ಕ್ವ್ರಾಕ್

ಆ ಅಪರಾಹ್ನ ಥಟ್ಟನೆ ಬಂದು ನನ್ನ ಮನಸ್ಸನ್ನು
ಆಕ್ರಮಿಸಿದ ಶಬ್ದ: ಕ್ರ್‍ವಾಕ್.

ದಣಿದಿದ್ದೆ.  ಮಧ್ಯಾಹ್ನ ಊಟ ತಡವಾಗಿ ಮುಗಿಸಿ
ಬೆತ್ತದ ಈಸಿಚೇರಿನಲ್ಲಿ ಅಡ್ಡಾಗಿದ್ದೆ.

ನಿದ್ದೆಯೇನೂ ಹಿಡಿದಿರಲಿಲ್ಲ.  ಮಂಪರಿನಲ್ಲೂ ಇರಲಿಲ್ಲ.
ಮನಸ್ಸಿನಲ್ಲೆ ಮೆಸ್ಸಿನ ಲೆಕ್ಕ ಕೂಡಿಸುತ್ತಿದ್ದೆ ಅಷ್ಟೆ.

ಆಗ ಹೊಕ್ಕ ಶಬ್ದ ಅದು.  ಹೇಗೆಂದು ತಿಳಿಯದು.
ಮರೆಯಲು ಪ್ರಯತ್ನಿಸಿದಷ್ಟೂ ಆವರಿಸತೊಡಗಿತು.

ಯಾವ ಭಾಷೆಗೆ ಸೇರಿದ್ದೊ ನನಗೆ ಗೊತ್ತಿರಲಿಲ್ಲ.
ಜನ ಮಾತಾಡುವಾಗ ಗುಟ್ಟಾಗಿ ಕೇಳಿದೆ.

ತಿಳಿದವರನ್ನು ವಿಚಾರಿಸಿದೆ.  ಹಲವು ಪುಸ್ತಕಗಳನ್ನು ನೋಡಿದೆ
ಏನೂ ಉಪಯೋಗವಾಗಲಿಲ್ಲ.  ಎಂದ ಮೇಲೆ

ಇಂಥ ಶಬ್ದ ಸುಳ್ಳೆಂದುಕೊಂಡೆ.  ಆದರೆ ಕ್ರ್‍ವಾಕ್ ಮಾತ್ರ ನಿಜವಾಗುತ್ತಿದೆ.
ಕಡಲು ಕಾಗೆ ಹಾಗೆ ಮತ್ತೆ ಮತ್ತೆ ಎರಗುತ್ತಿದೆ.

ಕೆಲವೊಮ್ಮೆ ನನಗೇ ತಿಳಿಯದಂತೆ ನನ್ನ ಭಾಷೆಯನ್ನು ಅದು
ಪ್ರವೇಶಿಸಿದಂತೆ ತೋರುತ್ತದೆ.  ಯಾಕೆಂದರೆ

ಮಾತಿನ ಮಧ್ಯೆ ಕೆಲವರು ಕೇಳುವುದನ್ನು ಬಿಟ್ಟು ನನ್ನ
ಮುಖವನ್ನೆ ನೋಡುವುದನ್ನು ಕಂಡಿದ್ದೇನೆ.

ಇದು ಭಯಂಕರ.  ಹೀಗೆ ಆರಿಸಲ್ಪಡುವುದಕ್ಕೆ
ನಾನಾದರೂ ಏನು ಮಾಡಿದ್ದೇನೆ?
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಸೂರ್ಯನೂ ಅಷ್ಟೆ
Next post ಕಾಷ್ಠ

