Home / ಕವನ / ಕವಿತೆ / ಬಳ್ಳಾರಿ ಬಿಸಿಲೆಂದರೆ…

ಬಳ್ಳಾರಿ ಬಿಸಿಲೆಂದರೆ…

ಬಳ್ಳಾರಿ ಬಿಸಿಲೆಂದರೆ…
ನಿಗಿ ನಿಗಿ ಉರಿವಕೊಳ್ಳಿ ದೆವ್ವ!!
ನಿತ್ಯ ಬಿಸುಲುಗುದುರೆಯೇರಿ,
ಗರಿಗೆದರಿ, ಧರೆಗಿಳಿವ, ಸೂರ್‍ಯಮಂಡಲ!
ಆಲೆಮನೆಯ, ಕೊಪ್ಪರಿಗೆಯೊಳಗಿನ
ಬಿಸಿ ಬಿಸಿ ಕೆನೆ ಬೆಲ್ಲದ, ಕಾಕಂಬಿ ರಸದ, ಸಿಂಚನ!
ಕಾದ ತಾರೆಣ್ಣೆ, ಮೈಮೇಲೆ ಸುರಿವಿಕೊಂಡಂತೆ!
ಕಮ್ಮಾರ ರೋಸಿಗೊಂಡು ಸಿಟ್ಟಲಿ,
ತಿದಿಯೊತ್ತಿದ ಬಿರುಸಿಗೆ, ಕಿಡಿಕಿಡಿ ಕಾರುವ, ಸೂರ್‍ಯಕಿರಣ!
ಚಳಮಳ ಕಾದ, ಎಮ್ಮೆ ಹಾಲಿನ ಝಳದಂತೆ,
ಮಖಾಮೂತಿಗೆ ರಾಚುವ, ಕೆಂಡದುಂಡೆಯ ಬಿಸಿಲ ಮಳೆ!
ಇಟ್ಟಂಗಿ ಭಟ್ಟಿಯೊಳಗೆ, ಸಿಕ್ಕ ಮರಿ ಹುಲ್ಲೆಯಂಗೆ,
ನಿತ್ಯ ವಿಲವಿಲಾ ಒದ್ದಾಡುವ, ನರಪಿಳ್ಳೆಗಳು!
ಸೀದಕರುಕು, ಅಶ್ಟೇ ಚುರುಕು, ಹರಕು! ಝಲಕು…
ಅಬ್ಬಾ…! ಹುಟ್ಟಬೇಕು ಬಳ್ಳಾರಿ ಬಿಸಿಲಿಗೇ… ಒಮ್ಮೆಯಾದರೂ
ಗಟ್ಟಿತನ ಎತ್ತಿ ತೋರಬೇಕು!

-೨-
ಬಳ್ಳಾರಿ ಬಿಸಿಲೆಂದರೆ…
ಬಿಸಿಲೇ…! ಬಿಸಿಲಿಗೆ, ಬಿಸಲು ಸೇರಿ,
ಚಕ್ರಬಡ್ಡಿ, ಮೀಟರ್‍ ಬಡ್ಡಿ, ಸುಸ್ತಿಬಡ್ಡಿಯಶ್ಟು ತಾಪಮಾನ…
ನವರಂಧ್ರಗಳಲ್ಲಿ… ಎರೆಭೂಮಿಯಂಗೆ ಬಿರುಕು ಬಿಟ್ಟು
ಬಾಯಿಬಿಟ್ಟರೆ, ಬಾನೆಟ್ಟೆತ್ತಿದ ಹಳೆ ಜೀಪಿನ,
ರೇಡಿಯೆಟರಿನ, ಬಿಸಿನೀರಿನಿಂದ ಚಿಮ್ಮುವ ಕಾರಂಜಿ!
ಜ್ವಾಲಾಮುಖಿನೇ ಈ ಧರೆಗಿಳಿದಂತೆ, ನಿತ್ಯ ಭಸಿವ ಬಿಸಿಲು!
ಮನೆ ನಲ್ಲಿಗಳು; ಭುಸು ಭುಸುಗುಡುವ, ಬಿಸಿನೀರಿನ ಬುಗ್ಗೆಗಳು!

