Home / ಲೇಖನ / ಇತರೆ / ಚಿದಂಬರ ರಹಸ್ಯ

ಚಿದಂಬರ ರಹಸ್ಯ

Natarajaಪ್ರಿಯ ಸಖಿ,
ತಮಿಳುನಾಡಿನ ಚಿದಂಬರಂನ ನಟರಾಜನ ದೇವಸ್ಥಾನ ದಕ್ಷಿಣ ಭಾರತದ ದೇವಸ್ಥಾನಗಳಲ್ಲೇ ವಿಶಿಷ್ಟ ಸ್ಥಾನವನ್ನು ಹೊಂದಿದೆ. ೯ನೇ ಶತಮಾನದಲ್ಲಿ ಚೋಳರಿಂದ ಕಟ್ಟಲ್ಪಟ್ಟ ಈ ದೇವಾಲಯ ೪೦ ಎಕರೆ ವಿಸ್ತೀರ್ಣ ಹೊಂದಿದೆ. ಇಲ್ಲಿ ದೇವರು ಅಥವಾ ಶಕ್ತಿಯೆನ್ನುವುದನ್ನು ಆಕಾಶಕ್ಕೆ ಹೋಲಿಸಲಾಗಿದೆ.

ಚಿದ್+ಅಂಬರ ಎಂದರೆ ಜ್ಞಾನ + ಆಕಾಶ ಎಂದಾಗುತ್ತದೆ. ಆಕಾಶದಷ್ಟು ಅನಂತವಾಗಿರುವ ಜ್ಞಾನವನ್ನು ಹೊಂದಿರುವುದೇ ನಮ್ಮೆಲ್ಲರ ಸೃಷ್ಟಿಗೆ ಕಾರಣವಾಗಿರುವ ಶಕ್ತಿಯ ವಿಶೇಷತೆ. ಅದನ್ನಿಲ್ಲಿ ಎರಡು ರೂಪಗಳಲ್ಲಿ ವಿಶೇಷವಾಗಿ ಬಿಂಬಿಸಲಾಗಿದೆ. ಇಲ್ಲಿರುವ ಮುಖ್ಯ ನಟರಾಜಮೂರ್ತಿ ಆನಂದತಾಂಡವ ರೂಪದಲ್ಲಿ ಪ್ರತಿಷ್ಠಾಪಿಸಲ್ಪಟ್ಟಿದೆ. ಇದು ಜೀವನದ ಉತ್ಸಾಹಕ್ಕೆ ಪ್ರೇರಕವಾಗಿದೆ. ಹಾಗೇ ರುದ್ರತಾಂಡವ ನಟರಾಜಮೂರ್ತಿಯೂ ಇಲ್ಲಿದೆ. ಇದನ್ನು ಸೃಷ್ಠಿಯಲ್ಲಿ ಕೆಡುಕಿನ ಸಮಯದಲ್ಲಿ ದೈವ ಶಕ್ತಿಯ ರುದ್ರತಾಂಡವಕ್ಕೆ ಹೋಲಿಸಲಾಗಿದೆ. ನಟರಾಜನನ್ನು ಸೃಷ್ಠಿಕ್ರಿಯೆ, ರಕ್ಷಣೆ, ಲಯ, ಸ್ಥಿತಿ ಹಾಗೂ ಕೃಪೆಗೆ ಸಾಕ್ಷಾತ್ಕಾರವಾಗಿ ಮೂರ್ತೀಕರಿಸಲಾಗುತ್ತದೆ. ನಟರಾಜ ನೃತ್ಯಗುರುವೂ ಹೌದು. ಈ ದೇವಾಲಯದಲ್ಲೇ ೧೦೮ ನೃತ್ಯಭಂಗಿಯ ನಟರಾಜನನ್ನು ಕೆತ್ತಲಾಗಿದೆ. ಇಂತಹ ಅಪೂರ್ವಭಂಗಿಗಳು ಇನ್ನಾವ ದೇವಾಲಯದಲ್ಲೂ ಇಲ್ಲ ಎಂದು ಹೇಳಲಾಗುತ್ತದೆ.

