ಶೆಲ್ಲಿಗೆ

ನಿನ್ನ ಕೊರಗಲಿ ನೀನು ಹಾಡಿದಾ ಹಾಡುಗಳು
ನನ್ನ ಹೃದಯದೊಳಿಂದು ಕ್ರಾಂತಿಯನು ಹೊತ್ತಿಸಿವೆ.
ಕ್ರಾಂತಿರಸಋಷಿ ಶೆಲ್ಲಿ!  ಆದರ್ಶವೊಂದೊಲಿದು
ಜಗದ ರೂಢಿಯನೆತ್ತಿ ಬದಿಗೆಸೆದು ಮುನ್ನಡೆದೆ.
ಅದಕಾಗಿ ಜಗ ನಿನ್ನ ದೂರಿ ದೂರಿಟ್ಟಾಯ್ತು-
ಬಗೆಬಗೆಯ ಚಿಂತೆಗಳ, ನೂರಾರು ಎಡರುಗಳ
ನಿನ್ನ ದಾರಿಯಲೆಸೆದು ಜಗವೆಲ್ಲ ಮುಳ್ಳಾಯ್ತು!
ಅದರ ಮೇಲ್ನೀಬೀಳೆ ಚಿಮ್ಮಿ ಹೊಮ್ಮಿತು ರಕ್ತ!

ಸುಖ ಬಂದರೂ ಬರಲಿ, ದುಃಖ ಬಂದರು ಸರಿಯೆ
ಸುಖದುಃಖಗಳ ಪ್ರೇಮ ಬೆಳಗಿಸುವ ದೀಪಗಳು
ಎನುವ ನಿನ್ನಯ ಕೆಚ್ಚು ಹೃದಯವನು ಬೆಳಗಿಸಿರೆ
ಎನಿತಾದರೂ ಬರಲಿ, ಕಷ್ಟಗಳು ಕನಸುಗಳು!
ಅದಕಾಗಿ ನೀನೆನಗೆ ಬಲು ಮೆಚ್ಚು ಕವಿಗಳಲಿ
ವಿಶ್ವಪ್ರೇಮದ ಕ್ರಾಂತಿ ಕಲಿತೆ ನಾ ನಿನ್ನ ಬಳಿ!
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ನಿಲುವು
Next post ಕಾಮನ ಬಿಲ್ಲಿನ ಚೂರು ಹೂವುಗಳು

ಸಣ್ಣ ಕತೆ

  • ಬಸವನ ನಾಡಿನಲಿ

    ೧೯೯೧ರಲ್ಲಿ ನಾ ವಿಭಾಗೀಯ ಸಾರಿಗೆ ಅಧಿಕಾರಿ ಎಂದು ಬಡ್ತಿ ಹೊಂದಿದೆ! ಇಷ್ಟಕ್ಕೆ ಕೆಲವರು ಹೊಟ್ಟೆ ಉರಿ ಬಿದ್ದರು. ಪ್ರಾಮಾಣಿಕರು, ಶೋಷಿತರು, ವಂಚಿತರು, ಪಾಪದವರು, ಮುಂದೆ ಬರಲಿ ಎಂಬ… Read more…

  • ಯಾರು ಹೊಣೆ?

    "ಧಡ್....... ಧಡಲ್........ ಧಡಕ್" ಗಾಡಿ ನಿಂತಿತು. ಹೊರಗೆ ಮೋರೆಹಾಕಿ ನೋಡಿದೆ. ಕತ್ತಲು ಕವಿದಿತ್ತು. ಚುಕ್ಕೆಗಳು ಪಕಪಕ ಕಣ್ಣು ಬಿಡುತ್ತಿದ್ದವು. ಮೂಡಲ ಗಾಳಿ "ಸಿಳ್" ಎಂದು ಬೀಸುತ್ತಿತ್ತು. ನಾನು… Read more…

  • ಎರಡು ರೆಕ್ಕೆಗಳು

    ಪಶ್ಚಿಮದಲ್ಲಿ ಸೂರ್ಯ ಮುಳುಗುತ್ತಿದ್ದ ಆಕಾರದ ತುಂಬ ಒಂಥರಾ ಕೆಂಬಣ್ಣ ತುಂಬಿಕೊಂಡಿತ್ತು. ಆ ಸಂಜೆಯಲ್ಲಿ ತಣ್ಣನೆಯ ಗಾಳಿ ಆ ಭಾವನೆ ಬಂಡೆಯ ಕೋಟೆಯ ಮೇಲೆ ಹಾಯ್ದು ಹೋಯಿತು. ಎತ್ತರದ… Read more…

  • ಕರಿಗಾಲಿನ ಗಿರಿರಾಯರು

    ಪ್ರಜಾಪೀಡಕನಾದ ಮೈಸೂರಿನ ಟೀಪೂ ಸುಲ್ತಾನನನ್ನು ಶ್ರೀರಂಗ ಪಟ್ಟಣದ ಯುದ್ಧದಲ್ಲಿ ಕೊಂದು ಅವನ ರಾಜ್ಯವನ್ನು ಇಂಗ್ಲಿಶ್ ಸರಕಾರ ದವರು ತಮ್ಮ ವಶಕ್ಕೆ ತೆಗೆದುಕೊಂಡ ಕಾಲಕ್ಕೆ, ಉತ್ತರಕರ್ನಾಟಕದ ನಿವಾಸಿಗಳಾದ ಅನೇಕ… Read more…

  • ದೇವರು ಮತ್ತು ಅಪಘಾತ

    ಊರಿನ ಕೊನೆಯಂಚಿನಲ್ಲಿದ್ದ ಕೆರೆಯಂಗಳದಲ್ಲಿ ಅಣಬೆಗಳಂತೆ ಮೈವೆತ್ತಿದ್ದ ಗುಡಿಸಲುಗಳಲ್ಲಿ ಕೊನೆಯದು ಅವಳದಾಗಿತ್ತು. ನಾಲ್ಕೈದು ಸಾರಿ ಮುನಿಸಿಪಾಲಿಟಿಯವರು ಆ ಗುಡಿಸಲುಗಳನ್ನು ಕಿತ್ತು ಹಾಕಿದ್ದರೂ ಮನುಷ್ಯ ಪ್ರಾಣಿಗಳ ಸೂರಿನ ಅದಮ್ಯ ಅವಶ್ಯಕ… Read more…