ಮಾನ

ಅಂತರದಲ್ಲಾಡುವಳತೆಗೋಲು ಅಳೆದೂ ಸುರಿದೂ
ಹಗಲಿರುಳು ಬಟ್ಟೆ ತೊಡಿಸುತ್ತದೆ-ಕಳಚುತ್ತದೆ-ತೊಡಿಸುತ್ತದೆ
ತನಗೆ ಸರಿಕಂಡಂತೆ ಕೆಲವ ತಲೆಮೇಲಿಂದಿಳಿಬಿಡುತ್ತದೆ
ಮತ್ತೆ ಕೆಲವ ಕಾಲೊಳಗಿಂದ ಮೇಲೇರಿಸುತ್ತದೆ

ಕೆಲವು ಸೈಲು ಜೋಲಾಗಿ, ನೆಲ ಬಳಿಯುತ್ತಾ ಹರಿದು
ಚಿಂದಿಯಾಗುತ್ತವೆ
ಕೆಲವು ನನ್ನ ಮೈಕೈ ಕಾಲುಗಳೊಡನೆ ಮುಖವನ್ನೂ ಮುಚ್ಚಿ
ಮೂಕವಾಗಿಸಿ, ಕಿವುಡಾಗಿಸಿ, ಕುರುಡಾಗಿಸಿ, ಉಸಿರು ಕಟ್ಟಿಸುತ್ತವೆ
ಇನ್ನೂ ಕೆಲವು ಸಂದುಗೂಂದುಗಳ ಹೊಲಿಗೆ ಕಿತ್ತುಕೊಳ್ಳುತ್ತದೆ ಮೈ
ಬಿಗಿಯ ತಾಳಲಾರದೆ ಒಂದೂ ಸರಿಹೊಂದವು

ನನಗಾಗಿ ದುಡಿಯುವಾ ಕೋಲಿಗೆ ಕೂಲಿಯೇ ಇಲ್ಲ
ಆದರೂ ನನ್ನಳತೆಯೇ ಅದಕ್ಕೆ ಸಿಗದೆ, ಎರವಲ ಬಟ್ಟೆಗಳಿಂದಲೆ
ನನ್ನನಂದಗೊಳಿಸುವ ಬಾಡಿಗೆ ರೂಪ ಕೊಡುವ ಯತ್ನಮಾಡುತ್ತಿದೆ
‘ನನ್ನದೇ ಅಳತೆ ತೆಗೆದುಕೊ, ನನ್ನದೇ ಆದ ಬಟ್ಟೆ ಸಿದ್ಧಮಾಡು’
ಎಂದರೆ ನನ್ನ ಅಳತೆಯೇ ಅದಕ್ಕೆ ನಂಬಿಕೆ ಇದ್ದಂತಿಲ್ಲ,
ಅಥವಾ ನನ್ನಳತೆಯೇ ಅದಕ್ಕೆ ಅಳವಟ್ಟಿಲ್ಲವೋ!
ಹಾಗೆ ಕೇಳಿದಾಗ ಅದು ನನ್ನ ಪಾಡಿಗೆ ಬಿಟ್ಟಾಗ
ಬೆತ್ತಲೆಗುಡುಗುವ, ಸುಡುವ, ತೋಯುವ, ನೋಯುವ ಕಷ್ಟ
ಭಯಂಕರ,
ಆದರೂ ಅದರ ಕೈ ಕಾಲು ಹಿಡಿದು ಕಾಡಿ ಬೇಡಿದ್ದರಿಂದ
ಪರಿಸ್ಥಿತಿ ಸ್ವಲ್ಪ ಸುಧಾರಿಸುತ್ತಿದೆ

ಎರವಲೇನೂ ಇಲ್ಲವಾದರೂ
ಮಾಸಲು ತೇಪೆಯ ಬಟ್ಟೆಗಳೀಗಿಲ್ಲವಾದರೂ
ಬಿಗಿತ ಜೋಲಾಟಗಳೇನೂ ತಪ್ಪಿಲ್ಲ,
ಇಷ್ಟು ಇರುವುದು ಸಹಜ ಸ್ವಾಮೀ ಎನ್ನುತ್ತದೆ
ಇತ್ತೀಚೆಗೆ ಬಂದ ಪರದೇಶಿ ಬಟ್ಟೆಗಳಬ್ಬರದಲ್ಲಂತೂ
ಅಳತೆಕೋಲು ದಿಕ್ಕೂ ತಪ್ಪಿದಂತಾಗಿದೆ. ಇವುಗಳಲ್ಲಿ
ನನ್ನ ಮಾನ ಮುಚ್ಚುವ ಅಳತೆಗೊಗ್ಗುವ ಬಟ್ಟೆ ಸಿಗುವುದೇ
ಕಠಿಣವಾಗಿದೆ
ಬಟ್ಟೆಯೇ ಇಲ್ಲದೆ ನಾನೇ ಎಲ್ಲಿ ಪರದೇಶಿಯಾಗಿಬಿಡುವೆನೋ ಎಂಬ
ಭಯವಾವರಿಸಿದೆ
*****
(೨೨-೭-೧೯೭೩)

Tagged:

Leave a Reply

Your email address will not be published. Required fields are marked *

ಬೆಳಗಿನ ಜಾವ ಆಗಲೇ ಐದು ಬಡಿದಿತ್ತು. ಎಲ್ಲೋ ಮಾಮರದಲ್ಲಿ ಕೋಗಿಲೆಯೂ ಕುಹೂ ಕುಹೂ ಎಂದು ಹಾಡುತಿತ್ತು. ಅಲ್ಲಲ್ಲಿ ಗಿಡಮರಗಳಲ್ಲಿ ಹಕ್ಕಿಗಳ ಚಿಲಿಚಿಲಿ ಕಲರವದೊಂದಿಗೆ ಸುಪ್ರಭಾತ ಹಾಡುತ್ತಿದ್ದವು. ಪ್ರಶಾಂತವಾದ ವಾತಾವರಣದಲ್ಲಿ ಸ್ವಾಮೀಜಿ, ಬೆಳಗಿನ ಪೂಜೆ ಮುಗಿಸಿ, ನಿತ್ಯದಂತೆ ಮಠದ ಪಾಕಶಾ...

