ಮಾಗಿ

ಮುತ್ತಿನ ಹನಿಯ ಮಂಜು
ಮರ್ಮರದ ಗಾಳಿ ಬೀಸಿ
ಚಳಿಗಾಲದ ನೀಲ ಆಕಾಶ ಖಾಲಿ
ಒಡಲೊಳಗಿನ ಏಕಾಂತದ ಮೌನಕೆ
ಏನಾಗಿದೆ ಎಂಬುದು ಯಾರೂ ಕೇಳುವದಿಲ್ಲ.

ಕವಿತೆ ಹಾಡುವದಿಲ್ಲ. ಆಕಾಶದ
ಎತ್ತರಕೆ, ಅದಕೆ ಭೂಮಿಯ ಅನಿವಾರ್ಯತೆ
ಹೊತ್ತ ಕಂಬಳಿಯಡಿ ಹೊರಳಾಡಿವೆ
ಈ ನೆಲದ ಹಂಗು ಹಾಗೂ ನಿನ್ನ ನೆನಪು
ಚಳಿ ಎಲ್ಲವನ್ನೂ ಮುಕ್ಕಿಬಿಟ್ಟಿದೆ ಹಲ್ಲು ಕಟಗರಿಸುತ್ತ.

ಮಾತನಾಡುವರಿಲ್ಲ ಎದೆ ತೆರೆದು
ಇನ್ನೂ ಪ್ರಿಯವಾಗುವ ಸಂಗತಿಗಳಿಗಾಗಿ
ವರ್ತಮಾನದ ಹೇಳಿಕೆ ಯಾರಿಗೂ ಹಿತ
ಕೊಡುವದಿಲ್ಲ. ಎಲ್ಲರೂ ಅವರವರ
ನಿಲ್ದಾಣದಲಿ ಸುಮ್ಮನೆ ಇಳಿದು ಹೋಗಿದ್ದಾರೆ.

ಗಾಳಿಗೆ ನಿಲ್ಲಲು ಬರುವದಿಲ್ಲ ಚಳಿ
ನರನರಗಳಲಿ ಇಳಿದು ಕಂಪನ
ಸಹ್ಯ ಎಲ್ಲವೂ ಅಸಹ್ಯ ಎಲ್ಲೆಡೆ ಶೀತಲನೋಟ
ಶೂಲ ಶಿಲುಬೆಗೇರಿಸಿದ ತಾತ್ವಿಕ ನಿಲುವು
ಸರಿ ಎನಿಸುವದಿಲ್ಲ ಈ ಮಾಗಿಯ ಚಳಿಯಲಿ.
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಸುಂದರ ಉಷಾ ಸ್ವಪ್ನ
Next post ದೀಪಾವಳಿ

ಸಣ್ಣ ಕತೆ

  • ಎರಡು…. ದೃಷ್ಟಿ!

    ದೀಪಾವಳಿಯು ಸಮೀಪಿಸಿದ್ದಿತು. ದೀಪಾವಳಿಯನ್ನು ನಾವು ಪಂಚಾಗ ನೋಡದೆ ತಿಳಿದುಕೊಳ್ಳಬಹುದು. ಅದು ಹೇಗೆ? ದೀಪಾವಳಿ ಪೂರ್ವರಂಗದ ಸುಳಿವು ನಮಗೇ ಗೊತ್ತೇ ಆಗುವದು. ಮನೆಯಲ್ಲಿ ಕರಚೀ ಕಾಯಿ, ಚಿರೋಟಿಗಳನ್ನು ಕರಿಯುವ… Read more…

  • ದೋಂಟಿ ತ್ಯಾಂಪಣ್ಣನ ಯಾತ್ರಾ ಪುರಾಣವು

    ಸುಮಾರು ಆರೂವರೆ ಅಡಿಗಿಂತಲೂ ಎತ್ತರಕ್ಕೆ ಗಳದ ಹಾಗೆ ಬೆಳೆದಿರುವ ದೋಂಟಿ ತ್ಯಾಂಪಣ್ಣನು ತನ್ನ ದಣಿ ಕಪಿಲಳ್ಳಿ ಕೃಷ್ಣ ಮದ್ಲೆಗಾರರ ಮನೆ ಜಗಲಿಯಲ್ಲಿ ಮೂಡು ಸಂಪೂರ್ಣ ಆಫಾಗಿ ಕೂತಿದ್ದನು.… Read more…

  • ಹುಟ್ಟು

    ಶಾದಿ ಮಹಲ್‌ನ ಒಳ ಆವರಣದಲ್ಲಿ ದೊಡ್ಡ ಹಾಲ್‌ನಲ್ಲಿ ಹೆಂಗಸರೆಲ್ಲಾ ಸೇರಿದ್ದರು. ಹೊರಗಡೆ ಹಾಕಿದ್ದ ಶಾಮಿಯಾನದಲ್ಲಿ ಗಂಡಸರು ನೆರೆದಿದ್ದರು. ಒಂದು ಕಡೆಯ ಎತ್ತರವಾದ ವೇದಿಕೆಯ ಮೇಲೆ ಮದುವೆ ಗಂಡು,… Read more…

  • ವಾಮನ ಮಾಸ್ತರರ ಏಳು ಬೀಳು

    "ಏಳು!" ಅಂದರು ವಾಮನ ಮಾಸ್ತರರು. ರಾಜಪ್ಪ ಏಳಲಿಲ್ಲ. ಎಂದಿನಂತೆ ಕಿಟಿಕಿಯ ಹೊರಗೆ ಹೆದ್ದಾರಿಯಲ್ಲಿ ಹೋಗುತ್ತಿದ್ದ ವಾಹನಗಳನ್ನೂ ದಾರಿಹೋಕರನ್ನೂ ನೋಡುತ್ತ, ಡೆಸ್ಕಿನ ಮೇಲೆ ಬಲಗೈಯ ಸೊಂಟು ಊರಿ, ಕೈಯಮೇಲೆ… Read more…

  • ಯಾರು ಹೊಣೆ?

    "ಧಡ್....... ಧಡಲ್........ ಧಡಕ್" ಗಾಡಿ ನಿಂತಿತು. ಹೊರಗೆ ಮೋರೆಹಾಕಿ ನೋಡಿದೆ. ಕತ್ತಲು ಕವಿದಿತ್ತು. ಚುಕ್ಕೆಗಳು ಪಕಪಕ ಕಣ್ಣು ಬಿಡುತ್ತಿದ್ದವು. ಮೂಡಲ ಗಾಳಿ "ಸಿಳ್" ಎಂದು ಬೀಸುತ್ತಿತ್ತು. ನಾನು… Read more…