ದೀಪ ಆರದಿರಲಿ

ಎಷ್ಟು ದಿನಾದರು ಇಷ್ಟಿಷ್ಟೆ ಆಶೆಗಳು
ನಷ್ಟವಾಗುತಾವೆ ಮನದಾಗೆ
ತೇಲುವ ಕನಸೆಲ್ಲ ಆವ್ಯಾಗಿ ಹೋಗ್ತಾವೆ
ಇಳಿವಲ್ದು ಮಳೆಯಾಗಿ ನೆಲದಾಗೆ

ಕಾಲಕಾಲಕು ನಿನ್ನ ಕರಿತಾನೆ ಬದುಕೀನಿ
ಕರೆಯೋದು ಒಂದೇ ಕೊನೆಯಾಸೆ
ಏನೆಲ್ಲ ಇದ್ರೂನು ಏನೆಲ್ಲ ಬಂದ್ರೂನು
ಕೊರಗೋದು ತಪ್ಪಿಲ್ಲ ಅಳಿಯಾಸೆ

ಅಂದುಕೊಂಡದ್ದಲ್ಲ ಅವಲಕ್ಷಣಾದೀತು
ಆಶೆ ಮಾಡಿದ್ದು ಹುಸಿಯಾತು
ಮಾಡಿದ್ದು ಮುಟ್ಟಿದ್ದು ಎಡವಟ್ಟೆ ಆದೀತು
ಕನಸಿನ ಮಂಟಪ ಕುಸಿದಿತ್ತು

ಆಶೆಯ ಉಸುಗೀನ ಗೂಡನ್ನು ಕಟ್ಟೋದು
ಅಲೆ ಬಂದು ಅದನಾ ಕೆಡಿಸೋದು
ಬಣ್ಣದ ಕನಸಿನ ಕಾಮನ ಬಿಲ್ಲಾಗಿ
ಅಗೋ ಅನ್ನದ್ರಾಗ ಅಳಿಸೋದು

ಕನಸಿನ ಗೋಪುರ ಕಟ್ಟೋದು ಬೀಳೋದು
ನಡೆದಾದ ಬದುಕಿನ ಈ ಯಾತ್ರೆ
ಆಶೆಯ ದೀಪವು ಆರುತ್ತ ಹ್ಯಾಂಗ್ಯಾಂಗೊ
ಉಳದೈತೆ ಅದಕೇ ಹೂಪತ್ರೆ

ಏನೆಲ್ಲ ಹಾಳಾಗ್ಲಿ ಎಲ್ಲಾನು ಅಳಿದೋಗ್ಲಿ
ಆ ದೀಪ ಆರದಾಂಗೆ ಉಳಿದಿರ್ಲಿ
ಆ ಕಣ್ಣ ಬೆಳಕಿನ ದಾರೀನ ಹಿಡಕೊಂಡು
ಉಸಿರಾಟದೀ ಗೊಂಬೆ ಉಸಿರಾಡ್ಲಿ

ಕನಸಿನ ಏಣಿಗೆ ಸಾವಿರಾರು ಹಲ್ಲುಗಳು
ಹಲ್ಳುಗಳುದುರಿದ್ರೂ ಉಳದೈತೆ
ಆಶೆಯ ದೀಪಕ್ಕೆ ಬಿರುಗಾಳಿ ಬೀಸಿದ್ರು
ಆರಿ ಆರಿ ದೀಪ ಬದುಕೈತೆ
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಅಳಿಯ
Next post ನಮ್ಮ ಕೇರಿಯ ಸುಬ್ಬ

