Home / ಕವನ / ಕವಿತೆ / ಹಾರಿ ಹೋಗತದ ಹಕ್ಕೀ

ಹಾರಿ ಹೋಗತದ ಹಕ್ಕೀ

ಅಂತೂ ಇಂತೂ ಒಂದು ದಿನ ಒಂದೇ ಕ್ಷಣಾ ಈ
ಕಂತೇ ಒಗೆಯುವುದು ನಿಶ್ಚಿತ
ಇರುವುದರಾಗೇ ಸಾಧಿಸಬೇಕು ಜನ್ಮ ಹುಟ್ಟಿಬಂದಭಿಮತ

ಹಾಂಗೂ ಹೀಂಗೂ ಸಾಗಿ ಹೋಗುತದ ಕಾಲ ಎಂಬ ಗಾಡೀ
ಇಬ್ಬನಿಯಂಗೆ ಕನಸಿನಹಂಗೆ ಮ್ಯಾಲಿನ ಮೋಡದ ಮೋಡೀ

ಹಿಡಿ ಹಿಡಿ ಹಿಡಿ ಹಿಡಿ ಅನ್ನೋದರಾಗ ಹಾರಿ ಹೋಗುತದ ಹಕ್ಕೀ
ಬೆರಳ ಸಂದಿನ್ಯಾಗ ಸೋರಿ ಹೋಗತಾವ ಬದುಕಿನ ಲೆಕ್ಕದ ಅಕ್ಕೀ

ಹಾರಾಡುತ್ತಿದೆ ಹದ್ದು ತಲಿ ಮ್ಯಾಲೆ ಜೀವದ ಹಕ್ಕೀ ಹಿಡಿಯಾಕ
ಕುಂತ ಕುಂತಲ್ಲೊ ದಾರಿ ದಾಟುವಾಗೊ ಅಪ್ಪಳಿಸುತ್ತದ ನೆಲಕ

ಗಬಕ್ಕನ ಕಚ್ಚಿ ಹಾರಿ ಹೋಗತದ ಬಾಯ್ಬಯ್ ಬಿಡ್ತಾವ ಸುತ್ತ
ಲಬಲಬ ಎದೆ ಬಡಕೊಂಡರು ಇಲ್ಲಾ ತಿರುಗಿ ಬರೋದಿಲ್ಲ ಮತ್ತ

ಕಾಲ ಎಂಬ ಇಲಿ ಮೂಸಿ ನೋಡತದ ಬೀಪೀ ಷುಗರ್ರು ಪಾರ್ಶೀ
ಕ್ಯಾನ್ಸರ್ ಏಡ್ಸೋ ಹುಣ್ಣೋ ಮಣ್ಣೋ ಯಾವುದೋ ರೋಗಾ ಸೇರ್ಸಿ
***

ರೊಕ್ಕಾ ರೊಕ್ಕಾ ಗಳಿಸೂ ಗಳಿಸೂ ಬೊಜ್ಜ ಮೈಯಾ ಬೆಳಸೂ
ಸುತ್ತಲಿನವರು ಸತ್ರೂ ಕೆಟ್ರೂ ಕಟುಕಸ್ವಾರ್ಥದಲೆ ಗಳಸೂ

ತಂದೆ ತಾಯಿಗಳ ಕಾಲಲಿ ತಡಕೂ ಬಂಧೂ ಬಳಗಾ ಕಸಾ
ನಿಂದೇ ನೀನು ಹೆಂಡ್ರು ಮಕ್ಳೂ ನೀನೇ ಜಗತ್ತು ರಸಾ

ಆಶೆ ಮುಚ್ಚಿಕೊಂಡು ಪಾಶ ಹಚ್ಚಿಕೊಂಡು ಒಂದಿನ ಗೊಟಕ್ಕ ಅಂತಿ
ಮೋಸ ತಗಲು ವಿಷ ಕೂಪದಿ ಬಿದ್ದು ಜೀವನ ಮರ್ಮವ ಮರತಿ
***

