ಮಾನ

ಅಂತರದಲ್ಲಾಡುವಳತೆಗೋಲು ಅಳೆದೂ ಸುರಿದೂ
ಹಗಲಿರುಳು ಬಟ್ಟೆ ತೊಡಿಸುತ್ತದೆ-ಕಳಚುತ್ತದೆ-ತೊಡಿಸುತ್ತದೆ
ತನಗೆ ಸರಿಕಂಡಂತೆ ಕೆಲವ ತಲೆಮೇಲಿಂದಿಳಿಬಿಡುತ್ತದೆ
ಮತ್ತೆ ಕೆಲವ ಕಾಲೊಳಗಿಂದ ಮೇಲೇರಿಸುತ್ತದೆ

ಕೆಲವು ಸೈಲು ಜೋಲಾಗಿ, ನೆಲ ಬಳಿಯುತ್ತಾ ಹರಿದು
ಚಿಂದಿಯಾಗುತ್ತವೆ
ಕೆಲವು ನನ್ನ ಮೈಕೈ ಕಾಲುಗಳೊಡನೆ ಮುಖವನ್ನೂ ಮುಚ್ಚಿ
ಮೂಕವಾಗಿಸಿ, ಕಿವುಡಾಗಿಸಿ, ಕುರುಡಾಗಿಸಿ, ಉಸಿರು ಕಟ್ಟಿಸುತ್ತವೆ
ಇನ್ನೂ ಕೆಲವು ಸಂದುಗೂಂದುಗಳ ಹೊಲಿಗೆ ಕಿತ್ತುಕೊಳ್ಳುತ್ತದೆ ಮೈ
ಬಿಗಿಯ ತಾಳಲಾರದೆ ಒಂದೂ ಸರಿಹೊಂದವು

ನನಗಾಗಿ ದುಡಿಯುವಾ ಕೋಲಿಗೆ ಕೂಲಿಯೇ ಇಲ್ಲ
ಆದರೂ ನನ್ನಳತೆಯೇ ಅದಕ್ಕೆ ಸಿಗದೆ, ಎರವಲ ಬಟ್ಟೆಗಳಿಂದಲೆ
ನನ್ನನಂದಗೊಳಿಸುವ ಬಾಡಿಗೆ ರೂಪ ಕೊಡುವ ಯತ್ನಮಾಡುತ್ತಿದೆ
‘ನನ್ನದೇ ಅಳತೆ ತೆಗೆದುಕೊ, ನನ್ನದೇ ಆದ ಬಟ್ಟೆ ಸಿದ್ಧಮಾಡು’
ಎಂದರೆ ನನ್ನ ಅಳತೆಯೇ ಅದಕ್ಕೆ ನಂಬಿಕೆ ಇದ್ದಂತಿಲ್ಲ,
ಅಥವಾ ನನ್ನಳತೆಯೇ ಅದಕ್ಕೆ ಅಳವಟ್ಟಿಲ್ಲವೋ!
ಹಾಗೆ ಕೇಳಿದಾಗ ಅದು ನನ್ನ ಪಾಡಿಗೆ ಬಿಟ್ಟಾಗ
ಬೆತ್ತಲೆಗುಡುಗುವ, ಸುಡುವ, ತೋಯುವ, ನೋಯುವ ಕಷ್ಟ
ಭಯಂಕರ,
ಆದರೂ ಅದರ ಕೈ ಕಾಲು ಹಿಡಿದು ಕಾಡಿ ಬೇಡಿದ್ದರಿಂದ
ಪರಿಸ್ಥಿತಿ ಸ್ವಲ್ಪ ಸುಧಾರಿಸುತ್ತಿದೆ

ಎರವಲೇನೂ ಇಲ್ಲವಾದರೂ
ಮಾಸಲು ತೇಪೆಯ ಬಟ್ಟೆಗಳೀಗಿಲ್ಲವಾದರೂ
ಬಿಗಿತ ಜೋಲಾಟಗಳೇನೂ ತಪ್ಪಿಲ್ಲ,
ಇಷ್ಟು ಇರುವುದು ಸಹಜ ಸ್ವಾಮೀ ಎನ್ನುತ್ತದೆ
ಇತ್ತೀಚೆಗೆ ಬಂದ ಪರದೇಶಿ ಬಟ್ಟೆಗಳಬ್ಬರದಲ್ಲಂತೂ
ಅಳತೆಕೋಲು ದಿಕ್ಕೂ ತಪ್ಪಿದಂತಾಗಿದೆ. ಇವುಗಳಲ್ಲಿ
ನನ್ನ ಮಾನ ಮುಚ್ಚುವ ಅಳತೆಗೊಗ್ಗುವ ಬಟ್ಟೆ ಸಿಗುವುದೇ
ಕಠಿಣವಾಗಿದೆ
ಬಟ್ಟೆಯೇ ಇಲ್ಲದೆ ನಾನೇ ಎಲ್ಲಿ ಪರದೇಶಿಯಾಗಿಬಿಡುವೆನೋ ಎಂಬ
ಭಯವಾವರಿಸಿದೆ
*****
(೨೨-೭-೧೯೭೩)

