Home / ಕವನ / ಕವಿತೆ / ಹಾರಿ ಹೋಗತದ ಹಕ್ಕೀ

ಹಾರಿ ಹೋಗತದ ಹಕ್ಕೀ

ಅಂತೂ ಇಂತೂ ಒಂದು ದಿನ ಒಂದೇ ಕ್ಷಣಾ ಈ
ಕಂತೇ ಒಗೆಯುವುದು ನಿಶ್ಚಿತ
ಇರುವುದರಾಗೇ ಸಾಧಿಸಬೇಕು ಜನ್ಮ ಹುಟ್ಟಿಬಂದಭಿಮತ

ಹಾಂಗೂ ಹೀಂಗೂ ಸಾಗಿ ಹೋಗುತದ ಕಾಲ ಎಂಬ ಗಾಡೀ
ಇಬ್ಬನಿಯಂಗೆ ಕನಸಿನಹಂಗೆ ಮ್ಯಾಲಿನ ಮೋಡದ ಮೋಡೀ

ಹಿಡಿ ಹಿಡಿ ಹಿಡಿ ಹಿಡಿ ಅನ್ನೋದರಾಗ ಹಾರಿ ಹೋಗುತದ ಹಕ್ಕೀ
ಬೆರಳ ಸಂದಿನ್ಯಾಗ ಸೋರಿ ಹೋಗತಾವ ಬದುಕಿನ ಲೆಕ್ಕದ ಅಕ್ಕೀ

ಹಾರಾಡುತ್ತಿದೆ ಹದ್ದು ತಲಿ ಮ್ಯಾಲೆ ಜೀವದ ಹಕ್ಕೀ ಹಿಡಿಯಾಕ
ಕುಂತ ಕುಂತಲ್ಲೊ ದಾರಿ ದಾಟುವಾಗೊ ಅಪ್ಪಳಿಸುತ್ತದ ನೆಲಕ

ಗಬಕ್ಕನ ಕಚ್ಚಿ ಹಾರಿ ಹೋಗತದ ಬಾಯ್ಬಯ್ ಬಿಡ್ತಾವ ಸುತ್ತ
ಲಬಲಬ ಎದೆ ಬಡಕೊಂಡರು ಇಲ್ಲಾ ತಿರುಗಿ ಬರೋದಿಲ್ಲ ಮತ್ತ

ಕಾಲ ಎಂಬ ಇಲಿ ಮೂಸಿ ನೋಡತದ ಬೀಪೀ ಷುಗರ್ರು ಪಾರ್ಶೀ
ಕ್ಯಾನ್ಸರ್ ಏಡ್ಸೋ ಹುಣ್ಣೋ ಮಣ್ಣೋ ಯಾವುದೋ ರೋಗಾ ಸೇರ್ಸಿ
***

ರೊಕ್ಕಾ ರೊಕ್ಕಾ ಗಳಿಸೂ ಗಳಿಸೂ ಬೊಜ್ಜ ಮೈಯಾ ಬೆಳಸೂ
ಸುತ್ತಲಿನವರು ಸತ್ರೂ ಕೆಟ್ರೂ ಕಟುಕಸ್ವಾರ್ಥದಲೆ ಗಳಸೂ

ತಂದೆ ತಾಯಿಗಳ ಕಾಲಲಿ ತಡಕೂ ಬಂಧೂ ಬಳಗಾ ಕಸಾ
ನಿಂದೇ ನೀನು ಹೆಂಡ್ರು ಮಕ್ಳೂ ನೀನೇ ಜಗತ್ತು ರಸಾ

ಆಶೆ ಮುಚ್ಚಿಕೊಂಡು ಪಾಶ ಹಚ್ಚಿಕೊಂಡು ಒಂದಿನ ಗೊಟಕ್ಕ ಅಂತಿ
ಮೋಸ ತಗಲು ವಿಷ ಕೂಪದಿ ಬಿದ್ದು ಜೀವನ ಮರ್ಮವ ಮರತಿ
***

