Home / ಕವನ / ಕವಿತೆ / ಕಚ್ಚಾ

ಕಚ್ಚಾ

ಕಚ್ಚಾ ಸ್ವಾಮೀ ಬಹಳ ಕಚ್ಚಾ
ಕಚ್ಚಾ ಬರೀ ಕಚ್ಚಾ

ತೆರೆದು ನೋಡಿದರೂ ಕಚ್ಚಾ
ಅರೆದು ನೋಡಿದರೂ ಕಚ್ಚಾ
ಕೊರೆದು ನೋಡಿದರೂ ಕಚ್ಚಾ
ಬರೆದು ನೋಡಿದರೂ ಕಚ್ಚಾ

ಆಕಾಶ್ದಾಗೆ ಚುಕ್ಕೀ ಎಣಿಸಾಕ
ಸೃಷ್ಟೀ ಚೆಂದಾ ಬಣ್ಣಿಸಿ ಗುಣಿಸಾಕ
ಬಾಗಿಲು ಬಾಗಿಲು ಬಡಿದು ಕರೆದರೆ
ಕೇಳ್ದೋರೆಲ್ಲಾ ಹುಚ್ಚಾ ಅಂದ್ರು

ಯಾರಿಗೆ ತಿಳಿಬೇಕ್ ನಿನ್ಮಾತು
ಬರ್ತಾವ್ ಹೊರಗೆ ಸೋತ್ ಸೋತು
ಅಲ್ಲೊಂದ್ ದೀಪಾ ಇಲ್ಲೊಂದೀಪಾ
ಮಿಣಕ್ ಮಿಣಕ್ ಅಂತಾವೆ ಪಾಪಾ
ಎಣ್ಣೀ ತೀರಿರ್ಬೇಕಂತಂದೂ
ನೋಡ್ಬೇಕಂತೀ ಉರಸೀ ಕಣ್ಣೀರಾದ್ರೂ ಸುರಸೀ
ತಿನಬೇಕಂತಾ ಬಾಯಾಗಿಟ್ಟೋರ್
ಬರೀ ಕಹೀ ಹುಳೀ ಅಂತಾ
ಒಗಿತಾರ್ದೂರಾ ಕಚ್ಚಾ
ಕಾಯಿ ಇನ್ಯೂ ಕಚ್ಚಾ
ಎಲ್ಲೋ ಮ್ಯಾಲೆ ಅಂತರದಾಗೆ
ನೇತಾಡ್ತಾವೆ ಹೂವಾ
ಕೈಗಳ್ ಹಿಡೀತಾವಾ
ನೆಲಾ ಬಿಟ್ಟೂ ಹೂವಾ ಹಿಡಿದ್ರೇ
ಉಳಿಸ್ತಾವೇನೋ ಸಾವಾ
ಇಳಿಸ್ತಾವೇನೋ ನೋವಾ

ಸಂತೆಯಾಗೆ ಬೆಲೆಯೇ ಇಲ್ಲ
ಚಿಂತೇ ಒಂದೇ ಕೊನೆಗೆ
ಕಚ್ಚಾ ಮಾಲು ಯಾತಕ್ತಂದ್ರಿ
ಕೊಡೋದಾದ್ರೆ ಉದ್ರಿ
ಕೊಟ್ಹೋಗ್ಬಿಡ್ರಿ ಮುಂದಿನವಾರ
ಕೊಡ್ತೀವಂತಾರ್ ರೊಕ್ಕಾ
ಒಯ್ದಾವ ತಿಕ್ಕಾ ಪುಕ್ಕಾ
***

Tagged:

Leave a Reply

Your email address will not be published. Required fields are marked *

ಬೆಳಗಿನ ಜಾವ ಆಗಲೇ ಐದು ಬಡಿದಿತ್ತು. ಎಲ್ಲೋ ಮಾಮರದಲ್ಲಿ ಕೋಗಿಲೆಯೂ ಕುಹೂ ಕುಹೂ ಎಂದು ಹಾಡುತಿತ್ತು. ಅಲ್ಲಲ್ಲಿ ಗಿಡಮರಗಳಲ್ಲಿ ಹಕ್ಕಿಗಳ ಚಿಲಿಚಿಲಿ ಕಲರವದೊಂದಿಗೆ ಸುಪ್ರಭಾತ ಹಾಡುತ್ತಿದ್ದವು. ಪ್ರಶಾಂತವಾದ ವಾತಾವರಣದಲ್ಲಿ ಸ್ವಾಮೀಜಿ, ಬೆಳಗಿನ ಪೂಜೆ ಮುಗಿಸಿ, ನಿತ್ಯದಂತೆ ಮಠದ ಪಾಕಶಾ...