ಸಣ್ಣ ಕತೆ

  • ಬ್ರಿಟನ್ ದಂಪತಿಗಳ ಪ್ರೇಮ ದಾಖಲೆ

    ಫ್ರಾಂಕ್ ಆಗ ಇನ್ನು ಹದಿನಾಲ್ಕು ವರ್ಷದ ಹುಡುಗ ತೆಳ್ಳಗೆ ಬೆಳ್ಳಗೆ ಇದ್ದು, ಕರಿಯ ಬಣ್ಣದ ದಟ್ಟ ಕೂದಲಿನ ಬ್ರಿಟಿಷ್ ಬಾಲಕ. ಹೈಸ್ಕೂಲಿನಲ್ಲಿ ಓದುತ್ತಿದ್ದ ಫ್ರಾಂಕ್‌ಗೆ ಕಾಲ್ಚೆಂಡು ಆಟ… Read more…

  • ಇನ್ನೊಬ್ಬ

    ದೇವರ ವಿಷಯದಲ್ಲಿ ನಾನು ಅಗ್ನೋಸ್ಟಿಕನೂ ರಾಜಕೀಯದ ವಿಷಯದಲ್ಲಿ ಸೆಂಟ್ರಿಸ್ಟನೂ ಆಗಿದ್ದೇನೆ. ಇವೆರಡೂ ಅಪಾಯವಿಲ್ಲದ ನಿಲುವುಗಳೆಂಬುದು ನನಗೆ ಗೊತ್ತು. ಅಗ್ನೋಸ್ಟಿಕನಾಗಿದ್ದವನನ್ನು ಆಸ್ತಿಕರೂ ನಾಸ್ತಿಕರೊ ಒಂದೇ ತರಹ ಪ್ರೀತಿಯಿಂದ ಕಾಣುತ್ತಾರೆ,… Read more…

  • ಜೋತಿಷ್ಯ

    ತಮಿಳು ಮೂಲ: ಕೊನಷ್ಟೈ "ನೀವು ಏನು ಬೇಕಾದರೂ ಹೇಳಿ, ನನಗೆ ಜ್ಯೋತಿಷ್ಯದಲ್ಲಿ ನಂಬಿಕೆ ತಪ್ಪುವುದಿಲ್ಲ. ಅದರಲ್ಲಿಯೂ ರಾಮಲಿಂಗ ಜೋಯಿಸರಲ್ಲಿ ಪೂರ್ಣ ನಂಬಿಕೆ"ಎಂದಳು ಕಮಲಾ. ಸಮಯ, ಸಂಧ್ಯಾ ಕಾಲ.… Read more…

  • ಮೌನರಾಗ

    ಇಪ್ಪತ್ತೊಂಬತ್ತು ದಾಟಿ ಮೂವತ್ತಕ್ಕೆ ಕಾಲಿರಿಸುತ್ತಿದ್ದ ಸುಧೀರ್ ಮದುವೆಯ ಬಗ್ಗೆ ತಾಯಿ ಸೀತಮ್ಮ, ತಂದೆ ರಂಗರಾವ್ ಅವರಿಗೆ ಬಹಳ ಕಾತುರವಿತ್ತು. ಹೆಣ್ಣುಗಳನ್ನು ಸಂದರ್ಶಿಸಲು ಒಪ್ಪದೇ ಇದ್ದ ಸುಧೀರನ ಮನೋ… Read more…

  • ಸಂಶೋಧನೆ

    ವೇಣುಗೋಪಾಲನ ಜೀವನ ಬೆಳಗು ರಾತ್ರಿಗಳಂತೆ ಒಂದೇ ಮಾಂತ್ರಿಕತೆಗೆ ಹೊಂದಿಕೊಂಡಿತ್ತು. ಬೆಳಿಗ್ಗೆ ಏಳುವುದು ನೈಸರ್ಗಿಕ ವಿಧಿಗಳಿಂದ ಮುಕ್ತನಾಗಿ ಕಾಫಿ ಕುಡಿಯುತ್ತಾ ಅಂದಿನ ದಿನಪತ್ರಿಕೆ ಓದುವುದು, ಓದಿದ್ದರ ಬಗ್ಗೆ ಚಿಂತಿಸುತ್ತಾ… Read more…