ದೀಪ ಆರದಿರಲಿ

ಎಷ್ಟು ದಿನಾದರು ಇಷ್ಟಿಷ್ಟೆ ಆಶೆಗಳು
ನಷ್ಟವಾಗುತಾವೆ ಮನದಾಗೆ
ತೇಲುವ ಕನಸೆಲ್ಲ ಆವ್ಯಾಗಿ ಹೋಗ್ತಾವೆ
ಇಳಿವಲ್ದು ಮಳೆಯಾಗಿ ನೆಲದಾಗೆ

ಕಾಲಕಾಲಕು ನಿನ್ನ ಕರಿತಾನೆ ಬದುಕೀನಿ
ಕರೆಯೋದು ಒಂದೇ ಕೊನೆಯಾಸೆ
ಏನೆಲ್ಲ ಇದ್ರೂನು ಏನೆಲ್ಲ ಬಂದ್ರೂನು
ಕೊರಗೋದು ತಪ್ಪಿಲ್ಲ ಅಳಿಯಾಸೆ

ಅಂದುಕೊಂಡದ್ದಲ್ಲ ಅವಲಕ್ಷಣಾದೀತು
ಆಶೆ ಮಾಡಿದ್ದು ಹುಸಿಯಾತು
ಮಾಡಿದ್ದು ಮುಟ್ಟಿದ್ದು ಎಡವಟ್ಟೆ ಆದೀತು
ಕನಸಿನ ಮಂಟಪ ಕುಸಿದಿತ್ತು

ಆಶೆಯ ಉಸುಗೀನ ಗೂಡನ್ನು ಕಟ್ಟೋದು
ಅಲೆ ಬಂದು ಅದನಾ ಕೆಡಿಸೋದು
ಬಣ್ಣದ ಕನಸಿನ ಕಾಮನ ಬಿಲ್ಲಾಗಿ
ಅಗೋ ಅನ್ನದ್ರಾಗ ಅಳಿಸೋದು

ಕನಸಿನ ಗೋಪುರ ಕಟ್ಟೋದು ಬೀಳೋದು
ನಡೆದಾದ ಬದುಕಿನ ಈ ಯಾತ್ರೆ
ಆಶೆಯ ದೀಪವು ಆರುತ್ತ ಹ್ಯಾಂಗ್ಯಾಂಗೊ
ಉಳದೈತೆ ಅದಕೇ ಹೂಪತ್ರೆ

ಏನೆಲ್ಲ ಹಾಳಾಗ್ಲಿ ಎಲ್ಲಾನು ಅಳಿದೋಗ್ಲಿ
ಆ ದೀಪ ಆರದಾಂಗೆ ಉಳಿದಿರ್ಲಿ
ಆ ಕಣ್ಣ ಬೆಳಕಿನ ದಾರೀನ ಹಿಡಕೊಂಡು
ಉಸಿರಾಟದೀ ಗೊಂಬೆ ಉಸಿರಾಡ್ಲಿ

ಕನಸಿನ ಏಣಿಗೆ ಸಾವಿರಾರು ಹಲ್ಲುಗಳು
ಹಲ್ಳುಗಳುದುರಿದ್ರೂ ಉಳದೈತೆ
ಆಶೆಯ ದೀಪಕ್ಕೆ ಬಿರುಗಾಳಿ ಬೀಸಿದ್ರು
ಆರಿ ಆರಿ ದೀಪ ಬದುಕೈತೆ
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಅಳಿಯ
Next post ನಮ್ಮ ಕೇರಿಯ ಸುಬ್ಬ

ಸಣ್ಣ ಕತೆ

  • ಎರಡು ಮದುವೆಗಳು

    ಮುಂಗಾರು ಮಳೆಗಳು ಸರಿಯಾಗಿ ಬಾರದೇ ಭುವನೇಶ್ವರದ ಹಳ್ಳಿಯ ಜನರಲ್ಲಿ ಒಂದು ರೀತಿಯ ಕಳವಳವಾಗಿತ್ತು. ಮಳೆ ಬಂದರೆ ಬೆಳೆ, ಬೆಳೆ ಆದರೆ ಬಾಳು ಎಂದು ಬದುಕುತ್ತಿದ್ದ ಅವರಿಗೆ ಏನು… Read more…

  • ಕನಸುಗಳಿಗೆ ದಡಗಳಿರುದಿಲ್ಲ

    ಬೆಳಗ್ಗಿನ ಸ್ನಾನ ಮುಗಿಸಿದ ವೃಂದಾ ತನ್ನ ರೂಮಿಗೆ ಬಂದು ಬಾಗಿಲುಹಾಕಿಕೊಂಡು ಕನ್ನಡಿಯಲ್ಲಿ ತನ್ನ ದೇಹ ಸಿರಿಯನ್ನೊಮ್ಮೆ ನೋಡಿಕೊಂಡಳು. ಯಾಕೋ ಅವಳ ಮೈ - ಮನ ಒಮ್ಮೆ ಪುಲಕಿತವಾಯಿತು.… Read more…

  • ಅಜ್ಜಿ-ಮೊಮ್ಮಗ

    ಅಜ್ಜವಿ-ಮೊಮ್ಮಗ ಇದ್ರು. ಅವ ಅಜ್ಜವಿಕಲ್ ಯೇನೆಂದ? "ತಾನು ಕಾಶಿಗೆ ಹೋಗಬತ್ತೆ. ಮೂರ ರೊಟ್ಟಿ ಸುಟಕೊಡು" ಅಂತ. "ಮಗನೇ, ಕಾಶಿಗೆ ಹೋದವರವರೆ, ಹೋದೋರ ಬಂದೋರಿಲ್ಲ. ನೀ ಕಾಶಿಗೆ ಹೋಗ್ವದೆ… Read more…

  • ಅಂತರಂಗ ಶುದ್ಧಿ ಬಹಿರಂಗ ಶುದ್ಧಿ

    ಸ್ವಾಮೀಜಿಗಳಿಗೆ ಈವತ್ತಂತೂ ಮೈ ತುರಿಸಿಕೊಳ್ಳಲೂ ಪುರುಸೊತ್ತಿಲ್ಲ. ಹಲವು ಕಾರ್ಯಕ್ರಮಗಳ ಒತ್ತಡ, ರಾಜಕಾರಣಿಗಳ ಭೇಟಿ ಜೊತೆಗೆ ತಂಡೋಪತಂಡವಾಗಿ ಆಶೀರ್ವಾದ ಬೇಡಿ ಬರುವ ಭಕ್ತರ ಕಿರಿಕಿರಿ. ಇದರ ಮದ್ಯೆ ಜಪತಪ,… Read more…

  • ಗದ್ದೆ

    ಅದೊಂದು ಬೆಟ್ಟದ ಊರು. ಪುಟ್ಟ ಪುಟ್ಟ ಗುಡ್ಡಕ್ಕೆ ತಾಗಿಕೊಂಡು ಸಂದಿಯಲ್ಲಿ ಗೊಂದಿಯಲ್ಲಿ ಎದ್ದ ಗುಡಿಸಲುಗಳು ಅರ್ಥಾತ್ ಈ ಜೀವನ ಕಳೆಯೋ ಬಗೆಯಲಿ ಕಟ್ಟಿಕೊಂಡ ಪುಟ್ಟ ಮನೆಗಳು ಹೊತ್ತು… Read more…