Home / ಕವನ / ಕವಿತೆ / ಅಂತರಾಳ

ಅಂತರಾಳ

ಹೋಯಿತೆಲ್ಲಿ ನಿಸರ್ಗದ ದಟ್ಟ ಹಸಿರು
ಹೋದರೆಲ್ಲಿ ಪ್ರೀತಿಯೊಡಲಿನ ಅಜ್ಜ ಅಜ್ಜಿ
ಹೋದವೆಲ್ಲಿ ಸಂಭ್ರಮದ ಹಬ್ಬ ಹರಿದಿನಗಳು
ಹೋದವೆಲ್ಲಿ ಡೊಳ್ಳಾರಗಿ ಕೌದಿ ಹೊರಸು
ಸಂಬಂಧಗಳು ವಿಶ್ವಾಸಗಳು…

ಬಿಕ್ಕದರೇನೀಗ, –
ನಸುಕಿನ ಕೋಳಿಕೂಗಿಗೆ
ನಡುರಾತ್ರಿ ನಾಯಿಗಳ ಬೊಗಳುವಿಕೆಗೆ
ಪಟ ಪಟನೆ ಕಿಡಿ ಎಬ್ಬಿಸುತ
ಕಾಯಿಸಿಕೊಳ್ಳುವ ಹಿತ್ತಲಂಗಳದ
ಇಬ್ಬನಿ ನಸುಕಿನ ಚಳಿಗೆ,

ಬಿಕ್ಕಿದರೇನೀಗ, –
ಕೈ ತಟ್ಟೆಯಲಿಟ್ಟ ಬಿಸಿರೊಟ್ಟಿ
ಹೂವುಗಳುದುರದ ಹೀರೆಪಲ್ಲೆಗೆ
ಗಡಿಗೆಯ ತಾಜಾಬೆಣ್ಣೆಮಜ್ಜಿಗೆಗೆ
ತುಂಬಿದ ಬಾವಿ ಜೋಡೆತ್ತಿನ ಗಾಡಿ
ಸಾಲುಮರಗಳ ನೆರಳು, ಗಾಳಿ ಬೀಸುವ ಗರಿಗಳಿಗೆ,

ಬಿಕ್ಕಿದರೇನೀಗ, –
ತೊನೆದಾಡುವ ತುಂಬು ಹೊಲಕ್ಕೆ
ಹರಕೆಹೊತ್ತು ಹೊರಡುವ ಜಾತ್ರೆಗಳಿಗೆ
ನಲಿದಾಡುವ ಕಾಡು ಬೆಟ್ಟ ಹೊಳೆಹಳ್ಳಗಳಿಗೆ
ಕಂಬಳಿಯಲಿ ಕಾಲು ತೂರಿಸಿ ಕೇಳುವ
ದೆವ್ವಭೂತಗಳ ಕಥೆಗಳಿಗೆ,…

ಬಿಕ್ಕಿದರೇನೀಗ, –
ಅಜ್ಜಿಯ ತೋಳತೆಕ್ಕೆ ನಿದ್ರೆಗೆ
ಅಜ್ಜನ ಗರ್ಜನೆಯ ಮಾತುಗಳಿಗೆ
ದನಕರುಗಳ ಕೊರಳು ಗಂಟೆ ಗೆಜ್ಜೆಗಳಿಗೆ
ಮಣ್ಣುಗೋಡೆಯ ವಾಸನೆ ಬೆಳಕಿಂಡಿಗಳಿಗೆ
ಮಾದಲಿ ಹುರಕ್ಕಿಹೋಳಿಗೆ ಗಾರಿಗೆ
ಕರಿಗಡಬುಗಳಿಗೆ…..

ಮಹಲು ಹೊಕ್ಕು ಆರಾಮ ಖುರ್ಚಿಗೆ ಬೆನ್ನುಹಚ್ಚಿ
ಟಿ. ವಿ., ಚಾನೆಲ್‌ಗಳಲಿ ಕಣ್ಣುತೂರಿಸುತ
ಪಿಜ್ಜಾ, ಕೊಕ್‌ಗಳ ರುಚಿನೋಡುತ
ಏರ್ ಕಂಡೀಶನ್ ಕಾರಿನೊಳಗೆ ಅಡ್ಡಾಡುತ್ತಿದ್ದರೂ
ಒಮ್ಮೊಮ್ಮೆ ಒಳಗೊಳಗೆ ಬಿಕ್ಕುತ್ತಿರುತ್ತೇನೆ.
*****

Tagged:

Leave a Reply

Your email address will not be published. Required fields are marked *

“ಭಟ್ಟರೇ, ನಿಮಗೆ ಹೇಳಲೊ? ಇಘ್ನೇಶ್ವರರಾಯರು ಅಂದರೆ ನಮ್ಮ ಜಾತಿಗೇ ಭೂಷಣ. ಅವರು ವಕೀಲಿ ಮಾಡಲು ಸುರು ಮಾಡಿದಂದಿನಿಂದ ಬೇರೆ ಜಾತಿಯವರ ಸೊಕ್ಕು ಮುರಿದಿದೆ. ಈಗ ಶೆಟ್ಟಿ ಶಾನಬೋಗರೆಲ್ಲ ಅವರಿಗೆ ರಾಯರೇ ಎಂದು ಸಲಾಮು ಮಾಡುವವರೇ! ನಿಮಗೆ ಹೇಳಲೊ? ಅದು ಒಬ್ಬೊಬ್ಬರ ಜನ್ಮಕುಂಡಲಿ ಇದ್ದ...

