ನಾವು

ಒಂದೊಂದು ಮನೆಯೊಳಗೂ ಒಂದೊಂದು ಭರಣಿ. ಭರಣಿಯೊಳಗೆ
ಪುರಾತನದ ದೈವಗಳು.  ಯಾರೂ ತೆರೆಯರು.  ಸಂಪುಟದಿಂದ
ಹೊರ ಬರುವ ದೇವರುಗಳು ಕಲ್ಲಿನವು.  ಹಲವು ಕಾಲದ
ನೀರಿನಿಂದ ಸವೆದವು.  ಮನೆಹಿಂದೆ ಒಂದೊಂದು ಮರದ ಮೇಲೂ

ಒಂದೊಂದು ಪ್ರೇತಗಳು ಸದಾಕಾಲ ಫಲ ಬಿಟ್ಟ ಹಾಗೆ.
ಸೊಂಟದೆತ್ತರ ಮುಳಿಹುಲ್ಲು ಬೆಳೆದ ಗುಡ್ಡಗಳಲ್ಲಿ ಬೆಳಗಿನ ಜಾಮ
ದಾರಿತಪ್ಪಿಸುವ ಯಕ್ಷಿಗಳು.  ಕಾನತ್ತೂರ ಕಾಡಿನಲ್ಲಿ ರಾತ್ರೋರಾತ್ರಿ
ಕಾಣಿಸುವುವು ಕೊಳ್ಳಿಗಳ ಬೆಳಕು.  ಅಕಸ್ಮಾತ್ ಕೇಳಿಸುವ

ವಿಕಾರವಾದ ಕೂಗುಗಳಿಗೆ ಯಾರೂ ಹೆದರುವುದಿಲ್ಲ.  ಕಾರಣ
ನಾವು ಎಲ್ಲರೊಂದಿಗೂ ಸ್ನೇಹದಲ್ಲೆ ಇದ್ದೇವೆ.  ಆಗಿಂದಾಗ್ಗೆ
ಕೊಟ್ಟಿದ್ದೇವೆ ತೆಂಗಿನಕಾಯಿ ಅಥವ ಕೋಳಿ.  ನಾನೂರು ಜನಸಂಖ್ಯೆಯ
ಗ್ರಾಮದಲ್ಲಿ ನಾವು ನಿಜಕ್ಕೂ ಎಂಟುನೂರು ಜನರು.
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಲಿಂಗಮ್ಮನ ವಚನಗಳು – ೪೧
Next post ಪುಟ್ಟ ಕನ್ನಡಿ

ಸಣ್ಣ ಕತೆ

  • ಬಲಿ

    ಅವಳು ಭಾಗಶಃ ಚಟ್ಟೆಯಾದ ಕಪ್ಪು ಬಣ್ಣಕ್ಕೆ ತಿರುಗಿದ ಅಲ್ಯೂಮೀನಿಯಂ ತಟ್ಟೆಯೊಳಗೆ ಸ್ವಲ್ಪ ಹಾಲು ಸುರಿದು ಅದಕ್ಕೆ ಸ್ವಲ್ಪ ನೀರನ್ನು ಬೆರೆಸಿ, ಒಲೆಯ ಮೇಲಿಟ್ಟು ಮುಚ್ಚಳ ಮುಚ್ಚಿದಳು. ಒಲೆಯ… Read more…

  • ಆಪ್ತಮಿತ್ರ

    ಧಾರಾಕಾರವಾಗಿ ಮಳೆ ಸುರಿಯುತ್ತಿತ್ತು. ದೊಡ್ಡದೊಡ್ಡ ಮರಗಳು ಭೋರ್ ಎಂದು ಬೀಸುವ ಗಾಳಿಯಲ್ಲಿ ತೂಗಾಡುತ್ತಿದ್ದವು. ಇಂಗ್ಲೆಂಡಿನ ಆ ಚಳಿ ಮಳೆಯಲ್ಲಿ ಎರಡು ಆಪ್ತಮಿತ್ರ ಜೀವಗಳು ಒಂದನ್ನು ಅನುಸರಿಸಿ ಇನ್ನೊಂದು… Read more…

  • ಮೈಥಿಲೀ

    "ಹಾಗಿದ್ದರೆ, ಪಾಪವೆಂದರೇನು ಗುರುಗಳೇ?" ಕಣ್ಣು ಮುಚ್ಚಿ ಧ್ಯಾನಾಸಕ್ತರಾದ ಯೋಗೀಶ್ವರ ವಿದ್ಯಾರಣ್ಯರು ಕಣ್ತೆರೆಯಲಿಲ್ಲ. ಅಪ್ಪನ ಪ್ರಶ್ನೆಗೆ ಉತ್ತರ ಕೊಡಲಿಲ್ಲ. ತೇಜಪುಂಜವಾದ ಗಂಭೀರವಾದ ಮುಖದ ಮೇಲೊಂದು ಮುಗುಳುನಗೆ ಸುಳಿಯಿತು ಅಷ್ಟೇ!… Read more…

  • ತನ್ನೊಳಗಣ ಕಿಚ್ಚು

    ಶಕೀಲಾ ಇನ್ನೂ ಮನೆಗೆ ಬಂದಿಲ್ಲ ಮೈಮೇಲೆ ಮುಳ್ಳುಗಳು ಎದ್ದಂಗಾಗದೆ. ಅಸಲು ಜೀವಂತ ಅದಾಳೋ? ಉಳಿದಾಳೆ ಜಿಂದಾ ಅಂಬೋದಾದ್ರೆ ಎಲ್ಲಿ? ಕತ್ಲೆ ಕವ್ಕತಾ ಅದೆ. ಈಗಷ್ಟೇ ಒಂದು ಗಂಟೆ… Read more…

  • ದುರಾಶಾ ದುರ್ವಿಪಾಕ

    "ಒಳ್ಳೇದು, ಅವನನ್ನು ಒಳಗೆ ಬರಹೇಳು" ಎಂದು ಪ್ರೇಮಚಂದನು- ಘನವಾದ ವ್ಯಾಪಾರಸ್ಥನು- ಆಢ್ಯತೆಯಿಂದ, ತಾನು ಆಡುವ ಒಂದೊಂದು ಶಬ್ದವನ್ನು ತೂಕಮಾಡಿ ಚಲ್ಲುವಂತೆ ಸಾವಕಾಶವಾಗಿ ನುಡಿದನು. ಬಾಗಿಲಲ್ಲಿ ನಿಂತಿದ್ದ ವೃದ್ಧ… Read more…

cheap jordans|wholesale air max|wholesale jordans|wholesale jewelry|wholesale jerseys