ್ರೋಧಾದಿಗಳನ್ನು ಛೇದಿಸಿ ಜ್ಞಾನದ ಚಿಲುಮೆ-
ಯೊಳಗೆ ನೀಡಿ ಅಗ್ನಿಯನು ತೋಡಿ
ಈ ದಶವಾಯು ಬಿಗಿದು ಸುಷುಮ್ನನಾಳದೊಳಗೆ ಹೂಡಿ
ಆದಿ ಸದ್ಗುರುವಿನ ಕೈಯೊಳಗೊಪ್ಪುವ ನಾದಿನ
ಗುಡಗುಡಿ ಸೇದಿ ನಲಿದಾಡಿ
ಬಾಧಿ ದುರಿತ ಬಹು ಬಂಧನದ ಕರ್ಮವು ಶೋಧಿಸಿ ಈಡ್ಯಾಡಿ ||೨||

ಈ ಪರಿ ಮಹಿಮದ ರೂಪ ನಿರಾಲ
ಪರಂಜ್ಯೋತಿ ನಿರ್ಮಿಸಿದ ರೀತಿ
ಸ್ಥಾಪಿಸಿದನು ಶಿವನಾವ ಪರಲೋಕದ ಕಲ್ಪದ್ರುಮದ ಜಾತಿ
ಕಾಪುರುಷರು ಕುಹಕರಿಗೆ ಸಲ್ಲರು ತಾಪಸಿಯರಿಗೆ ಪ್ರೀತಿ
ತತ್ವದ ನಡತೆ ಸೋಹಂ ಪದಕೇರಿಸಿ ತಾಂ
ಪರವಸ್ತುವ ತೋರಿಕೊಡುವ ರೀತಿ
ಶಾಸ್ತ್ರ ನುಡಿತೈತಿ ಪಾಪರಹಿತ ಪಂಚಾಕ್ಷರಿ ಪಠಿಸುತ
ಜೀವ ಪವನ ಒತ್ತಿ ತ್ರಿಕೂಟದಲ್ಹತ್ತಿ
ತಾ ಚರಿಸ್ಯಾಡುತ ನೋಡಲು ಪಶ್ಚಿಮ ಚಕ್ರದೊಳಗೆ ಸುತ್ತಿ
ಭೂಪತಿ ರಾಜಗೋವಿಂದನ ಅರಮನಿ
ಹೊಳೆವ ಚಂದ್ರಕಾಂತಿ ಮೂಲ ಸಿದ್ಧಾಂತಿ
ಭಾಪುರೆ ಶಿಶುನಾಳಧೀಶನ ವರವಿಲೆ ನಾ ಪಡೆದೆನು ಮುಕ್ತಿ ||೩||

*****

 

Tagged:

Leave a Reply

Your email address will not be published. Required fields are marked *

ಬೆಳಕಿನಿಂದ ಜಗಜಗಿಸುವ ಸಂಜೆ ರಾವು ಬಡಿದಂತೆ ಮಬ್ಬಾಗಿತ್ತು. ಈ ಮಬ್ಬು ಹಿಂದೆಂದೂ ಇದಿಲ್ಲ. ದೇಶದ ಹದಿನೇಳು ವರ್ಷದ ಸ್ವಾತಂತ್ರದಲ್ಲಿ, ಮಧ್ಯಮ ತರಗತಿಯ ಜೀವನ ಕೈ ಬಾಯಿಯಾಗಿದ್ದರೂ ದೂರದ ಆಶಯ ಹೊಂಗಿರಣವೊಂದು ಸದಾ ಹೊಳೆದು ಭಾವೀ ಪೀಳಿಗೆಯ ಮನೋಲ್ಲಾಸ ಮಾಡುತ್ತಿತ್ತು. ಆದರೆ ಈ ಮಬ್ಬುಗತ್ತ...

ಅವಳು ಯಾವ ಹುಡುಗರ ಜೊತ ನಿಂತು ಮಾತನಾಡಿದರೂ ಶ್ರೀಕಾಂತನಪಾಲಿಗೆ ಆ ಹುಡುಗರು ವಿಲನ್‌ಗಳಂತೆಯೇ ಭಾಸವಾಗುತ್ತಿದ್ದರು. ಅವಳು ತನ್ನ ಕಾಲೇಜಿನ ಲೆಕ್ಚರರ್‌ಗಳು ಪಾಠ ಮಾಡುವ ವೈಖರಿ ಸ್ಟೈಲು ಹೈಲುಗಳ ಕುರಿತು ಬಣ್ಣಿಸುವಾಗಲೂ ಕೇಳಲಾಗದೆ ಶ್ರೀಯ ಹೊಟ್ಟೆಯಲೆಲ್ಲಾ ತಳಮಳ. ಅಷ್ಟೇಕೆ ಅವಳು ತನ್ನ ತ...

