ಮಾಗಿ

ಮುತ್ತಿನ ಹನಿಯ ಮಂಜು
ಮರ್ಮರದ ಗಾಳಿ ಬೀಸಿ
ಚಳಿಗಾಲದ ನೀಲ ಆಕಾಶ ಖಾಲಿ
ಒಡಲೊಳಗಿನ ಏಕಾಂತದ ಮೌನಕೆ
ಏನಾಗಿದೆ ಎಂಬುದು ಯಾರೂ ಕೇಳುವದಿಲ್ಲ.

ಕವಿತೆ ಹಾಡುವದಿಲ್ಲ. ಆಕಾಶದ
ಎತ್ತರಕೆ, ಅದಕೆ ಭೂಮಿಯ ಅನಿವಾರ್ಯತೆ
ಹೊತ್ತ ಕಂಬಳಿಯಡಿ ಹೊರಳಾಡಿವೆ
ಈ ನೆಲದ ಹಂಗು ಹಾಗೂ ನಿನ್ನ ನೆನಪು
ಚಳಿ ಎಲ್ಲವನ್ನೂ ಮುಕ್ಕಿಬಿಟ್ಟಿದೆ ಹಲ್ಲು ಕಟಗರಿಸುತ್ತ.

ಮಾತನಾಡುವರಿಲ್ಲ ಎದೆ ತೆರೆದು
ಇನ್ನೂ ಪ್ರಿಯವಾಗುವ ಸಂಗತಿಗಳಿಗಾಗಿ
ವರ್ತಮಾನದ ಹೇಳಿಕೆ ಯಾರಿಗೂ ಹಿತ
ಕೊಡುವದಿಲ್ಲ. ಎಲ್ಲರೂ ಅವರವರ
ನಿಲ್ದಾಣದಲಿ ಸುಮ್ಮನೆ ಇಳಿದು ಹೋಗಿದ್ದಾರೆ.

ಗಾಳಿಗೆ ನಿಲ್ಲಲು ಬರುವದಿಲ್ಲ ಚಳಿ
ನರನರಗಳಲಿ ಇಳಿದು ಕಂಪನ
ಸಹ್ಯ ಎಲ್ಲವೂ ಅಸಹ್ಯ ಎಲ್ಲೆಡೆ ಶೀತಲನೋಟ
ಶೂಲ ಶಿಲುಬೆಗೇರಿಸಿದ ತಾತ್ವಿಕ ನಿಲುವು
ಸರಿ ಎನಿಸುವದಿಲ್ಲ ಈ ಮಾಗಿಯ ಚಳಿಯಲಿ.
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಸುಂದರ ಉಷಾ ಸ್ವಪ್ನ
Next post ದೀಪಾವಳಿ

ಸಣ್ಣ ಕತೆ

  • ಯಾರು ಹೊಣೆ?

    "ಧಡ್....... ಧಡಲ್........ ಧಡಕ್" ಗಾಡಿ ನಿಂತಿತು. ಹೊರಗೆ ಮೋರೆಹಾಕಿ ನೋಡಿದೆ. ಕತ್ತಲು ಕವಿದಿತ್ತು. ಚುಕ್ಕೆಗಳು ಪಕಪಕ ಕಣ್ಣು ಬಿಡುತ್ತಿದ್ದವು. ಮೂಡಲ ಗಾಳಿ "ಸಿಳ್" ಎಂದು ಬೀಸುತ್ತಿತ್ತು. ನಾನು… Read more…

  • ತ್ರಿಪಾದ

    ವಿಲಿಯಂ ಜೋನ್ಸ್ ಭಾರತದ ದೇವನಹಳ್ಳಿ ವಿಮಾನ ನಿಲ್ದಾಣದಲ್ಲಿ ಇಳಿದಾಗ, ಅವನ ಮನವನ್ನು ಕಾಡುತ್ತಿದ್ದ ಪ್ರೀತಿ ಅವನ ಹೆಂಡತಿ ಮಕ್ಕಳೊಂದಿಗೆ ಅವನನ್ನು ಅತಿಯಾಗಿ ಹಚ್ಚಿಕೊಂಡಿದ್ದ ಅವನ ಪ್ರೀತಿಯ ನಾಯಿ… Read more…

  • ದೋಂಟಿ ತ್ಯಾಂಪಣ್ಣನ ಯಾತ್ರಾ ಪುರಾಣವು

    ಸುಮಾರು ಆರೂವರೆ ಅಡಿಗಿಂತಲೂ ಎತ್ತರಕ್ಕೆ ಗಳದ ಹಾಗೆ ಬೆಳೆದಿರುವ ದೋಂಟಿ ತ್ಯಾಂಪಣ್ಣನು ತನ್ನ ದಣಿ ಕಪಿಲಳ್ಳಿ ಕೃಷ್ಣ ಮದ್ಲೆಗಾರರ ಮನೆ ಜಗಲಿಯಲ್ಲಿ ಮೂಡು ಸಂಪೂರ್ಣ ಆಫಾಗಿ ಕೂತಿದ್ದನು.… Read more…

  • ಅವರು ನಮ್ಮವರಲ್ಲ

    ಪೇದೆ ಪ್ರಭಾಕರ ಫೈಲುಗಳನ್ನು ನನ್ನ ಟೇಬಲ್ ಮೇಲೆ ಇಟ್ಟು, ‘ಸರ್ ಸಾಹೇಬರು ನಿಮ್ಮನ್ನು ಕರೆಯುತ್ತಿದ್ದಾರೆ’ ಎಂದು ಹೇಳಿ ಮಾಮೂಲಿನಂತೆ ಹೊರಟು ಹೋದ. ಸಮಯ ನೋಡಿದೆ. ೧೦:೩೦ ಗಂಟೆ.… Read more…

  • ಮೈಥಿಲೀ

    "ಹಾಗಿದ್ದರೆ, ಪಾಪವೆಂದರೇನು ಗುರುಗಳೇ?" ಕಣ್ಣು ಮುಚ್ಚಿ ಧ್ಯಾನಾಸಕ್ತರಾದ ಯೋಗೀಶ್ವರ ವಿದ್ಯಾರಣ್ಯರು ಕಣ್ತೆರೆಯಲಿಲ್ಲ. ಅಪ್ಪನ ಪ್ರಶ್ನೆಗೆ ಉತ್ತರ ಕೊಡಲಿಲ್ಲ. ತೇಜಪುಂಜವಾದ ಗಂಭೀರವಾದ ಮುಖದ ಮೇಲೊಂದು ಮುಗುಳುನಗೆ ಸುಳಿಯಿತು ಅಷ್ಟೇ!… Read more…