ಪಾದ ಪೂಜೆಯಾದುದೇನಿದು ಪ್ರಭುವರನ ಕಾಣದೆ

ಪಾದ ಪೂಜೆಯಾದುದೇನಿದು
ಪ್ರಭುವರನ ಕಾಣದೆ ||ಪ||

ಮೇಧಿನಿಯೊಳು ಸಂಶಿಯ ಜನ
ವಿನೋದದಿಂದು ಮಾಡಿದಂಥಾ ||ಅ. ಪ.||

ಧರಿಗೆ ಸಂಶಿ ಮರೆವ ಮೋಜಿನ ಪರಿ
ಬಾರೆ ಪ್ಯಾಟಿ ಮಳಗಿ ಸಾಲ್ಗಳೆರದು ಬಾಜಿನ
ನೆರೆ ಶುಭದಿ ಅದರೊಳಗಿರುವರೈ ಅನೇಕ-
ತರ ಜನ ಸರಿಗಾಣೆ ನಾ
ಪಿರಿದು ಕಾಂಬುದುದೀಗ ಭಾಗ್ಯ
ಸಿರಿಗೆ ಸಿಲ್ಕಿ ಶಿವನ ಚರಣ
ಮರೆತು ಮಾಯೆಯೊಳಿರಲು ಪುರಕೆ
ಪರಮಗುರು ನಿರಾಲ ಬಾರದೆ ||೧||

ಭೂಮಿಯೊಳು ನಿಸ್ಸೀಮಪ್ರೌಢರು ಈ
ಗ್ರಾಮದೊಳು ಧಾಮ ಶಾನುಭೋಗ ಗೌಡರು ಬಹು
ನಾಮವಿಡಿದು ಪಣಿ ಜನರು ಸು-
ಪ್ರೇಮ ರೈತರು ಸಮಸ್ತರು
ಕಾಮಿತಾರ್ಥ ಫಲವ ಬೇಡಿ
ನೇಮ ಹಿಡಿದು ನಿಜಕೆ ನಿಲುಕುತೆ
ಎಮಗೆ ವಿಚಿತ್ರ ಗಣಸಮೂಹ ನೆರಪಿ ಸ್ವಾಮಿ ಇಲ್ಲದೆ ||೨||

ಜಗದೊಳಗಿದು ಮಿಗಿಲುವಾಗಿರೆ
ಈಗಳಿದು ಇಂದ್ರನಗರ ಪೊಲ್ವಶೋಭನಾಗಿರೆ
ಬಗೆವಡಿದು ಸೌಖ್ಯ ಸೊಗಸಿನಿಂದ
ನಗುವಳಿಂದಕಿ ಹೀಗಿರುತಿರೆ
ಪೊಗಲ್ವನಂತಸ್ಥಲವ ಕಂಡನಂತಾಪುರದ ಒಡಿಯರುಗಳು
ನೆಗಪಿಸಿದ ಪುರಾತ ಶಿವಗೆ
ಅಘಹರನಂ ಸಿಗದ ಬಳಿಕ ||೩||

ಊರ ಹೊರಗೆ ಉತ್ರ ದಿಶೆಯೊಳು ನಿರ್ಮಿಸಿದ ಮೂಲ
ಚಾರುತರದ ಚೌಕಬಾಗಿಲೊಳು ಈರೈದುದ್ವಾರ
ಸಾರುಗಟ್ಟಿದ ಮಂಟಪಗಳೋಳ್ ನಿರ್ಬಯಲಿನಲ್ಲಿ
ಆರು ಮೂರು ಹಾದಿ ಮೀರಿ ವೀರಸಿಂಹಾಸನವನೇರಿ
ಮಾರಹರನ ಮಂತ್ರಜಪಿಸಿ ಮಾಯಾಭಂಗ ಮಾಡೋತನಕಾ ||೪||

ಮಂಡಲಾಗ್ರ ಮಧ್ಯನಾಡಿನೋಳ್ ಮಾಡಿಸಿದಮೋಹ
ಖಂಡಿಗನ್ನ ದಾನ ವಸ್ತ್ರಗಳ್ ಕೊಂಡಿಟ್ಟು ಚೌಕು
ಭಾಂಡ ಜೀನಸನ್ನು ಬಟ್ಟಲೊಳು ಕೊಡುತ್ತಿರಲು ಕೇಳಿ
ಉಂಡು ಉಣ್ಣಲಾರದೆ ಜಂಗಮರ್‍ಹಿಂಡುಗಟ್ಟಿ ತಿರುಗುತಿರ್ದ
ಪುಂಡಶಿಶುನಾಳಧೀಶನ ಕಂಡು ಕೈಮುಗಿಯುವತನಕಾ ||೫||

****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ತೋಟವ ನೋಡಿರಯ್ಯಾ
Next post ಜೀ… ಗಾಂಧೀ

ಸಣ್ಣ ಕತೆ

  • ಆ ರಾಮ!

