Home / ಕವನ / ಕವಿತೆ / ಕಲಪುರಂಷನ ಕಂತೆಯು

ಕಲಪುರಂಷನ ಕಂತೆಯು

ಕಲಿಯ ಕಾಲದ ಕಂತೆಯ ಕೇಳಿರಿ ಕೂಡಿದ ಜನರೆಲ್ಲಾ |
ಕಲಿಯು ತನ್ನಯ ತಾಂಡವ ಪೂಡಿಹ ವಿಶ್ವದೊಳೆಲ್ಲೆಲ್ಲಾ || ೧ ||

ಹುಲಿಗೆಯಂಜದವ ನಿಲಿಗೆಯಂಜುವುದು ಪ್ಲೇಗದ ಭಯವಲ್ಲಾ |
ಸುಲಿಗೆಯೆಲ್ಲೆಡೆ ಹಬ್ಬಿದೆ ನರರೊಳು ವಿಶ್ವದೊಳೆಲ್ಲೆಲ್ಲಾ || ೨ ||

ರಾಷ್ಟ್ರ ರಾಷ್ಟ್ರದ ನಡುವೆ ಹೆಬ್ಬುತಿದೆ ಹಗೆತನವೆಲ್ಲೆಲ್ಲಾ
ರಾಷ್ಟ್ರನಾಯಕರು ಸ್ವಾರ್ಥದಿ ಶಾಂತಿಯ ಕದಡುವರೆಲ್ಲೆಲ್ಲಾ || ೩||

ವಿಶ್ವಪಿತನ ಪರಮಾತ್ಮನ ನಂಬುವ ಜನಗಳೆ ಉಳಿದಿಲ್ಲಾ |
ವಿಶ್ವಮೇಧದೊಳ್ಕಲೆಯುತೆ ರಕುತವ ಹರಿಸುವರೆಲ್ಲೆಲ್ಲಾ || ೪ ||

ತಂದೆತಾಯಿ ಗುರುಹಿರಿಯರ ಸ್ಮರಣೆಗೆ ಮನದೊಳಗಿಂಬಿಲ್ಲಾ
ಕಂಡಕಂಡಪೆಣ್ಣೊಳ್ಳುತೆ ಗೃಹಿಣಿಯ ಮಾಳ್ಪರು ಎಲ್ಲೆಲ್ಲಾ || ೫ ||

ಧರ್ಮಗುರುಗಳೇ ಧರ್ಮದ ಛದ್ಮದಿ ಸುಲಿಗೆ ಮಾಳ್ಪಬರಲ್ಲಾ
ಕರ್‍ಮಮಾಡದಲೆ ಫಲವ ಬೇಡಿಪಬಂಟರೆಯೆಲ್ಲೆಲ್ಲಾ || ೬||

ಕಪ್ಪು ಸಂತೆಯೆ ದುಡ್ಡನು ಗಳಿಸುವ ಮಾರ್ಗವೆನಿಪುದಲ್ಲಾ |
ಉಪ್ಪುವುಂಡವಗೆ ಮೋಸಗೊಳಿಪುದೆ ಜಾಣ್ಮೆಲಕ್ಕಣಲ್ಲಾ || ೭||

ದೇಶಭಕ್ತರ ಸೋಗಿಲಿ ಲಂಚವ ಪಡೆದರೆ ತಪ್ಪಲ್ಲಾ |
ದೇಶಶೀಳುತೆ ಜನಗಳ ಕೊಲ್ವುದೆ ಪರಮ ಧರ್ಮವಲ್ಲಾ || ೮ ||

ಬಿಳಿಯ ಟೊಪ್ಪಿಗೆ ವೇಷದಿ ಜನಗಳ ಸುಲಿದರೆ ತಪ್ಪಲ್ಲಾ |
ಸುಳಿಯನರಿಯುತೆ ಸುಳ್ಳನು ಪೇಳ್ವುದೆ ಲೋಕರೂಢಿಯಲ್ಲಾ || ೯ ||

ಕರ್ಮಯೋಗಿಯ ಗಾಂಧಿಯ ಕೊಲ್ವುದೆ ತೂರಲಕ್ಕಣಲ್ಲಾ |
ಮರ್ಮವಿದನು ನೀಂ ತಿಳಿದು ನಡೆದೊಡೆ ಕಲಿಯಭಯವೆಯಿಲ್ಲಾ || ೧೦ ||
*****

Tagged:

Leave a Reply

Your email address will not be published. Required fields are marked *

ಹೆರಿಗೆ ನೋವಿನಿಂದ ಸಂಕಟಪಡುತ್ತಿದ್ದ ಹೆಂಡತಿ ಗಂಗಾಳನ್ನು ಆಸ್ಪತ್ರೆಗೆ ಚಿಕ್ಕಣ್ಣ ಕರೆದುಕೊಂಡು ಬಂದಾಗ ಔಟ್ ಪೇಶಂಟ್ ವಿಭಾಗ ಗಿಜಿಗುಟ್ಟುತ್ತಿತ್ತು. ಗುಂಪುಕಟ್ಟಿ ನಿಂತಿದ್ದ ಮಹಿಳೆಯರ ಸಾಲನ್ನು ಛೇಧಿಸಿಕೊಂಡು ವೈದ್ಯರ ಮೇಜಿನ ಬಳಿ ಬಂದು ನಿಂತ ಅವನ ತೋಳುಗಳಲ್ಲಿ ಎರಡೂವರೆ ವರ್ಷದ ಮಗುವ...

ನಾಡಿಗೆ ಸ್ವಾತಂತ್ರ ಬಂದಿದೆ. ಎಲ್ಲೆಲ್ಲೂ ಸ್ವೈರಾಚಾರ ಹೆಚ್ಚಿದೆ. ಸ್ವಾತಂತ್ರವೆಂದರೆ ಸ್ವೇಚ್ಛಾಚಾರ ಎನ್ನುವಂತೆ ನಾಡಿನ ಜನ ವರ್ತಿಸುತ್ತಿದೆ; ಬಹುದಿನದ ಸಾಧನೆಯಿಂದ ಪಡೆದ ಸಿದ್ದಿಯನ್ನು ಮಣ್ಣುಗೂಡಿಸುತ್ತಲಿದೆ. ಇದನ್ನು ತಡೆಯಲಿಕ್ಕೆ ಭಾರತದ “ಹಳ್ಳಿ-ಹಳ್ಳಿಗಳಲ್ಲಿಯೂ ಗ್ರಾಮ ಸುರಕ್ಷಕ...

“ವತ್ಸಲಾ……..!” ನಿಟ್ಟುಸುರಿನೊಂದಿಗೆ ಕುಮಾರನು ಆರಾಮ ಕುರ್‍ಚಿಯ ಮೇಲೆ ದೊಪ್ಪನೆ ಬಿದ್ದು ಕೊಂಡನು. ಚಿಕ್ಕಬಾಲಕನೊಬ್ಬನು ಕಿಡಿಕಿಯಲ್ಲಿ ಹಣಿಕಿ ಹಾಕಿ “ಕುಮಾರಣ್ಣ” ಎಂದು ಕೂಗಿದಂತಾಯಿತು. ಎದ್ದು ನೋಡುತ್ತಾನೆ; ಕೆಂಪು ಮಸಿಯಿಂದ ವಿಳಾಸ ಬರೆದ...

“ಭೀಮಾ ಮಾಸ್ತರರನ್ನು ಇಷ್ಟ ಮೋಟರ ಸ್ಟಾಂಡಿನ ತನಕ ಕಳಿಸಿ ಬಾರಪ್ಪಾ.” ಬಾಯಕ್ಕ ನೆರೆಮನೆಯವರ ಆಳಿಗೆ ವಿನಯದಿಂದ ಹೇಳಿ ನನ್ನ ಕಡೆಗೆ ಹೊರಳಿ ಅಂದಳು: “ಬಿಡಿರಿ, ನಿಮ್ಮ ಬ್ಯಾಗ ತಗೊಂಡ ಬರತಾನ ಭೀಮಾ” “ಯಾತಕ್ಕ? ನಾ ಕೈಯೊಳಗ ಸಹಜ ಒಯ್ಯತೇನೆ” ನಾನು ಹೀಗೆ ಹೇಳಿದೆನಾದರೂ ಭೀಮಪ್...

ಸಿಗರೆಟ್‌ನ್ನು ಕೊನೆಯ ಸಲ ಎಳೆದು ಬದಿಗಿದ್ದ ಅಶ್‌ಟ್ರೆಯಲ್ಲಿ ಹಾಕಿದ. ಮೂರು ದಿನಗಳಿಂದ ಹೇಳಲಾಗದಂತಹ ಯಾತನೆ ಅವನನ್ನು ಹಿಂತಿಸುತ್ತಿದೆ. ಇದ್ದಿದ್ದು ಮಿತ್ರನ ಮಾತುಗಳು ಬಂದು ಕಿವಿಗೆ ಅಪ್ಪಳಿಸಿ ಎತ್ತ ನೋಡಿದರೂ ಅವನದೆ ಮುಖ ಕಾಣುತ್ತಿದೆ. “ನಾ ಹೇಳುವದನ್ನು ಅರ್‍ಥಮಾಡಿ ಕೊಳ್ಳು...