ಎದ್ದು ಹೋಗುತೇನಿ ತಾಳೆಲೋ ಛೀ ಬುದ್ಧಿಗೇಡಿ

ಎದ್ದು ಹೋಗುತೇನಿ ತಾಳೆಲೋ ಛೀ ಬುದ್ಧಿಗೇಡಿ
ಎದ್ದು ಹೋಗುತೇನಿ ತಾಳೆಲೋ ||ಪ||

ಎದ್ದು ಹೋಗುತೇನಿ ತಾಳೆಲೋ
ಇದ್ದು ಇಲ್ಲೇ ಭವಕೆ ಬೀಳೊ
ಸಧ್ಯ ಸದ್ಗುರು ಶಾಪ ನಿನಗೆ
ಸಿದ್ಧಲಿಂಗನ ಪಾದಸಾಕ್ಷಿ ||ಅ.ಪ||

ಹಟದಿ ನಮ್ಮನ್ನ್ಯಾಕ ನೋಡುತಿ ಒಣ
ಕಟಗಿಯಂತೆ ಸೆಟೆದುಕೊಂಡು ಮಾತನಾಡುತಿ
ಚಟಕಿ ಹೊಡೆದು ಬಟ್ಟ ಕುಣಿಸಿ
ಕಠಿಣ ಕಲಹ ಗುಣಗುಣಗಳೆಣಿಸಿ
ಕಟಕಿದೋಷವು ತಟ್ಟಿತೋ ಹಿರಿಯ ಮಠದ ಪಾದಸಾಕ್ಷಿ ||೧||

ನಿಂದೆನಾಡಿ ನೀಚನಾದೆಯೋ‌ಇದ-
ರಿಂದ ದಂದುಗಕ್ಕೆ ಬಂದು ಬಿದ್ದಿಯೋ
ತಂದೆ ಗುರುಗೋವಿಂದರಾಜನ
ದ್ವಂದ್ವಪಾದವ ನಂಬಿದವರಿಗೆ
ಕುಂದನಿಟ್ಟ ಮಂದಮನುಜ
ಹಂದಿಜಲ್ಮಕ ಬಿದ್ದಿ ತಮ್ಮಾ ||೨||

ಮಂಡಲಕ ಮಹಿಮಾಸಾಗರ ಬ್ರಹ್ಮೋತ್ರಕಾಂಡ
ಪಂಡಿತರಿಗೆ ಪಾರಮಾರ್ಥದಾಗರಾ ಇದರೊಳಗೆ ನೀನು
ಬಂಡು ಬರಿದೆ ಬೊಗಳು ಅಕ್ಷರ ನಾ ಕಂಡಿದ್ದಿಲ್ಲಾ
ಪುಂಡ ಶಿಶುನಾಳಧೀಶನ ದಂಡಕೋಲು ಕೈಯಲಿ ಪಿಡಿದು
ದಿಂಡುತನವ ಮುರಿದು ನಿನ್ನ ಚಂಡಿತನವ ಬಿಡಿಸಿ ಮೌಜಿಲೆ ||೩||

*****

 

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಮುಗಿಲ ಮಲ್ಲಿಗೆ
Next post ಸಂತೆಯಲ್ಲಿ ನಿಂತು ಕನ್ನಡವ ನೆನೆದೇವು

ಸಣ್ಣ ಕತೆ

  • ದೇವರು ಮತ್ತು ಅಪಘಾತ

    ಊರಿನ ಕೊನೆಯಂಚಿನಲ್ಲಿದ್ದ ಕೆರೆಯಂಗಳದಲ್ಲಿ ಅಣಬೆಗಳಂತೆ ಮೈವೆತ್ತಿದ್ದ ಗುಡಿಸಲುಗಳಲ್ಲಿ ಕೊನೆಯದು ಅವಳದಾಗಿತ್ತು. ನಾಲ್ಕೈದು ಸಾರಿ ಮುನಿಸಿಪಾಲಿಟಿಯವರು ಆ ಗುಡಿಸಲುಗಳನ್ನು ಕಿತ್ತು ಹಾಕಿದ್ದರೂ ಮನುಷ್ಯ ಪ್ರಾಣಿಗಳ ಸೂರಿನ ಅದಮ್ಯ ಅವಶ್ಯಕ… Read more…

  • ಎರಡು…. ದೃಷ್ಟಿ!

    ದೀಪಾವಳಿಯು ಸಮೀಪಿಸಿದ್ದಿತು. ದೀಪಾವಳಿಯನ್ನು ನಾವು ಪಂಚಾಗ ನೋಡದೆ ತಿಳಿದುಕೊಳ್ಳಬಹುದು. ಅದು ಹೇಗೆ? ದೀಪಾವಳಿ ಪೂರ್ವರಂಗದ ಸುಳಿವು ನಮಗೇ ಗೊತ್ತೇ ಆಗುವದು. ಮನೆಯಲ್ಲಿ ಕರಚೀ ಕಾಯಿ, ಚಿರೋಟಿಗಳನ್ನು ಕರಿಯುವ… Read more…

  • ಎರಡು ರೆಕ್ಕೆಗಳು

    ಪಶ್ಚಿಮದಲ್ಲಿ ಸೂರ್ಯ ಮುಳುಗುತ್ತಿದ್ದ ಆಕಾರದ ತುಂಬ ಒಂಥರಾ ಕೆಂಬಣ್ಣ ತುಂಬಿಕೊಂಡಿತ್ತು. ಆ ಸಂಜೆಯಲ್ಲಿ ತಣ್ಣನೆಯ ಗಾಳಿ ಆ ಭಾವನೆ ಬಂಡೆಯ ಕೋಟೆಯ ಮೇಲೆ ಹಾಯ್ದು ಹೋಯಿತು. ಎತ್ತರದ… Read more…

  • ಮಾದಿತನ

    ಮುಂಗೋಳಿ... ಕೂಗಿದ್ದೆ ತಡ, ಪೆರ್‍ಲಜ್ಜ ದಿಡಿಗ್ಗನೆದ್ದ. ರಾತ್ರಿಯೆಲ್ಲ... ವಂದೇ ಸಮ್ನೆ ಅಳುತ್ತಾ, ವುರೀಲೋ... ಬ್ಯಾಡೋ... ಯಂಬಂತೆ, ದೀಪದ ಬುಡ್ಡಿ, ನಡ್ಮುನೆ ಕಂಬ್ಕಂಟಿ, ಸಣ್ಗೆ ವುರಿತಿತ್ತು. ಯದೆವಳ್ಗೆ ಮಜ್ಗೆ… Read more…

  • ತಿಥಿ

    "ಲೋ ಬೋಸುಡಿಕೆ ನನ್ಮಗನೇ, ಇದು ಕೊನೆಯ ಬಾರಿ ನಿನಗೆ ವಾರ್ನಿಂಗ್ ಕೊಡುತ್ತಾ ಇದ್ದೇನೆ. ಮೂರು ಸಾರಿ ಈ ಜೈಲಿನಿಂದ ನಿನಗೆ ವಿದಾಯ ಕೊಟ್ಟಾಯಿತು. ಇನ್ನು ಹೋಗಿ ನಿನ್ನ… Read more…

cheap jordans|wholesale air max|wholesale jordans|wholesale jewelry|wholesale jerseys