“ಇನ್ನು ಗೇಣಿ ಕೊಡಬೇಕಾಗಿಲ್ಲವಂತೆ. ಒಕ್ಕಲಿಗೇ ಭೂಮಿಯಂತೆ.” ಊರಲ್ಲಿ ದಟ್ಟವಾಗಿ ಹಬ್ಬಿದ್ದ ಆ ವಾರ್‍ತೆ ಕುಂಞಂಬುನಲ್ಲಿ ಅಸಾಧ್ಯ ಕುತೂಹಲ ಕೆರಳಿಸಿತ್ತು. ಗೇಣಿ ಕೊಡದಿದ್ದರೆ ಧನಿಗಳು ಬಿಟ್ಟಾರೆಯೆ? ಗೇಣಿ ಕೊಡದೆ ಬೇರೆಯವರ ಭೂಮಿಯನ್ನು ಇಟ್ಟುಕೊಳ್ಳುವುದು ತಪ್ಪಲ್ಲವೆ? ಕು...

“ಮಮ್ಮಿ ! ಮಮ್ಮಿ ! ಬೇಗ ಬಾ” “ಅಡಿಗೆ ಮಾಡುತ್ತಾ ಇದ್ದೇನೆ, ಯಾಕೆ ಕಿರಿಚಿಕೊಳ್ಳುತ್ತಾ ಇದ್ದಿಯಾ ರೋಜಿ? ಬರುತ್ತೀನಿ ತಾಳು” ಎಂದಳು ಕೆಲಸದಲ್ಲಿ ನಿರತ ತಾಯಿ. “ಮಮ್ಮಿ! ಒಂದು ನಿಮಿಷ ಬಂದು ನೋಡು, ಕಾಗೆ ಪುಟ್ಟ ಅಳಿಲನ್ನು ಕುಕ್ಕಿ ನೋವು ಮಾಡುತ್ತಾ ...

ಈ ದಿನ ಹಿತ್ತಲ ತುಂಬ ಪಾರಿಜಾತ ಹೂವು ಸುರಿದಿದೆ. ಮತ್ತೆ ಸಂಪಿಗೆ ಮರದಿಂದ ಹೂವರಳಿ ಘಮ್ಮೆಂದು ವಾಸನೆ ಹರಿದಿದೆ. ಎರಡು ಪರಿಮಳ ಸೇರಿ ಎದೆಯಾಳಕೆ ಇಳಿದು ಒಳಗೊಳಗೆ ಒಂಥರಾ ಭಾವ ವಿಸ್ಮಯ ಅರಳಿದೆ. ಅಮ್ಮ ಒಲೆಯ ಮೇಲೆ ಕಡುಬು ಬೇಯಿಸುತ್ತಿದ್ದಾಳೆ. ಕೊಟ್ಟೆ ಕಡುಬಿನ ವಾಸನೆ ಇಡೀ ಮನೆಯನ್ನು ಪಸ...

ಆ ದಿನ, ಡಾಕ್ಟರ್ ಪಾರ್ವತಿಯವರಿಗೆ ಆತಂಕದ ದಿನ! ಒಂದು ವಿಧದ ಚಂಡಮಾರುತವನ್ನೆಬ್ಬಿಸಿದಂತಹ ಘಟನೆಯಿಂದ ನಗರದ ಅನೇಕರೂ, ಗಣ್ಯರೂ ಸೇರಿದಂತೆ, ಆ ಕೋರ್‍ಟಿನಲ್ಲಿ ಜನಸಂದಣಿ ಕಿಕ್ಕಿರಿದಿತ್ತು. ಆ ನಗರದ ಪ್ರಖ್ಯಾತ ವೈದ್ಯ ಡಾಕ್ಟರ್ ಪಾರ್ವತಿದೇವಿಯವರು ಸಾಕ್ಷಿ ನೀಡಬೇಕಾಗಿದ್ದರಿಂದ ಕೋರ್ಟಿನ ...

“ಭಟ್ಟರೇ, ನಿಮಗೆ ಹೇಳಲೊ? ಇಘ್ನೇಶ್ವರರಾಯರು ಅಂದರೆ ನಮ್ಮ ಜಾತಿಗೇ ಭೂಷಣ. ಅವರು ವಕೀಲಿ ಮಾಡಲು ಸುರು ಮಾಡಿದಂದಿನಿಂದ ಬೇರೆ ಜಾತಿಯವರ ಸೊಕ್ಕು ಮುರಿದಿದೆ. ಈಗ ಶೆಟ್ಟಿ ಶಾನಬೋಗರೆಲ್ಲ ಅವರಿಗೆ ರಾಯರೇ ಎಂದು ಸಲಾಮು ಮಾಡುವವರೇ! ನಿಮಗೆ ಹೇಳಲೊ? ಅದು ಒಬ್ಬೊಬ್ಬರ ಜನ್ಮಕುಂಡಲಿ ಇದ್ದ...