Home / ಲೇಖನ / ನಗೆ ಹನಿ / ನಗೆಡಂಗುರ – ೧೨೧

ನಗೆಡಂಗುರ – ೧೨೧

ಯಾರೋ ಒಬ್ಬ ಸನ್ಯಾಸಿ ಶಾಮಣ್ಣನ ಮನೆಗೆ ಬಂದು ಶಾಸ್ತ್ರ ಹೇಳುತ್ತಾ, ನಾನು ಹೇಳಿದ ಹಾಗೆ ಮಾಡಿದರೆ ನಿಮ್ಮಲ್ಲಿರುವ ಸಂಪತ್ತು (ಒಡವೆ ಆಸ್ತಿ ಇತ್ಯಾದಿ) ದ್ವಿಗುಣವಾಗುತ್ತದೆ.” ಎಂದ ಶಾಮಣ್ಣ ದಂಪತಿಗಳಿಗೆ ಖುಷಿ ಆಯಿತು ನೀವು ಹೇಳಿದ ಹಾಗೆ ಮಾಡುತ್ತೇವೆ ಹೇಳಿ ಅಂದರು.

ಎರಡು ನಿಂಬೆಹಣ್ಣುಗಳನ್ನು ತನ್ನಿರಿ, ನಿಮ್ಮ ಮನೆ ಒಡವೆಗಳನ್ನೆಲ್ಲಾ ಒಂದು ಗಂಟಿನಲ್ಲಿ ಭದ್ರವಾಗಿ ಕಟ್ಟಿಡಿ, ಒಂದು ನಿಂಬೆಹಣ್ಣು ಕತ್ತರಿಸಿ ಗಂಟಿಗೆ ಕಟ್ಟಿರಿ; ಇನ್ನೊಂದನ್ನು ಮುಖ್ಯ ಬಾಗಿಲಿಗೆ ಕಟ್ಟಿರಿ ಆಮೇಲೆ ಅದರ ವೈಭವ ನೀವೇ ನೋಡುವಿರಿ ಎಂದು ಹೇಳುತ್ತಾ ಭಾರಿ ದಕ್ಷಿಣೆಯನ್ನು ಪಡೆದು ಜಾಗ ಖಾಲಿ ಮಾಡಿದ.

ಕೆಲವು ತಿಂಗಳುಗಳೇ ಕಳೆದವು ಒಡವೆ ಸಂಪತ್ತು ದ್ವಿಗುಣವಾಗಲಿಲ್ಲ.ಸನ್ಯಾಸಿ ಇದ್ದ ಜಾಗವನ್ನು ಪತ್ತೆಮಾಡಿ ಅವನ ಬಳಿ ಹೋಗಿ ಀತಾವು ಹೇಳಿದ್ದು ಸತ್ಯವಾಗಲಿಲ್ಲಀ ಎಂದ. “ಓಹ್ ನೀವು ಗಂಟಿಗೆ ಕಟ್ಟಬೇಕಾದ ನಿಂಬೆಹಣ್ಣು ಬಾಗಿಲಲ್ಲಿ ಕಟ್ಟಿದಿರಿ ಬಾಗಿಲಲ್ಲಿ ಕಟ್ಟಿದ್ದ ಹಣ್ಣು ಗಂಟಿಗೆ ಕಟ್ಟ ಬೇಕಾಗಿತ್ತು ಅದಕ್ಕೆ ಫಲಕಾರಿಯಾಗಲಿಲ್ಲ” ಎಂದ.
***

Tagged:

Leave a Reply

Your email address will not be published. Required fields are marked *

ಹೆರಿಗೆ ನೋವಿನಿಂದ ಸಂಕಟಪಡುತ್ತಿದ್ದ ಹೆಂಡತಿ ಗಂಗಾಳನ್ನು ಆಸ್ಪತ್ರೆಗೆ ಚಿಕ್ಕಣ್ಣ ಕರೆದುಕೊಂಡು ಬಂದಾಗ ಔಟ್ ಪೇಶಂಟ್ ವಿಭಾಗ ಗಿಜಿಗುಟ್ಟುತ್ತಿತ್ತು. ಗುಂಪುಕಟ್ಟಿ ನಿಂತಿದ್ದ ಮಹಿಳೆಯರ ಸಾಲನ್ನು ಛೇಧಿಸಿಕೊಂಡು ವೈದ್ಯರ ಮೇಜಿನ ಬಳಿ ಬಂದು ನಿಂತ ಅವನ ತೋಳುಗಳಲ್ಲಿ ಎರಡೂವರೆ ವರ್ಷದ ಮಗುವ...

