ಸಹಸ್ರಮಾನಕೆ ನಮನ

ಶತಮಾನಕೆ ನಮನ
ಸಹಸ್ರ ಮಾನಕೆ ನಮನ

ಹೊಸ ಶತಮಾನಕೆ ಹೊಸ ಆಲೋಚನೆ
ಹೊಸ ಚಿಂತನೆ ಬರಲಿ
ಶತಶತಮಾನದ ಅಂಧಶ್ರದ್ಧೆಗಳು
ಇಂದೇ ತೊಲಗಿ ಬಿಡಲಿ

ಮನುಜರ ನಡುವಣ ಅಡ್ಡಗೋಡೆಗಳು
ಕುಸಿದು ಬಿಡಲಿ ಇಂದೇ
ಜಾತಿ ಪಂಥ ಮತ ಧರ್ಮಗಳೆಲ್ಲವು
ಅನುಭಾವಿಗೆ ಒಂದೇ

ದೇಶ ದೇಶಗಳ ಗಡಿಗಳ ಯೋಧರು
ಬಂದೂಕನು ಬದಿಗಿಟ್ಟು
ಶಾಶ್ವತ ಸ್ನೇಹದಿ ಹಾಡುತ ಕುಣಿಯಲಿ
ಇಂದಾಗುತ ಒಟ್ಟು

ಅಣುಬಾಂಬನು ಸ್ಫೋಟಿಸುವ ಮನಗಳಲಿ
ಮೂಡಲಿ ಹೊಸ ಕವನ
ಮಾನವತೆಯು ಮೆರೆದಾಡಲಿ ಹಾಡಲಿ
ಶತಮಾನದ ಗಾನ

ಜನನ ಮರಣಗಳ ನಡುವಣ ಜೀವನ
ಸಾರ್ಥಕವಾಗಲೆ ಬೇಕು
ಧನವಂತರ ಹಣ ಕವಿಗಳ ಚಿಂತನ
ಲೋಕಕೆ ನೀಡಲಿ ಬೆಳಕು

೦೧-೦೧-೨೦೦೧
*****

 

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಮರವೇ ಕಾಡಬೇಡ ನನ್ನ!
Next post ನಗೆ ಡಂಗುರ – ೨೩

ಸಣ್ಣ ಕತೆ

  • ಒಂದು ಹಿಡಿ ಪ್ರೀತಿ

    ತೆಂಗಿನ ತೋಟದಲ್ಲಿ ಬಾಗಿಕೊಂಡು ಹಣ್ಣಾಗಿ ಉದುರಿದ ಅಡಕೆಗಳನ್ನು ಒಂದೊಂದಾಗಿ ಹೆಕ್ಕಿ, ಸನಿಹದಲ್ಲಿದ್ದ ಪ್ಲಾಸ್ಟಿಕ್ ಚೀಲಕ್ಕೆ ತುಂಬಿಸುತ್ತಿದ್ದಂತೆ ಪಕ್ಕದಲ್ಲಿ ಸರಕ್ಕನೆ ಹರಿದು ಹೋದ ಕೇರೆ ಹಾವಿನಿಂದಾಗಿ ಒಮ್ಮೆ ವಿಚಲಿತರಾದರು… Read more…

  • ಒಂಟಿ ತೆಪ್ಪ

    ನಮ್ಮ ಕಂಪೆನಿಗೆ ಹೊಸದಾಗಿ ಕೆಲಸಕ್ಕೆ ಸೇರಿದ ಕ್ಲೇರಾಳ ಬಗ್ಗೆ ನಾನು ತಿಳಿದುಕೊಳ್ಳಲು ಪ್ರಯತ್ನಿಸಿದಷ್ಟೂ ಅವಳು ನಿಗೂಢವಾಗುತ್ತಿದ್ದಳು. ನಾಲಗೆಯ ಚಪಲದಿಂದ ಸಹ-ಉದ್ಯೋಗಿಗಳು ಅವಳ ಬಗ್ಗೆ ಇಲ್ಲಸಲ್ಲದ ಆರೋಪಗಳನ್ನು ಹೊರಿಸಿದರೂ… Read more…

  • ಏಡಿರಾಜ

    ಚಲೋ ವಂದು ಅರಸು ಮನಿ, ಗಂಡ-ಹೆಂಡ್ತಿ ದೊಡ್ಡ ಮನ್ತಾನದಲ್ ಆಳ್ಕತಿದ್ರು. ಆವಾಗೆ ಆ ಅರಸೂಗೆ ಗಂಡ್ ಹುಡ್ಗರಿಲ್ಲ. ಸಂತತ್ಯಲ್ಲ, ಇದ್ರದು ನಿಚ್ಚಾ ಕೆಲ್ಸಯೇನಪ್ಪ ಅರಸು ಹಿಂಡ್ತಿದು, ಮನಿ… Read more…

  • ಅಜ್ಜಿ-ಮೊಮ್ಮಗ

    ಅಜ್ಜವಿ-ಮೊಮ್ಮಗ ಇದ್ರು. ಅವ ಅಜ್ಜವಿಕಲ್ ಯೇನೆಂದ? "ತಾನು ಕಾಶಿಗೆ ಹೋಗಬತ್ತೆ. ಮೂರ ರೊಟ್ಟಿ ಸುಟಕೊಡು" ಅಂತ. "ಮಗನೇ, ಕಾಶಿಗೆ ಹೋದವರವರೆ, ಹೋದೋರ ಬಂದೋರಿಲ್ಲ. ನೀ ಕಾಶಿಗೆ ಹೋಗ್ವದೆ… Read more…

  • ಅಜ್ಜಿಯ ಪ್ರೇಮ

    ಎರಡನೆಯ ಹೆರಿಗೆಯಲ್ಲಿ ಅಸು ನೀಗಿದ ಮಗಳು ಕಮಲಳನ್ನು ಕಳಕೊಂಡ ತೊಂಬತ್ತು ವರ್ಷದ ಜಯಮ್ಮನಿಗೆ ಸಹಿಸಲಾಗದ ಸಂಕಟವಾಗಿತ್ತು. ಹೆಣ್ಣು ಮಗುವಿಗೆ ಜನ್ಮವಿತ್ತು ತನ್ನ ಇಹದ ಯಾತ್ರೆಯನ್ನು ಮುಗಿಸಿ ಹೋದ… Read more…