ಸಖಿ, ಇದೇನು ಎಂದೂ ಇಲ್ಲದೆ ದೇವಸ್ಥಾನದ ಇತಿಹಾಸದ ಕಥೆ ಹೇಳಹೊರಟಿದ್ದಾಳೆ? ಇಷ್ಟೆಲ್ಲಾ ಹೇಳಿಯೂ ಚಿದಂಬರ ರಹಸ್ಯ ಎಂದೇನೆಂದು ಹೇಳಲೇ ಇಲ್ಲವೆನ್ನುತ್ತೀಯಾ ? ರಹಸ್ಯವನ್ನು ಏನೂ ಪೀಠಿಕೆ ಇಲ್ಲದೇ ಹೇಳಿಬಿಡಲಾಗುತ್ತದೆಯೇ? ಆದರೆ ನಾನು ಎಷ್ಟೆಲ್ಲಾ ಚಿದಂಬರ ರಹಸ್ಯದ ಬಗೆಗೆ ಹೇಳಿದ ನಂತರವೂ  ಅದರ ಹೊರರೂಪವನ್ನಷ್ಟೇ ಹೇಳಲಾಗುವುದು ಎಂಬುದೂ ಅಷ್ಟೇ ಸತ್ಯ.

ಚಿದಂಬರಂನ ದೇವಾಲಯದ ಒಳಭಾಗದಲ್ಲಿರುವ ಕನಕಸಭಾದಲ್ಲಿ ದೇವರ-ವಿಶಿಷ್ಟ ಶಕ್ತಿಯ ನಿಗೂಢತೆಯನ್ನು, ನಿರಾಕಾರವನ್ನು ಪ್ರತಿಬಿಂಬಿಸುವ ಒಂದು ಅಮೂರ್ತ ಕಲ್ಪನೆಯನ್ನು ಕಾಣುತ್ತೇವೆ. ಇಲ್ಲಿ ಯಾವುದೇ ದೇವರ ಮೂರ್ತಿಯೂ ಇಲ್ಲ, ಚಿನ್ನದ ಬಿಲ್ವಪತ್ರೆಯ ಹಾರವೊಂದನ್ನು ತೆರೆಯೊಂದಕ್ಕೆ ತೂಗಿಬಿಡಲಾಗಿದೆಯಷ್ಟೇ. ಬಹುಶಃ ಹಿಂದೂ ದೇವಾಲಯಗಳಲ್ಲಿ ಇನ್ನೆಲ್ಲಿಯೂ ಇಂತಹ ವಿಶಿಷ್ಟ ಕಲ್ಪನೆಯನ್ನು ಕಾಣಲಾಗುವುದಿಲ್ಲ. ಈ ಕನಕ ಸಭಾವನ್ನು ಪ್ರವೇಶಿಸಿದ ಪ್ರತಿಯೊಬ್ಬ ವ್ಯಕ್ತಿಯೂ ದೈವದ ಅಸ್ತಿತ್ವದ ಬಗೆಗೆ, ನಿರಾಕಾರ ವಿಶಿಷ್ಟ ಶಕ್ತಿ ಕುರಿತು, ಕೆಲ ಕ್ಷಣಗಳಾದರೂ ಯೋಚಿಸುವಂತೆ ಮಾಡುತ್ತದೆ. ಹಾಗೇ ಅವರವರ ಆಲೋಚನೆ, ವಿಚಾರ, ನಂಬಿಕೆ, ಭಕ್ತಿ, ಭಾವಗಳಿಗನುಗುಣವಾಗಿ ನಿರಾಕಾರ ಶಕ್ತಿಯನ್ನು ಕಲ್ಪಿಸಿಕೊಂಡು ವಿಶಿಷ್ಟ ಅನುಭೂತಿಯನ್ನು ಪಡೆಯಲು ಸಾಧ್ಯವಿದೆ. ಸಖಿ, ಈ ಸೃಷ್ಟಿ, ಅದರಲ್ಲಿನ ಈ ಜೀವಿಗಳು, ಅವುಗಳ ಪೂರ್ವಪರಗಳು, ಬದುಕಿನ ಒಳಮರ್ಮ, ಅದರ ಉಪದೇಶ, ಸೃಷ್ಟಿ ರಹಸ್ಯ, ಹುಟ್ಟುಸಾವಿನ ನಿಗೂಢ ಹೀಗೆ ಈ ಕ್ಷಣ, ಇದರ ಅರ್ಥವೆಲ್ಲವನ್ನು ಕುರಿತು ಆಲೋಚಿಸುತ್ತಾ ಹೋದಷ್ಟು ಈ ಬ್ರಹ್ಮಾಂಡವೆಂಬುದೊಂದು ಚಿದಂಬರ ರಹಸ್ಯದ ಗೋಲವೆಂದು ಗೋಚರಿಸುತ್ತಾ ಹೋಗುತ್ತದೆ. ಇಂತಹ ನೂರಾರು ನಿಗೂಢ ಪ್ರಶ್ನೆಗಳಿಗೆ ಉತ್ತರಗಳನ್ನು ಎಂದೆಂದಿಗೂ ಕಂಡುಹಿಡಿಯಲಾಗದ ಅಲ್ಪಮತಿ ಮನುಷ್ಯ ತಾನೇ ಮಹಾನ್ ವಿವೇಕಿ, ಬುದ್ಧಿವಂತ, ಜ್ಞಾನಿ ಎಂದು ಬೀಗುತ್ತಾನೆ. ಬದುಕು ಎಂದೆಂದಿಗೂ ಬಿಡಿಸಲಾಗದ ಚಿದಂಬರ ರಹಸ್ಯ ಎಂದರಿಯದೇ ನಮ್ಮ ನಮ್ಮ ಮಿತಿಗಳಲ್ಲಿ ಮಾತ್ರ ಇದು. ಇಷ್ಟೇ, ಹೀಗೆ ಎಂಬ ಚೌಕಟ್ಟು ಹಾಕಿಕೊಂಡು ಅಹಂನಿಂದ ಬೀಗುವ ನಾವು ನಿಜಕ್ಕೂ ಮಹಾನ್ ಮೂರ್ಖರಲ್ಲವೇ?
*****

