ಪರಕೀಯ

ಮರಿಗಿಳಿಯನ್ನು
ಕಾಡು ಬೆಕ್ಕು ಹೆದರಿಸುತ್ತಿದೆ
ಬಳ್ಳಿ ಚಿಗುರಿನ ಸುತ್ತ
ಕತ್ತಿ ಕತ್ತರಿಗಳು ಕುಣಿಯುತ್ತಿವೆ
ಹೂ ಪಾದದ ಕೆಳಗೆ
ಮುಳ್ಳು ಹರವುತ್ತಿವೆ
ಆಶ್ರಮ ಶಾಂತಿಯಲ್ಲರಳಿದ ಕಿವಿಗಳ ಮೇಲೆ
ಕೋಲಾಹಲದಲೆಯಪ್ಪಳಿಸುತ್ತಿವೆ
ಮರಣದಾಚೆ ಇಣುಕಿ ಬಂದವನಿಗೆ
ಉರಿಮಾರಿಯ ಮೆರವಣಿಗೆ ಕುಕ್ಕುತ್ತಿದೆ
ನಿಸರ್ಗಲಾಸ್ಯದೊಡನೆ
ಒಲೆದಾಡಿದ ಇವನ ಮೈಯನ್ನು
ಅಸಂಬದ್ಧ ಪ್ರೇತ ಕುಣಿತ ಕೆಣಕುತ್ತಿವೆ
ದಿವ್ಯಗಾನಕೆ ದನಿಗೂಡಿಸಿದವನಿಗೆ
ಅಸಂಗತ ಕಿರುಚಾಟ ಸವಾಲೆಸೆದಿದೆ
ಸ್ವಚ್ಛಂದ ಲೀಲೆಯವನನ್ನು
ನೂರು ಹಗ್ಗಗಳು ಬಂಧಿಸುತ್ತಿವೆ
ಮೌನದ ಜೇನ ಕುಡಿದವನನ್ನು
ಮಾತಿನ ಕುಡುಕುತನ
ಜಗಳಕ್ಕೆ ಕರೆಯುತ್ತಿದೆ
ಬೇರಿನ ಬಿಳಿಹೂವ
ನೆತ್ತಿಗೇರಿಸಿ ಮೂಸಿದವನನು
ನೋಟ ಕೂಟ ಕಟಿ
ಸೂತ್ರಗಳು ಕೆಳಗೆಳೆಯುತ್ತಿವೆ
ಇವನು ಸ್ವದೇಶದಲ್ಲೇ
ಪರದೇಶಿಯಾಗಿದ್ದಾನೆ
ತನ್ನ ಮನೆಯಲ್ಲೇ
ಪರಕೀಯನಾಗಿದ್ದಾನೆ
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಜಂಗಮ ಮನಸ್ಸಿನ ‘ಸ್ಪಂದನ’ ಶ್ರೀನಿವಾಸು
Next post ಲಿಂಗಮ್ಮನ ವಚನಗಳು – ೯೨

ಸಣ್ಣ ಕತೆ

  • ಬಾಳ ಚಕ್ರ ನಿಲ್ಲಲಿಲ್ಲ

    ತಂದೆಯ ಸಾವು ಕುಟುಂಬವನ್ನೇ ಬೀದಿಪಾಲು ಮಾಡಿತು. ಹೊಸಪೇಟೆಯ ಚಪ್ಪರದ ಹಳ್ಳಿಯಲ್ಲಿ ವಾಸವಾಗಿದ್ದ ಇಮಾಮ್ ಸಾಬ್ ಹಾಗೂ ಝೈನಾಬ್ ದಂಪತಿಗಳಿಗೆ ೬ ಹೆಣ್ಣು ಮಕ್ಕಳು, ಒಂದು ಗಂಡು ಮಗು.… Read more…

  • ಆವರ್ತನೆ

    ಒಬ್ಬ ಸಾಹಿತಿಯನ್ನು ನೋಡುವ ಕುತೂಹಲ ಯಾರಿಗಿಲ್ಲ? ಪಕ್ಕದೂರಿನ ಹೈಸ್ಕೂಲಿನಲ್ಲಿ ಕಾದಂಬರಿಕಾರ ಅ.ರ.ಸು.ರವರ ಕಾರ್ಯಕ್ರಮವಿದೆಯೆಂಬ ಸುದ್ದಿ ಕೇಳಿ ನಾವು ನೋಡಲು ಹೋದೆವು. ಅ.ರ.ಸು.ರವರ ಕೃತಿಗಳನ್ನು ನಾವಾರೂ ಹೆಚ್ಚಾಗಿ ಓದಿರಲಾರೆವು.… Read more…

  • ಇರುವುದೆಲ್ಲವ ಬಿಟ್ಟು

    ನಿಂತ ರೈಲು ಬೋಗಿಯೊಳಗಿಂದ ನನ್ನ ದೃಷ್ಟಿ ಹೊರಗಿನ ನಿಲ್ದಾಣವನ್ನು ವೀಕ್ಷಿಸುತ್ತಿತ್ತೇ ಹೊರತು ನನ್ನ ಮನಸ್ಸು ಮಾತ್ರ ನಾಗಾಲೋಟದಿಂದ ಓಡುತ್ತಿತ್ತು. ಒಂದು ರೀತಿಯಲ್ಲಿ ಆಲೋಚನೆಗಳು ನನ್ನ ಗೆಳೆಯ ಎಂದೇ… Read more…

  • ಹೃದಯದ ತೀರ್ಪು

    ಬೆಳಿಗ್ಗೆ ಏಳು ಗಂಟೆಯ ಹೊತ್ತಿಗೆ ತಿಂಡಿ ಕೂಡ ಮಾಡದೆ ಹೊರ ಹೋಗುತ್ತಿದ್ದ ಯೂಸುಫ್, ಮಧ್ಯಾಹ್ನ ಮಾತ್ರ ಮನೆಯಲ್ಲಿ ಉಣ್ಣುತ್ತಿದ್ದ. ರಾತ್ರಿಯ ಊಟ ಅವನ ತಾಯಿಯ ಮನೆಯಲ್ಲಿ. ತಾಯಿಯ… Read more…

  • ಅಜ್ಜಿ-ಮೊಮ್ಮಗ

    ಅಜ್ಜವಿ-ಮೊಮ್ಮಗ ಇದ್ರು. ಅವ ಅಜ್ಜವಿಕಲ್ ಯೇನೆಂದ? "ತಾನು ಕಾಶಿಗೆ ಹೋಗಬತ್ತೆ. ಮೂರ ರೊಟ್ಟಿ ಸುಟಕೊಡು" ಅಂತ. "ಮಗನೇ, ಕಾಶಿಗೆ ಹೋದವರವರೆ, ಹೋದೋರ ಬಂದೋರಿಲ್ಲ. ನೀ ಕಾಶಿಗೆ ಹೋಗ್ವದೆ… Read more…

cheap jordans|wholesale air max|wholesale jordans|wholesale jewelry|wholesale jerseys