Home / ಬಾಲ ಚಿಲುಮೆ / ಕಥೆ / ಸಂತಸದ ಚಿಲುಮೆ

ಸಂತಸದ ಚಿಲುಮೆ

ಚಿತ್ರ: ಅಲೆಜಾಂಡ್ರ ಜಿಮೆನೆಸ್
ಚಿತ್ರ: ಅಲೆಜಾಂಡ್ರ ಜಿಮೆನೆಸ್

ಅಕ್ಬರ ಮಹಾರಾಜ ಒಮ್ಮೆ ಆಸ್ಥಾನದಲ್ಲಿ ‘ಸಂತಸದ ಚಿಲುಮೆ ಎಲ್ಲಿದೆ’ ಎಂದು ಅಲ್ಲಿದ್ದವರನ್ನೆಲ್ಲಾ ಕೇಳಿದ.

ಆಸ್ಥಾನದ ಪಂಡಿತ ಮಹಾಶಯನೊಬ್ಬ ಎದ್ದುನಿಂತು – ಮಹಾರಾಜ ಸಂತಸದ ಚಿಲುಮೆ ನಿಜಕ್ಕೂ ಎಲ್ಲಿದೆ ಎಂಬುದನ್ನು ನಾ ತಿಳಿದುಕೊಂಡಿಲ್ಲ. ಹೀಗಾಗಿ ನಾ ಹೇಗೆ ಹೇಳಲಿ?’ ಎಂದು ತನ್ನ ಅಳಲನ್ನು ಮಹಾರಾಜನ ಮುಂದೆ ತೋಡಿಕೊಂಡ.

‘ಸಂತಸವೆನ್ನುವುದು ನಮಗಾಗಿ ನಮ್ಮಮ ಸಂಸಾರಕ್ಕಾಗಿ ಮೂರು ಹೊತ್ತಿನ ತುತ್ತಿನ ಚೀಲ ತುಂಬಿಸಿಕೊಳ್ಳಲು ನಿತ್ಯ ಕಷ್ಟಪಡುವುದರಲ್ಲಿ ಬಲು ಸಂತಸವಿದೆ. ಏನು ಇಲ್ಲದವರು ಗಳಿಸಿ ಉಳಿಸಿ ಮನೆ, ಮಠ, ಹೊಲ ಗದ್ದೆ ತೋಟ ಕಾರು ಜೀಪು ಮಾಡಿದಾಲೇ ಸಂತಸದ ಚಿಲುಮೆ ಚಿಮ್ಮುವುದು…..’ ಎಂದು ಅನುಭವಿಯೊಬ್ಬ ವಿವರಿಸುತ್ತಾ ನಿಂತ.

ಮೊದಲಸಾಲಿನಲ್ಲಿ ಕುಳಿತಿದ್ದ ವೇದಾಂತಿಯೊಬ್ಬ ಎದ್ದುನಿಂತು ಮಹಾರಾಜಾಧಿರಾಜ……. ದಿನ ನಿತ್ಯ ಮೂರು ಹೊತ್ತು ನದಿಯಲ್ಲಿ ಮುಳುಗಿ ನಾನಾ ಪುಷ್ಪಗಳ ಹರಿದು ತಂದು ನಾರು ಮಡಿಯಲಿ ದೇವನಿಗೆ ಪೂಜಿಸಿ ಭಜಿಸಿ ನೇಮ ನಿಯಮ ಪಾಲಿಸಿ ವ್ರತ ಯಜ್ಞಯಾಗಾದಿಗಳ ಮಾಡಿ ಪ್ರಸಾದ, ತೀರ್ಥ, ನೈವೇದ್ಯ ಸ್ವೀಕರಿಸಿದರೆ ಸಂತಸದ ಹೊನಲು ಹರಿಯುವುದು……’ ಎಂದು ವರ್ಣಿಸುತ್ತಾ ನಿಂತ.

ಕವಿಯೊಬ್ಬ ಎದ್ದು ನಿಂತು ‘ಕಾವ್ಯ, ನಾಟಕ, ಕಾದಂಬರಿ, ಹಾಸ್ಯ ಪ್ರಸಂಗಗಳ ರಸವತ್ತಾಗಿ ರಚಿಸಿ, ರಸಿಕ ಶಿಖಾ ಮಣಿಗಳಿಂದ ಹೊಗಳಿಸಿಕೊಳ್ಳುವುದರಿಂದ ಸಂತಸದ ಚಿಲುಮೆ ಚಿಮ್ಮುವುದು! ಚೈತನ್ಯದ ಚಿಲುಮೆ ಹೊಮ್ಮುವುದು! ಸ್ಫೂರ್ತಿಯ ಚಿಲುಮೆ ರಂಗೇರುವುದು…..’ಎಂದು ಕಾವ್ಯಮಯವಾಗಿ ಸಂತಸದಿ ಹೇಳಿದ.

