Home / ಕವನ / ಕವಿತೆ / ಅಂತರಾಳ

ಅಂತರಾಳ

ಹೋಯಿತೆಲ್ಲಿ ನಿಸರ್ಗದ ದಟ್ಟ ಹಸಿರು
ಹೋದರೆಲ್ಲಿ ಪ್ರೀತಿಯೊಡಲಿನ ಅಜ್ಜ ಅಜ್ಜಿ
ಹೋದವೆಲ್ಲಿ ಸಂಭ್ರಮದ ಹಬ್ಬ ಹರಿದಿನಗಳು
ಹೋದವೆಲ್ಲಿ ಡೊಳ್ಳಾರಗಿ ಕೌದಿ ಹೊರಸು
ಸಂಬಂಧಗಳು ವಿಶ್ವಾಸಗಳು…

ಬಿಕ್ಕದರೇನೀಗ, –
ನಸುಕಿನ ಕೋಳಿಕೂಗಿಗೆ
ನಡುರಾತ್ರಿ ನಾಯಿಗಳ ಬೊಗಳುವಿಕೆಗೆ
ಪಟ ಪಟನೆ ಕಿಡಿ ಎಬ್ಬಿಸುತ
ಕಾಯಿಸಿಕೊಳ್ಳುವ ಹಿತ್ತಲಂಗಳದ
ಇಬ್ಬನಿ ನಸುಕಿನ ಚಳಿಗೆ,

ಬಿಕ್ಕಿದರೇನೀಗ, –
ಕೈ ತಟ್ಟೆಯಲಿಟ್ಟ ಬಿಸಿರೊಟ್ಟಿ
ಹೂವುಗಳುದುರದ ಹೀರೆಪಲ್ಲೆಗೆ
ಗಡಿಗೆಯ ತಾಜಾಬೆಣ್ಣೆಮಜ್ಜಿಗೆಗೆ
ತುಂಬಿದ ಬಾವಿ ಜೋಡೆತ್ತಿನ ಗಾಡಿ
ಸಾಲುಮರಗಳ ನೆರಳು, ಗಾಳಿ ಬೀಸುವ ಗರಿಗಳಿಗೆ,

ಬಿಕ್ಕಿದರೇನೀಗ, –
ತೊನೆದಾಡುವ ತುಂಬು ಹೊಲಕ್ಕೆ
ಹರಕೆಹೊತ್ತು ಹೊರಡುವ ಜಾತ್ರೆಗಳಿಗೆ
ನಲಿದಾಡುವ ಕಾಡು ಬೆಟ್ಟ ಹೊಳೆಹಳ್ಳಗಳಿಗೆ
ಕಂಬಳಿಯಲಿ ಕಾಲು ತೂರಿಸಿ ಕೇಳುವ
ದೆವ್ವಭೂತಗಳ ಕಥೆಗಳಿಗೆ,…

ಬಿಕ್ಕಿದರೇನೀಗ, –
ಅಜ್ಜಿಯ ತೋಳತೆಕ್ಕೆ ನಿದ್ರೆಗೆ
ಅಜ್ಜನ ಗರ್ಜನೆಯ ಮಾತುಗಳಿಗೆ
ದನಕರುಗಳ ಕೊರಳು ಗಂಟೆ ಗೆಜ್ಜೆಗಳಿಗೆ
ಮಣ್ಣುಗೋಡೆಯ ವಾಸನೆ ಬೆಳಕಿಂಡಿಗಳಿಗೆ
ಮಾದಲಿ ಹುರಕ್ಕಿಹೋಳಿಗೆ ಗಾರಿಗೆ
ಕರಿಗಡಬುಗಳಿಗೆ…..

ಮಹಲು ಹೊಕ್ಕು ಆರಾಮ ಖುರ್ಚಿಗೆ ಬೆನ್ನುಹಚ್ಚಿ
ಟಿ. ವಿ., ಚಾನೆಲ್‌ಗಳಲಿ ಕಣ್ಣುತೂರಿಸುತ
ಪಿಜ್ಜಾ, ಕೊಕ್‌ಗಳ ರುಚಿನೋಡುತ
ಏರ್ ಕಂಡೀಶನ್ ಕಾರಿನೊಳಗೆ ಅಡ್ಡಾಡುತ್ತಿದ್ದರೂ
ಒಮ್ಮೊಮ್ಮೆ ಒಳಗೊಳಗೆ ಬಿಕ್ಕುತ್ತಿರುತ್ತೇನೆ.
*****

Tagged:

