Home / ಕವನ / ಕವಿತೆ / ಅವಶೇಷ

ಅವಶೇಷ

ಹುಡುಕುತ್ತಿದ್ದೇನೆ
ನಾನಿನ್ನೂ ಹುಡುಕುತ್ತಿದ್ದೇನೆ!

ಅಂದೆಂದೋ ಹೊಸಹಾದಿ ಸಿಕ್ಕ
ಸಂಭ್ರಮದಲಿ ನಾ
ಧಡಕ್ಕನೆ ಕಿತ್ತು ಹೊತ್ತು ತಂದ
ತಾಯಿಬೇರಿನ ಶೇಷ
ಭೂಮಿಯಾಳದಲ್ಲೇ ಉಳಿದು ಹೋದ
ನಿಶ್ಯೇಷವಲ್ಲದ ಅವಶೇಷ!

ನನ್ನ ಸಶೇಷ ಕನಸುಗಳು
ವಿಶೇಷ ಕಲ್ಪನೆಗಳು
ಶೇಷವಾಗಿಯೇ ಉಳಿದ
ಆಸೆಗಳನೊಳಗೊಂಡ
ಮಣ್ಣಿನಾಳದಲ್ಲೇ ಊರಿಕೊಂಡ
ನಾ ಧಿಮಾಕಿನಿಂದ ಬಿಟ್ಟುಬಂದ
ತಾಯಿಬೇರಿನ ಅವಶೇಷದ
ಆ ಮಿಕ್ಕ ಭಾಗ
ನಾನಿನ್ನೂ ಹುಡುಕುತ್ತಿದ್ದೇನೆ!

ಈಗುಳಿದ ಮೋಟು ತಾಯಿಬೇರಿಗೇ
ಅಸಂಖ್ಯ ಹೊಸರೂಪದ
ಬೇರುಗಳು ಚಿಗುರೊಡೆದರೂ
ಯಾವುವೂ ಆ ನನ್ನ
ಶೇಷ ತಾಯಿಬೇರಾಗಲಿಲ್ಲ
ನಾ ಕಳೆದುಕೊಂಡ
ಎಲ್ಲ ಎಲ್ಲವುಗಳ
ಪ್ರತಿರೂಪವಾಗಲಿಲ್ಲ!

ನಾ ಹೊತ್ತು ತಂದ ತಾಯಿಬೇರಿನ
ಉಳಿದರ್ಧದ ಕನಸು ಕಲ್ಪನೆಗಳೂ
ಉಳಿಯಲಿಲ್ಲ. ಕುಡಿಯೊಡೆಯಲಿಲ್ಲ!
ಮಣ್ಣ ಸಾರ ಹೀರಲು
ಮೊನೆ ಇದ್ದರಲ್ಲವೇ ಉಳಿದುದೆಲ್ಲಾ?

ಪೂರ್ಣ ತಾಯಿಬೇರಿಲ್ಲದ
‘ನಾನು’ ನಾನಾಗದೇ
ಕಳೆದು ಹೋದ ಆ ತಾಯಿಬೇರಿನ
ಅವಶೇಷ ಹುಡುಕುತ್ತಿದ್ದೇನೆ
ಮಣ್ಣಿನಾಳದಲ್ಲೇ ಉಳಿದು ಹೋದ
ನನ್ನತನ ಅರಸುತ್ತಿದ್ದೇನೆ!
*****

Tagged:

Leave a Reply

Your email address will not be published. Required fields are marked *

ಹೆರಿಗೆ ನೋವಿನಿಂದ ಸಂಕಟಪಡುತ್ತಿದ್ದ ಹೆಂಡತಿ ಗಂಗಾಳನ್ನು ಆಸ್ಪತ್ರೆಗೆ ಚಿಕ್ಕಣ್ಣ ಕರೆದುಕೊಂಡು ಬಂದಾಗ ಔಟ್ ಪೇಶಂಟ್ ವಿಭಾಗ ಗಿಜಿಗುಟ್ಟುತ್ತಿತ್ತು. ಗುಂಪುಕಟ್ಟಿ ನಿಂತಿದ್ದ ಮಹಿಳೆಯರ ಸಾಲನ್ನು ಛೇಧಿಸಿಕೊಂಡು ವೈದ್ಯರ ಮೇಜಿನ ಬಳಿ ಬಂದು ನಿಂತ ಅವನ ತೋಳುಗಳಲ್ಲಿ ಎರಡೂವರೆ ವರ್ಷದ ಮಗುವ...

