ಹೊಸ ವರ್‍ಷವು ಬರಲಿ

ಹೊಸ ವರ್‍ಷವು ಬರಲಿ
ದಿನ ದಿನವೂ ಪ್ರತಿ ಕ್ಷಣವೂ
ಹೊಸತನವು ಬಾಳಿಗೆ
ಹೊಸ ಚೈತನ್ಯವ ತರಲಿ||

ಹರುಷದಾ ಮೊಗ ಚೆಲ್ಲಿ
ವರುಷದ ಕಳೆ ಚಿಗುರಿ
ಮುಂಗಾರಂಚಿನ ಇಬ್ಬನಿ ಹನಿ
ಪುಟಿದೇಳುವ ಕಾಮನೆ ಹೂವಾಗಲಿ||

ಚಂದ್ರಿಕೆಯಾ ಸಖಿ ಹಸೆಮಣೆಯ
ಕಾಂತೆಯರು ಮುತ್ತಿನಾರತಿ ಬೆಳಗಿ
ಅಂಬರಕೆ ಚಪ್ಪರ ಕಟ್ಟಿ
ಸ್ವರ್‍ಗ ಆಸೀಮ ಸಪ್ತಪದಿ ಸಾಗಲಿ||

ಸೊಬಗಿನಾ ಬಣ್ಣ ಹೊನ್ನರಂಗಿನಲಿ
ರಂಗಾದ ಹೂತೋಟ ನೈದಿಲೆ
ಕೋಗಿಲೆ ಕುಹೂ ಕುಹೂ ಜೀವನ ಗಾನ
ರಾಗ ತಾಳ ಮೋಹಕವೂ ಇಂಪಾಗಲಿ||

ಮೂಡಲೀ ಹೊಸ ವರುಷ
ಜೀವ ಜೀವದುಸಿರ ಪ್ರತಿಕ್ಷಣ
ಮಾನವತೆಯ ಮನ ಪಾವಿತ್ರತೆ
ತ್ಯಾಗ ಶಾಂತಿ ಸಹನೆ ಮಂದಹಾಸ
ಜಗದಭಿಮಾನ ಮೂಡಿ ಐಕ್ಯವಾಗಲಿ||
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಅವಶ್ಯಕತೆ ಮತ್ತು ಕಾನೂನು
Next post ನಿಯಮ

ಸಣ್ಣ ಕತೆ

  • ಬಾಗಿಲು ತೆರೆದಿತ್ತು

    ಆ ಮನೆಯ ಮುಂದಿನ ಬಾಗಿಲು ಯಾವಾಗಲೂ ಇಕ್ಕಿರುವುದು! ನನ್ನ ಓದುವ ಕೋಣೆಯ ಕಿಡಿಕೆಯೊಳಗಿಂದ ಆ ಮನೆಯ ಬಾಗಿಲು ಕಾಣುವುದು. ನಾನು ಕಿಡಿಕೆಯೊಳಗಿಂದ ಎಷ್ಟೋ ಸಲ ಅತ್ತ ಕಡೆ… Read more…

  • ತಿಥಿ

    "ಲೋ ಬೋಸುಡಿಕೆ ನನ್ಮಗನೇ, ಇದು ಕೊನೆಯ ಬಾರಿ ನಿನಗೆ ವಾರ್ನಿಂಗ್ ಕೊಡುತ್ತಾ ಇದ್ದೇನೆ. ಮೂರು ಸಾರಿ ಈ ಜೈಲಿನಿಂದ ನಿನಗೆ ವಿದಾಯ ಕೊಟ್ಟಾಯಿತು. ಇನ್ನು ಹೋಗಿ ನಿನ್ನ… Read more…

  • ಮೇಷ್ಟ್ರು ವೆಂಕಟಸುಬ್ಬಯ್ಯ

    ಪ್ರಕರಣ ೧೨ ಜನಾರ್ದನಪುರಕ್ಕೆ ರಂಗಣ್ಣ ಹಿಂದಿರುಗಿದ್ದಾಯಿತು. ತಿಮ್ಮರಾಯಪ್ಪ ಹೇಳಿ ಕೊಟ್ಟಿದ್ದ ಹಾಗೆ ಕಲ್ಲೇಗೌಡರಿಗೆ ಕಾಗದಗಳನ್ನು ಬರೆದದ್ದೂ ಆಯಿತು. ಕಡೆಗೆ ರಿಜಿಸ್ಟರ್ಡ್ ಕಾಗದವನ್ನೂ ಅದಕ್ಕೆ ಒಂದು ಜ್ಞಾಪಕದೋಲೆಯನ್ನೂ ಕಳಿಸಿದ್ದಾಯಿತು.… Read more…

  • ಹೃದಯ ವೀಣೆ ಮಿಡಿಯೆ….

    ಒಂದು ವಾರದಿಂದಲೇ ಮನೆಯಲ್ಲಿ ತಯಾರಿ ನಡೆದಿತ್ತು. ತಂಗಿಯನ್ನು ನೋಡಲು ಬೆಂಗಳೂರಿನಿಂದ ವರ ಬರುವವನಿದ್ದ. ಗೋಪಿ ಅವಳನ್ನು ಆ ವರನ ಹೆಸರೆತ್ತಿ ಚುಡಾಯಿಸುತ್ತಿದ್ದ, ರೇಗಿಸುತ್ತಿದ್ದ. ಅವಳ ಕೆನ್ನೆ ಕೆಂಪಗೆ… Read more…

  • ಪ್ಲೇಗುಮಾರಿಯ ಹೊಡೆತ

    ಪ್ರಕರಣ ೧೩ ಕೆಲವು ದಿನಗಳ ತರುವಾಯ ತಿಪ್ಪೂರು ಹೋಬಳಿಯ ಪಾಠಶಾಲೆಗಳಿಂದ ಅನಿಷ್ಟ ವರ್ತಮಾನಗಳು ಬರಲಾರಂಭಿಸಿದುವು. ಹಳ್ಳಿಯಲ್ಲಿ ಪ್ಲೇಗುಮಾರಿ ಹೊಕ್ಕಿದೆ; ಒಂದೆರಡು ಸಾವುಗಳಾದುವು; ಜನರೆಲ್ಲ ಹೊಲಗಳಲ್ಲಿ ಗುಡಿಸಿಲುಗಳನ್ನು ಹಾಕಿಕೊಳ್ಳುತ್ತಿದಾರೆ;… Read more…