Home / ಲೇಖನ / ನಗೆ ಹನಿ / ನಗೆಡಂಗುರ – ೧೨೧

ನಗೆಡಂಗುರ – ೧೨೧

ಯಾರೋ ಒಬ್ಬ ಸನ್ಯಾಸಿ ಶಾಮಣ್ಣನ ಮನೆಗೆ ಬಂದು ಶಾಸ್ತ್ರ ಹೇಳುತ್ತಾ, ನಾನು ಹೇಳಿದ ಹಾಗೆ ಮಾಡಿದರೆ ನಿಮ್ಮಲ್ಲಿರುವ ಸಂಪತ್ತು (ಒಡವೆ ಆಸ್ತಿ ಇತ್ಯಾದಿ) ದ್ವಿಗುಣವಾಗುತ್ತದೆ.” ಎಂದ ಶಾಮಣ್ಣ ದಂಪತಿಗಳಿಗೆ ಖುಷಿ ಆಯಿತು ನೀವು ಹೇಳಿದ ಹಾಗೆ ಮಾಡುತ್ತೇವೆ ಹೇಳಿ ಅಂದರು.

ಎರಡು ನಿಂಬೆಹಣ್ಣುಗಳನ್ನು ತನ್ನಿರಿ, ನಿಮ್ಮ ಮನೆ ಒಡವೆಗಳನ್ನೆಲ್ಲಾ ಒಂದು ಗಂಟಿನಲ್ಲಿ ಭದ್ರವಾಗಿ ಕಟ್ಟಿಡಿ, ಒಂದು ನಿಂಬೆಹಣ್ಣು ಕತ್ತರಿಸಿ ಗಂಟಿಗೆ ಕಟ್ಟಿರಿ; ಇನ್ನೊಂದನ್ನು ಮುಖ್ಯ ಬಾಗಿಲಿಗೆ ಕಟ್ಟಿರಿ ಆಮೇಲೆ ಅದರ ವೈಭವ ನೀವೇ ನೋಡುವಿರಿ ಎಂದು ಹೇಳುತ್ತಾ ಭಾರಿ ದಕ್ಷಿಣೆಯನ್ನು ಪಡೆದು ಜಾಗ ಖಾಲಿ ಮಾಡಿದ.

ಕೆಲವು ತಿಂಗಳುಗಳೇ ಕಳೆದವು ಒಡವೆ ಸಂಪತ್ತು ದ್ವಿಗುಣವಾಗಲಿಲ್ಲ.ಸನ್ಯಾಸಿ ಇದ್ದ ಜಾಗವನ್ನು ಪತ್ತೆಮಾಡಿ ಅವನ ಬಳಿ ಹೋಗಿ ಀತಾವು ಹೇಳಿದ್ದು ಸತ್ಯವಾಗಲಿಲ್ಲಀ ಎಂದ. “ಓಹ್ ನೀವು ಗಂಟಿಗೆ ಕಟ್ಟಬೇಕಾದ ನಿಂಬೆಹಣ್ಣು ಬಾಗಿಲಲ್ಲಿ ಕಟ್ಟಿದಿರಿ ಬಾಗಿಲಲ್ಲಿ ಕಟ್ಟಿದ್ದ ಹಣ್ಣು ಗಂಟಿಗೆ ಕಟ್ಟ ಬೇಕಾಗಿತ್ತು ಅದಕ್ಕೆ ಫಲಕಾರಿಯಾಗಲಿಲ್ಲ” ಎಂದ.
***

Tagged:

Leave a Reply

Your email address will not be published. Required fields are marked *

ದೀಪಾವಳಿಯ ಸೂಟಿಯನ್ನು ಕಳೆಯಲು ಊರಿಗೆ ಹೋಗಿದ್ದೆ. ಹಳ್ಳಿಗೆ ಹೋದಾಗೆಲ್ಲ ಕತೆಯ ಸುಬ್ಬಣ್ಣನ ಮನೆಗೆ ಹೋಗದಿದ್ದರೆ ನನ್ನ ಮನಸ್ಸು ಕೇಳುವದಿಲ್ಲ. ಊರಿಗೆ ಬಂದು ತನ್ನ ಮನೆಗೆ ಬರದಿದ್ದರೆ ಸುಬ್ಬಣ್ಣ ಬಿಡುತ್ತಾನೇ? ಅವನ ಆಮಂತ್ರಣ ಬರುವ ಮುಂಚೆಯೇ ಹೋಗುವದು ಉಚಿತವೆಂದು ತೋರಿತು. ಅವನ ಕತೆ ಕೇ...

