ಆದೀತೆ!

ಒಂದು ಹೂವು ಇನ್ನೊಂದು ಹೂವಿನಾಳಗಲಗಳ ಕಂಡೀತೇ?
ಅದರಂದ ಮಕರಂದಗಳ ಸವಿದೀತೆ?
ಒಂದರ ಮಹತಿ ನಿಯತಿಗಳನರಿತೀತೆ?
ಅದರಾಗುಹೋಗುಗಳನಳೆದೀತೇ?

ಹಾಗೆ ಮಾಡಲು
ಬೆಳಗನೊಳಗೊಂಡ ಅರುಣೋದಯದಂತೆ,
ಮರವ ಧ್ಯಾನಿಸುತ್ತ ಕುಳಿತ ಬೀಜದಂತೆ,
ಕೂಸು ಹೀಚಾಗಬೇಕೆನಿಸುತ್ತದೆ

ಇಲ್ಲವೇ ಹಗಲುಗನಸು ಕಂಡುಂಡು
ಕೆಂಡವಾಗಿಳಿಬಿದ್ದ ಸಂಜೆಯಂತೆ
ಮಣ್ಣಿನೊಡನಾಟದಲ್ಲಿ ಕಾಲಕಳೆವ
ಒಣ ಮರದಂತೆ
ಕಾಯಿಗಾಗಿ ಕಾಯವಳಿದು
ಬಣ್ಣವಡಗಿ ಬಾಡಿ ಬಿದ್ದೆಸಳುಗಳಾಗಿರಬೇಕೆನಿಸುತ್ತದೆ

ಇವೆರಡಕ್ಕೂ ತತ್ವ-ಅನಂತ-ಜೀವಾಂತ-ವೇದಾಂತ
ಎಂದುಬಿಟ್ಟು ಪುಸ್ತಕ ಮುಚ್ಚಲಾದೀತೆ?
(೧-೧-೭೮)
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಹಬ್ಬ
Next post ಸೂರ್ಯನ ಕಾವು

ಸಣ್ಣ ಕತೆ

  • ನಂಟಿನ ಕೊನೆಯ ಬಲ್ಲವರಾರು?

    ಕುಳಿತವನು ಅಲುಗದಂತೆ ತದೇಕ ಚಿತ್ತದಿಂದ ಕಡಲನ್ನು ನೋಡುತ್ತಿದ್ದ. ಹಾಗೇ ಕುಳಿತು ಅರ್ಧಗಂಟೆ ಕಳೆದಿತ್ತು. ಮೊಲದ ಬಾರಿಗೆ ಕಡಲ ಕಂಡವನ ಚಿತ್ತ ಕಲಕುವುದೇಕೆಂದು ಕುಳಿತಲ್ಲೇ ಅವನನ್ನು ಬಿಟ್ಟು ತಿರುಗಾಡಿ… Read more…

  • ಮೈಥಿಲೀ

    "ಹಾಗಿದ್ದರೆ, ಪಾಪವೆಂದರೇನು ಗುರುಗಳೇ?" ಕಣ್ಣು ಮುಚ್ಚಿ ಧ್ಯಾನಾಸಕ್ತರಾದ ಯೋಗೀಶ್ವರ ವಿದ್ಯಾರಣ್ಯರು ಕಣ್ತೆರೆಯಲಿಲ್ಲ. ಅಪ್ಪನ ಪ್ರಶ್ನೆಗೆ ಉತ್ತರ ಕೊಡಲಿಲ್ಲ. ತೇಜಪುಂಜವಾದ ಗಂಭೀರವಾದ ಮುಖದ ಮೇಲೊಂದು ಮುಗುಳುನಗೆ ಸುಳಿಯಿತು ಅಷ್ಟೇ!… Read more…

  • ಕಳಕೊಂಡವನು

    ಸುಮಾರು ಒಂದು ಗಂಟೆಯ ಪಯಣದಿಂದ ಸುಸ್ತಾದ ಅವನು ಬಸ್ಸಿನಿಂದ ಇಳಿದು ರಸ್ತೆಯ ಬದಿಗೆ ಬಂದು ನಿಂತು ತನ್ನ ಕೈಗಡಿಯಾರ ದೃಷ್ಟಿಸಿದ. ಮಧ್ಯಾಹ್ನ ಒಂದು ಗಂಟೆ. ಒಮ್ಮೆ ಮುಖ… Read more…

  • ದೊಡ್ಡವರು

    ಬೀದಿ ಬದಿಯ ಪುಸ್ತಕದ ಅಂಗಡಿ ಪ್ರಭಾಕರನನ್ನು ಅರಿಯದವರು ಬಹಳ ವಿರಳ. ತಳ್ಳೋ ಗಾಡಿಯ ಮೇಲೆ ದೊಡ್ಡ ಟ್ರಂಕನ್ನಿಟ್ಟು ನಿಧಾನವಾಗಿ ತಳ್ಳಿಕೊಂಡು ಬರುವ ಪ್ರಭಾಕರ ಕೆನರಾ ಬ್ಯಾಂಕಿನ ರಸ್ತೆಬದಿ… Read more…

  • ಎರಡು ರೆಕ್ಕೆಗಳು

    ಪಶ್ಚಿಮದಲ್ಲಿ ಸೂರ್ಯ ಮುಳುಗುತ್ತಿದ್ದ ಆಕಾರದ ತುಂಬ ಒಂಥರಾ ಕೆಂಬಣ್ಣ ತುಂಬಿಕೊಂಡಿತ್ತು. ಆ ಸಂಜೆಯಲ್ಲಿ ತಣ್ಣನೆಯ ಗಾಳಿ ಆ ಭಾವನೆ ಬಂಡೆಯ ಕೋಟೆಯ ಮೇಲೆ ಹಾಯ್ದು ಹೋಯಿತು. ಎತ್ತರದ… Read more…

cheap jordans|wholesale air max|wholesale jordans|wholesale jewelry|wholesale jerseys