ನಾವು

ಒಂದೊಂದು ಮನೆಯೊಳಗೂ ಒಂದೊಂದು ಭರಣಿ. ಭರಣಿಯೊಳಗೆ
ಪುರಾತನದ ದೈವಗಳು.  ಯಾರೂ ತೆರೆಯರು.  ಸಂಪುಟದಿಂದ
ಹೊರ ಬರುವ ದೇವರುಗಳು ಕಲ್ಲಿನವು.  ಹಲವು ಕಾಲದ
ನೀರಿನಿಂದ ಸವೆದವು.  ಮನೆಹಿಂದೆ ಒಂದೊಂದು ಮರದ ಮೇಲೂ

ಒಂದೊಂದು ಪ್ರೇತಗಳು ಸದಾಕಾಲ ಫಲ ಬಿಟ್ಟ ಹಾಗೆ.
ಸೊಂಟದೆತ್ತರ ಮುಳಿಹುಲ್ಲು ಬೆಳೆದ ಗುಡ್ಡಗಳಲ್ಲಿ ಬೆಳಗಿನ ಜಾಮ
ದಾರಿತಪ್ಪಿಸುವ ಯಕ್ಷಿಗಳು.  ಕಾನತ್ತೂರ ಕಾಡಿನಲ್ಲಿ ರಾತ್ರೋರಾತ್ರಿ
ಕಾಣಿಸುವುವು ಕೊಳ್ಳಿಗಳ ಬೆಳಕು.  ಅಕಸ್ಮಾತ್ ಕೇಳಿಸುವ

ವಿಕಾರವಾದ ಕೂಗುಗಳಿಗೆ ಯಾರೂ ಹೆದರುವುದಿಲ್ಲ.  ಕಾರಣ
ನಾವು ಎಲ್ಲರೊಂದಿಗೂ ಸ್ನೇಹದಲ್ಲೆ ಇದ್ದೇವೆ.  ಆಗಿಂದಾಗ್ಗೆ
ಕೊಟ್ಟಿದ್ದೇವೆ ತೆಂಗಿನಕಾಯಿ ಅಥವ ಕೋಳಿ.  ನಾನೂರು ಜನಸಂಖ್ಯೆಯ
ಗ್ರಾಮದಲ್ಲಿ ನಾವು ನಿಜಕ್ಕೂ ಎಂಟುನೂರು ಜನರು.
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಲಿಂಗಮ್ಮನ ವಚನಗಳು – ೪೧
Next post ಪುಟ್ಟ ಕನ್ನಡಿ

ಸಣ್ಣ ಕತೆ

  • ಪ್ರಕೃತಿಬಲ

    ಮಕರ ಸಂಕ್ರಮಣದ ಮಹೋತ್ಸವದ ದಿವಸವದು, ಸೂರ್ಯನಾರಾಯಣನು ಉತ್ತರಾಯಣನಾಗಿ ಸೃಷ್ಟಿಶೋಭೆಯೆಂಬ ಮಹಾಪ್ರದರ್ಶನ ಸಮಾರಂಭವನ್ನು ಜಗತ್ತಿಗೆ ತೋರಿಸುವನಾದನು. ಈ ಅದ್ವಿತೀಯವಾದ ಪ್ರದರ್ಶನವನ್ನು ನೋಡಲಪೇಕ್ಷಿಸುವವರು ಪರಮ ರಮಣೀಯವಾದ ಬೆಂಗಳೂರು ಪಟ್ಟಣಕ್ಕೆ ಬಂದು… Read more…

  • ಕೇರೀಜಂ…

    ಮಂಜೇಲ್ಮುಂಜೇಲಿ ಯೆದ್ಬೇಗ್ನೇ ಕೇರ್ಮುಂದ್ಗಡೆ ಸಿವಪ್ಪ ಚೂರಿ, ಕತ್ತಿ, ಕುಡ್ಗೋಲು, ಯಿಳ್ಗೆಮಣೆ, ಕೊಡ್ಲಿನ... ಮಸ್ಗೆಲ್ಗೆ ಆಕಿ, ಗಸ್ಗಾಸಾ... ನುಣ್ಗೆ ತ್ವಟ್ವಟ್ಟೇ... ನೀರ್ಬಟ್ಗಾಂತಾ, ಜ್ವಲ್ಸುರ್ಗಿಗ್ಯಾಂತಾ, ಅವ್ಡುಗಚ್ಗೊಂಡೂ ಮಸೆಯತೊಡ್ಗಿದ್ವನ... ಕಟ್ದಿ ತುರ್ಬು,… Read more…

  • ಬೂಬೂನ ಬಾಳು

    ನಮ್ಮೂರು ಚಿಕ್ಕ ಹಳ್ಳಿ. ಹಳ್ಳಿಯೆಂದ ಕೂಡಲೆ, ಅದಕ್ಕೆ ಬರಬೇಕಾದ ಎಲ್ಲ ವಿಶೇಷಣಗಳೂ ಬರಬೇಕಲ್ಲವೇ ? ಸುತ್ತಲೂ ಹಸುರಾಗಿ ಒಪ್ಪುವ ಹೊಲಗಳು, ನಾಲ್ಕೂ ಕಡೆಗೆ ಸಾಗಿ ಹೋಗುವ ದಾರಿಗಳು,… Read more…

  • ಕರಾಚಿ ಕಾರಣೋರು

    ಮಳೆಗಾಲ ಆರಂಭವಾಯಿತೆಂದರೆ ಕುಂಞಿಕಣ್ಣ ಕುರುಪ್ಪನ ಏಣೆಲು ಗದ್ದೆಗೆ ನೇಜಿ ಕೆಲಸಕ್ಕೆ ಹೋಗಲು ಕಪಿಲಳ್ಳಿಯ ಹೆಂಗಸರು, ಗಂಡಸರು ತುದಿಗಾಲಲ್ಲಿ ಕಾಯುತ್ತಿರುತ್ತಾರೆ. ವರ್ಷವಿಡೀ ವಿಪ್ರರ ಮತ್ತು ವಿಪ್ರಾತಿವಿಪ್ರರ ಆಡಿಕೆ ತೋಟಗಳಲ್ಲಿ… Read more…

  • ಕಳ್ಳನ ಹೃದಯಸ್ಪಂದನ

    ಅದು ಅಪರಾತ್ರಿ ೨ ಘಂಟೆ ಸಮಯ. ಎಲ್ಲರೂ ಗಾಢ ನಿದ್ರೆಯಲ್ಲಿದ್ದರು. ಊರಿನಿಂದ ಸ್ವಲ್ಪ ದೂರವಾಗಿದ್ದ ಕಲ್ಯಾಣ ನಗರದ ಬಡಾವಣೆ, ಅಷ್ಟಾಗಿ ಹತ್ತಿರ ಹತ್ತಿರವಲ್ಲದ ಮನೆಗಳು, ಒಂದು ವರ್ಷದ… Read more…