ಅವಶೇಷ

ಹುಡುಕುತ್ತಿದ್ದೇನೆ
ನಾನಿನ್ನೂ ಹುಡುಕುತ್ತಿದ್ದೇನೆ!

ಅಂದೆಂದೋ ಹೊಸಹಾದಿ ಸಿಕ್ಕ
ಸಂಭ್ರಮದಲಿ ನಾ
ಧಡಕ್ಕನೆ ಕಿತ್ತು ಹೊತ್ತು ತಂದ
ತಾಯಿಬೇರಿನ ಶೇಷ
ಭೂಮಿಯಾಳದಲ್ಲೇ ಉಳಿದು ಹೋದ
ನಿಶ್ಯೇಷವಲ್ಲದ ಅವಶೇಷ!

ನನ್ನ ಸಶೇಷ ಕನಸುಗಳು
ವಿಶೇಷ ಕಲ್ಪನೆಗಳು
ಶೇಷವಾಗಿಯೇ ಉಳಿದ
ಆಸೆಗಳನೊಳಗೊಂಡ
ಮಣ್ಣಿನಾಳದಲ್ಲೇ ಊರಿಕೊಂಡ
ನಾ ಧಿಮಾಕಿನಿಂದ ಬಿಟ್ಟುಬಂದ
ತಾಯಿಬೇರಿನ ಅವಶೇಷದ
ಆ ಮಿಕ್ಕ ಭಾಗ
ನಾನಿನ್ನೂ ಹುಡುಕುತ್ತಿದ್ದೇನೆ!

ಈಗುಳಿದ ಮೋಟು ತಾಯಿಬೇರಿಗೇ
ಅಸಂಖ್ಯ ಹೊಸರೂಪದ
ಬೇರುಗಳು ಚಿಗುರೊಡೆದರೂ
ಯಾವುವೂ ಆ ನನ್ನ
ಶೇಷ ತಾಯಿಬೇರಾಗಲಿಲ್ಲ
ನಾ ಕಳೆದುಕೊಂಡ
ಎಲ್ಲ ಎಲ್ಲವುಗಳ
ಪ್ರತಿರೂಪವಾಗಲಿಲ್ಲ!

ನಾ ಹೊತ್ತು ತಂದ ತಾಯಿಬೇರಿನ
ಉಳಿದರ್ಧದ ಕನಸು ಕಲ್ಪನೆಗಳೂ
ಉಳಿಯಲಿಲ್ಲ. ಕುಡಿಯೊಡೆಯಲಿಲ್ಲ!
ಮಣ್ಣ ಸಾರ ಹೀರಲು
ಮೊನೆ ಇದ್ದರಲ್ಲವೇ ಉಳಿದುದೆಲ್ಲಾ?

ಪೂರ್ಣ ತಾಯಿಬೇರಿಲ್ಲದ
‘ನಾನು’ ನಾನಾಗದೇ
ಕಳೆದು ಹೋದ ಆ ತಾಯಿಬೇರಿನ
ಅವಶೇಷ ಹುಡುಕುತ್ತಿದ್ದೇನೆ
ಮಣ್ಣಿನಾಳದಲ್ಲೇ ಉಳಿದು ಹೋದ
ನನ್ನತನ ಅರಸುತ್ತಿದ್ದೇನೆ!
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಸಿಸೇರಿಯನ್
Next post ಪೆಟ್ಟಿಗೆ

ಸಣ್ಣ ಕತೆ

  • ಆಮಿಷ

    ರಮಾ ಕುರ್ಚಿಯನ್ನೊರಗಿ ಕುಳಿತಿದ್ದಳು. ದುಃಖವೇ ಮೂರ್ತಿವೆತ್ತಂತೆ ಕುಳಿತಿದ್ದ ಅವಳ ಹೃದಯದಲ್ಲಿ ಭೀಕರ ಕೋಲಾಹಲ ನಡೆದಿತ್ತು. ಕಣ್ಣುಗಳು ಆಳಕ್ಕಿಳಿದಿದ್ದವು. ದೇಹದ ಅಣು ಅಣುವೂ ನೋವಿನಿಂದ ಮಿಡಿಯುತ್ತಿತ್ತು. "ತಾನೇಕೆ ದುಡುಕಿಬಿಟ್ಟೆ?… Read more…

  • ಅಹಮ್ ಬ್ರಹ್ಮಾಸ್ಮಿ

    ಬಹುಶಃ ಮೊದಲ ಬಾರಿ ನಾನು ಅವನನ್ನು ನೋಡುತ್ತಿರಬೇಕು. ಅವನು ಅಕಸ್ಮತ್ತಾಗಿ ನನ್ನ ಕಣ್ಣಿಗೆ ಬಿದ್ದನೋ, ಅಲ್ಲಾ ಅವನೇ ನಾನು ಕಾಣುವ ಹಾಗೆ ಎದುರಿಗೆ ಬಂದನೋ ಎಂಬ ವಿಷಯದಲ್ಲಿ… Read more…

  • ಇರುವುದೆಲ್ಲವ ಬಿಟ್ಟು

    ನಿಂತ ರೈಲು ಬೋಗಿಯೊಳಗಿಂದ ನನ್ನ ದೃಷ್ಟಿ ಹೊರಗಿನ ನಿಲ್ದಾಣವನ್ನು ವೀಕ್ಷಿಸುತ್ತಿತ್ತೇ ಹೊರತು ನನ್ನ ಮನಸ್ಸು ಮಾತ್ರ ನಾಗಾಲೋಟದಿಂದ ಓಡುತ್ತಿತ್ತು. ಒಂದು ರೀತಿಯಲ್ಲಿ ಆಲೋಚನೆಗಳು ನನ್ನ ಗೆಳೆಯ ಎಂದೇ… Read more…

  • ನಿಂಗನ ನಂಬಿಗೆ

    ಹೊಸಳ್ಳಿ ನೋಡುವದಕ್ಕೆ ಸಣ್ಣದಾದರೂ ಕಣ್ಣಿಗೆ ಅಂದವಾಗಿದೆ. ಬೆಳವಲ ನಾಡಿನಲ್ಲಿ ಬರಿ ಬಯಲೆಂದು ಟೀಕೆ ಮಾಡುವವರಿಗೆ ಹೊಸಳ್ಳಿ ಕೂಗಿ ಹೇಳುತ್ತಿದೆ - ತಾನು ಮಲೆನಾಡ ಮಗಳೆಂದು ! ಊರ… Read more…

  • ಧರ್ಮಸಂಸ್ಥಾಪನಾರ್ಥಾಯ

    ಕಪಿಲಳ್ಳಿಯ ಏಕೈಕ ಸಂರಕ್ಷಕ ಕಪಿಲೇಶ್ವರನ ವಾರ್ಷಿಕ ರಥೋತ್ಸವದ ಮುನ್ನಾದಿನ ಧಾರ್ಮಿಕ ಪ್ರವಚನವೊಂದನ್ನು ಏರ್ಪಡಿಸಲೇಬೇಕೆಂದೂ, ಇಲ್ಲದಿದ್ದರೆ ಜಾತ್ರಾ ಮಹೋತ್ಸವಕ್ಕೆ ತನ್ನ ಸಪೋರ್ಟು ಮತ್ತು ಕೋ-ಆಪರೇಶನ್ನು ಬಿಲ್ಲು ಕುಲ್ಲು ಸಿಗಲಾರದೆಂದೂ,… Read more…

cheap jordans|wholesale air max|wholesale jordans|wholesale jewelry|wholesale jerseys