ನಾಯಿ ನರಿಹಂಗೆ ಕಾಗೆ ಗೂಗಿ ಹಂಗೆ ಕತ್ತೆ ಕೋಣನ್ಹಂಗೆ
ಹಂದಿ ಹದ್ದಿನಂಗೆ ಇಲಿ ಹೆಗ್ಗಣದಂಗೆ ಕ್ರೂರಮೃಗಗಳಂಗೆ

ಪ್ರಾಣಿ ಪಕ್ಷಗಳ ಹೋಲಿಸಿ ಮಾನವ ಶ್ರೇಷ್ಠನೆಂಬುವುದು ತಪ್ಪು
ಅವುಗಳ ಗುಣಗಳು ಇವನಲ್ಲಿರುವುವೆ ಯೋಚಿಸಿ ನೋಡಿ ಒಪ್ಪು

ಹೇಗಿರಬೇಕೊ ಆಯಾ ಪ್ರಾಣೀ ಹಾಂಗೇ ಅವು ಬಾಳ್ತಾವೇ
ಸುಮ್ಮ ಸುಮ್ಮನೇ ಅವುಗಳ ನಿಂದಿಸಿ ಅಪಮಾನ ಮಾಡುತಿರುವೆ
****

ಹಿಂದಿನ ಹಿರೇರು ಹೇಳ್ತಾ ಬಂದ್ರು ನೀರಿನ ಗುಳ್ಳೇ ಜನ್ಮಾ
ಆದರು ಅದನ್ನೆ ಗಟ್ಯಾಗಿ ಹಿಡಿಕೊಂಡು ಸಾಗ್ಯಾದ ನಮ್ಮ ಕರ್ಮ

ಆತ್ಮಾ ಆತ್ಮಾ ಸಾದ್ಸು ಅಂದ್ರು ಅತ್ಮದ ಚಿಂತಿ ಬ್ಯಾಡೋ
ಇರುವ ಬದುಕನೇ ಸಾರ್ಥಕ ಹ್ಯಾಂಗೆ ಮಾಡಿಕೊಬೇಕು ನೋಡೊ

ನ್ಯಾಯದ ದಾರಿ ಸತ್ಯದ ದಾರಿ ಗಟ್ಟಿಯ ದಾರಿ ಹಿಡಿಯೊ
ನನ್ನ ಜನಗಳು ನಾನೂ ಒಂದೇ ಎಂಬುವ ವಿಚಾರ ಪಡಿಯೊ
*****

Tagged:

Leave a Reply

Your email address will not be published. Required fields are marked *

ಮಳೆ ಜೋರಾಗಿ ಸುರಿಯುತ್ತಿತ್ತು. ಚಾವಣಿ ತೂತಾಗಿ ಸೋರುತ್ತಿದ್ದುದರಿಂದ ಸಾವಿತ್ರಿಗೆ ನಿದ್ದೆ ಇರಲಿಲ್ಲ. ಅವಳ ಉಗ್ಗವನದೂ ಅದೇ ಕತೆ. ಒಂದು ಮೂಲೆಯಲ್ಲಿ ಉಗ್ಗವನಿಗೆ ಒರಗಿಕೊಂಡು ಹಳೇ ಕಂಬಳಿ ಹೊದ್ದು ಸಾವಿತ್ರಿ ತೂಕಡಿಸುತ್ತಿದ್ದಳು. ಬಾಗಿಲ ಸಂದಿನಿಂದ ಆಗಾಗ ಚಳಕ್ಕನೆ ಕಾಣಿಸಿಕೊಳ್ಳುವ ಮಿ...

ದೀಪಾವಳಿಯ ಸೂಟಿಯನ್ನು ಕಳೆಯಲು ಊರಿಗೆ ಹೋಗಿದ್ದೆ. ಹಳ್ಳಿಗೆ ಹೋದಾಗೆಲ್ಲ ಕತೆಯ ಸುಬ್ಬಣ್ಣನ ಮನೆಗೆ ಹೋಗದಿದ್ದರೆ ನನ್ನ ಮನಸ್ಸು ಕೇಳುವದಿಲ್ಲ. ಊರಿಗೆ ಬಂದು ತನ್ನ ಮನೆಗೆ ಬರದಿದ್ದರೆ ಸುಬ್ಬಣ್ಣ ಬಿಡುತ್ತಾನೇ? ಅವನ ಆಮಂತ್ರಣ ಬರುವ ಮುಂಚೆಯೇ ಹೋಗುವದು ಉಚಿತವೆಂದು ತೋರಿತು. ಅವನ ಕತೆ ಕೇ...

