Home / ಕವನ / ಅನುವಾದ / ಗ್ರೀಕ್ ಹನಿಗವಿತೆಗಳು

ಗ್ರೀಕ್ ಹನಿಗವಿತೆಗಳು

ಈ ಹೆಣ್ಣು ಕೈಕೊಟ್ಟದ್ದು ಒಬ್ಬನಿಗೆ ಮಾತ್ರ
ಆದ್ದರಿಂದಲೇ
ಸತ್ತಮೇಲೂ ಇವಳ ಪಾತಿವ್ರತ್ಯ ಪ್ರಸಿದ್ದಿಗೆ ಪಾತ್ರ.
– ಅಜ್ಞಾತ

ಬದುಕಿದ್ದಾಗ ಸರ್ವಾಧಿಕಾರಿಗೆ
ಕಟ್ಟಿದ್ದೇ ದೇವಾಲಯ ಎಲ್ಲೆಲ್ಲೂ
ಸತ್ತಾಗ ಅವನ ಗೋರಿ ನಿಲ್ಲಿಸಲು ಸಹ
ಇರಲಿಲ್ಲ ಒಂದು ಕಲ್ಲು
– ಅಜ್ಞಾತ

ಕದ್ದೋಡಿ ಬಂದ ಡೆಮಿಟ್ರಿಯಸ್
ಕಾಳಗದಿಂದ
ಎಸೆದು ಭಲ್ಲೆ ಗುರಾಣಿ ನಿರ್ಲಜ್ಜೆಯಿಂದ.
ಬಾಗಿಲು ತೆರೆದ ತಾಯಿ
ಇರಿದು ಕೂಗಿದಳು “ನಾಯಿ!
ನಿನ್ನ ಧೈರ್ಯಕ್ಕೆ ಊರು ನಾಚೀತು, ಸಾಯಿ!’
– ಇರೀಸಿಯಸ್. ಕ್ರಿ.ಪೂ. ಒಂದನೆಯ ಶತಮಾನ

ಕೇಶ ದಂತ ಬಣ್ಣ ಸುಣ್ಣ
ಏನೆಲ್ಲ ಕೊಂಡೆ ಚೆನ್ನೆ
ಕೊಳ್ಳಬಹುದಿತ್ತಲ್ಲೆ ಅದರ ಬದಲು
ಭರ್ಜರಿ ಮುಖವನ್ನೆ!
– ಲ್ಯುಸಿಲಿಯಸ್, ಕ್ರಿ.ಪೂ. ಒಂದನೆಯ ಶತಮಾನ

ನಾನು ಮುತ್ತಿಟ್ಟಿದ್ದು ತಪ್ಪು, ಪಾಪ ಎನ್ನಿಸಿದರೆ ನಿನಗೆ
ಶಿಕ್ಷಿಸಿಬಿಡು ಕೂಡಲೆ
ಅದನ್ನು ಹಿಂತಿರುಗಿಸಿ ನನಗೆ
– ಸ್ಟ್ರ್ಯಾಟೊ. ಕ್ರಿ.ಪೂ. ಎರಡನೆಯ ಶತಮಾನ

ಪರಿಚಯ ಕೊಲ್ಲುತ್ತದೆ ಪ್ರೀತಿಯನ್ನ
ಇಲ್ಲ, ಕಾಲ ಮೆಲ್ಲುತ್ತದೆ ನಿಧಾನ
ಎರಡಕ್ಕೂ ತಗ್ಗದಿದ್ದರೆ ಬೆಂಕಿ
ಸ್ವಾಗತಿಸುತ್ತಾನೆ ಪ್ರೇಮಿ ನೇಣನ್ನ
– ಕ್ರೇಟ್ಸ್, ಕ್ರಿ.ಪೂ. ಎರಡನೆಯ ಶತಮಾನ

ವಾಗ್ಮಿಗಳೇ ಬನ್ನಿ ಈಗ
ಬೇಕಾದಷ್ಟು ವಾಕ್ಚಾತುರ್ಯ ತೋರಿ
ಮಹಾವಾಗ್ಮಿ ಆಂಫಿಲೋಕಸನ
ತುಟಿಯನ್ನು ಹೊಲಿದಿದ ಈ ಗೋರಿ
– ಸೇಂಟ್ ಗ್ರಿಗರಿ, ಕ್ರಿ.ಶ. ನಾಲ್ಕನೆಯ ಶತಮಾನ

ಬಡವನಿಗೆ ಸಾವೇ ಇಲ್ಲ.
ಏಕೆಂದರೆ ಅವನು ಬದುಕಿರಲೇ ಇಲ್ಲ;
ಉಸಿರಾಡಲಿಲ್ಲವೆ ಎಂದರೆ
ಅದು ಒಡಲೆನ್ನುವ ಗೋರಿಯಲ್ಲಿ
ಹಣವಿಲ್ಲದೆ ಸಾವು ಸಹ ಸಿಕ್ಕೀತು ಎಲ್ಲಿ?
– ಪಾಲಡಾಸ್, ಕ್ರಿ.ಶ. ಐದನೆಯ ಶತಮಾನ

