ಸಹಸ್ರಮಾನಕೆ ನಮನ

ಶತಮಾನಕೆ ನಮನ
ಸಹಸ್ರ ಮಾನಕೆ ನಮನ

ಹೊಸ ಶತಮಾನಕೆ ಹೊಸ ಆಲೋಚನೆ
ಹೊಸ ಚಿಂತನೆ ಬರಲಿ
ಶತಶತಮಾನದ ಅಂಧಶ್ರದ್ಧೆಗಳು
ಇಂದೇ ತೊಲಗಿ ಬಿಡಲಿ

ಮನುಜರ ನಡುವಣ ಅಡ್ಡಗೋಡೆಗಳು
ಕುಸಿದು ಬಿಡಲಿ ಇಂದೇ
ಜಾತಿ ಪಂಥ ಮತ ಧರ್ಮಗಳೆಲ್ಲವು
ಅನುಭಾವಿಗೆ ಒಂದೇ

ದೇಶ ದೇಶಗಳ ಗಡಿಗಳ ಯೋಧರು
ಬಂದೂಕನು ಬದಿಗಿಟ್ಟು
ಶಾಶ್ವತ ಸ್ನೇಹದಿ ಹಾಡುತ ಕುಣಿಯಲಿ
ಇಂದಾಗುತ ಒಟ್ಟು

ಅಣುಬಾಂಬನು ಸ್ಫೋಟಿಸುವ ಮನಗಳಲಿ
ಮೂಡಲಿ ಹೊಸ ಕವನ
ಮಾನವತೆಯು ಮೆರೆದಾಡಲಿ ಹಾಡಲಿ
ಶತಮಾನದ ಗಾನ

ಜನನ ಮರಣಗಳ ನಡುವಣ ಜೀವನ
ಸಾರ್ಥಕವಾಗಲೆ ಬೇಕು
ಧನವಂತರ ಹಣ ಕವಿಗಳ ಚಿಂತನ
ಲೋಕಕೆ ನೀಡಲಿ ಬೆಳಕು

೦೧-೦೧-೨೦೦೧
*****

 

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಮರವೇ ಕಾಡಬೇಡ ನನ್ನ!
Next post ನಗೆ ಡಂಗುರ – ೨೩

ಸಣ್ಣ ಕತೆ

  • ಕನಸುಗಳಿಗೆ ದಡಗಳಿರುದಿಲ್ಲ

    ಬೆಳಗ್ಗಿನ ಸ್ನಾನ ಮುಗಿಸಿದ ವೃಂದಾ ತನ್ನ ರೂಮಿಗೆ ಬಂದು ಬಾಗಿಲುಹಾಕಿಕೊಂಡು ಕನ್ನಡಿಯಲ್ಲಿ ತನ್ನ ದೇಹ ಸಿರಿಯನ್ನೊಮ್ಮೆ ನೋಡಿಕೊಂಡಳು. ಯಾಕೋ ಅವಳ ಮೈ - ಮನ ಒಮ್ಮೆ ಪುಲಕಿತವಾಯಿತು.… Read more…

  • ಮೌನರಾಗ

    ಇಪ್ಪತ್ತೊಂಬತ್ತು ದಾಟಿ ಮೂವತ್ತಕ್ಕೆ ಕಾಲಿರಿಸುತ್ತಿದ್ದ ಸುಧೀರ್ ಮದುವೆಯ ಬಗ್ಗೆ ತಾಯಿ ಸೀತಮ್ಮ, ತಂದೆ ರಂಗರಾವ್ ಅವರಿಗೆ ಬಹಳ ಕಾತುರವಿತ್ತು. ಹೆಣ್ಣುಗಳನ್ನು ಸಂದರ್ಶಿಸಲು ಒಪ್ಪದೇ ಇದ್ದ ಸುಧೀರನ ಮನೋ… Read more…

  • ದೇವರೇ ಪಾರುಮಾಡಿದಿ ಕಂಡಿಯಾ

    "Life is as tedious as a twice-told tale" ಧಾರವಾಡದ ಶಾಖೆಯೊಂದಕ್ಕೆ ಸಪ್ತಾಪುರವೆಂಬ ಹೆಸರು, ದೂರ ದೂರಾಗಿ ಕಟ್ಟಿರುವ ಆ ಗ್ರಾಮದ ಮನೆಗಳಲ್ಲಿ ಒಂದು ಮನೆಯು… Read more…

  • ಸ್ವಯಂಪ್ರಕಾಶ

    ಇಸ್ತ್ರೀ ಇಲ್ಲದ ಸೀರೆ, ಬಾಚದ ತಲೆ... ಕೈಯಲ್ಲಿ ಚೀಲದ ತುಂಬ ತರ್ಕಾರಿಗಳೊಂದಿಗೆ ಮಾರುಕಟ್ಟೆಯಿಂದ ಹೊರಗೆ ಬರುವುದು ಭ್ರಮರೆ’ಯೇ... ಕಂಡು ತುಂಬಾ ಆಶ್ಚರ್ಯವಾಯಿತು. ರೋಡಿನ ಈ ಕಡೆ ಕಾರು… Read more…

  • ಎರಡು ಪರಿವಾರಗಳು

    ಇದು ಎರಡು ಪರಿವಾರದ ಕತೆ. ಒಂದು ಹಕ್ಕಿ ಪರಿವಾರ, ಇನ್ನೊಂದು ಮನುಷ್ಯ ಪರಿವಾರದ್ದು. ಒಂದು ಸುಂದರ ತೋಟ; ವಿಧವಿಧದ ಗಿಡ ಮರಗಳು; ಅವುಗಳ ಕವಲು ಬಿಟ್ಟ ರೆಂಬೆಗಳಲ್ಲಿ… Read more…