ಒಂದು ತಿಂಗಳ ಮಗು ಹೆನ್ರಿ ನೋಡಲು ಬಲು ಮುದ್ದಾಗಿದ್ದ. ಸೇಬಿನ ಕೆನ್ನೆಗಳು, ದೊಡ್ಡ ಕಪ್ಪು ಕಣ್ಣುಗಳು, ತಲೆಯಲ್ಲಿ ಕೆಂಚು ಕೂದಲು, ನೀಳ ಮೂಗು, ಮುದ್ದಾದ ಪುಟ್ಟ ಬಾಯಿ, ನೋಡಿದೊಡನೆ ಹೇಳಬಹುದಿತ್ತು ಆ ಮಗು ಬ್ರಿಟಿಷ್ ತಂದೆ ತಾಯಿಗೆ ಹುಟ್ಟಿದವನೆಂದು. ತಂದೆ ಸ್ಮಿಥ್ ಮತ್ತು ತಾಯಿ ಮೇರಿಗೆ...

ಕೊನೆಗೊಮ್ಮೆ ಶಂಕರ ಹೂಂಗುಟ್ಟಲೇಬೇಕಾಯಿತು. “ಹುಡುಗಿ ಮನಸ್ಸಿಗೆ ಬಂದರೆ ಮಾತ್ರ ಆಗಿ. ಈ ವಿಷಯದಲ್ಲಿ ಒತ್ತಾಯಮಾಡಬರುತ್ತದೆಯೇ?” ಎಂದು ಶಿವರಾಮ ಹೆಗಡೆಯವರು ಶಂಕರನನ್ನು ಹೊರಡಿಸಿದರು. ದಾರಿಯುದ್ದಕ್ಕೂ ಹೆಗಡೆಯವರು ತಮ್ಮ ಮಗಳ ಗುಣಗಾನವನ್ನು ಪ್ರಸ್ತುತ ಅಪ್ರಸ್ತುತ ಪ್ರಶಂಸೆಗಳಿಂದ...

ಅಡಿಗೆಯ ಮನೆಯಿಂದ ಉಮೆಯು ಓಡಿ ಬಂದು “ನೀರಿನ ಕೊಡದ ಬಳಿಗೆ ಒಂದು ಕಪ್ಪೆ ಕುಳಿತಿದೆ. ಹೊರಗೆ ಹಾಕಿ ಕೊಡಿ” ಅಂದಳು. ತನಗೆ ಹೆದರದವಳು ಒಂದು ಕಪ್ಪೆಗೆ ಅಂಜುತ್ತಾಳಲ್ಲ ಅಂದುಕೊಂಡು ಉಮೇಶ ಒಳಗೆ ಬಂದ. ಕಪ್ಪೆಯು ಭದ್ರಾಸನ ಹಾಕಿತ್ತು. ಉಮೇಶ ಒಂದು ಸೌದೆಯಿಂದ ಕೊಡವನ್ನು ಕುಟ್ಟಿ...

ಹೊಲದ ಬದುವಿನ ಮೇಲೆ ಸಿದ್ದವ್ವ ಕುಳಿತಿದ್ದಳು. ಬಿಳಿ ಜ್ವಾಳದ ತೆನೆಗಳ ಮೇಲೆ ಹಾಯ್ದ ಗಾಳಿ ಒಂದೇ ಸಮನೆ ಬೀಸುತ್ತಿತ್ತು. ಇದೇ ಹೊಲದಲ್ಲಿ ತಾನು ಬಾಲ್ಯವನ್ನೆಲ್ಲಾ ಕಳೆದದ್ದು ನೆನಪಾಗಿ ಎಂಬತ್ತೈದರ ಸಿದ್ದವ್ವಳಿಗೆ ಮೈಯಲ್ಲಿ ಹರೆಯ ಉಕ್ಕಿ ಬಂದಂಗೆ ಆಯ್ತು. ತನ್ನ ಸೊರಗಿ ತೆಳುವಾದ ಕೈ ಕಾಲು...