ಅಷ್ಟರಲ್ಲಿ ಅಲ್ಲೇ ಇದ್ದ ಬೀರಬಲ್ಲ ಮಹಾಶಯ ಎದ್ದು ನಿಂತು ಮಹಾರಾಜರಿಗೆ, ಸಭೆಗೆ ವಂದಿಸಿ, ’ಮಹಾಪ್ರಭು…..ಸಂತಸದ ಚಿಲುಮೆ ಹರಸಿ ನಾವ್ಯಾರು ಅಡವಿಗೊಡಬೇಕಾಗಿಲ್ಲ, ಖಾವಿ ಧರಿಸಬೇಕಾಗಿಲ್ಲ. ಗುಡಿಗುಂಡಾರ ಸುತ್ತಿ ಪುಣ್ಯನದಿ ತೀರ್ಥಗಳಲ್ಲಿ ಮುಳಗಬೇಕಾಗಿಲ್ಲ. ಮೂಗು ಹಿಡಿದು ಕಣ್ಣುಮುಚ್ಚಿ ತಪಸ್ಸು ಮಾಡಬೇಕಾಗಿಲ್ಲ! ಪ್ರತಿನಿತ್ಯ ಮನಸ್ಸಿನಲ್ಲಿ ಚಿಂತನಾ ಮಂಥನ ನಡೆಸಬೇಕು. ಸಂತಸದ ಚಿಲುಮೆ ನನ್ನಲ್ಲಿಯೇ ಇದೆ ಎಂಬ ಆತ್ಮವಿಶ್ವಾಸ ಬೇಕು. ತಾಳ್ಮೆ, ಆತ್ಮ ತೃಪ್ತಿ, ದಮೆ, ಕರುಣೆ, ಶಾಂತಿ, ದಾನಧರ್ಮ-ಕ್ಷಮೆ ಇರಬೇಕು! ನಿಸ್ವಾರ್ಥ ಜೆವನದಲ್ಲಿ ತ್ಯಾಗದಲ್ಲಿ ಸಂತಸದ ಚಿಲುಮೆ ಇದೆ. ಕಾಣಬೇಕು… ಅದು ದಿನೇ ದಿನೇ ನಮಗೆ ಗೊತ್ತಾಗುತ್ತಾ ಹೋಗುತ್ತದೆ…’ ಎಂದು ವಿವರಿಸುತ್ತಾ ನಿಂತ.

ಅಲ್ಲಿದ್ದವರೇನು….. ಸ್ವತಃ ಅಕ್ಬರ್ ಮಹಾರಾಜ ಬೀರಬಲ್ಲನ ವಿವರಣೆಗೆ ಸಂತಸ ಉಕ್ಕಿ ಬಂತು. ಎಲ್ಲರೂ ಜೋರಾಗಿ ಕರತಾಡನ ಮಾಡಿ ಸಂತಸ ವ್ಯಕ್ತಪಡಿಸಿದರು.

ಅಲ್ಲಿಗೆ ಅಂದಿನ ಸಭೆಯು ಮುಕ್ತಾಯಗೊಂಡಿತು.
*****

Tagged:

Leave a Reply

Your email address will not be published. Required fields are marked *

ಬೆಳಗಿನ ಜಾವ ಆಗಲೇ ಐದು ಬಡಿದಿತ್ತು. ಎಲ್ಲೋ ಮಾಮರದಲ್ಲಿ ಕೋಗಿಲೆಯೂ ಕುಹೂ ಕುಹೂ ಎಂದು ಹಾಡುತಿತ್ತು. ಅಲ್ಲಲ್ಲಿ ಗಿಡಮರಗಳಲ್ಲಿ ಹಕ್ಕಿಗಳ ಚಿಲಿಚಿಲಿ ಕಲರವದೊಂದಿಗೆ ಸುಪ್ರಭಾತ ಹಾಡುತ್ತಿದ್ದವು. ಪ್ರಶಾಂತವಾದ ವಾತಾವರಣದಲ್ಲಿ ಸ್ವಾಮೀಜಿ, ಬೆಳಗಿನ ಪೂಜೆ ಮುಗಿಸಿ, ನಿತ್ಯದಂತೆ ಮಠದ ಪಾಕಶಾ...