ಎಲೈ ಓದುಗರೇ! ಕಣ್ಣುಗಳನ್ನು ಅಗಲಿಸಿ ಏಕಚಿತ್ತದಿಂದ ಓದಿ! ನಾನೊಂದು ಕಥೆ ಹೇಳಲಿದ್ದೇನೆ. ರೋಮಾಂಚಕಾರಿ, ಮೈನಡುಗಿಸುವಂತಹ ಕಥೆ! ಒಬ್ಬ ಸಾಹಿತಿಯ ಕಥೆ! ಸಾಹಿತಿ ಆಗೇ ತೀರಬೇಕೆಂದು ಹಂಬಲಿಸುವವನ ಕಥೆ! ಸಾಹಿತ್ಯದಲ್ಲಿ ಎಲ್ಲ ಬಿರುದು ಬಹುಮಾನಗಳನ್ನು, ಪ್ರಶಸ್ತಿ ಪ್ರಶಂಸೆಗಳನ್ನು ಹೇಗೆ ಪಡೆ...

“ಎಷ್ಟು ದಿನ ಹೀಗೇ ತೊಂದರೆ ಪಟ್ಟುಕೊಳ್ಳುತ್ತಿರುವದು ಕೃಷ್ಣ ಮೂರ್ತಿ? ಮಕ್ಕಳನ್ನು ಆರಯ್ಯುವದು, ಅಡಿಗೆ ಮಾಡುವದು- ಇವುಗಳಿಗೆಲ್ಲ ಆಳು ಇಟ್ಟು ಪೂರೈಸೀತೇ? ಸುಮ್ಮನೆ ಇನ್ನೊಂದು ಮದುವೆಯಾಗಿ ಬಿಡಬಾರದೇ?” “ಪ್ರೀತಿ ಇಷ್ಟು ಅಗ್ಗ ಅಲ್ಲ ನೋಡು” “ಪ್ರೀತಿಯ ವಿಷಯವೇನೇ ...

ಕಾಲೇಜಿನ ಲೈಬ್ರೆರಿಯಿಂದ ಹೊರಬಂದ ಅವಳು ಒಮ್ಮೆ ಆಟದ ಮೈದಾನವನ್ನು ದಿಟ್ಟಿಸಿ ನೋಡಿದಳು. ಮೈದಾನ ಖಾಲಿ ಇರುವುದನ್ನು ಖಚಿತ ಮಾಡಿಕೊಂಡ ಅವಳು ವೇಗವಾಗಿ ನಡೆಯುತ್ತಾ ರಾಜ ರಸ್ತೆಗೆ ಬಂದಳು. ಅಲ್ಲಿಂದ ತನ್ನ ಮನೆಯ ವಿರುದ್ಧ ದಿಕ್ಕಿಗೆ ಹೆಜ್ಜೆ ಹಾಕ ತೊಡಗಿದಳು. ತನ್ನ ಶಕ್ತಿಯನ್ನೆಲ್ಲಾ ಪ್ರಯ...

ಅಡಿಕೆ ಭತ್ತಗಳ ವ್ಯಾಪಾರದಿಂದ ಅಶ್ವತ್ಥ ಹೆಬ್ಬಾರರು ನೂರಾರು ಸಾವಿರ ರೂಪಾಯಿ ಗಳಿಸಿದರೆಂದು ದಟ್ಟವಾಗಿ ಸುದ್ದಿ ಹಬ್ಬಿತು. ಇದಕ್ಕೆ ಸಾಕ್ಷಿ ಕೊಡುವಂತೆ ಹೆಬ್ಬಾರರು ಗ್ರಾಮದೇವಸ್ಥಾನದಲ್ಲಿ ಒಂದು ಯಜ್ಞವನ್ನು ಮಾಡಿಸುವೆನೆಂದು ಸಾರಿ, ತಯಾರಿ ಮಾಡಹತ್ತಿದರು. ತಟ್ಟೆಯ ಬಿಡಾರದಲ್ಲಿ ಸಾಲೆ ನ...

ಬ್ಯಾಂಕಿನ ಅರೆತೆರೆದ ಬಾಗಿಲನ್ನು ದೂಡಿ ಒಳಬಂದ ಪ್ರಹ್ಲಾದ, ಕೆಲಸದಲ್ಲಿ ಮಗ್ನಳಾಗಿದ್ದ ಸುಮಾಳ ಬಳಿಗೋಡಿ ಅವಳ ಪರ್‍ಸನ್ನು ತಡಕಾಡಿ ಹಣತೆಗೆದುಕೊಂಡು ಬಂದಷ್ಟೇ ವೇಗದಿಂದ ಹೊರಗೋಡಿದ್ದ. “ಏನು ಮಗರಾಯನ ಗಲಾಟೆ” ಹತ್ತಿರದಲ್ಲಿದ್ದ ದಿನಕರನ ಪ್ರಶ್ನೆಗೆ “ಅವನದ್ದು ಯಾವಾ...