ಬೆಳಿಗ್ಗೆ ಏಳರ ಸಮಯ ಮೈಸೂರಿನ ರೋಹಿಣಿ ಲಾಡ್ಜ್‌ನ ಕೊಠಡಿ ಸಂಖ್ಯೆ ೧೦೩. ಪೋಲೀಸರು, ಪತ್ರಕರ್ತರು, ಫೊಟೋ ಗ್ರಾಫರ್‌ಗಳಿಂದ ತುಂಬಿಹೋಗಿದೆ. ಬೆಳ್ಳಂ ಬೆಳಿಗ್ಗೆಯೇ ಯುವತಿಯೊಬ್ಬಳ ಕೊಲೆ ನಡೆದುಹೋಗಿದೆ. ಲಾಡ್ಜ್‌ನ ಹೊರಗೆ ಜನರು ಕುತೂಹಲಭರಿತರಾಗಿ ಸೇರಿದ್ದಾರೆ. ಸೇರಿದ್ದ ಜನರನ್ನು ನಿಯಂತ್ರ...

೧ ಗೌರಿಯ ಹಬ್ಬವು ಕಳೆದು ಕೆಲವು ದಿನಗಳಾಗಿದ್ದುವು. ಭಾಗೀರಥಮ್ಮನೂ ಅವಳ ಜೊತೆಯ ಹುಡುಗಿಯರೂ ಒಂದೊಂದು ದಿನವನ್ನು ಕಳೆಯುವುದೂ ಒಂದೊಂದು ಯುಗವನ್ನು ಕಳೆದಂತೆ ಕಷ್ಟವಾಗಿದ್ದಿತು. ಅವರು ಎಷ್ಟು ಕುತೂಹಲದಿಂದ ಬಯಸಿದರೂ ದಿನಗಳು ಬೇಗ ಬೇಗ ಉರುಳಲೊಲ್ಲವು. ಒಂದು ದಿನ ಅವರೆಲ್ಲರೂ ಸೇರಿ ಕವಡೆಯ...

ಸಂಜೆ ನಾಲ್ಕು ಗಂಟೆಯಾದರೆ ಸಾಕು. ಅವರೆಲ್ಲರೂ ಒಬ್ಬೊಬ್ಬರಾಗಿ ಬಂದು ಸೇರುತ್ತಾರೆ. ಅದೊಂದು ಪಂಚಾಯಿತಿ ಕಟ್ಟೆ ಇದ್ದಂತೆ. ಮಧ್ಯದಲ್ಲೊಂದು ಸಿಮೆಂಟ್ ಬೆಂಚು, ಅದರ ಎಡ, ಬಲ ಎರಡೂ ಕಡೆ ಇವರೇ ಒಂದಷ್ಟು ಕಲ್ಲು ಚಪ್ಪಡಿಗಳನ್ನು ಎಳೆದು ತಂದು ಕೊಡುವುದಕ್ಕೆ ಪೀಠಗಳನ್ನು ಮಾಡಿಕೊಂಡಿದ್ದಾರೆ. ಸ...

ತಿಮ್ಮಣ್ಣ ನಮ್ಮೂರಿನ ಪಕ್ಕದ ಹಳ್ಳಿಯಲ್ಲಿನ ಅಡುಗೆ ಭಟ್ಟ ತಿಪ್ಪಾಭಟ್ಟರ ಮಗ. ತಿಪ್ಪಾಭಟ್ಟರಿಗೆ ಮದುವೆಯಾಗಿ ಹತ್ತು ವರ್ಷ ಕಳೆದರೂ ಮಕ್ಕಳಾಗಿರಲಿಲ್ಲ. ಕೊನೆಗೆ ಪಕ್ಕದ ಮನೆಯ ಕಮಲಾಕ್ಷಮ್ಮನ ಸಲಹೆ ಮೇರೆಗೆ ಮಗುವಾದರೆ ತಿರುಪತಿಗೆ ಹೋಗಿ ಬರುವ ಹರಕೆ ಹೊತ್ತರು. ತಿಮ್ಮಪ್ಪನ ಕೃಪಾಕಟಾಕ್ಷವೋ ...