ಬಳ್ಳಾರಿ ಬಿಸಿಲೆಂದರೆ…

ಬಳ್ಳಾರಿ ಬಿಸಿಲೆಂದರೆ…
ನಿಗಿ ನಿಗಿ ಉರಿವಕೊಳ್ಳಿ ದೆವ್ವ!!
ನಿತ್ಯ ಬಿಸುಲುಗುದುರೆಯೇರಿ,
ಗರಿಗೆದರಿ, ಧರೆಗಿಳಿವ, ಸೂರ್‍ಯಮಂಡಲ!
ಆಲೆಮನೆಯ, ಕೊಪ್ಪರಿಗೆಯೊಳಗಿನ
ಬಿಸಿ ಬಿಸಿ ಕೆನೆ ಬೆಲ್ಲದ, ಕಾಕಂಬಿ ರಸದ, ಸಿಂಚನ!
ಕಾದ ತಾರೆಣ್ಣೆ, ಮೈಮೇಲೆ ಸುರಿವಿಕೊಂಡಂತೆ!
ಕಮ್ಮಾರ ರೋಸಿಗೊಂಡು ಸಿಟ್ಟಲಿ,
ತಿದಿಯೊತ್ತಿದ ಬಿರುಸಿಗೆ, ಕಿಡಿಕಿಡಿ ಕಾರುವ, ಸೂರ್‍ಯಕಿರಣ!
ಚಳಮಳ ಕಾದ, ಎಮ್ಮೆ ಹಾಲಿನ ಝಳದಂತೆ,
ಮಖಾಮೂತಿಗೆ ರಾಚುವ, ಕೆಂಡದುಂಡೆಯ ಬಿಸಿಲ ಮಳೆ!
ಇಟ್ಟಂಗಿ ಭಟ್ಟಿಯೊಳಗೆ, ಸಿಕ್ಕ ಮರಿ ಹುಲ್ಲೆಯಂಗೆ,
ನಿತ್ಯ ವಿಲವಿಲಾ ಒದ್ದಾಡುವ, ನರಪಿಳ್ಳೆಗಳು!
ಸೀದಕರುಕು, ಅಶ್ಟೇ ಚುರುಕು, ಹರಕು! ಝಲಕು…
ಅಬ್ಬಾ…! ಹುಟ್ಟಬೇಕು ಬಳ್ಳಾರಿ ಬಿಸಿಲಿಗೇ… ಒಮ್ಮೆಯಾದರೂ
ಗಟ್ಟಿತನ ಎತ್ತಿ ತೋರಬೇಕು!

-೨-
ಬಳ್ಳಾರಿ ಬಿಸಿಲೆಂದರೆ…
ಬಿಸಿಲೇ…! ಬಿಸಿಲಿಗೆ, ಬಿಸಲು ಸೇರಿ,
ಚಕ್ರಬಡ್ಡಿ, ಮೀಟರ್‍ ಬಡ್ಡಿ, ಸುಸ್ತಿಬಡ್ಡಿಯಶ್ಟು ತಾಪಮಾನ…
ನವರಂಧ್ರಗಳಲ್ಲಿ… ಎರೆಭೂಮಿಯಂಗೆ ಬಿರುಕು ಬಿಟ್ಟು
ಬಾಯಿಬಿಟ್ಟರೆ, ಬಾನೆಟ್ಟೆತ್ತಿದ ಹಳೆ ಜೀಪಿನ,
ರೇಡಿಯೆಟರಿನ, ಬಿಸಿನೀರಿನಿಂದ ಚಿಮ್ಮುವ ಕಾರಂಜಿ!
ಜ್ವಾಲಾಮುಖಿನೇ ಈ ಧರೆಗಿಳಿದಂತೆ, ನಿತ್ಯ ಭಸಿವ ಬಿಸಿಲು!
ಮನೆ ನಲ್ಲಿಗಳು; ಭುಸು ಭುಸುಗುಡುವ, ಬಿಸಿನೀರಿನ ಬುಗ್ಗೆಗಳು!

-೩-
ಬಳ್ಳಾರಿ ಬಿಸಿಲೆಂದರೆ…
ಕಾದ ಕಮ್ಮಾರನ ಕುಲುಮೆ!  ಇಂದ್ರನ ವಜ್ರಾಯುಧಾ!
ಸಪ್ತ ಸಾಗರಗಳ, ಲಾವರಸದ ಚಿಲುಮೆ!
ಸುಡುಬಿಸಿಲ ಸಿಡಿಲು!
ಶಿವನ ತ್ರಿನೇತ್ರದುರಿಯ ಬೆಂಗಾಡು, ಗುಡ್ಡಗಾಡು, ಗಣೆಗೂಡು…
ಪ್ರಾಣಿ, ಪಕ್ಷಿ, ನರಪಿಳ್ಳೆಗಳಿಗೇ ಗುಕ್ಕು ನೀರಿಲ್ಲದಾ ಸುಡುಗಾಡು!
ಸತ್ತಂತಿರುವ ಹಸಿರು, ಮರ, ಗಿಡಿ, ಬಳ್ಳಿಗಳೆಲ್ಲ ತ್ಯಾಪೆ ಮೋರೆ!
ಕಡುವೈರಿಗೂ ಬೇಡ ಬಿಡು! ಬಳ್ಳಾರಿ ಬಿಸಿಲು… ಉಮ್ರು… ಬೆವ್ರು…
ನಡುರಾತ್ರಿಲಿ ಉರಿವ ಸೂರ್‍ಯ! ಕಾದ ಕೋಟೆಯ ನಿಟ್ಟೂಸಿರು!
ಮೈ, ಕೈ, ಕಾಲು: ಚುರು… ಚುರು…
ಮೂಗು, ಬಾಯಿ, ಕಣ್ಣು: ಉರಿ… ಉರಿ…
ಹರಲಿರುಳು ಬೇಸಿಗೆ ಬಿಸಿಲು!
ಹಾಗಲ್ಲದಿದ್ದರೆ… ಬಳ್ಳಾರಿ ಬಿಸಲೇ ಅಲ್ಲ ಬಿಡಿ!
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ವ್ಯರ್ಥ
Next post ಎಲ್ಲಿಗೆ?