ಸಣ್ಣ ಕತೆ

  • ಅನಾವರಣ

    "ಹಲೋ-ಸ್ವೀಟಿ-ಗುಡ್ ಮಾರ್‍ನಿಂಗ್-" ಡಾಕ್ಟರ್ ವಿಜಯಾ ಪ್ರೊಫೆಸರ್‍ಗೆ ವಿಶ್ ಮಾಡಿದಳು. ಆತ್ಮವಿಶ್ವಾಸದ, ಧೈರ್‍ಯ-ಆಸೆ ಭರವಸೆ ಹುಟ್ಟಿಸುವ ಪುಟ್ಟ ತೀಕ್ಷ್ಣವಾದ ಕಣ್ಣುಗಳ ಸ್ವಲ್ಪವೇ ಸ್ಥೂಲಕಾಯದ ಎತ್ತರದ ನಿಲುವಿನ ಮಧ್ಯ ವಯಸ್ಸು… Read more…

  • ಮರೀಚಿಕೆ

    ನಂಬಿದರೆ ನಂಬಿ ಬಿಟ್ಟರೆ ಬಿಡಿ ನನ್ನೆಲ್ಲಾ ಭಾವನೆಗಳೂ ತಬ್ಬಲಿಗಳಾಗಿಬಿಟ್ಟಿವೆ. ಪ್ರೇಮವೆಂದರೆ ತ್ಯಾಗವೆ, ಭೋಗವೆ, ಭ್ರಮೆಯೆ ಆಥವಾ ಕೇವಲ ದಾಸ್ಯವೆ? ಮನಸ್ಸಿಗಾದ ಗ್ಯಾಂಗ್ರಿನ್ ಕಾಯಿಲೆಯೆ? ಇಂತಹ ದುರಾರೋಚನೆಗಳು ಹುಟ್ಟಲು… Read more…

  • ಜೋತಿಷ್ಯ

    ತಮಿಳು ಮೂಲ: ಕೊನಷ್ಟೈ "ನೀವು ಏನು ಬೇಕಾದರೂ ಹೇಳಿ, ನನಗೆ ಜ್ಯೋತಿಷ್ಯದಲ್ಲಿ ನಂಬಿಕೆ ತಪ್ಪುವುದಿಲ್ಲ. ಅದರಲ್ಲಿಯೂ ರಾಮಲಿಂಗ ಜೋಯಿಸರಲ್ಲಿ ಪೂರ್ಣ ನಂಬಿಕೆ"ಎಂದಳು ಕಮಲಾ. ಸಮಯ, ಸಂಧ್ಯಾ ಕಾಲ.… Read more…

  • ವಾಮನ ಮಾಸ್ತರರ ಏಳು ಬೀಳು

    "ಏಳು!" ಅಂದರು ವಾಮನ ಮಾಸ್ತರರು. ರಾಜಪ್ಪ ಏಳಲಿಲ್ಲ. ಎಂದಿನಂತೆ ಕಿಟಿಕಿಯ ಹೊರಗೆ ಹೆದ್ದಾರಿಯಲ್ಲಿ ಹೋಗುತ್ತಿದ್ದ ವಾಹನಗಳನ್ನೂ ದಾರಿಹೋಕರನ್ನೂ ನೋಡುತ್ತ, ಡೆಸ್ಕಿನ ಮೇಲೆ ಬಲಗೈಯ ಸೊಂಟು ಊರಿ, ಕೈಯಮೇಲೆ… Read more…

  • ರಾಮಿ

    ‘ಸಲಾಮ್ರಿ’ ರೈಲಿನ ಹೊತ್ತಾಗಿದೆ. ವೆಂಕಟೇಶನು ಒಂದೇಸವನೆ ತನ್ನ ಕೈಯಲ್ಲಿಯ ಗಡಿಯಾರವನ್ನು ನೋಡುತ್ತಿದ್ದಾನೆ. ‘ಸಲಾಮ್ರೀಽ ಏಕ ಪೈಸಾ.’ ಆಗ ಮತ್ತೆ ಒದರಿದಳು. ಟಾಂಗಾದ ತುದಿ ಹಿಡಿದು ಕೊಂಡು ಓಡ… Read more…