ನಾಯಿ ನರಿಹಂಗೆ ಕಾಗೆ ಗೂಗಿ ಹಂಗೆ ಕತ್ತೆ ಕೋಣನ್ಹಂಗೆ
ಹಂದಿ ಹದ್ದಿನಂಗೆ ಇಲಿ ಹೆಗ್ಗಣದಂಗೆ ಕ್ರೂರಮೃಗಗಳಂಗೆ

ಪ್ರಾಣಿ ಪಕ್ಷಗಳ ಹೋಲಿಸಿ ಮಾನವ ಶ್ರೇಷ್ಠನೆಂಬುವುದು ತಪ್ಪು
ಅವುಗಳ ಗುಣಗಳು ಇವನಲ್ಲಿರುವುವೆ ಯೋಚಿಸಿ ನೋಡಿ ಒಪ್ಪು

ಹೇಗಿರಬೇಕೊ ಆಯಾ ಪ್ರಾಣೀ ಹಾಂಗೇ ಅವು ಬಾಳ್ತಾವೇ
ಸುಮ್ಮ ಸುಮ್ಮನೇ ಅವುಗಳ ನಿಂದಿಸಿ ಅಪಮಾನ ಮಾಡುತಿರುವೆ
****

ಹಿಂದಿನ ಹಿರೇರು ಹೇಳ್ತಾ ಬಂದ್ರು ನೀರಿನ ಗುಳ್ಳೇ ಜನ್ಮಾ
ಆದರು ಅದನ್ನೆ ಗಟ್ಯಾಗಿ ಹಿಡಿಕೊಂಡು ಸಾಗ್ಯಾದ ನಮ್ಮ ಕರ್ಮ

ಆತ್ಮಾ ಆತ್ಮಾ ಸಾದ್ಸು ಅಂದ್ರು ಅತ್ಮದ ಚಿಂತಿ ಬ್ಯಾಡೋ
ಇರುವ ಬದುಕನೇ ಸಾರ್ಥಕ ಹ್ಯಾಂಗೆ ಮಾಡಿಕೊಬೇಕು ನೋಡೊ

ನ್ಯಾಯದ ದಾರಿ ಸತ್ಯದ ದಾರಿ ಗಟ್ಟಿಯ ದಾರಿ ಹಿಡಿಯೊ
ನನ್ನ ಜನಗಳು ನಾನೂ ಒಂದೇ ಎಂಬುವ ವಿಚಾರ ಪಡಿಯೊ
*****

Tagged:

Leave a Reply

Your email address will not be published. Required fields are marked *

ಬೆಳಗಿನ ಜಾವ ಆಗಲೇ ಐದು ಬಡಿದಿತ್ತು. ಎಲ್ಲೋ ಮಾಮರದಲ್ಲಿ ಕೋಗಿಲೆಯೂ ಕುಹೂ ಕುಹೂ ಎಂದು ಹಾಡುತಿತ್ತು. ಅಲ್ಲಲ್ಲಿ ಗಿಡಮರಗಳಲ್ಲಿ ಹಕ್ಕಿಗಳ ಚಿಲಿಚಿಲಿ ಕಲರವದೊಂದಿಗೆ ಸುಪ್ರಭಾತ ಹಾಡುತ್ತಿದ್ದವು. ಪ್ರಶಾಂತವಾದ ವಾತಾವರಣದಲ್ಲಿ ಸ್ವಾಮೀಜಿ, ಬೆಳಗಿನ ಪೂಜೆ ಮುಗಿಸಿ, ನಿತ್ಯದಂತೆ ಮಠದ ಪಾಕಶಾ...

“ಇನ್ನು ಗೇಣಿ ಕೊಡಬೇಕಾಗಿಲ್ಲವಂತೆ. ಒಕ್ಕಲಿಗೇ ಭೂಮಿಯಂತೆ.” ಊರಲ್ಲಿ ದಟ್ಟವಾಗಿ ಹಬ್ಬಿದ್ದ ಆ ವಾರ್‍ತೆ ಕುಂಞಂಬುನಲ್ಲಿ ಅಸಾಧ್ಯ ಕುತೂಹಲ ಕೆರಳಿಸಿತ್ತು. ಗೇಣಿ ಕೊಡದಿದ್ದರೆ ಧನಿಗಳು ಬಿಟ್ಟಾರೆಯೆ? ಗೇಣಿ ಕೊಡದೆ ಬೇರೆಯವರ ಭೂಮಿಯನ್ನು ಇಟ್ಟುಕೊಳ್ಳುವುದು ತಪ್ಪಲ್ಲವೆ? ಕು...