ಸಣ್ಣ ಕತೆ

  • ಹುಟ್ಟು

    ಶಾದಿ ಮಹಲ್‌ನ ಒಳ ಆವರಣದಲ್ಲಿ ದೊಡ್ಡ ಹಾಲ್‌ನಲ್ಲಿ ಹೆಂಗಸರೆಲ್ಲಾ ಸೇರಿದ್ದರು. ಹೊರಗಡೆ ಹಾಕಿದ್ದ ಶಾಮಿಯಾನದಲ್ಲಿ ಗಂಡಸರು ನೆರೆದಿದ್ದರು. ಒಂದು ಕಡೆಯ ಎತ್ತರವಾದ ವೇದಿಕೆಯ ಮೇಲೆ ಮದುವೆ ಗಂಡು,… Read more…

  • ಉರಿವ ಮಹಡಿಯ ಒಳಗೆ

    ಸಹ ಉದ್ಯೋಗಿಗಳ ಓಡಾಟ, ಗ್ರಾಹಕರೊಂದಿಗಿನ ಮೊಬೈಲ್ ಹಾಗೂ ದೂರವಾಣಿ ಸಂಭಾಷಣೆಗಳು, ಲ್ಯಾಪ್‌ಟಾಪಿನ ಶಬ್ದಗಳು ಎಲ್ಲಾ ಸ್ತಬ್ದವಾದಾಗಲೇ ಮಧುಕರನಿಗೆ ಕಚೇರಿಯ ಸಮಯ ಮೀರಿದ್ದು ಅರಿವಾಯಿತು. ಕುಳಿತಲ್ಲಿಂದಲೇ ತನ್ನ ಕುತ್ತಿಗೆಯನ್ನು… Read more…

  • ಪ್ಲೇಗುಮಾರಿಯ ಹೊಡೆತ

    ಪ್ರಕರಣ ೧೩ ಕೆಲವು ದಿನಗಳ ತರುವಾಯ ತಿಪ್ಪೂರು ಹೋಬಳಿಯ ಪಾಠಶಾಲೆಗಳಿಂದ ಅನಿಷ್ಟ ವರ್ತಮಾನಗಳು ಬರಲಾರಂಭಿಸಿದುವು. ಹಳ್ಳಿಯಲ್ಲಿ ಪ್ಲೇಗುಮಾರಿ ಹೊಕ್ಕಿದೆ; ಒಂದೆರಡು ಸಾವುಗಳಾದುವು; ಜನರೆಲ್ಲ ಹೊಲಗಳಲ್ಲಿ ಗುಡಿಸಿಲುಗಳನ್ನು ಹಾಕಿಕೊಳ್ಳುತ್ತಿದಾರೆ;… Read more…

  • ದೇವರು ಮತ್ತು ಅಪಘಾತ

    ಊರಿನ ಕೊನೆಯಂಚಿನಲ್ಲಿದ್ದ ಕೆರೆಯಂಗಳದಲ್ಲಿ ಅಣಬೆಗಳಂತೆ ಮೈವೆತ್ತಿದ್ದ ಗುಡಿಸಲುಗಳಲ್ಲಿ ಕೊನೆಯದು ಅವಳದಾಗಿತ್ತು. ನಾಲ್ಕೈದು ಸಾರಿ ಮುನಿಸಿಪಾಲಿಟಿಯವರು ಆ ಗುಡಿಸಲುಗಳನ್ನು ಕಿತ್ತು ಹಾಕಿದ್ದರೂ ಮನುಷ್ಯ ಪ್ರಾಣಿಗಳ ಸೂರಿನ ಅದಮ್ಯ ಅವಶ್ಯಕ… Read more…

  • ಕಳ್ಳನ ಹೃದಯಸ್ಪಂದನ

    ಅದು ಅಪರಾತ್ರಿ ೨ ಘಂಟೆ ಸಮಯ. ಎಲ್ಲರೂ ಗಾಢ ನಿದ್ರೆಯಲ್ಲಿದ್ದರು. ಊರಿನಿಂದ ಸ್ವಲ್ಪ ದೂರವಾಗಿದ್ದ ಕಲ್ಯಾಣ ನಗರದ ಬಡಾವಣೆ, ಅಷ್ಟಾಗಿ ಹತ್ತಿರ ಹತ್ತಿರವಲ್ಲದ ಮನೆಗಳು, ಒಂದು ವರ್ಷದ… Read more…