Leave a Reply

Your email address will not be published. Required fields are marked *

ನಾಡಿಗೆ ಸ್ವಾತಂತ್ರ ಬಂದಿದೆ. ಎಲ್ಲೆಲ್ಲೂ ಸ್ವೈರಾಚಾರ ಹೆಚ್ಚಿದೆ. ಸ್ವಾತಂತ್ರವೆಂದರೆ ಸ್ವೇಚ್ಛಾಚಾರ ಎನ್ನುವಂತೆ ನಾಡಿನ ಜನ ವರ್ತಿಸುತ್ತಿದೆ; ಬಹುದಿನದ ಸಾಧನೆಯಿಂದ ಪಡೆದ ಸಿದ್ದಿಯನ್ನು ಮಣ್ಣುಗೂಡಿಸುತ್ತಲಿದೆ. ಇದನ್ನು ತಡೆಯಲಿಕ್ಕೆ ಭಾರತದ “ಹಳ್ಳಿ-ಹಳ್ಳಿಗಳಲ್ಲಿಯೂ ಗ್ರಾಮ ಸುರಕ್ಷಕ...

“ವತ್ಸಲಾ……..!” ನಿಟ್ಟುಸುರಿನೊಂದಿಗೆ ಕುಮಾರನು ಆರಾಮ ಕುರ್‍ಚಿಯ ಮೇಲೆ ದೊಪ್ಪನೆ ಬಿದ್ದು ಕೊಂಡನು. ಚಿಕ್ಕಬಾಲಕನೊಬ್ಬನು ಕಿಡಿಕಿಯಲ್ಲಿ ಹಣಿಕಿ ಹಾಕಿ “ಕುಮಾರಣ್ಣ” ಎಂದು ಕೂಗಿದಂತಾಯಿತು. ಎದ್ದು ನೋಡುತ್ತಾನೆ; ಕೆಂಪು ಮಸಿಯಿಂದ ವಿಳಾಸ ಬರೆದ...

“ಭೀಮಾ ಮಾಸ್ತರರನ್ನು ಇಷ್ಟ ಮೋಟರ ಸ್ಟಾಂಡಿನ ತನಕ ಕಳಿಸಿ ಬಾರಪ್ಪಾ.” ಬಾಯಕ್ಕ ನೆರೆಮನೆಯವರ ಆಳಿಗೆ ವಿನಯದಿಂದ ಹೇಳಿ ನನ್ನ ಕಡೆಗೆ ಹೊರಳಿ ಅಂದಳು: “ಬಿಡಿರಿ, ನಿಮ್ಮ ಬ್ಯಾಗ ತಗೊಂಡ ಬರತಾನ ಭೀಮಾ” “ಯಾತಕ್ಕ? ನಾ ಕೈಯೊಳಗ ಸಹಜ ಒಯ್ಯತೇನೆ” ನಾನು ಹೀಗೆ ಹೇಳಿದೆನಾದರೂ ಭೀಮಪ್...

ಸಿಗರೆಟ್‌ನ್ನು ಕೊನೆಯ ಸಲ ಎಳೆದು ಬದಿಗಿದ್ದ ಅಶ್‌ಟ್ರೆಯಲ್ಲಿ ಹಾಕಿದ. ಮೂರು ದಿನಗಳಿಂದ ಹೇಳಲಾಗದಂತಹ ಯಾತನೆ ಅವನನ್ನು ಹಿಂತಿಸುತ್ತಿದೆ. ಇದ್ದಿದ್ದು ಮಿತ್ರನ ಮಾತುಗಳು ಬಂದು ಕಿವಿಗೆ ಅಪ್ಪಳಿಸಿ ಎತ್ತ ನೋಡಿದರೂ ಅವನದೆ ಮುಖ ಕಾಣುತ್ತಿದೆ. “ನಾ ಹೇಳುವದನ್ನು ಅರ್‍ಥಮಾಡಿ ಕೊಳ್ಳು...

ಬೆಳಿಗ್ಗೆಯಿಂದ ಕತ್ತಲೆಯವರೆಗೂ ಬಸ್ ಸ್ಟಾಂಡಿನಲ್ಲಿ ಬಸ್ಸುಗಳಿಗೆ ಹತ್ತಿ ಇಳಿದುಕೊಂಡು ಎಷ್ಟು ಗೋಗರೆದು ಬಿಕ್ಷೆ ಬೇಡಿದರೂ ಆ ಹುಡುಗನಿಗೆ ಮಧ್ಯಾಹ್ನದ ಊಟ ಮಾಡುವಷ್ಟು ಹಣ ಸಂಗ್ರಹವಾಗುತ್ತಿರಲಿಲ್ಲ. ಮಧ್ಯಾಹ್ನ ಬಿಸ್ಕಿಟು ಮತ್ತು ನಲ್ಲಿ ನೀರು ಕುಡಿದು ಹಸಿವು ತಣಿಸಿದರೂ ರಾತ್ರಿಯ ಊಟಕ್ಕ...