“ಮಮ್ಮಿ ! ಮಮ್ಮಿ ! ಬೇಗ ಬಾ” “ಅಡಿಗೆ ಮಾಡುತ್ತಾ ಇದ್ದೇನೆ, ಯಾಕೆ ಕಿರಿಚಿಕೊಳ್ಳುತ್ತಾ ಇದ್ದಿಯಾ ರೋಜಿ? ಬರುತ್ತೀನಿ ತಾಳು” ಎಂದಳು ಕೆಲಸದಲ್ಲಿ ನಿರತ ತಾಯಿ. “ಮಮ್ಮಿ! ಒಂದು ನಿಮಿಷ ಬಂದು ನೋಡು, ಕಾಗೆ ಪುಟ್ಟ ಅಳಿಲನ್ನು ಕುಕ್ಕಿ ನೋವು ಮಾಡುತ್ತಾ ...

ಈ ದಿನ ಹಿತ್ತಲ ತುಂಬ ಪಾರಿಜಾತ ಹೂವು ಸುರಿದಿದೆ. ಮತ್ತೆ ಸಂಪಿಗೆ ಮರದಿಂದ ಹೂವರಳಿ ಘಮ್ಮೆಂದು ವಾಸನೆ ಹರಿದಿದೆ. ಎರಡು ಪರಿಮಳ ಸೇರಿ ಎದೆಯಾಳಕೆ ಇಳಿದು ಒಳಗೊಳಗೆ ಒಂಥರಾ ಭಾವ ವಿಸ್ಮಯ ಅರಳಿದೆ. ಅಮ್ಮ ಒಲೆಯ ಮೇಲೆ ಕಡುಬು ಬೇಯಿಸುತ್ತಿದ್ದಾಳೆ. ಕೊಟ್ಟೆ ಕಡುಬಿನ ವಾಸನೆ ಇಡೀ ಮನೆಯನ್ನು ಪಸ...

ಆ ದಿನ, ಡಾಕ್ಟರ್ ಪಾರ್ವತಿಯವರಿಗೆ ಆತಂಕದ ದಿನ! ಒಂದು ವಿಧದ ಚಂಡಮಾರುತವನ್ನೆಬ್ಬಿಸಿದಂತಹ ಘಟನೆಯಿಂದ ನಗರದ ಅನೇಕರೂ, ಗಣ್ಯರೂ ಸೇರಿದಂತೆ, ಆ ಕೋರ್‍ಟಿನಲ್ಲಿ ಜನಸಂದಣಿ ಕಿಕ್ಕಿರಿದಿತ್ತು. ಆ ನಗರದ ಪ್ರಖ್ಯಾತ ವೈದ್ಯ ಡಾಕ್ಟರ್ ಪಾರ್ವತಿದೇವಿಯವರು ಸಾಕ್ಷಿ ನೀಡಬೇಕಾಗಿದ್ದರಿಂದ ಕೋರ್ಟಿನ ...

“ಭಟ್ಟರೇ, ನಿಮಗೆ ಹೇಳಲೊ? ಇಘ್ನೇಶ್ವರರಾಯರು ಅಂದರೆ ನಮ್ಮ ಜಾತಿಗೇ ಭೂಷಣ. ಅವರು ವಕೀಲಿ ಮಾಡಲು ಸುರು ಮಾಡಿದಂದಿನಿಂದ ಬೇರೆ ಜಾತಿಯವರ ಸೊಕ್ಕು ಮುರಿದಿದೆ. ಈಗ ಶೆಟ್ಟಿ ಶಾನಬೋಗರೆಲ್ಲ ಅವರಿಗೆ ರಾಯರೇ ಎಂದು ಸಲಾಮು ಮಾಡುವವರೇ! ನಿಮಗೆ ಹೇಳಲೊ? ಅದು ಒಬ್ಬೊಬ್ಬರ ಜನ್ಮಕುಂಡಲಿ ಇದ್ದ...