-೩-
ಬಳ್ಳಾರಿ ಬಿಸಿಲೆಂದರೆ…
ಕಾದ ಕಮ್ಮಾರನ ಕುಲುಮೆ!  ಇಂದ್ರನ ವಜ್ರಾಯುಧಾ!
ಸಪ್ತ ಸಾಗರಗಳ, ಲಾವರಸದ ಚಿಲುಮೆ!
ಸುಡುಬಿಸಿಲ ಸಿಡಿಲು!
ಶಿವನ ತ್ರಿನೇತ್ರದುರಿಯ ಬೆಂಗಾಡು, ಗುಡ್ಡಗಾಡು, ಗಣೆಗೂಡು…
ಪ್ರಾಣಿ, ಪಕ್ಷಿ, ನರಪಿಳ್ಳೆಗಳಿಗೇ ಗುಕ್ಕು ನೀರಿಲ್ಲದಾ ಸುಡುಗಾಡು!
ಸತ್ತಂತಿರುವ ಹಸಿರು, ಮರ, ಗಿಡಿ, ಬಳ್ಳಿಗಳೆಲ್ಲ ತ್ಯಾಪೆ ಮೋರೆ!
ಕಡುವೈರಿಗೂ ಬೇಡ ಬಿಡು! ಬಳ್ಳಾರಿ ಬಿಸಿಲು… ಉಮ್ರು… ಬೆವ್ರು…
ನಡುರಾತ್ರಿಲಿ ಉರಿವ ಸೂರ್‍ಯ! ಕಾದ ಕೋಟೆಯ ನಿಟ್ಟೂಸಿರು!
ಮೈ, ಕೈ, ಕಾಲು: ಚುರು… ಚುರು…
ಮೂಗು, ಬಾಯಿ, ಕಣ್ಣು: ಉರಿ… ಉರಿ…
ಹರಲಿರುಳು ಬೇಸಿಗೆ ಬಿಸಿಲು!
ಹಾಗಲ್ಲದಿದ್ದರೆ… ಬಳ್ಳಾರಿ ಬಿಸಲೇ ಅಲ್ಲ ಬಿಡಿ!
*****

Tagged:

Leave a Reply

Your email address will not be published. Required fields are marked *

ಬೆಳಗಿನ ಜಾವ ಆಗಲೇ ಐದು ಬಡಿದಿತ್ತು. ಎಲ್ಲೋ ಮಾಮರದಲ್ಲಿ ಕೋಗಿಲೆಯೂ ಕುಹೂ ಕುಹೂ ಎಂದು ಹಾಡುತಿತ್ತು. ಅಲ್ಲಲ್ಲಿ ಗಿಡಮರಗಳಲ್ಲಿ ಹಕ್ಕಿಗಳ ಚಿಲಿಚಿಲಿ ಕಲರವದೊಂದಿಗೆ ಸುಪ್ರಭಾತ ಹಾಡುತ್ತಿದ್ದವು. ಪ್ರಶಾಂತವಾದ ವಾತಾವರಣದಲ್ಲಿ ಸ್ವಾಮೀಜಿ, ಬೆಳಗಿನ ಪೂಜೆ ಮುಗಿಸಿ, ನಿತ್ಯದಂತೆ ಮಠದ ಪಾಕಶಾ...

“ಇನ್ನು ಗೇಣಿ ಕೊಡಬೇಕಾಗಿಲ್ಲವಂತೆ. ಒಕ್ಕಲಿಗೇ ಭೂಮಿಯಂತೆ.” ಊರಲ್ಲಿ ದಟ್ಟವಾಗಿ ಹಬ್ಬಿದ್ದ ಆ ವಾರ್‍ತೆ ಕುಂಞಂಬುನಲ್ಲಿ ಅಸಾಧ್ಯ ಕುತೂಹಲ ಕೆರಳಿಸಿತ್ತು. ಗೇಣಿ ಕೊಡದಿದ್ದರೆ ಧನಿಗಳು ಬಿಟ್ಟಾರೆಯೆ? ಗೇಣಿ ಕೊಡದೆ ಬೇರೆಯವರ ಭೂಮಿಯನ್ನು ಇಟ್ಟುಕೊಳ್ಳುವುದು ತಪ್ಪಲ್ಲವೆ? ಕು...