ಒಂದು ತಿಂಗಳ ಮಗು ಹೆನ್ರಿ ನೋಡಲು ಬಲು ಮುದ್ದಾಗಿದ್ದ. ಸೇಬಿನ ಕೆನ್ನೆಗಳು, ದೊಡ್ಡ ಕಪ್ಪು ಕಣ್ಣುಗಳು, ತಲೆಯಲ್ಲಿ ಕೆಂಚು ಕೂದಲು, ನೀಳ ಮೂಗು, ಮುದ್ದಾದ ಪುಟ್ಟ ಬಾಯಿ, ನೋಡಿದೊಡನೆ ಹೇಳಬಹುದಿತ್ತು ಆ ಮಗು ಬ್ರಿಟಿಷ್ ತಂದೆ ತಾಯಿಗೆ ಹುಟ್ಟಿದವನೆಂದು. ತಂದೆ ಸ್ಮಿಥ್ ಮತ್ತು ತಾಯಿ ಮೇರಿಗೆ...

ಕೊನೆಗೊಮ್ಮೆ ಶಂಕರ ಹೂಂಗುಟ್ಟಲೇಬೇಕಾಯಿತು. “ಹುಡುಗಿ ಮನಸ್ಸಿಗೆ ಬಂದರೆ ಮಾತ್ರ ಆಗಿ. ಈ ವಿಷಯದಲ್ಲಿ ಒತ್ತಾಯಮಾಡಬರುತ್ತದೆಯೇ?” ಎಂದು ಶಿವರಾಮ ಹೆಗಡೆಯವರು ಶಂಕರನನ್ನು ಹೊರಡಿಸಿದರು. ದಾರಿಯುದ್ದಕ್ಕೂ ಹೆಗಡೆಯವರು ತಮ್ಮ ಮಗಳ ಗುಣಗಾನವನ್ನು ಪ್ರಸ್ತುತ ಅಪ್ರಸ್ತುತ ಪ್ರಶಂಸೆಗಳಿಂದ...

ಅಡಿಗೆಯ ಮನೆಯಿಂದ ಉಮೆಯು ಓಡಿ ಬಂದು “ನೀರಿನ ಕೊಡದ ಬಳಿಗೆ ಒಂದು ಕಪ್ಪೆ ಕುಳಿತಿದೆ. ಹೊರಗೆ ಹಾಕಿ ಕೊಡಿ” ಅಂದಳು. ತನಗೆ ಹೆದರದವಳು ಒಂದು ಕಪ್ಪೆಗೆ ಅಂಜುತ್ತಾಳಲ್ಲ ಅಂದುಕೊಂಡು ಉಮೇಶ ಒಳಗೆ ಬಂದ. ಕಪ್ಪೆಯು ಭದ್ರಾಸನ ಹಾಕಿತ್ತು. ಉಮೇಶ ಒಂದು ಸೌದೆಯಿಂದ ಕೊಡವನ್ನು ಕುಟ್ಟಿ...

ಹೊಲದ ಬದುವಿನ ಮೇಲೆ ಸಿದ್ದವ್ವ ಕುಳಿತಿದ್ದಳು. ಬಿಳಿ ಜ್ವಾಳದ ತೆನೆಗಳ ಮೇಲೆ ಹಾಯ್ದ ಗಾಳಿ ಒಂದೇ ಸಮನೆ ಬೀಸುತ್ತಿತ್ತು. ಇದೇ ಹೊಲದಲ್ಲಿ ತಾನು ಬಾಲ್ಯವನ್ನೆಲ್ಲಾ ಕಳೆದದ್ದು ನೆನಪಾಗಿ ಎಂಬತ್ತೈದರ ಸಿದ್ದವ್ವಳಿಗೆ ಮೈಯಲ್ಲಿ ಹರೆಯ ಉಕ್ಕಿ ಬಂದಂಗೆ ಆಯ್ತು. ತನ್ನ ಸೊರಗಿ ತೆಳುವಾದ ಕೈ ಕಾಲು...

ಮಧ್ಯಾಹ್ನದ ಆರು ತಾಸಿನ ಸಮಯ. ಬಿಸಿಲು ರಣಗುಟ್ಟುತ್ತಿತ್ತು. ಕಲ್ಲವನು ಉರುವಲ ಹೊರೆಯೊಂದನ್ನು ಹೊತ್ತು ತಂದು, ಗುಡಿಸಲಿನ ಮುಂದೆ ಒಗೆದು ಬೇವಿನ ಗಿಡದ ನೆರಳಿನಲ್ಲಿ ಕುಳಿತು ಉಸ್ಸೆಂದು ಉಸುರುಗರೆದಳು. ಗುಡಿಸಲಿನೊಳಗಿಂದ ನಾಲ್ಕಾರು ಚಿಕ್ಕ ಮಕ್ಕಳು ಹೊರಗೆ ಹಾತೊರೆದು ಬಂದು, “ಅವ್...