ಸಹಸ್ರಮಾನಕೆ ನಮನ

ಶತಮಾನಕೆ ನಮನ
ಸಹಸ್ರ ಮಾನಕೆ ನಮನ

ಹೊಸ ಶತಮಾನಕೆ ಹೊಸ ಆಲೋಚನೆ
ಹೊಸ ಚಿಂತನೆ ಬರಲಿ
ಶತಶತಮಾನದ ಅಂಧಶ್ರದ್ಧೆಗಳು
ಇಂದೇ ತೊಲಗಿ ಬಿಡಲಿ

ಮನುಜರ ನಡುವಣ ಅಡ್ಡಗೋಡೆಗಳು
ಕುಸಿದು ಬಿಡಲಿ ಇಂದೇ
ಜಾತಿ ಪಂಥ ಮತ ಧರ್ಮಗಳೆಲ್ಲವು
ಅನುಭಾವಿಗೆ ಒಂದೇ

ದೇಶ ದೇಶಗಳ ಗಡಿಗಳ ಯೋಧರು
ಬಂದೂಕನು ಬದಿಗಿಟ್ಟು
ಶಾಶ್ವತ ಸ್ನೇಹದಿ ಹಾಡುತ ಕುಣಿಯಲಿ
ಇಂದಾಗುತ ಒಟ್ಟು

ಅಣುಬಾಂಬನು ಸ್ಫೋಟಿಸುವ ಮನಗಳಲಿ
ಮೂಡಲಿ ಹೊಸ ಕವನ
ಮಾನವತೆಯು ಮೆರೆದಾಡಲಿ ಹಾಡಲಿ
ಶತಮಾನದ ಗಾನ

ಜನನ ಮರಣಗಳ ನಡುವಣ ಜೀವನ
ಸಾರ್ಥಕವಾಗಲೆ ಬೇಕು
ಧನವಂತರ ಹಣ ಕವಿಗಳ ಚಿಂತನ
ಲೋಕಕೆ ನೀಡಲಿ ಬೆಳಕು

೦೧-೦೧-೨೦೦೧
*****

 

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಮರವೇ ಕಾಡಬೇಡ ನನ್ನ!
Next post ನಗೆ ಡಂಗುರ – ೨೩

ಸಣ್ಣ ಕತೆ

  • ಕರೀಮನ ಪಿಟೀಲು

    ಕರೀಮನ ಹತ್ತಿರ ಒಂದು ಪಿಟೀಲು ಇದೆ. ಅದನ್ನು ಅವನು ಒಳ್ಳೆ ಮಧುರವಾಗಿ ಬಾರಿಸುತ್ತಾನೆ. ಬಾರಿಸುತ್ತ ಒಮ್ಮೊಮ್ಮೆ ಭಾವಾವೇಶದಲ್ಲಿ ತನ್ನನ್ನು ತಾನು ಮರೆತುಬಿಡುತ್ತಾನೆ. ಕರೀಮನ ಪಿಟೀಲುವಾದವೆಂದರೆ ಊರ ಜನರೆಲ್ಲರೂ… Read more…

  • ಎರಡು…. ದೃಷ್ಟಿ!

    ದೀಪಾವಳಿಯು ಸಮೀಪಿಸಿದ್ದಿತು. ದೀಪಾವಳಿಯನ್ನು ನಾವು ಪಂಚಾಗ ನೋಡದೆ ತಿಳಿದುಕೊಳ್ಳಬಹುದು. ಅದು ಹೇಗೆ? ದೀಪಾವಳಿ ಪೂರ್ವರಂಗದ ಸುಳಿವು ನಮಗೇ ಗೊತ್ತೇ ಆಗುವದು. ಮನೆಯಲ್ಲಿ ಕರಚೀ ಕಾಯಿ, ಚಿರೋಟಿಗಳನ್ನು ಕರಿಯುವ… Read more…

  • ಟೋಪಿ ಮಾರುತಿ

    "ಏ ಕಾಗಿ, ಕಾಳೀ ಮಗನ! ಯಾಕ ಕೂಗ್ತೀಯಾ?" ಭಾವಿಯಲ್ಲಿಯ ಹಗ್ಗ ಮೇಲೆ ಕೆಳಗೆ ಹೋಗುತ್ತಿರುತ್ತದೆ. ಒಂದು ಮೊಳ ಹಗ್ಗ ಸೇದಿದರೆ ಅರ್‍ಧ ಮೊಳ ಒಳಗೆ ಸೇರಿರುತ್ತದೆ. "ಥೂ… Read more…

  • ಮಲ್ಲೇಶಿಯ ನಲ್ಲೆಯರು

    ಹೇಮರಡ್ಡಿ ಪ್ರಭುಗಳು ಒಂದು ಊರಿನ ದೇಸಾಯರು. ಆ ಗ್ರಾಮದ ಉತ್ಪನ್ನವು ಆರೇಳು ಸಾವಿರ ರೂಪಾಯಿ ಇರುವದಲ್ಲದೆ ದೇಸಾಯರಿಗೆ ತೋಟ ಪಟ್ಟಿ ಮನೆಯ ಒಕ್ಕಲತನಗಳಿಂದಾದರೂ ಪ್ರಾಪ್ತಿಯು ಚನ್ನಾಗಿತ್ತು. ಅವರೊಂದು… Read more…

  • ಕಲಾವಿದ

    "ನನಗದು ಬೇಕಿಲ್ಲ. ಬೇಕಿಲ್ಲ! ಸುಮ್ಮನೆ ಯಾಕೆ ಗೋಳು ಹುಯ್ಯುತ್ತೀಯಮ್ಮಾ?" "ಹೀಗೇ ಎಷ್ಟು ದಿನ ಮನೆಯಲ್ಲೇ ಕುಳಿತಿರುವೆ, ಮಗು?" "ಇಷ್ಟು ದಿನವಿರಲಿಲ್ಲವೇನಮ್ಮ-ಇನ್ನು ಮೇಲೆಯೂ ಹಾಗೆಯೇ, ಹೊರಗಿನ ಪ್ರಪಂಚಕ್ಕಿಂತ ನನ್ನ… Read more…

cheap jordans|wholesale air max|wholesale jordans|wholesale jewelry|wholesale jerseys