ಕ್ವ್ರಾಕ್

ಆ ಅಪರಾಹ್ನ ಥಟ್ಟನೆ ಬಂದು ನನ್ನ ಮನಸ್ಸನ್ನು
ಆಕ್ರಮಿಸಿದ ಶಬ್ದ: ಕ್ರ್‍ವಾಕ್.

ದಣಿದಿದ್ದೆ.  ಮಧ್ಯಾಹ್ನ ಊಟ ತಡವಾಗಿ ಮುಗಿಸಿ
ಬೆತ್ತದ ಈಸಿಚೇರಿನಲ್ಲಿ ಅಡ್ಡಾಗಿದ್ದೆ.

ನಿದ್ದೆಯೇನೂ ಹಿಡಿದಿರಲಿಲ್ಲ.  ಮಂಪರಿನಲ್ಲೂ ಇರಲಿಲ್ಲ.
ಮನಸ್ಸಿನಲ್ಲೆ ಮೆಸ್ಸಿನ ಲೆಕ್ಕ ಕೂಡಿಸುತ್ತಿದ್ದೆ ಅಷ್ಟೆ.

ಆಗ ಹೊಕ್ಕ ಶಬ್ದ ಅದು.  ಹೇಗೆಂದು ತಿಳಿಯದು.
ಮರೆಯಲು ಪ್ರಯತ್ನಿಸಿದಷ್ಟೂ ಆವರಿಸತೊಡಗಿತು.

ಯಾವ ಭಾಷೆಗೆ ಸೇರಿದ್ದೊ ನನಗೆ ಗೊತ್ತಿರಲಿಲ್ಲ.
ಜನ ಮಾತಾಡುವಾಗ ಗುಟ್ಟಾಗಿ ಕೇಳಿದೆ.

ತಿಳಿದವರನ್ನು ವಿಚಾರಿಸಿದೆ.  ಹಲವು ಪುಸ್ತಕಗಳನ್ನು ನೋಡಿದೆ
ಏನೂ ಉಪಯೋಗವಾಗಲಿಲ್ಲ.  ಎಂದ ಮೇಲೆ

ಇಂಥ ಶಬ್ದ ಸುಳ್ಳೆಂದುಕೊಂಡೆ.  ಆದರೆ ಕ್ರ್‍ವಾಕ್ ಮಾತ್ರ ನಿಜವಾಗುತ್ತಿದೆ.
ಕಡಲು ಕಾಗೆ ಹಾಗೆ ಮತ್ತೆ ಮತ್ತೆ ಎರಗುತ್ತಿದೆ.

ಕೆಲವೊಮ್ಮೆ ನನಗೇ ತಿಳಿಯದಂತೆ ನನ್ನ ಭಾಷೆಯನ್ನು ಅದು
ಪ್ರವೇಶಿಸಿದಂತೆ ತೋರುತ್ತದೆ.  ಯಾಕೆಂದರೆ

ಮಾತಿನ ಮಧ್ಯೆ ಕೆಲವರು ಕೇಳುವುದನ್ನು ಬಿಟ್ಟು ನನ್ನ
ಮುಖವನ್ನೆ ನೋಡುವುದನ್ನು ಕಂಡಿದ್ದೇನೆ.

ಇದು ಭಯಂಕರ.  ಹೀಗೆ ಆರಿಸಲ್ಪಡುವುದಕ್ಕೆ
ನಾನಾದರೂ ಏನು ಮಾಡಿದ್ದೇನೆ?
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಸೂರ್ಯನೂ ಅಷ್ಟೆ
Next post ಕಾಷ್ಠ

ಸಣ್ಣ ಕತೆ

  • ಮರೀಚಿಕೆ

    ನಂಬಿದರೆ ನಂಬಿ ಬಿಟ್ಟರೆ ಬಿಡಿ ನನ್ನೆಲ್ಲಾ ಭಾವನೆಗಳೂ ತಬ್ಬಲಿಗಳಾಗಿಬಿಟ್ಟಿವೆ. ಪ್ರೇಮವೆಂದರೆ ತ್ಯಾಗವೆ, ಭೋಗವೆ, ಭ್ರಮೆಯೆ ಆಥವಾ ಕೇವಲ ದಾಸ್ಯವೆ? ಮನಸ್ಸಿಗಾದ ಗ್ಯಾಂಗ್ರಿನ್ ಕಾಯಿಲೆಯೆ? ಇಂತಹ ದುರಾರೋಚನೆಗಳು ಹುಟ್ಟಲು… Read more…

  • ಗೃಹವ್ಯವಸ್ಥೆ

    ಬೆಳಗು ಮುಂಜಾನೆ ಎಂಟು ಗಂಟೆಗೆ ಹೊಗೆಬಂಡಿಯು XX ಸ್ಟೇಶನಕ್ಕೆ ಬಂದು ನಿಂತಿತು. ಸಂತ್ರಾಧಾರವಾಗಿ ಮಳೆ ಹೊಡೆಯುತ್ತಿರುವದರಿಂದ ಪ್ರಯಾಣಸ್ಥರು ಬೇಸತ್ತು ಗಾಡಿಯಿಂದ ಯಾವಾಗ ಇಳಿಯುವೆವೋ ಎಂದೆನ್ನುತ್ತಿದ್ದರು. ನಿರ್ಮಲಾಬಾಯಿಯು ಅವಳ… Read more…

  • ಗದ್ದೆ

    ಅದೊಂದು ಬೆಟ್ಟದ ಊರು. ಪುಟ್ಟ ಪುಟ್ಟ ಗುಡ್ಡಕ್ಕೆ ತಾಗಿಕೊಂಡು ಸಂದಿಯಲ್ಲಿ ಗೊಂದಿಯಲ್ಲಿ ಎದ್ದ ಗುಡಿಸಲುಗಳು ಅರ್ಥಾತ್ ಈ ಜೀವನ ಕಳೆಯೋ ಬಗೆಯಲಿ ಕಟ್ಟಿಕೊಂಡ ಪುಟ್ಟ ಮನೆಗಳು ಹೊತ್ತು… Read more…

  • ಕಲ್ಪನಾ

    ಚಿತ್ರ: ಟಾಮ್ ಬಿ ಇದು ಇಪ್ಪತ್ತು ವರ್ಷಗಳ ಹಿಂದಿನ ಕಥೆ! ಮಾತನಾಡುವ ಸಿನಿಮಾ ಪ್ರಪಂಚ ಅದೇ ಆಗ ದಕ್ಷಿಣ ಭಾರತದಲ್ಲಿ ತಲೆಯೆತ್ತಿದ್ದಿತು! ಸಿನಿಮಾದಲ್ಲಿ ಪಾತ್ರವಹಿಸುವ ನಟಿನಟಿಯರನ್ನು ಅಚ್ಚರಿಯ… Read more…

  • ಕರಿಗಾಲಿನ ಗಿರಿರಾಯರು

    ಪ್ರಜಾಪೀಡಕನಾದ ಮೈಸೂರಿನ ಟೀಪೂ ಸುಲ್ತಾನನನ್ನು ಶ್ರೀರಂಗ ಪಟ್ಟಣದ ಯುದ್ಧದಲ್ಲಿ ಕೊಂದು ಅವನ ರಾಜ್ಯವನ್ನು ಇಂಗ್ಲಿಶ್ ಸರಕಾರ ದವರು ತಮ್ಮ ವಶಕ್ಕೆ ತೆಗೆದುಕೊಂಡ ಕಾಲಕ್ಕೆ, ಉತ್ತರಕರ್ನಾಟಕದ ನಿವಾಸಿಗಳಾದ ಅನೇಕ… Read more…