    ಮೇಲೆ ವಿಶಾಲವಾದ ನೀಲಮಯ ನಭೋಮಂಡಲ. ಲೋಕವನ್ನೆ ಅವಲೋಕಿಸ ಹೊರಟವನಂತೆ ದಿನಮಣಿಯು ದೀಪ್ತಿಯುಳ್ಳವನಾಗಿ ಮೂಡಣದಲ್ಲಿ ನಿಂತಿದ್ದಾನೆ. ಅವನ ಪ್ರಖರ ಕಿರಣಗಳು ನೀರಿನೆಲೆಗಳ ಮೇಲೆ ಕೆಳಗು ಮೇಲಾಗುತ್ತಿವೆ. ಚಿಕ್ಕವರು ದೊಡ್ಡವರು… Read more…

  • ಆವರ್ತನೆ

    ಒಬ್ಬ ಸಾಹಿತಿಯನ್ನು ನೋಡುವ ಕುತೂಹಲ ಯಾರಿಗಿಲ್ಲ? ಪಕ್ಕದೂರಿನ ಹೈಸ್ಕೂಲಿನಲ್ಲಿ ಕಾದಂಬರಿಕಾರ ಅ.ರ.ಸು.ರವರ ಕಾರ್ಯಕ್ರಮವಿದೆಯೆಂಬ ಸುದ್ದಿ ಕೇಳಿ ನಾವು ನೋಡಲು ಹೋದೆವು. ಅ.ರ.ಸು.ರವರ ಕೃತಿಗಳನ್ನು ನಾವಾರೂ ಹೆಚ್ಚಾಗಿ ಓದಿರಲಾರೆವು.… Read more…

  • ಬಾಗಿಲು ತೆರೆದಿತ್ತು

    ಆ ಮನೆಯ ಮುಂದಿನ ಬಾಗಿಲು ಯಾವಾಗಲೂ ಇಕ್ಕಿರುವುದು! ನನ್ನ ಓದುವ ಕೋಣೆಯ ಕಿಡಿಕೆಯೊಳಗಿಂದ ಆ ಮನೆಯ ಬಾಗಿಲು ಕಾಣುವುದು. ನಾನು ಕಿಡಿಕೆಯೊಳಗಿಂದ ಎಷ್ಟೋ ಸಲ ಅತ್ತ ಕಡೆ… Read more…

  • ಒಂದು ಹಿಡಿ ಪ್ರೀತಿ

    ತೆಂಗಿನ ತೋಟದಲ್ಲಿ ಬಾಗಿಕೊಂಡು ಹಣ್ಣಾಗಿ ಉದುರಿದ ಅಡಕೆಗಳನ್ನು ಒಂದೊಂದಾಗಿ ಹೆಕ್ಕಿ, ಸನಿಹದಲ್ಲಿದ್ದ ಪ್ಲಾಸ್ಟಿಕ್ ಚೀಲಕ್ಕೆ ತುಂಬಿಸುತ್ತಿದ್ದಂತೆ ಪಕ್ಕದಲ್ಲಿ ಸರಕ್ಕನೆ ಹರಿದು ಹೋದ ಕೇರೆ ಹಾವಿನಿಂದಾಗಿ ಒಮ್ಮೆ ವಿಚಲಿತರಾದರು… Read more…

  • ಪತ್ರ ಪ್ರೇಮ

    ಅಂಚೆ ಇಲಾಖೆಯ ಅದೊಂದು ಸಮಾರಂಭ. ಇಲಾಖೆಯ ಸಿಬ್ಬಂದಿ ವರ್ಗದ ಕಾರ್ಯದಕ್ಷತೆ ಕುರಿತು ಕೇಂದ್ರ ಕಾರ್ಮಿಕ ಸಚಿವ ಆಸ್ಕರ್‍ ಫರ್ನಾಂಡಿಸ್ ಅಮೆರಿಕಾದಲ್ಲಿ ನಡೆದ ಒಂದು ಸತ್ಯ ಘಟನೆ ಎಂದು… Read more…

cheap jordans|wholesale air max|wholesale jordans|wholesale jewelry|wholesale jerseys