ನಾಡಿಗೆ ಸ್ವಾತಂತ್ರ ಬಂದಿದೆ. ಎಲ್ಲೆಲ್ಲೂ ಸ್ವೈರಾಚಾರ ಹೆಚ್ಚಿದೆ. ಸ್ವಾತಂತ್ರವೆಂದರೆ ಸ್ವೇಚ್ಛಾಚಾರ ಎನ್ನುವಂತೆ ನಾಡಿನ ಜನ ವರ್ತಿಸುತ್ತಿದೆ; ಬಹುದಿನದ ಸಾಧನೆಯಿಂದ ಪಡೆದ ಸಿದ್ದಿಯನ್ನು ಮಣ್ಣುಗೂಡಿಸುತ್ತಲಿದೆ. ಇದನ್ನು ತಡೆಯಲಿಕ್ಕೆ ಭಾರತದ “ಹಳ್ಳಿ-ಹಳ್ಳಿಗಳಲ್ಲಿಯೂ ಗ್ರಾಮ ಸುರಕ್ಷಕ...

“ವತ್ಸಲಾ……..!” ನಿಟ್ಟುಸುರಿನೊಂದಿಗೆ ಕುಮಾರನು ಆರಾಮ ಕುರ್‍ಚಿಯ ಮೇಲೆ ದೊಪ್ಪನೆ ಬಿದ್ದು ಕೊಂಡನು. ಚಿಕ್ಕಬಾಲಕನೊಬ್ಬನು ಕಿಡಿಕಿಯಲ್ಲಿ ಹಣಿಕಿ ಹಾಕಿ “ಕುಮಾರಣ್ಣ” ಎಂದು ಕೂಗಿದಂತಾಯಿತು. ಎದ್ದು ನೋಡುತ್ತಾನೆ; ಕೆಂಪು ಮಸಿಯಿಂದ ವಿಳಾಸ ಬರೆದ...

“ಭೀಮಾ ಮಾಸ್ತರರನ್ನು ಇಷ್ಟ ಮೋಟರ ಸ್ಟಾಂಡಿನ ತನಕ ಕಳಿಸಿ ಬಾರಪ್ಪಾ.” ಬಾಯಕ್ಕ ನೆರೆಮನೆಯವರ ಆಳಿಗೆ ವಿನಯದಿಂದ ಹೇಳಿ ನನ್ನ ಕಡೆಗೆ ಹೊರಳಿ ಅಂದಳು: “ಬಿಡಿರಿ, ನಿಮ್ಮ ಬ್ಯಾಗ ತಗೊಂಡ ಬರತಾನ ಭೀಮಾ” “ಯಾತಕ್ಕ? ನಾ ಕೈಯೊಳಗ ಸಹಜ ಒಯ್ಯತೇನೆ” ನಾನು ಹೀಗೆ ಹೇಳಿದೆನಾದರೂ ಭೀಮಪ್...

ಸಿಗರೆಟ್‌ನ್ನು ಕೊನೆಯ ಸಲ ಎಳೆದು ಬದಿಗಿದ್ದ ಅಶ್‌ಟ್ರೆಯಲ್ಲಿ ಹಾಕಿದ. ಮೂರು ದಿನಗಳಿಂದ ಹೇಳಲಾಗದಂತಹ ಯಾತನೆ ಅವನನ್ನು ಹಿಂತಿಸುತ್ತಿದೆ. ಇದ್ದಿದ್ದು ಮಿತ್ರನ ಮಾತುಗಳು ಬಂದು ಕಿವಿಗೆ ಅಪ್ಪಳಿಸಿ ಎತ್ತ ನೋಡಿದರೂ ಅವನದೆ ಮುಖ ಕಾಣುತ್ತಿದೆ. “ನಾ ಹೇಳುವದನ್ನು ಅರ್‍ಥಮಾಡಿ ಕೊಳ್ಳು...