ಘಟ್ಟದ ಕೆಳಗೆ

ಸುರಿಯುತ್ತಿರುವ ಮಂಜಿನೊಳಗಿಂದಲೇ ಮುಂದರಿಯಬೇಕು
ಮುಂಜಾವದ ಬಸ್ಸು. ಘಟ್ಟಗಳ ಬದಿಯ ಟಾರು ರೋಡಿನ ಮೇಲೆ
ತಿರುವುಗಳಲ್ಲಿ ಮರೆಸಿಕೊಂಡು, ಅಲ್ಲಲ್ಲಿ ಕಾಣಿಸಿಕೊಂಡು
ಇಳಿದರೂ ಇಳಿದ ಆಳ ಗೊತ್ತಾಗಬೇಕಾದರೆ ಹಿಂತಿರುಗಿ
ನೋಡಬೇಕು ಹಿಂದೆ ಬಿಟ್ಟ ಶಿಖರಗಳನ್ನು.

ಕಾಡುಮರಗಳ ಸಂದಿಯಿಂದ ಆಗಾಗ ಬೀಳುವ ಬಿಸಿಲಿಗೆ
ಕಿಟಕಿ ಬದಿ ಕುಳಿತ ಹರೆಯದ ಹುಡುಗಿಯ ಕೂದಲು ಗೊತ್ತಿಲ್ಲದೆ
ಕೆಂಬಣ್ಣವಾಗುತ್ತದೆ.  ಮಡಿಕೇರಿಯ ಪೇಟೆ ಬಿಡುವಾಗ
ಬರೇ ರೇಖಾಚಿತ್ರವಾಗಿದ್ದ ಆ ಮುಖದಲ್ಲಿ ನಾವು ದಾರಿ
ಸಾಗಿದಂತೆ ಚೂಪಾದ ಮೂಗು, ತೆರೆದ ತುಟಿಗಳು, ಕಣ್ಣುಗಳು
ಸ್ಪಷ್ಟವಾಗಿ ಮೂಡುತ್ತವೆ.  ಮತ್ತೆ ಎಲ್ಲಿ ಘಟ್ಟ ಕೊನೆಯಾಯಿತು,
ಎಲ್ಲಿ ಕರಾವಳಿ ಮೊದಲಾಯಿತು-ಆ ಎತ್ತರದಿಂದ
ಈ ತೀರ ಹೇಗೆ ತಲಪಿದೆವು ಇದೊಂದೂ
ಗೊತ್ತಾಗುವುದಿಲ್ಲ.
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ನಿನ್ನ ಆಕಾಶದಲ್ಲಿ
Next post ಸಿಕ್ರೇಟ್ ಏಜೆಂಟ್ ೧ ೧ ೧

ಸಣ್ಣ ಕತೆ

  • ಲೋಕೋಪಕಾರ!

    ಸಾಥಿ ಶಿವರಾವ ಅವರಿಗೆ ಬಹು ದೊಡ್ಡ ಚಿಂತೆ! ಅವರು ಅನೇಕ ಪ್ರಶ್ನೆಗಳನ್ನು ಬಹು-ಸರಳವಾಗಿ ಬಿಡಿಸುತ್ತಿದ್ದರು. ಪರೀಕ್ಷೆಯಲ್ಲಿ ಅನೇಕ ಪ್ರಶ್ನೆಗಳಿಗೆ ಉತ್ತರ ಬರೆದಿದ್ದಾರು. ಆದರೆ ಎಂತಹ ದೊಡ್ಡ ಪ್ರಶ್ನೆ… Read more…

  • ಧನ್ವಂತರಿ

    ಡಾ|| ಕೃಷ್ಣ ಪ್ರಸಾದ್ ಮೂಲತಃ ದಕ್ಷಿಣ ಕನ್ನಡ ಜಿಲ್ಲೆಯವರು. ಅವರು ಯಾದಗಿರಿ ಜಿಲ್ಲೆ ಸುರಪುರ ತಾಲ್ಲೂಕಿನ ಕೆಂಭಾವಿಯಲ್ಲಿ ಬಂದು ನೆಲೆಸಿರುವುದೂ ಒಂದು ಆಕಸ್ಮಿಕವೇ. ಒಂದು ದಿನ ತಮ್ಮ… Read more…

  • ಗೋಪಿ

    ವೆಂಕಪ್ಪನ ಜೊತೆಗೆ ಒಂದು ಆಕಳು ಇದ್ದೇ ಇದೆ. ಅವನ ಮನೆಯ ಮುಂದೆ ಯಾವಾಗಲೂ ಅದು ಜೋಲುಮೋರೆ ಹಾಕಿಕೊಂಡು ನಿಂತೇ ನಿಂತಿರುತ್ತದೆ. ದಾರಿಯಲ್ಲಿ ಹೋಗುತ್ತಿದ್ದವರನ್ನು ಮಿಕಿ ಮಿಕಿ ಕಣ್ಣು… Read more…

  • ಕನಸುಗಳಿಗೆ ದಡಗಳಿರುದಿಲ್ಲ

    ಬೆಳಗ್ಗಿನ ಸ್ನಾನ ಮುಗಿಸಿದ ವೃಂದಾ ತನ್ನ ರೂಮಿಗೆ ಬಂದು ಬಾಗಿಲುಹಾಕಿಕೊಂಡು ಕನ್ನಡಿಯಲ್ಲಿ ತನ್ನ ದೇಹ ಸಿರಿಯನ್ನೊಮ್ಮೆ ನೋಡಿಕೊಂಡಳು. ಯಾಕೋ ಅವಳ ಮೈ - ಮನ ಒಮ್ಮೆ ಪುಲಕಿತವಾಯಿತು.… Read more…

  • ಜೋತಿಷ್ಯ

    ತಮಿಳು ಮೂಲ: ಕೊನಷ್ಟೈ "ನೀವು ಏನು ಬೇಕಾದರೂ ಹೇಳಿ, ನನಗೆ ಜ್ಯೋತಿಷ್ಯದಲ್ಲಿ ನಂಬಿಕೆ ತಪ್ಪುವುದಿಲ್ಲ. ಅದರಲ್ಲಿಯೂ ರಾಮಲಿಂಗ ಜೋಯಿಸರಲ್ಲಿ ಪೂರ್ಣ ನಂಬಿಕೆ"ಎಂದಳು ಕಮಲಾ. ಸಮಯ, ಸಂಧ್ಯಾ ಕಾಲ.… Read more…

cheap jordans|wholesale air max|wholesale jordans|wholesale jewelry|wholesale jerseys