Tagged:

Leave a Reply

Your email address will not be published. Required fields are marked *

ಬೆಳಕಿನಿಂದ ಜಗಜಗಿಸುವ ಸಂಜೆ ರಾವು ಬಡಿದಂತೆ ಮಬ್ಬಾಗಿತ್ತು. ಈ ಮಬ್ಬು ಹಿಂದೆಂದೂ ಇದಿಲ್ಲ. ದೇಶದ ಹದಿನೇಳು ವರ್ಷದ ಸ್ವಾತಂತ್ರದಲ್ಲಿ, ಮಧ್ಯಮ ತರಗತಿಯ ಜೀವನ ಕೈ ಬಾಯಿಯಾಗಿದ್ದರೂ ದೂರದ ಆಶಯ ಹೊಂಗಿರಣವೊಂದು ಸದಾ ಹೊಳೆದು ಭಾವೀ ಪೀಳಿಗೆಯ ಮನೋಲ್ಲಾಸ ಮಾಡುತ್ತಿತ್ತು. ಆದರೆ ಈ ಮಬ್ಬುಗತ್ತ...

ಅವಳು ಯಾವ ಹುಡುಗರ ಜೊತ ನಿಂತು ಮಾತನಾಡಿದರೂ ಶ್ರೀಕಾಂತನಪಾಲಿಗೆ ಆ ಹುಡುಗರು ವಿಲನ್‌ಗಳಂತೆಯೇ ಭಾಸವಾಗುತ್ತಿದ್ದರು. ಅವಳು ತನ್ನ ಕಾಲೇಜಿನ ಲೆಕ್ಚರರ್‌ಗಳು ಪಾಠ ಮಾಡುವ ವೈಖರಿ ಸ್ಟೈಲು ಹೈಲುಗಳ ಕುರಿತು ಬಣ್ಣಿಸುವಾಗಲೂ ಕೇಳಲಾಗದೆ ಶ್ರೀಯ ಹೊಟ್ಟೆಯಲೆಲ್ಲಾ ತಳಮಳ. ಅಷ್ಟೇಕೆ ಅವಳು ತನ್ನ ತ...

