ಬಳ್ಳಾರಿ ಬಿಸಿಲೆಂದರೆ…

ಬಳ್ಳಾರಿ ಬಿಸಿಲೆಂದರೆ…
ನಿಗಿ ನಿಗಿ ಉರಿವಕೊಳ್ಳಿ ದೆವ್ವ!!
ನಿತ್ಯ ಬಿಸುಲುಗುದುರೆಯೇರಿ,
ಗರಿಗೆದರಿ, ಧರೆಗಿಳಿವ, ಸೂರ್‍ಯಮಂಡಲ!
ಆಲೆಮನೆಯ, ಕೊಪ್ಪರಿಗೆಯೊಳಗಿನ
ಬಿಸಿ ಬಿಸಿ ಕೆನೆ ಬೆಲ್ಲದ, ಕಾಕಂಬಿ ರಸದ, ಸಿಂಚನ!
ಕಾದ ತಾರೆಣ್ಣೆ, ಮೈಮೇಲೆ ಸುರಿವಿಕೊಂಡಂತೆ!
ಕಮ್ಮಾರ ರೋಸಿಗೊಂಡು ಸಿಟ್ಟಲಿ,
ತಿದಿಯೊತ್ತಿದ ಬಿರುಸಿಗೆ, ಕಿಡಿಕಿಡಿ ಕಾರುವ, ಸೂರ್‍ಯಕಿರಣ!
ಚಳಮಳ ಕಾದ, ಎಮ್ಮೆ ಹಾಲಿನ ಝಳದಂತೆ,
ಮಖಾಮೂತಿಗೆ ರಾಚುವ, ಕೆಂಡದುಂಡೆಯ ಬಿಸಿಲ ಮಳೆ!
ಇಟ್ಟಂಗಿ ಭಟ್ಟಿಯೊಳಗೆ, ಸಿಕ್ಕ ಮರಿ ಹುಲ್ಲೆಯಂಗೆ,
ನಿತ್ಯ ವಿಲವಿಲಾ ಒದ್ದಾಡುವ, ನರಪಿಳ್ಳೆಗಳು!
ಸೀದಕರುಕು, ಅಶ್ಟೇ ಚುರುಕು, ಹರಕು! ಝಲಕು…
ಅಬ್ಬಾ…! ಹುಟ್ಟಬೇಕು ಬಳ್ಳಾರಿ ಬಿಸಿಲಿಗೇ… ಒಮ್ಮೆಯಾದರೂ
ಗಟ್ಟಿತನ ಎತ್ತಿ ತೋರಬೇಕು!

-೨-
ಬಳ್ಳಾರಿ ಬಿಸಿಲೆಂದರೆ…
ಬಿಸಿಲೇ…! ಬಿಸಿಲಿಗೆ, ಬಿಸಲು ಸೇರಿ,
ಚಕ್ರಬಡ್ಡಿ, ಮೀಟರ್‍ ಬಡ್ಡಿ, ಸುಸ್ತಿಬಡ್ಡಿಯಶ್ಟು ತಾಪಮಾನ…
ನವರಂಧ್ರಗಳಲ್ಲಿ… ಎರೆಭೂಮಿಯಂಗೆ ಬಿರುಕು ಬಿಟ್ಟು
ಬಾಯಿಬಿಟ್ಟರೆ, ಬಾನೆಟ್ಟೆತ್ತಿದ ಹಳೆ ಜೀಪಿನ,
ರೇಡಿಯೆಟರಿನ, ಬಿಸಿನೀರಿನಿಂದ ಚಿಮ್ಮುವ ಕಾರಂಜಿ!
ಜ್ವಾಲಾಮುಖಿನೇ ಈ ಧರೆಗಿಳಿದಂತೆ, ನಿತ್ಯ ಭಸಿವ ಬಿಸಿಲು!
ಮನೆ ನಲ್ಲಿಗಳು; ಭುಸು ಭುಸುಗುಡುವ, ಬಿಸಿನೀರಿನ ಬುಗ್ಗೆಗಳು!

-೩-
ಬಳ್ಳಾರಿ ಬಿಸಿಲೆಂದರೆ…
ಕಾದ ಕಮ್ಮಾರನ ಕುಲುಮೆ!  ಇಂದ್ರನ ವಜ್ರಾಯುಧಾ!
ಸಪ್ತ ಸಾಗರಗಳ, ಲಾವರಸದ ಚಿಲುಮೆ!
ಸುಡುಬಿಸಿಲ ಸಿಡಿಲು!
ಶಿವನ ತ್ರಿನೇತ್ರದುರಿಯ ಬೆಂಗಾಡು, ಗುಡ್ಡಗಾಡು, ಗಣೆಗೂಡು…
ಪ್ರಾಣಿ, ಪಕ್ಷಿ, ನರಪಿಳ್ಳೆಗಳಿಗೇ ಗುಕ್ಕು ನೀರಿಲ್ಲದಾ ಸುಡುಗಾಡು!
ಸತ್ತಂತಿರುವ ಹಸಿರು, ಮರ, ಗಿಡಿ, ಬಳ್ಳಿಗಳೆಲ್ಲ ತ್ಯಾಪೆ ಮೋರೆ!
ಕಡುವೈರಿಗೂ ಬೇಡ ಬಿಡು! ಬಳ್ಳಾರಿ ಬಿಸಿಲು… ಉಮ್ರು… ಬೆವ್ರು…
ನಡುರಾತ್ರಿಲಿ ಉರಿವ ಸೂರ್‍ಯ! ಕಾದ ಕೋಟೆಯ ನಿಟ್ಟೂಸಿರು!
ಮೈ, ಕೈ, ಕಾಲು: ಚುರು… ಚುರು…
ಮೂಗು, ಬಾಯಿ, ಕಣ್ಣು: ಉರಿ… ಉರಿ…
ಹರಲಿರುಳು ಬೇಸಿಗೆ ಬಿಸಿಲು!
ಹಾಗಲ್ಲದಿದ್ದರೆ… ಬಳ್ಳಾರಿ ಬಿಸಲೇ ಅಲ್ಲ ಬಿಡಿ!
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ವ್ಯರ್ಥ
Next post ಎಲ್ಲಿಗೆ?

