ತಾಗದಿರಲಿ ಮುನಿಯ ಕೋಪ*
ಕಾಡದಿರಲಿ ಶಾಪ
ಕಾಯುತಿರುವ ಪ್ರೇಮಿಯ
ತೋಳಿನಲ್ಲಿ ಬೀಳು
ನಲ್ಲನೆದೆಯ ಕಂಪಿಸುವ
ಮೊಲ್ಲೆಯಾಗಿ ಏಳು
ಕಾsಳಾಗಿ ಹೋsಳಾಗಿ
ಮುಚ್ಚಿ ಬಿಚ್ಚಿ ಆಡು
ಮೇವಾಗಿ ಮೊಗೆಯಾಗಿ
ದಾಹಗಳಿಗೆ ಊಡು
ಪ್ರಿಯನ ಬಯಕೆಯುತ್ಸವಕೆ
ಕಳಶಗಳನು ನೀಡು
ಅವನಾಸೆಯ ಮೆರವಣಿಗೆಗೆ
ಪಲ್ಲಕ್ಕಿಯ ಹೂಡು
ಉಣಿಸಾದರು ಮಾನುಷಗೆ
ಉಣಿಸು ಮಾವು ಜೇನು
ಪ್ರಿಯನ ಕೋಟಿ ಕನಸ ತಣಿಸಿ
ಆಗು ಕಾಮಧೇನು
* ಊರ್ವಶಿ ನಾಟಕದ ಒಂದು ಗೀತೆ
******
ಲಕ್ಷ್ಮೀನಾರಾಯಣ ಭಟ್ಟರು ಕನ್ನಡ ಕಾವ್ಯದ ಜೀವಂತಿಕೆಯನ್ನು ಹೆಚ್ಚಿಸುತ್ತ ಆಧುನಿಕ ಕನ್ನಡ ಕಾವ್ಯವನ್ನು ಬೆಳೆಸುತ್ತ ಬಂದಿರುವ ಪ್ರಮುಖ ಕವಿಗಳಲ್ಲಿ ಒಬ್ಬರು. ಅವರ ಅನುವಾದಗಳು ಕನ್ನಡ ಕಾವ್ಯಕ್ಕೆ ಕೊಟ್ಟ ಬೆಲೆಬಾಳುವ ಉಡುಗೊರೆಗಳು ಮಾತ್ರವಾಗಿರದೆ ಸ್ವಂತಕ್ಕೆ ಪಡೆದ ರಕ್ತದಾನವೂ ಆಗಿದೆ. ಸ್ವಂತ ಪ್ರತಿಭೆ, ಶ್ರೇಷ್ಠಕವಿಗಳ ಆಪ್ತ ಅಧ್ಯಯನ ಎರಡೂ ಅವರನ್ನೂ ಎತ್ತರಕ್ಕೆ ಹತ್ತಿಸಿವೆ. ಅಧ್ಯಯನ, ಚಿಂತನೆ ಇವು ಅವರಲ್ಲಿ ಹಾಸು ಹೊಕ್ಕಾಗಿ ಒಂದನ್ನು ಮತ್ತೊಂದು ಬಲಗೊಳಿಸುತ್ತ ಬಂದಿವೆ.