“ಮಮ್ಮಿ ! ಮಮ್ಮಿ ! ಬೇಗ ಬಾ” “ಅಡಿಗೆ ಮಾಡುತ್ತಾ ಇದ್ದೇನೆ, ಯಾಕೆ ಕಿರಿಚಿಕೊಳ್ಳುತ್ತಾ ಇದ್ದಿಯಾ ರೋಜಿ? ಬರುತ್ತೀನಿ ತಾಳು” ಎಂದಳು ಕೆಲಸದಲ್ಲಿ ನಿರತ ತಾಯಿ. “ಮಮ್ಮಿ! ಒಂದು ನಿಮಿಷ ಬಂದು ನೋಡು, ಕಾಗೆ ಪುಟ್ಟ ಅಳಿಲನ್ನು ಕುಕ್ಕಿ ನೋವು ಮಾಡುತ್ತಾ ...

ಈ ದಿನ ಹಿತ್ತಲ ತುಂಬ ಪಾರಿಜಾತ ಹೂವು ಸುರಿದಿದೆ. ಮತ್ತೆ ಸಂಪಿಗೆ ಮರದಿಂದ ಹೂವರಳಿ ಘಮ್ಮೆಂದು ವಾಸನೆ ಹರಿದಿದೆ. ಎರಡು ಪರಿಮಳ ಸೇರಿ ಎದೆಯಾಳಕೆ ಇಳಿದು ಒಳಗೊಳಗೆ ಒಂಥರಾ ಭಾವ ವಿಸ್ಮಯ ಅರಳಿದೆ. ಅಮ್ಮ ಒಲೆಯ ಮೇಲೆ ಕಡುಬು ಬೇಯಿಸುತ್ತಿದ್ದಾಳೆ. ಕೊಟ್ಟೆ ಕಡುಬಿನ ವಾಸನೆ ಇಡೀ ಮನೆಯನ್ನು ಪಸ...

ಆ ದಿನ, ಡಾಕ್ಟರ್ ಪಾರ್ವತಿಯವರಿಗೆ ಆತಂಕದ ದಿನ! ಒಂದು ವಿಧದ ಚಂಡಮಾರುತವನ್ನೆಬ್ಬಿಸಿದಂತಹ ಘಟನೆಯಿಂದ ನಗರದ ಅನೇಕರೂ, ಗಣ್ಯರೂ ಸೇರಿದಂತೆ, ಆ ಕೋರ್‍ಟಿನಲ್ಲಿ ಜನಸಂದಣಿ ಕಿಕ್ಕಿರಿದಿತ್ತು. ಆ ನಗರದ ಪ್ರಖ್ಯಾತ ವೈದ್ಯ ಡಾಕ್ಟರ್ ಪಾರ್ವತಿದೇವಿಯವರು ಸಾಕ್ಷಿ ನೀಡಬೇಕಾಗಿದ್ದರಿಂದ ಕೋರ್ಟಿನ ...

“ಭಟ್ಟರೇ, ನಿಮಗೆ ಹೇಳಲೊ? ಇಘ್ನೇಶ್ವರರಾಯರು ಅಂದರೆ ನಮ್ಮ ಜಾತಿಗೇ ಭೂಷಣ. ಅವರು ವಕೀಲಿ ಮಾಡಲು ಸುರು ಮಾಡಿದಂದಿನಿಂದ ಬೇರೆ ಜಾತಿಯವರ ಸೊಕ್ಕು ಮುರಿದಿದೆ. ಈಗ ಶೆಟ್ಟಿ ಶಾನಬೋಗರೆಲ್ಲ ಅವರಿಗೆ ರಾಯರೇ ಎಂದು ಸಲಾಮು ಮಾಡುವವರೇ! ನಿಮಗೆ ಹೇಳಲೊ? ಅದು ಒಬ್ಬೊಬ್ಬರ ಜನ್ಮಕುಂಡಲಿ ಇದ್ದ...