ಸಣ್ಣ ಕತೆ

  • ಬಾಳ ಚಕ್ರ ನಿಲ್ಲಲಿಲ್ಲ

    ತಂದೆಯ ಸಾವು ಕುಟುಂಬವನ್ನೇ ಬೀದಿಪಾಲು ಮಾಡಿತು. ಹೊಸಪೇಟೆಯ ಚಪ್ಪರದ ಹಳ್ಳಿಯಲ್ಲಿ ವಾಸವಾಗಿದ್ದ ಇಮಾಮ್ ಸಾಬ್ ಹಾಗೂ ಝೈನಾಬ್ ದಂಪತಿಗಳಿಗೆ ೬ ಹೆಣ್ಣು ಮಕ್ಕಳು, ಒಂದು ಗಂಡು ಮಗು.… Read more…

  • ಬೆಟ್ಟಿ

    ಮೃದುವಾಗಿ ಯಾರೋ ತೋಳು ತಟ್ಟಿದಂತಾಯಿತು. ಪುಸ್ತಕದಿಂದ ತಟ್ಟನೆ ತಲೆ ಎತ್ತಿದಳು ಲಿಂಡಾ. ನೀಲಿಕಣ್ಣುಗಳಲ್ಲಿ ಆಶ್ಚರ್ಯ ಮೂಡಿತ್ತು. "ಮದರ್ ಕರೆಯುತ್ತಿದ್ದಾರೆ..." ಅಷ್ಟೇ ಹೇಳಿ ಮೇರಿ ಸಿಸ್ಟರ್ ಹೊರಟರು. ಅವಳ… Read more…

  • ಧರ್ಮಸಂಸ್ಥಾಪನಾರ್ಥಾಯ

    ಕಪಿಲಳ್ಳಿಯ ಏಕೈಕ ಸಂರಕ್ಷಕ ಕಪಿಲೇಶ್ವರನ ವಾರ್ಷಿಕ ರಥೋತ್ಸವದ ಮುನ್ನಾದಿನ ಧಾರ್ಮಿಕ ಪ್ರವಚನವೊಂದನ್ನು ಏರ್ಪಡಿಸಲೇಬೇಕೆಂದೂ, ಇಲ್ಲದಿದ್ದರೆ ಜಾತ್ರಾ ಮಹೋತ್ಸವಕ್ಕೆ ತನ್ನ ಸಪೋರ್ಟು ಮತ್ತು ಕೋ-ಆಪರೇಶನ್ನು ಬಿಲ್ಲು ಕುಲ್ಲು ಸಿಗಲಾರದೆಂದೂ,… Read more…

  • ರಾಮಿ

    ‘ಸಲಾಮ್ರಿ’ ರೈಲಿನ ಹೊತ್ತಾಗಿದೆ. ವೆಂಕಟೇಶನು ಒಂದೇಸವನೆ ತನ್ನ ಕೈಯಲ್ಲಿಯ ಗಡಿಯಾರವನ್ನು ನೋಡುತ್ತಿದ್ದಾನೆ. ‘ಸಲಾಮ್ರೀಽ ಏಕ ಪೈಸಾ.’ ಆಗ ಮತ್ತೆ ಒದರಿದಳು. ಟಾಂಗಾದ ತುದಿ ಹಿಡಿದು ಕೊಂಡು ಓಡ… Read more…

  • ಇಬ್ಬರು ಹುಚ್ಚರು

    ಸದಾಶಿವನಿಗೆ ಹೀಗೆ ಹುಚ್ಚನಾಗಿ ಅಲೆಯುವ ಅಗತ್ಯ ಖಂಡಿತಕ್ಕೂ ಇರಲಿಲ್ಲ. ಅವನಿಗೊಂದು ಹಿತ್ತಿಲು ಮನೆಯೂ, ಹಿತ್ತಿಲಲ್ಲಿ ಸಾಕಷ್ಟು ಫಲ ಕೊಡುವ ಗೇರು ಮರಗಳೂ ಇದ್ದವು. ದಿನಕ್ಕೆ ಸಾವಿರ ಬೀಡಿ… Read more…