ಅವಶೇಷ

ಹುಡುಕುತ್ತಿದ್ದೇನೆ
ನಾನಿನ್ನೂ ಹುಡುಕುತ್ತಿದ್ದೇನೆ!

ಅಂದೆಂದೋ ಹೊಸಹಾದಿ ಸಿಕ್ಕ
ಸಂಭ್ರಮದಲಿ ನಾ
ಧಡಕ್ಕನೆ ಕಿತ್ತು ಹೊತ್ತು ತಂದ
ತಾಯಿಬೇರಿನ ಶೇಷ
ಭೂಮಿಯಾಳದಲ್ಲೇ ಉಳಿದು ಹೋದ
ನಿಶ್ಯೇಷವಲ್ಲದ ಅವಶೇಷ!

ನನ್ನ ಸಶೇಷ ಕನಸುಗಳು
ವಿಶೇಷ ಕಲ್ಪನೆಗಳು
ಶೇಷವಾಗಿಯೇ ಉಳಿದ
ಆಸೆಗಳನೊಳಗೊಂಡ
ಮಣ್ಣಿನಾಳದಲ್ಲೇ ಊರಿಕೊಂಡ
ನಾ ಧಿಮಾಕಿನಿಂದ ಬಿಟ್ಟುಬಂದ
ತಾಯಿಬೇರಿನ ಅವಶೇಷದ
ಆ ಮಿಕ್ಕ ಭಾಗ
ನಾನಿನ್ನೂ ಹುಡುಕುತ್ತಿದ್ದೇನೆ!

ಈಗುಳಿದ ಮೋಟು ತಾಯಿಬೇರಿಗೇ
ಅಸಂಖ್ಯ ಹೊಸರೂಪದ
ಬೇರುಗಳು ಚಿಗುರೊಡೆದರೂ
ಯಾವುವೂ ಆ ನನ್ನ
ಶೇಷ ತಾಯಿಬೇರಾಗಲಿಲ್ಲ
ನಾ ಕಳೆದುಕೊಂಡ
ಎಲ್ಲ ಎಲ್ಲವುಗಳ
ಪ್ರತಿರೂಪವಾಗಲಿಲ್ಲ!

ನಾ ಹೊತ್ತು ತಂದ ತಾಯಿಬೇರಿನ
ಉಳಿದರ್ಧದ ಕನಸು ಕಲ್ಪನೆಗಳೂ
ಉಳಿಯಲಿಲ್ಲ. ಕುಡಿಯೊಡೆಯಲಿಲ್ಲ!
ಮಣ್ಣ ಸಾರ ಹೀರಲು
ಮೊನೆ ಇದ್ದರಲ್ಲವೇ ಉಳಿದುದೆಲ್ಲಾ?

ಪೂರ್ಣ ತಾಯಿಬೇರಿಲ್ಲದ
‘ನಾನು’ ನಾನಾಗದೇ
ಕಳೆದು ಹೋದ ಆ ತಾಯಿಬೇರಿನ
ಅವಶೇಷ ಹುಡುಕುತ್ತಿದ್ದೇನೆ
ಮಣ್ಣಿನಾಳದಲ್ಲೇ ಉಳಿದು ಹೋದ
ನನ್ನತನ ಅರಸುತ್ತಿದ್ದೇನೆ!
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಸಿಸೇರಿಯನ್
Next post ಪೆಟ್ಟಿಗೆ

ಸಣ್ಣ ಕತೆ

  • ದೊಡ್ಡ ಬೋರೇಗೌಡರು

    ಪ್ರಕರಣ ೭ ಪ್ರಾಥಮಿಕ ಮತ್ತು ಮಾಧ್ಯಮಿಕ ವಿದ್ಯಾಭ್ಯಾಸಗಳ ಸಮಸ್ಯೆ ಬಹಳ ದೊಡ್ಡದೆಂದು ರಂಗಣ್ಣನಿಗೆ ತಿಳಿದುಬಂತು. ಮೇಲಿನವರು ಬರಿಯ ವರದಿಗಳನ್ನು ತಯಾರು ಮಾಡುವುದರಲ್ಲಿಯೂ ಹೊರಗಿನ ಪ್ರಾಂತದವರಿಗೆ - ಅದರಲ್ಲಿಯೂ… Read more…

  • ಗಂಗೆ ಅಳೆದ ಗಂಗಮ್ಮ

    ಕನ್ನಡ ನಾಡು ಆರ್ಯದ್ರಾವಿಡ ಸಂಸ್ಕೃತಿಗಳನ್ನು ಅರಗಿಸಿಕೊಂಡು ತನ್ನದಾದ ಒಂದು ಉಚ್ಚ ಸಂಸ್ಕೃತಿಯಿಂದ ಬಹು ಪುರಾತನ ಕಾಲದಿಂದಲೂ ಕೀರ್ತಿಯನ್ನು ಪಡೆದಿದೆ. ಇಂತಹ ನಾಡಿನಲ್ಲಿ ಕಾಣುವ ಅವಶೇಷಗಳು ಒಂದೊಂದು ಹಿರಿಸಂಸ್ಕೃತಿಯ… Read more…

  • ಅಮ್ಮ

    ‘ಅಮ್ಮನ್ಗೆ ಯಿಡೀ ರಾತ್ರೆಲ್ಲ ವಾಂತಿ ಭೇದಿ ವುಬ್ಸ ಆಯಾಸ... ಕುತ್ರೂಸಾ... ಬಾಳಾ ಯೆಚ್ಕುಡ್ಮೆಯಾಗಿ ರಾಮ್ಪಾರ್ದ ಡಾಕಿಟ್ರಾತ್ರ ತೋರ್ಸಿದ್ರು ಗುಣಾಗಿಲ್ಲ! ನೀ ಆದಷ್ಟು ಗಡಾನೇ ವೂರ್ಗೆ ಬಾಣ್ಣ...’ ಸೇಕ್ರಿ,… Read more…

  • ಕರಿಗಾಲಿನ ಗಿರಿರಾಯರು

    ಪ್ರಜಾಪೀಡಕನಾದ ಮೈಸೂರಿನ ಟೀಪೂ ಸುಲ್ತಾನನನ್ನು ಶ್ರೀರಂಗ ಪಟ್ಟಣದ ಯುದ್ಧದಲ್ಲಿ ಕೊಂದು ಅವನ ರಾಜ್ಯವನ್ನು ಇಂಗ್ಲಿಶ್ ಸರಕಾರ ದವರು ತಮ್ಮ ವಶಕ್ಕೆ ತೆಗೆದುಕೊಂಡ ಕಾಲಕ್ಕೆ, ಉತ್ತರಕರ್ನಾಟಕದ ನಿವಾಸಿಗಳಾದ ಅನೇಕ… Read more…

  • ಹಳ್ಳಿ…

    ಬಂಗಾರ ಬಣ್ಣದ ಕಾರು, ವೇಗವಾಗಿ... ಅತಿವೇಗವಾಗಿ, ಓಡುತ್ತಿತ್ತು. ರೆವ್ರೊಲೆ ಆವಿಯೊಯು-ವಾ-ಹೊಚ್ಚ ಹೊಸ ಮಾದ್ರಿಯ ಹೊರ, ಒಳಗೆ, ಬಲು ವಿಶಿಷ್ಠ, ವಿನೂತನ, ವಿನ್ಯಾಸದ, ಎಬಿ‌ಎಸ್ ಸಿಸ್ಟಮ್ ಕಾರೆಂದರೆ ಕೇಳಬೇಕೆ?… Read more…