ದೀಪದ ಕುಡಿಗಳು ಎಲ್ಲೆಲ್ಲೂ

ದೀಪದ ಕುಡಿಗಳು ಎಲ್ಲೆಲ್ಲೂ
ದೀಪದ ಪಡೆಯೇ ಎಲ್ಲೆಲ್ಲೂ,
ಬಾನಲ್ಲೂ ಬುವಿಯಲ್ಲೂ
ಮಕ್ಕಳು ಮುದುಕರ ಕಣ್ಣಲ್ಲೂ.

ಕರೀ ಮೋಡದಾ ಮರೆಯಲ್ಲಿ
ಹಾಸಿದ ಬೆಳಕಿನ ತೆರೆಯಲ್ಲಿ
ಮಿಂಚುವ ಭಾಷೆ, ಏನೋ ಆಸೆ
ಕಾತರ ತುಂಬಿದ ಬಾನಲ್ಲಿ

ಕಲ್ಲು ಮುಳ್ಳಿನಾ ಬದಿಯಲ್ಲೇ
ಬಿರುಸುಮಣ್ಣಿನಾ ಎದೆಯಲ್ಲೇ,
ಆಡಿವೆ ಗಿಡಮರ ಬಳ್ಳಿಗಳು
ತೂಗಿವೆ ಹೂವೂ ಹಣ್ಣುಗಳು.

ಇದ್ದೇ ಇವೆ ಹಳೆ ನೋವುಗಳು
ಮರೆಯಲು ಬಯಸವೆ ಜೀವಗಳು?
ನೋವಿನ ನೆತ್ತಿಯ ಒತ್ತಿರಲಿ
ಆಸೆಯ ವಾಮನ ಪಾದಗಳು.
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಗಳಿಗೆಬಟ್ಟಲ ತಿರುವುಗಳಲ್ಲಿ – ೧೨
Next post ಪ್ರೇಮ ಹೀಗೊಂದು ವ್ಯಾಖ್ಯಾನ

ಸಣ್ಣ ಕತೆ

  • ಹುಟ್ಟು

    ಶಾದಿ ಮಹಲ್‌ನ ಒಳ ಆವರಣದಲ್ಲಿ ದೊಡ್ಡ ಹಾಲ್‌ನಲ್ಲಿ ಹೆಂಗಸರೆಲ್ಲಾ ಸೇರಿದ್ದರು. ಹೊರಗಡೆ ಹಾಕಿದ್ದ ಶಾಮಿಯಾನದಲ್ಲಿ ಗಂಡಸರು ನೆರೆದಿದ್ದರು. ಒಂದು ಕಡೆಯ ಎತ್ತರವಾದ ವೇದಿಕೆಯ ಮೇಲೆ ಮದುವೆ ಗಂಡು,… Read more…

  • ಯಾರು ಹೊಣೆ?

    "ಧಡ್....... ಧಡಲ್........ ಧಡಕ್" ಗಾಡಿ ನಿಂತಿತು. ಹೊರಗೆ ಮೋರೆಹಾಕಿ ನೋಡಿದೆ. ಕತ್ತಲು ಕವಿದಿತ್ತು. ಚುಕ್ಕೆಗಳು ಪಕಪಕ ಕಣ್ಣು ಬಿಡುತ್ತಿದ್ದವು. ಮೂಡಲ ಗಾಳಿ "ಸಿಳ್" ಎಂದು ಬೀಸುತ್ತಿತ್ತು. ನಾನು… Read more…

  • ಬಿರುಕು

    ಚಂಪಾ ಹಾಲು ತುಂಬಿದ ಲೋಟ ಕೈಯಲ್ಲಿ ಹಿಡಿದು ಒಳಗೆ ಬಂದಳು. ಎಂದಿನಂತೆ ಮೇಜಿನ ಮೇಲಿಟ್ಟು ಮಾತಿಲ್ಲದೆ ಹೊರಟು ಹೋಗುತ್ತಿದ್ದ ಅವಳು ಹೊರಡುವ ಸೂಚನೆಯನ್ನೇ ತೋರದಿದ್ದಾಗ ಮೂರ್‍ತಿ ಬೆಚ್ಚಿ… Read more…

  • ವಾಮನ ಮಾಸ್ತರರ ಏಳು ಬೀಳು

    "ಏಳು!" ಅಂದರು ವಾಮನ ಮಾಸ್ತರರು. ರಾಜಪ್ಪ ಏಳಲಿಲ್ಲ. ಎಂದಿನಂತೆ ಕಿಟಿಕಿಯ ಹೊರಗೆ ಹೆದ್ದಾರಿಯಲ್ಲಿ ಹೋಗುತ್ತಿದ್ದ ವಾಹನಗಳನ್ನೂ ದಾರಿಹೋಕರನ್ನೂ ನೋಡುತ್ತ, ಡೆಸ್ಕಿನ ಮೇಲೆ ಬಲಗೈಯ ಸೊಂಟು ಊರಿ, ಕೈಯಮೇಲೆ… Read more…

  • ಆ ರಾಮ!

    ಮೇಲೆ ವಿಶಾಲವಾದ ನೀಲಮಯ ನಭೋಮಂಡಲ. ಲೋಕವನ್ನೆ ಅವಲೋಕಿಸ ಹೊರಟವನಂತೆ ದಿನಮಣಿಯು ದೀಪ್ತಿಯುಳ್ಳವನಾಗಿ ಮೂಡಣದಲ್ಲಿ ನಿಂತಿದ್ದಾನೆ. ಅವನ ಪ್ರಖರ ಕಿರಣಗಳು ನೀರಿನೆಲೆಗಳ ಮೇಲೆ ಕೆಳಗು ಮೇಲಾಗುತ್ತಿವೆ. ಚಿಕ್ಕವರು ದೊಡ್ಡವರು… Read more…