ರಮಿಸಿ ಕರೆದಾಗ ಆಯ್ತೊಮ್ಮೆ ಸಮಾಗಮ
ನಲುಗಿದ ಹೂವಿನ ಕೆಳಗೇ ಉಸಿರಾಡಿತು ಕಾಯಿ
ಉಪ್ಪು ಹುಳಿ ಖಾರ ಸಿಹಿಕಹಿ ಒಗರುಗಳಿಂದ
ದಡ್ಡುಗಟ್ಟಿದ ನಾಲಗೆ ಉಲಿಯಿತು ಕಾವು ನೋವು
ಹೇಗೆ ಹೇಗೋ ಋಣಧನಗಳ ಲೆಕ್ಕ ಸರಿತೂಗುತ್ತಿತ್ತು
ಸುತ್ತಿದ ಕಾಮದ ಸೀಮೆಯ ಹಾಲಾಹಲದೊಡಲಿಂದ
ಮೇಲೇರಿ ಬಂದ ಚಂದ್ರಾಮ
ಕಾಯಿ ಹಣ್ಣಾಗಿ-ಹಾಲು ಕೆನೆಯಾಯ್ತು
ಒಳಗೆ ಬೆಂದು ಹೊರಗೆ ತೋಯ್ತು
ಕರೆಯು ಪರಿಪರಿಯಾಗಿ ಕೋಡಿವರಿಯಿತು
ಹಣ್ಣು ಬೀಜಕ್ಕೆ ದಾರಿಯಾಯಿತು
*****
Related Post
ಸಣ್ಣ ಕತೆ
-
ತಿಮ್ಮರಯಪ್ಪನ ಕಥೆ
ರಂಗಣ್ಣ ಎರಡು ತಿಂಗಳು ಕಾಲ ರಜ ತೆಗೆದು ಕೊಂಡು ಬೆಂಗಳೂರಿಗೆ ಬಂದು ವಾಸಮಾಡುತ್ತಿದ್ದನು. ಶಿವಮೊಗ್ಗದಲ್ಲಿ ಪಿತ್ತವೇರಿಸುವ ತುಂಗಾಪಾನವನ್ನು ನಿತ್ಯವೂ ಮಾಡಿ, ಕಿವಿ ಮೂಗು ಬಾಯಿಗಳಿಗೆಲ್ಲ ಮುಸುರುವ ಸೊಳ್ಳೆಗಳ… Read more…
-
ಅಹಮ್ ಬ್ರಹ್ಮಾಸ್ಮಿ
ಬಹುಶಃ ಮೊದಲ ಬಾರಿ ನಾನು ಅವನನ್ನು ನೋಡುತ್ತಿರಬೇಕು. ಅವನು ಅಕಸ್ಮತ್ತಾಗಿ ನನ್ನ ಕಣ್ಣಿಗೆ ಬಿದ್ದನೋ, ಅಲ್ಲಾ ಅವನೇ ನಾನು ಕಾಣುವ ಹಾಗೆ ಎದುರಿಗೆ ಬಂದನೋ ಎಂಬ ವಿಷಯದಲ್ಲಿ… Read more…
-
ಹನುಮಂತನ ಕಥೆ
ಹರಿಹರಯದ ಆ ಸಂದರ ಹುಡುಗಿ ದಿನವೂ ಅರಳೀ ಕಟ್ಟೆಗೆ ಬಂದು ಯಾರಿಗಾಗಿ ಕಾಯುತ್ತಾಳೆ? ಎಂದು ಯೋಚಿಸುವಾಗ ಅವಳ ಪ್ರಿಯತಮ ಬಂದು ಕುಳಿತ. ಅವನು ಅವಳ ತೊಡೆ ಏರಿದ… Read more…
-
ಮರೀಚಿಕೆ
ನಂಬಿದರೆ ನಂಬಿ ಬಿಟ್ಟರೆ ಬಿಡಿ ನನ್ನೆಲ್ಲಾ ಭಾವನೆಗಳೂ ತಬ್ಬಲಿಗಳಾಗಿಬಿಟ್ಟಿವೆ. ಪ್ರೇಮವೆಂದರೆ ತ್ಯಾಗವೆ, ಭೋಗವೆ, ಭ್ರಮೆಯೆ ಆಥವಾ ಕೇವಲ ದಾಸ್ಯವೆ? ಮನಸ್ಸಿಗಾದ ಗ್ಯಾಂಗ್ರಿನ್ ಕಾಯಿಲೆಯೆ? ಇಂತಹ ದುರಾರೋಚನೆಗಳು ಹುಟ್ಟಲು… Read more…
-
ಮಿಂಚು
"ಸಾವಿತ್ರಿ, ಇದು ಏನು? ನನ್ನಾಣೆಯಾಗಿದೆ. ಹೀಗೆ ಮಾಡಬೇಡ! ಇದು ಒಳ್ಳೆಯದಲ್ಲ. ಬಿಡು, ಬಿಡು...! ನಾಲ್ಕು ಜನ ನೋಡಿದರೆ ಏನು ಅಂದಾರು?" ಅನ್ನಲಿ ಏನೇ ಅನ್ನಲಿ ನಾನು ಯಾವ… Read more…