ನಾಲಿಗೆ ಇಲ್ಲದ ಛಾವಣಿ
ಮಿದುಳಿಲ್ಲದ ಬೋಗುಣಿ
ಆಲಿಯಿರದ ಖಾಲಿಚಿಪ್ಪು
ತಳವಿಲ್ಲದ ಭರಣಿ
ಮೊನ್ನೆ ಹಾಗೆ ಉರಿದ ಬದುಕು
ಈಗ ಬರೀ ಬುರುಡ
ನಾಯಿ ಹೊಯ್ದು ಹೋದರು ಸಹ
ಕಚ್ಚಲಿಲ್ಲ ದವಡೆ!
– ಅಜ್ಞಾತ
*****

Tagged:

Leave a Reply

Your email address will not be published. Required fields are marked *

ಹೆರಿಗೆ ನೋವಿನಿಂದ ಸಂಕಟಪಡುತ್ತಿದ್ದ ಹೆಂಡತಿ ಗಂಗಾಳನ್ನು ಆಸ್ಪತ್ರೆಗೆ ಚಿಕ್ಕಣ್ಣ ಕರೆದುಕೊಂಡು ಬಂದಾಗ ಔಟ್ ಪೇಶಂಟ್ ವಿಭಾಗ ಗಿಜಿಗುಟ್ಟುತ್ತಿತ್ತು. ಗುಂಪುಕಟ್ಟಿ ನಿಂತಿದ್ದ ಮಹಿಳೆಯರ ಸಾಲನ್ನು ಛೇಧಿಸಿಕೊಂಡು ವೈದ್ಯರ ಮೇಜಿನ ಬಳಿ ಬಂದು ನಿಂತ ಅವನ ತೋಳುಗಳಲ್ಲಿ ಎರಡೂವರೆ ವರ್ಷದ ಮಗುವ...

ನಾಡಿಗೆ ಸ್ವಾತಂತ್ರ ಬಂದಿದೆ. ಎಲ್ಲೆಲ್ಲೂ ಸ್ವೈರಾಚಾರ ಹೆಚ್ಚಿದೆ. ಸ್ವಾತಂತ್ರವೆಂದರೆ ಸ್ವೇಚ್ಛಾಚಾರ ಎನ್ನುವಂತೆ ನಾಡಿನ ಜನ ವರ್ತಿಸುತ್ತಿದೆ; ಬಹುದಿನದ ಸಾಧನೆಯಿಂದ ಪಡೆದ ಸಿದ್ದಿಯನ್ನು ಮಣ್ಣುಗೂಡಿಸುತ್ತಲಿದೆ. ಇದನ್ನು ತಡೆಯಲಿಕ್ಕೆ ಭಾರತದ “ಹಳ್ಳಿ-ಹಳ್ಳಿಗಳಲ್ಲಿಯೂ ಗ್ರಾಮ ಸುರಕ್ಷಕ...

“ವತ್ಸಲಾ……..!” ನಿಟ್ಟುಸುರಿನೊಂದಿಗೆ ಕುಮಾರನು ಆರಾಮ ಕುರ್‍ಚಿಯ ಮೇಲೆ ದೊಪ್ಪನೆ ಬಿದ್ದು ಕೊಂಡನು. ಚಿಕ್ಕಬಾಲಕನೊಬ್ಬನು ಕಿಡಿಕಿಯಲ್ಲಿ ಹಣಿಕಿ ಹಾಕಿ “ಕುಮಾರಣ್ಣ” ಎಂದು ಕೂಗಿದಂತಾಯಿತು. ಎದ್ದು ನೋಡುತ್ತಾನೆ; ಕೆಂಪು ಮಸಿಯಿಂದ ವಿಳಾಸ ಬರೆದ...

“ಭೀಮಾ ಮಾಸ್ತರರನ್ನು ಇಷ್ಟ ಮೋಟರ ಸ್ಟಾಂಡಿನ ತನಕ ಕಳಿಸಿ ಬಾರಪ್ಪಾ.” ಬಾಯಕ್ಕ ನೆರೆಮನೆಯವರ ಆಳಿಗೆ ವಿನಯದಿಂದ ಹೇಳಿ ನನ್ನ ಕಡೆಗೆ ಹೊರಳಿ ಅಂದಳು: “ಬಿಡಿರಿ, ನಿಮ್ಮ ಬ್ಯಾಗ ತಗೊಂಡ ಬರತಾನ ಭೀಮಾ” “ಯಾತಕ್ಕ? ನಾ ಕೈಯೊಳಗ ಸಹಜ ಒಯ್ಯತೇನೆ” ನಾನು ಹೀಗೆ ಹೇಳಿದೆನಾದರೂ ಭೀಮಪ್...

ಸಿಗರೆಟ್‌ನ್ನು ಕೊನೆಯ ಸಲ ಎಳೆದು ಬದಿಗಿದ್ದ ಅಶ್‌ಟ್ರೆಯಲ್ಲಿ ಹಾಕಿದ. ಮೂರು ದಿನಗಳಿಂದ ಹೇಳಲಾಗದಂತಹ ಯಾತನೆ ಅವನನ್ನು ಹಿಂತಿಸುತ್ತಿದೆ. ಇದ್ದಿದ್ದು ಮಿತ್ರನ ಮಾತುಗಳು ಬಂದು ಕಿವಿಗೆ ಅಪ್ಪಳಿಸಿ ಎತ್ತ ನೋಡಿದರೂ ಅವನದೆ ಮುಖ ಕಾಣುತ್ತಿದೆ. “ನಾ ಹೇಳುವದನ್ನು ಅರ್‍ಥಮಾಡಿ ಕೊಳ್ಳು...