ಬೆಳಿಗ್ಗೆ ಏಳರ ಸಮಯ ಮೈಸೂರಿನ ರೋಹಿಣಿ ಲಾಡ್ಜ್‌ನ ಕೊಠಡಿ ಸಂಖ್ಯೆ ೧೦೩. ಪೋಲೀಸರು, ಪತ್ರಕರ್ತರು, ಫೊಟೋ ಗ್ರಾಫರ್‌ಗಳಿಂದ ತುಂಬಿಹೋಗಿದೆ. ಬೆಳ್ಳಂ ಬೆಳಿಗ್ಗೆಯೇ ಯುವತಿಯೊಬ್ಬಳ ಕೊಲೆ ನಡೆದುಹೋಗಿದೆ. ಲಾಡ್ಜ್‌ನ ಹೊರಗೆ ಜನರು ಕುತೂಹಲಭರಿತರಾಗಿ ಸೇರಿದ್ದಾರೆ. ಸೇರಿದ್ದ ಜನರನ್ನು ನಿಯಂತ್ರ...

೧ ಗೌರಿಯ ಹಬ್ಬವು ಕಳೆದು ಕೆಲವು ದಿನಗಳಾಗಿದ್ದುವು. ಭಾಗೀರಥಮ್ಮನೂ ಅವಳ ಜೊತೆಯ ಹುಡುಗಿಯರೂ ಒಂದೊಂದು ದಿನವನ್ನು ಕಳೆಯುವುದೂ ಒಂದೊಂದು ಯುಗವನ್ನು ಕಳೆದಂತೆ ಕಷ್ಟವಾಗಿದ್ದಿತು. ಅವರು ಎಷ್ಟು ಕುತೂಹಲದಿಂದ ಬಯಸಿದರೂ ದಿನಗಳು ಬೇಗ ಬೇಗ ಉರುಳಲೊಲ್ಲವು. ಒಂದು ದಿನ ಅವರೆಲ್ಲರೂ ಸೇರಿ ಕವಡೆಯ...

ಸಂಜೆ ನಾಲ್ಕು ಗಂಟೆಯಾದರೆ ಸಾಕು. ಅವರೆಲ್ಲರೂ ಒಬ್ಬೊಬ್ಬರಾಗಿ ಬಂದು ಸೇರುತ್ತಾರೆ. ಅದೊಂದು ಪಂಚಾಯಿತಿ ಕಟ್ಟೆ ಇದ್ದಂತೆ. ಮಧ್ಯದಲ್ಲೊಂದು ಸಿಮೆಂಟ್ ಬೆಂಚು, ಅದರ ಎಡ, ಬಲ ಎರಡೂ ಕಡೆ ಇವರೇ ಒಂದಷ್ಟು ಕಲ್ಲು ಚಪ್ಪಡಿಗಳನ್ನು ಎಳೆದು ತಂದು ಕೊಡುವುದಕ್ಕೆ ಪೀಠಗಳನ್ನು ಮಾಡಿಕೊಂಡಿದ್ದಾರೆ. ಸ...

ತಿಮ್ಮಣ್ಣ ನಮ್ಮೂರಿನ ಪಕ್ಕದ ಹಳ್ಳಿಯಲ್ಲಿನ ಅಡುಗೆ ಭಟ್ಟ ತಿಪ್ಪಾಭಟ್ಟರ ಮಗ. ತಿಪ್ಪಾಭಟ್ಟರಿಗೆ ಮದುವೆಯಾಗಿ ಹತ್ತು ವರ್ಷ ಕಳೆದರೂ ಮಕ್ಕಳಾಗಿರಲಿಲ್ಲ. ಕೊನೆಗೆ ಪಕ್ಕದ ಮನೆಯ ಕಮಲಾಕ್ಷಮ್ಮನ ಸಲಹೆ ಮೇರೆಗೆ ಮಗುವಾದರೆ ತಿರುಪತಿಗೆ ಹೋಗಿ ಬರುವ ಹರಕೆ ಹೊತ್ತರು. ತಿಮ್ಮಪ್ಪನ ಕೃಪಾಕಟಾಕ್ಷವೋ ...