ತಮಾಷೆ ಪದ್ಯಗಳು

ಎಲ್ಲರ ಮನೆಯ
ಹೆಂಚು ಕಪ್ಪು
ದೋಸೆ ಕಪ್ಪೇನು??
ಕಪ್ಪನ್ನು ಕಪ್ಪೆಂದರೆ…
ಮಕ ಚಿಪ್ಪೇಕೆ??


ಹೆಂಚಿಗೆ ಬರೀ ಕಾಯುವ ಕೆಲಸ!
ಕಾದ ರಬಸಕ್ಕೆ ಬುರು ಬುರು…
ಉಬ್ಬುವ ಕೆಲಸ, ಕಡಿಮೇನು??
ದೋಸೆ ತಿರಿವಿದಂಗೇ…
ಹೆಂಚು ತಿರಿಗಿಸಲು ಸಾಧ್ಯನೇನು??
ಹಾಕಿದ ಹಿಟ್ಟಿಗೆ-
ದೋಸೆ ಆಗುವುದೆಂದೇ ಗೊತ್ತು!!


ಹೆಂಚು ಕಪ್ಪೆಂದು,
ದೋಸೆ ಹೊರಕ್ಕೆ ಜಿಗಿವುದೇ??
ತೂತಾಗದೇ?!
ಹೆಂಚು ನಾಽ…
ದೋಸೆ ನೀಽ….
ಆಸೆ ಪಡುವುದು ತಪ್ಪೇನು??
*

ಹೆಂಡತಿ ಕೇಳಿದಳು:
ಮೆತ್ತಗೆ-
ಸ್ಯಾರೀ…
ಗಂಡ
ಹೇಳಿದ:
ಗತ್ತಿಲಿ-
ಐಯಾಮ್
ಸಾರೀ…
*

ಹದಿಹರೆದಲಿ
ಲವ್ಽ… ಲವ್ಽ…
ಅಂತಾ ಓಡಾಡುತ್ತಾರೆ.
ಮುಪ್ಪಲಿ,
ಲಬ್ಽ… ಲಬ್ಽ…
ಅಂತಾ ಬಡ್ಕೊಂತಾರೆ!
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ನಾನೊಬ್ಬನೆ
Next post ಬಾರವ್ವ ಗಂಗೆ

ಸಣ್ಣ ಕತೆ

  • ತೊಳೆದ ಮುತ್ತು

    ಕರ್ನಾಟಕದಲ್ಲಿ ನಮ್ಮ ಮನೆತನವು ಪ್ರತಿಷ್ಠಿತವಾದದ್ದು. ವರ್ಷಾ ನಮಗೆ ಇನಾಮು ಭೂಮಿಗಳಿಂದ ಎರಡು- ಮೂರು ಸಾವಿರ ರೂಪಾಯಿಗಳ ಉತ್ಪನ್ನ. ನಮ್ಮ ತಂದೆಯವರಾದ ರಾವಬಹಾದ್ದೂರ ಅನಂತರಾಯರು ಡೆಪುಟಿ ಕಲೆಕ್ಟರರಾಗಿ ಪೆನ್ಶನ್ನ… Read more…

  • ಸ್ನೇಹಲತಾ

    ೧೫-೯-೧೯.. ಈಗ ಮನಸ್ಸಿಗೆ ನೆಮ್ಮದಿಯೆನಿಸುತ್ತಿದೆ. ಇಂದಿನಿಂದ ಮತ್ತೆ ನನ್ನ ದಿನಚರಿ ಬರೆಯುವ ಕಾರ್ಯಕ್ರಮವನ್ನು ಆರಂಭಿಸಬೇಕು. ದಿನಚರಿಯೆ ನನ್ನ ಸಹಧರ್ಮಿಣಿ; ನನ್ನ ಸಹ-ಸಂಚಾರಿ; ಅದೆ ನನಗೆ ಸಂತಸ ಕೊಡುವುದು.… Read more…

  • ಇರುವುದೆಲ್ಲವ ಬಿಟ್ಟು

    ಕುಮಾರನಿಗೆ ಪಕ್ಕದ ಮನೆಯ ರೆಡಿಯೋದಲ್ಲಿ ಬಸಪ್ಪ ಮಾದರ ಧ್ವನಿ ಕೇಳಿ ಎಚ್ಚರವಾಯ್ತು. ದೇಹಲಿ ಕೇಂದ್ರದಿಂದ ವಾರ್ತೆಗಳು ಬರುತ್ತಿದ್ದವು. ಹಾಸಿಗೆಯಿಂದ ಎದ್ದವನೆ ಕದ ತೆಗೆದ. ಬೆಳಗಿನ ಸೊಗಸು ಕೊರೆವ… Read more…

  • ತ್ರಿಪಾದ

    ವಿಲಿಯಂ ಜೋನ್ಸ್ ಭಾರತದ ದೇವನಹಳ್ಳಿ ವಿಮಾನ ನಿಲ್ದಾಣದಲ್ಲಿ ಇಳಿದಾಗ, ಅವನ ಮನವನ್ನು ಕಾಡುತ್ತಿದ್ದ ಪ್ರೀತಿ ಅವನ ಹೆಂಡತಿ ಮಕ್ಕಳೊಂದಿಗೆ ಅವನನ್ನು ಅತಿಯಾಗಿ ಹಚ್ಚಿಕೊಂಡಿದ್ದ ಅವನ ಪ್ರೀತಿಯ ನಾಯಿ… Read more…

  • ಉಧೋ ಉಧೋ

    ಸಂತ್ರಸ್ತರ ಆ ಶೆಡ್ಡಿಗೆ ನಾಗವ್ವನ ಕುಟುಂಬ ಸ್ಥಳಾಂತರವಾಗಿ ಆರು ತಿಂಗಳಾಗಿತ್ತು. ನಾಲ್ಕಂಕಣದ ದಂಧಕ್ಕಿ ಮನಿ ಸಾರಿಸಿ ಪಡಿ ಹಿಟ್ಟಿನ ರೊಟ್ಟಿತಟ್ಟಿ ತಣ್ಣಗ ಮುಂದಿನ ಬಂಕಕ್ಕೆ ಕುಬಸ ಬಿಚ್ಚಿ… Read more…