ನಾಡಿಗೆ ಸ್ವಾತಂತ್ರ ಬಂದಿದೆ. ಎಲ್ಲೆಲ್ಲೂ ಸ್ವೈರಾಚಾರ ಹೆಚ್ಚಿದೆ. ಸ್ವಾತಂತ್ರವೆಂದರೆ ಸ್ವೇಚ್ಛಾಚಾರ ಎನ್ನುವಂತೆ ನಾಡಿನ ಜನ ವರ್ತಿಸುತ್ತಿದೆ; ಬಹುದಿನದ ಸಾಧನೆಯಿಂದ ಪಡೆದ ಸಿದ್ದಿಯನ್ನು ಮಣ್ಣುಗೂಡಿಸುತ್ತಲಿದೆ. ಇದನ್ನು ತಡೆಯಲಿಕ್ಕೆ ಭಾರತದ “ಹಳ್ಳಿ-ಹಳ್ಳಿಗಳಲ್ಲಿಯೂ ಗ್ರಾಮ ಸುರಕ್ಷಕ...

“ವತ್ಸಲಾ……..!” ನಿಟ್ಟುಸುರಿನೊಂದಿಗೆ ಕುಮಾರನು ಆರಾಮ ಕುರ್‍ಚಿಯ ಮೇಲೆ ದೊಪ್ಪನೆ ಬಿದ್ದು ಕೊಂಡನು. ಚಿಕ್ಕಬಾಲಕನೊಬ್ಬನು ಕಿಡಿಕಿಯಲ್ಲಿ ಹಣಿಕಿ ಹಾಕಿ “ಕುಮಾರಣ್ಣ” ಎಂದು ಕೂಗಿದಂತಾಯಿತು. ಎದ್ದು ನೋಡುತ್ತಾನೆ; ಕೆಂಪು ಮಸಿಯಿಂದ ವಿಳಾಸ ಬರೆದ...

“ಭೀಮಾ ಮಾಸ್ತರರನ್ನು ಇಷ್ಟ ಮೋಟರ ಸ್ಟಾಂಡಿನ ತನಕ ಕಳಿಸಿ ಬಾರಪ್ಪಾ.” ಬಾಯಕ್ಕ ನೆರೆಮನೆಯವರ ಆಳಿಗೆ ವಿನಯದಿಂದ ಹೇಳಿ ನನ್ನ ಕಡೆಗೆ ಹೊರಳಿ ಅಂದಳು: “ಬಿಡಿರಿ, ನಿಮ್ಮ ಬ್ಯಾಗ ತಗೊಂಡ ಬರತಾನ ಭೀಮಾ” “ಯಾತಕ್ಕ? ನಾ ಕೈಯೊಳಗ ಸಹಜ ಒಯ್ಯತೇನೆ” ನಾನು ಹೀಗೆ ಹೇಳಿದೆನಾದರೂ ಭೀಮಪ್...

ಸಿಗರೆಟ್‌ನ್ನು ಕೊನೆಯ ಸಲ ಎಳೆದು ಬದಿಗಿದ್ದ ಅಶ್‌ಟ್ರೆಯಲ್ಲಿ ಹಾಕಿದ. ಮೂರು ದಿನಗಳಿಂದ ಹೇಳಲಾಗದಂತಹ ಯಾತನೆ ಅವನನ್ನು ಹಿಂತಿಸುತ್ತಿದೆ. ಇದ್ದಿದ್ದು ಮಿತ್ರನ ಮಾತುಗಳು ಬಂದು ಕಿವಿಗೆ ಅಪ್ಪಳಿಸಿ ಎತ್ತ ನೋಡಿದರೂ ಅವನದೆ ಮುಖ ಕಾಣುತ್ತಿದೆ. “ನಾ ಹೇಳುವದನ್ನು ಅರ್‍ಥಮಾಡಿ ಕೊಳ್ಳು...