“ಇನ್ನು ಗೇಣಿ ಕೊಡಬೇಕಾಗಿಲ್ಲವಂತೆ. ಒಕ್ಕಲಿಗೇ ಭೂಮಿಯಂತೆ.” ಊರಲ್ಲಿ ದಟ್ಟವಾಗಿ ಹಬ್ಬಿದ್ದ ಆ ವಾರ್‍ತೆ ಕುಂಞಂಬುನಲ್ಲಿ ಅಸಾಧ್ಯ ಕುತೂಹಲ ಕೆರಳಿಸಿತ್ತು. ಗೇಣಿ ಕೊಡದಿದ್ದರೆ ಧನಿಗಳು ಬಿಟ್ಟಾರೆಯೆ? ಗೇಣಿ ಕೊಡದೆ ಬೇರೆಯವರ ಭೂಮಿಯನ್ನು ಇಟ್ಟುಕೊಳ್ಳುವುದು ತಪ್ಪಲ್ಲವೆ? ಕು...

“ಮಮ್ಮಿ ! ಮಮ್ಮಿ ! ಬೇಗ ಬಾ” “ಅಡಿಗೆ ಮಾಡುತ್ತಾ ಇದ್ದೇನೆ, ಯಾಕೆ ಕಿರಿಚಿಕೊಳ್ಳುತ್ತಾ ಇದ್ದಿಯಾ ರೋಜಿ? ಬರುತ್ತೀನಿ ತಾಳು” ಎಂದಳು ಕೆಲಸದಲ್ಲಿ ನಿರತ ತಾಯಿ. “ಮಮ್ಮಿ! ಒಂದು ನಿಮಿಷ ಬಂದು ನೋಡು, ಕಾಗೆ ಪುಟ್ಟ ಅಳಿಲನ್ನು ಕುಕ್ಕಿ ನೋವು ಮಾಡುತ್ತಾ ...

ಈ ದಿನ ಹಿತ್ತಲ ತುಂಬ ಪಾರಿಜಾತ ಹೂವು ಸುರಿದಿದೆ. ಮತ್ತೆ ಸಂಪಿಗೆ ಮರದಿಂದ ಹೂವರಳಿ ಘಮ್ಮೆಂದು ವಾಸನೆ ಹರಿದಿದೆ. ಎರಡು ಪರಿಮಳ ಸೇರಿ ಎದೆಯಾಳಕೆ ಇಳಿದು ಒಳಗೊಳಗೆ ಒಂಥರಾ ಭಾವ ವಿಸ್ಮಯ ಅರಳಿದೆ. ಅಮ್ಮ ಒಲೆಯ ಮೇಲೆ ಕಡುಬು ಬೇಯಿಸುತ್ತಿದ್ದಾಳೆ. ಕೊಟ್ಟೆ ಕಡುಬಿನ ವಾಸನೆ ಇಡೀ ಮನೆಯನ್ನು ಪಸ...

ಆ ದಿನ, ಡಾಕ್ಟರ್ ಪಾರ್ವತಿಯವರಿಗೆ ಆತಂಕದ ದಿನ! ಒಂದು ವಿಧದ ಚಂಡಮಾರುತವನ್ನೆಬ್ಬಿಸಿದಂತಹ ಘಟನೆಯಿಂದ ನಗರದ ಅನೇಕರೂ, ಗಣ್ಯರೂ ಸೇರಿದಂತೆ, ಆ ಕೋರ್‍ಟಿನಲ್ಲಿ ಜನಸಂದಣಿ ಕಿಕ್ಕಿರಿದಿತ್ತು. ಆ ನಗರದ ಪ್ರಖ್ಯಾತ ವೈದ್ಯ ಡಾಕ್ಟರ್ ಪಾರ್ವತಿದೇವಿಯವರು ಸಾಕ್ಷಿ ನೀಡಬೇಕಾಗಿದ್ದರಿಂದ ಕೋರ್ಟಿನ ...

“ಭಟ್ಟರೇ, ನಿಮಗೆ ಹೇಳಲೊ? ಇಘ್ನೇಶ್ವರರಾಯರು ಅಂದರೆ ನಮ್ಮ ಜಾತಿಗೇ ಭೂಷಣ. ಅವರು ವಕೀಲಿ ಮಾಡಲು ಸುರು ಮಾಡಿದಂದಿನಿಂದ ಬೇರೆ ಜಾತಿಯವರ ಸೊಕ್ಕು ಮುರಿದಿದೆ. ಈಗ ಶೆಟ್ಟಿ ಶಾನಬೋಗರೆಲ್ಲ ಅವರಿಗೆ ರಾಯರೇ ಎಂದು ಸಲಾಮು ಮಾಡುವವರೇ! ನಿಮಗೆ ಹೇಳಲೊ? ಅದು ಒಬ್ಬೊಬ್ಬರ ಜನ್ಮಕುಂಡಲಿ ಇದ್ದ...