Tagged:

Leave a Reply

Your email address will not be published. Required fields are marked *

ನಾಡಿಗೆ ಸ್ವಾತಂತ್ರ ಬಂದಿದೆ. ಎಲ್ಲೆಲ್ಲೂ ಸ್ವೈರಾಚಾರ ಹೆಚ್ಚಿದೆ. ಸ್ವಾತಂತ್ರವೆಂದರೆ ಸ್ವೇಚ್ಛಾಚಾರ ಎನ್ನುವಂತೆ ನಾಡಿನ ಜನ ವರ್ತಿಸುತ್ತಿದೆ; ಬಹುದಿನದ ಸಾಧನೆಯಿಂದ ಪಡೆದ ಸಿದ್ದಿಯನ್ನು ಮಣ್ಣುಗೂಡಿಸುತ್ತಲಿದೆ. ಇದನ್ನು ತಡೆಯಲಿಕ್ಕೆ ಭಾರತದ “ಹಳ್ಳಿ-ಹಳ್ಳಿಗಳಲ್ಲಿಯೂ ಗ್ರಾಮ ಸುರಕ್ಷಕ...

“ವತ್ಸಲಾ……..!” ನಿಟ್ಟುಸುರಿನೊಂದಿಗೆ ಕುಮಾರನು ಆರಾಮ ಕುರ್‍ಚಿಯ ಮೇಲೆ ದೊಪ್ಪನೆ ಬಿದ್ದು ಕೊಂಡನು. ಚಿಕ್ಕಬಾಲಕನೊಬ್ಬನು ಕಿಡಿಕಿಯಲ್ಲಿ ಹಣಿಕಿ ಹಾಕಿ “ಕುಮಾರಣ್ಣ” ಎಂದು ಕೂಗಿದಂತಾಯಿತು. ಎದ್ದು ನೋಡುತ್ತಾನೆ; ಕೆಂಪು ಮಸಿಯಿಂದ ವಿಳಾಸ ಬರೆದ...

“ಭೀಮಾ ಮಾಸ್ತರರನ್ನು ಇಷ್ಟ ಮೋಟರ ಸ್ಟಾಂಡಿನ ತನಕ ಕಳಿಸಿ ಬಾರಪ್ಪಾ.” ಬಾಯಕ್ಕ ನೆರೆಮನೆಯವರ ಆಳಿಗೆ ವಿನಯದಿಂದ ಹೇಳಿ ನನ್ನ ಕಡೆಗೆ ಹೊರಳಿ ಅಂದಳು: “ಬಿಡಿರಿ, ನಿಮ್ಮ ಬ್ಯಾಗ ತಗೊಂಡ ಬರತಾನ ಭೀಮಾ” “ಯಾತಕ್ಕ? ನಾ ಕೈಯೊಳಗ ಸಹಜ ಒಯ್ಯತೇನೆ” ನಾನು ಹೀಗೆ ಹೇಳಿದೆನಾದರೂ ಭೀಮಪ್...

ಸಿಗರೆಟ್‌ನ್ನು ಕೊನೆಯ ಸಲ ಎಳೆದು ಬದಿಗಿದ್ದ ಅಶ್‌ಟ್ರೆಯಲ್ಲಿ ಹಾಕಿದ. ಮೂರು ದಿನಗಳಿಂದ ಹೇಳಲಾಗದಂತಹ ಯಾತನೆ ಅವನನ್ನು ಹಿಂತಿಸುತ್ತಿದೆ. ಇದ್ದಿದ್ದು ಮಿತ್ರನ ಮಾತುಗಳು ಬಂದು ಕಿವಿಗೆ ಅಪ್ಪಳಿಸಿ ಎತ್ತ ನೋಡಿದರೂ ಅವನದೆ ಮುಖ ಕಾಣುತ್ತಿದೆ. “ನಾ ಹೇಳುವದನ್ನು ಅರ್‍ಥಮಾಡಿ ಕೊಳ್ಳು...

ಬೆಳಿಗ್ಗೆಯಿಂದ ಕತ್ತಲೆಯವರೆಗೂ ಬಸ್ ಸ್ಟಾಂಡಿನಲ್ಲಿ ಬಸ್ಸುಗಳಿಗೆ ಹತ್ತಿ ಇಳಿದುಕೊಂಡು ಎಷ್ಟು ಗೋಗರೆದು ಬಿಕ್ಷೆ ಬೇಡಿದರೂ ಆ ಹುಡುಗನಿಗೆ ಮಧ್ಯಾಹ್ನದ ಊಟ ಮಾಡುವಷ್ಟು ಹಣ ಸಂಗ್ರಹವಾಗುತ್ತಿರಲಿಲ್ಲ. ಮಧ್ಯಾಹ್ನ ಬಿಸ್ಕಿಟು ಮತ್ತು ನಲ್ಲಿ ನೀರು ಕುಡಿದು ಹಸಿವು ತಣಿಸಿದರೂ ರಾತ್ರಿಯ ಊಟಕ್ಕ...