“ಇನ್ನು ಗೇಣಿ ಕೊಡಬೇಕಾಗಿಲ್ಲವಂತೆ. ಒಕ್ಕಲಿಗೇ ಭೂಮಿಯಂತೆ.” ಊರಲ್ಲಿ ದಟ್ಟವಾಗಿ ಹಬ್ಬಿದ್ದ ಆ ವಾರ್‍ತೆ ಕುಂಞಂಬುನಲ್ಲಿ ಅಸಾಧ್ಯ ಕುತೂಹಲ ಕೆರಳಿಸಿತ್ತು. ಗೇಣಿ ಕೊಡದಿದ್ದರೆ ಧನಿಗಳು ಬಿಟ್ಟಾರೆಯೆ? ಗೇಣಿ ಕೊಡದೆ ಬೇರೆಯವರ ಭೂಮಿಯನ್ನು ಇಟ್ಟುಕೊಳ್ಳುವುದು ತಪ್ಪಲ್ಲವೆ? ಕು...

“ಮಮ್ಮಿ ! ಮಮ್ಮಿ ! ಬೇಗ ಬಾ” “ಅಡಿಗೆ ಮಾಡುತ್ತಾ ಇದ್ದೇನೆ, ಯಾಕೆ ಕಿರಿಚಿಕೊಳ್ಳುತ್ತಾ ಇದ್ದಿಯಾ ರೋಜಿ? ಬರುತ್ತೀನಿ ತಾಳು” ಎಂದಳು ಕೆಲಸದಲ್ಲಿ ನಿರತ ತಾಯಿ. “ಮಮ್ಮಿ! ಒಂದು ನಿಮಿಷ ಬಂದು ನೋಡು, ಕಾಗೆ ಪುಟ್ಟ ಅಳಿಲನ್ನು ಕುಕ್ಕಿ ನೋವು ಮಾಡುತ್ತಾ ...

ಈ ದಿನ ಹಿತ್ತಲ ತುಂಬ ಪಾರಿಜಾತ ಹೂವು ಸುರಿದಿದೆ. ಮತ್ತೆ ಸಂಪಿಗೆ ಮರದಿಂದ ಹೂವರಳಿ ಘಮ್ಮೆಂದು ವಾಸನೆ ಹರಿದಿದೆ. ಎರಡು ಪರಿಮಳ ಸೇರಿ ಎದೆಯಾಳಕೆ ಇಳಿದು ಒಳಗೊಳಗೆ ಒಂಥರಾ ಭಾವ ವಿಸ್ಮಯ ಅರಳಿದೆ. ಅಮ್ಮ ಒಲೆಯ ಮೇಲೆ ಕಡುಬು ಬೇಯಿಸುತ್ತಿದ್ದಾಳೆ. ಕೊಟ್ಟೆ ಕಡುಬಿನ ವಾಸನೆ ಇಡೀ ಮನೆಯನ್ನು ಪಸ...

ಆ ದಿನ, ಡಾಕ್ಟರ್ ಪಾರ್ವತಿಯವರಿಗೆ ಆತಂಕದ ದಿನ! ಒಂದು ವಿಧದ ಚಂಡಮಾರುತವನ್ನೆಬ್ಬಿಸಿದಂತಹ ಘಟನೆಯಿಂದ ನಗರದ ಅನೇಕರೂ, ಗಣ್ಯರೂ ಸೇರಿದಂತೆ, ಆ ಕೋರ್‍ಟಿನಲ್ಲಿ ಜನಸಂದಣಿ ಕಿಕ್ಕಿರಿದಿತ್ತು. ಆ ನಗರದ ಪ್ರಖ್ಯಾತ ವೈದ್ಯ ಡಾಕ್ಟರ್ ಪಾರ್ವತಿದೇವಿಯವರು ಸಾಕ್ಷಿ ನೀಡಬೇಕಾಗಿದ್ದರಿಂದ ಕೋರ್ಟಿನ ...

“ಭಟ್ಟರೇ, ನಿಮಗೆ ಹೇಳಲೊ? ಇಘ್ನೇಶ್ವರರಾಯರು ಅಂದರೆ ನಮ್ಮ ಜಾತಿಗೇ ಭೂಷಣ. ಅವರು ವಕೀಲಿ ಮಾಡಲು ಸುರು ಮಾಡಿದಂದಿನಿಂದ ಬೇರೆ ಜಾತಿಯವರ ಸೊಕ್ಕು ಮುರಿದಿದೆ. ಈಗ ಶೆಟ್ಟಿ ಶಾನಬೋಗರೆಲ್ಲ ಅವರಿಗೆ ರಾಯರೇ ಎಂದು ಸಲಾಮು ಮಾಡುವವರೇ! ನಿಮಗೆ ಹೇಳಲೊ? ಅದು ಒಬ್ಬೊಬ್ಬರ ಜನ್ಮಕುಂಡಲಿ ಇದ್ದ...