ಹಳೆಗನ್ನಡದ ಆಸೆ

ಹಳೆಗನ್ನಡದ ಆಸೆ ಕರೆಯಿತು ನನ್ನ
ಶತಮಾನಗಳ ಕೆಳಗೆ, ಸೆಳೆಯಿತು ನಾನರಿಯದ
ಪರಂಪರೆಗೆ,

ಭಾಷೆಗೆ, ಭಾಷೆ ಹತ್ತಿರವಾಯಿತು ಎನಿಸಿದ ಬಗೆಗೆ.
ಉದಾಹರಣೆಗೆ: ಆ ಸೂತ ಆ ರಾಣಿಯ ಹಾರ
ಕಿತ್ತುಕೊಂಡ ರೀತಿಯಷ್ಟೆ ಅಲ್ಲ, ಅದರ
ಹರಳುಗಳು ನೆಲದಲ್ಲಿ ಚೆಲ್ಲಿದ ರೀತಿ.  ನೀರೊಳಗೊಬ್ಬ
ಬೆವರಿದ್ದಕ್ಕಲ್ಲ, ಬೆವರನ್ನು ಕಾವ್ಯ ಮರೆಯದ್ದಕ್ಕೆ,
ಕಟ್ಟಿದರಿವರು, ಮುಟ್ಟಿದರು, ಹಿಡಿದೊತ್ತಿ ಮೆಟ್ಟಿದ-
ರೆಂಬ ಅಗ್ಗಳಕ್ಕಲ್ಲ.  ಅಷ್ಟಕ್ಕೆ ಅಷ್ಟು ಉತ್ಸಾಹ-
ಗೊಂಡರೆಂದು.

ಪಂಪನಿಗೊಂದು ಬನವಾಸಿ ದೇಶ.  ನನಗೂ ಒಂದು ಹುಟ್ಟೂರು.
ಸಮಾನಾಂತರಗಳನ್ನು ಕಂಡುಕೊಳ್ಳುವ ತವಕ
ಚರಿತ್ರೆಯ ಕಡೆಗೆ ನಾನು, ನನ್ನ ಕಡೆಗೆ ಚರಿತ್ರೆ
ಕೈಚಾಚುವುದರಲ್ಲಿ.  ಮತ್ತೆ ಕಟ್ಟಿದ ಮಾಲೆಗಳು
ಮುಡಿವವರಿಗಾಗಿ, ಮುದ್ರಿಸಿದ ಪುಸ್ತಕಗಳು ಓದುಗರಿಗಾಗಿ
ಹುಡುಕುತ್ತಿರುವುದೇನೂ ಇಂದಿನದಲ್ಲ.

ಹೀಗೆ ಹುಡುಕುವುದು ಮನಸ್ಸಾಕ್ಷಿ
ಚರಿಪಾರಣ್ಯದ ಪಕ್ಷಿ.
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಬಿ.ಡಿ.ಎ ಬುಲ್ಡೋಜರ್‍
Next post ಮದುವೆ ಬಸ್ಸು; ಕಾಫಿ ಹುಡುಗ

ಸಣ್ಣ ಕತೆ

  • ಕಲಾವಿದ

    "ನನಗದು ಬೇಕಿಲ್ಲ. ಬೇಕಿಲ್ಲ! ಸುಮ್ಮನೆ ಯಾಕೆ ಗೋಳು ಹುಯ್ಯುತ್ತೀಯಮ್ಮಾ?" "ಹೀಗೇ ಎಷ್ಟು ದಿನ ಮನೆಯಲ್ಲೇ ಕುಳಿತಿರುವೆ, ಮಗು?" "ಇಷ್ಟು ದಿನವಿರಲಿಲ್ಲವೇನಮ್ಮ-ಇನ್ನು ಮೇಲೆಯೂ ಹಾಗೆಯೇ, ಹೊರಗಿನ ಪ್ರಪಂಚಕ್ಕಿಂತ ನನ್ನ… Read more…

  • ಮೃಗಜಲ

    "People are trying to work towards a good quality of life for tomorrow instead of living for today, for many… Read more…

  • ಕಲ್ಪನಾ

    ಚಿತ್ರ: ಟಾಮ್ ಬಿ ಇದು ಇಪ್ಪತ್ತು ವರ್ಷಗಳ ಹಿಂದಿನ ಕಥೆ! ಮಾತನಾಡುವ ಸಿನಿಮಾ ಪ್ರಪಂಚ ಅದೇ ಆಗ ದಕ್ಷಿಣ ಭಾರತದಲ್ಲಿ ತಲೆಯೆತ್ತಿದ್ದಿತು! ಸಿನಿಮಾದಲ್ಲಿ ಪಾತ್ರವಹಿಸುವ ನಟಿನಟಿಯರನ್ನು ಅಚ್ಚರಿಯ… Read more…

  • ನಿರೀಕ್ಷೆ

    ಆ ಹಣ್ಣು ಮುದುಕ ಎಲ್ಲಿಂದ ಬರುತ್ತಾನೆ, ಎಲ್ಲಿಗೆ ಹೋಗುತ್ತಾನೆ ಎಂದು ಯಾರಿಗೂ ತಿಳಿಯದು. ಆದರೆ ಎಲ್ಲರೂ ಅವನನ್ನು ಕಲ್ಲು ಬೆಂಚಿನ ಮುದುಕ ಎಂದೇ ಕರೆಯುತ್ತಾರೆ. ಪ್ರೈಮರಿ ಶಾಲೆಯ… Read more…

  • ಸಂಶೋಧನೆ

    ವೇಣುಗೋಪಾಲನ ಜೀವನ ಬೆಳಗು ರಾತ್ರಿಗಳಂತೆ ಒಂದೇ ಮಾಂತ್ರಿಕತೆಗೆ ಹೊಂದಿಕೊಂಡಿತ್ತು. ಬೆಳಿಗ್ಗೆ ಏಳುವುದು ನೈಸರ್ಗಿಕ ವಿಧಿಗಳಿಂದ ಮುಕ್ತನಾಗಿ ಕಾಫಿ ಕುಡಿಯುತ್ತಾ ಅಂದಿನ ದಿನಪತ್ರಿಕೆ ಓದುವುದು, ಓದಿದ್ದರ ಬಗ್ಗೆ ಚಿಂತಿಸುತ್ತಾ… Read more…

cheap jordans|wholesale air max|wholesale jordans|wholesale jewelry|wholesale jerseys