Home / ಕವನ / ಅನುವಾದ / ಗ್ರೀಕ್ ಹನಿಗವಿತೆಗಳು

ಗ್ರೀಕ್ ಹನಿಗವಿತೆಗಳು

ಈ ಹೆಣ್ಣು ಕೈಕೊಟ್ಟದ್ದು ಒಬ್ಬನಿಗೆ ಮಾತ್ರ
ಆದ್ದರಿಂದಲೇ
ಸತ್ತಮೇಲೂ ಇವಳ ಪಾತಿವ್ರತ್ಯ ಪ್ರಸಿದ್ದಿಗೆ ಪಾತ್ರ.
– ಅಜ್ಞಾತ

ಬದುಕಿದ್ದಾಗ ಸರ್ವಾಧಿಕಾರಿಗೆ
ಕಟ್ಟಿದ್ದೇ ದೇವಾಲಯ ಎಲ್ಲೆಲ್ಲೂ
ಸತ್ತಾಗ ಅವನ ಗೋರಿ ನಿಲ್ಲಿಸಲು ಸಹ
ಇರಲಿಲ್ಲ ಒಂದು ಕಲ್ಲು
– ಅಜ್ಞಾತ

ಕದ್ದೋಡಿ ಬಂದ ಡೆಮಿಟ್ರಿಯಸ್
ಕಾಳಗದಿಂದ
ಎಸೆದು ಭಲ್ಲೆ ಗುರಾಣಿ ನಿರ್ಲಜ್ಜೆಯಿಂದ.
ಬಾಗಿಲು ತೆರೆದ ತಾಯಿ
ಇರಿದು ಕೂಗಿದಳು “ನಾಯಿ!
ನಿನ್ನ ಧೈರ್ಯಕ್ಕೆ ಊರು ನಾಚೀತು, ಸಾಯಿ!’
– ಇರೀಸಿಯಸ್. ಕ್ರಿ.ಪೂ. ಒಂದನೆಯ ಶತಮಾನ

ಕೇಶ ದಂತ ಬಣ್ಣ ಸುಣ್ಣ
ಏನೆಲ್ಲ ಕೊಂಡೆ ಚೆನ್ನೆ
ಕೊಳ್ಳಬಹುದಿತ್ತಲ್ಲೆ ಅದರ ಬದಲು
ಭರ್ಜರಿ ಮುಖವನ್ನೆ!
– ಲ್ಯುಸಿಲಿಯಸ್, ಕ್ರಿ.ಪೂ. ಒಂದನೆಯ ಶತಮಾನ

ನಾನು ಮುತ್ತಿಟ್ಟಿದ್ದು ತಪ್ಪು, ಪಾಪ ಎನ್ನಿಸಿದರೆ ನಿನಗೆ
ಶಿಕ್ಷಿಸಿಬಿಡು ಕೂಡಲೆ
ಅದನ್ನು ಹಿಂತಿರುಗಿಸಿ ನನಗೆ
– ಸ್ಟ್ರ್ಯಾಟೊ. ಕ್ರಿ.ಪೂ. ಎರಡನೆಯ ಶತಮಾನ

ಪರಿಚಯ ಕೊಲ್ಲುತ್ತದೆ ಪ್ರೀತಿಯನ್ನ
ಇಲ್ಲ, ಕಾಲ ಮೆಲ್ಲುತ್ತದೆ ನಿಧಾನ
ಎರಡಕ್ಕೂ ತಗ್ಗದಿದ್ದರೆ ಬೆಂಕಿ
ಸ್ವಾಗತಿಸುತ್ತಾನೆ ಪ್ರೇಮಿ ನೇಣನ್ನ
– ಕ್ರೇಟ್ಸ್, ಕ್ರಿ.ಪೂ. ಎರಡನೆಯ ಶತಮಾನ

ವಾಗ್ಮಿಗಳೇ ಬನ್ನಿ ಈಗ
ಬೇಕಾದಷ್ಟು ವಾಕ್ಚಾತುರ್ಯ ತೋರಿ
ಮಹಾವಾಗ್ಮಿ ಆಂಫಿಲೋಕಸನ
ತುಟಿಯನ್ನು ಹೊಲಿದಿದ ಈ ಗೋರಿ
– ಸೇಂಟ್ ಗ್ರಿಗರಿ, ಕ್ರಿ.ಶ. ನಾಲ್ಕನೆಯ ಶತಮಾನ

ಬಡವನಿಗೆ ಸಾವೇ ಇಲ್ಲ.
ಏಕೆಂದರೆ ಅವನು ಬದುಕಿರಲೇ ಇಲ್ಲ;
ಉಸಿರಾಡಲಿಲ್ಲವೆ ಎಂದರೆ
ಅದು ಒಡಲೆನ್ನುವ ಗೋರಿಯಲ್ಲಿ
ಹಣವಿಲ್ಲದೆ ಸಾವು ಸಹ ಸಿಕ್ಕೀತು ಎಲ್ಲಿ?
– ಪಾಲಡಾಸ್, ಕ್ರಿ.ಶ. ಐದನೆಯ ಶತಮಾನ

ನಾಲಿಗೆ ಇಲ್ಲದ ಛಾವಣಿ
ಮಿದುಳಿಲ್ಲದ ಬೋಗುಣಿ
ಆಲಿಯಿರದ ಖಾಲಿಚಿಪ್ಪು
ತಳವಿಲ್ಲದ ಭರಣಿ
ಮೊನ್ನೆ ಹಾಗೆ ಉರಿದ ಬದುಕು
ಈಗ ಬರೀ ಬುರುಡ
ನಾಯಿ ಹೊಯ್ದು ಹೋದರು ಸಹ
ಕಚ್ಚಲಿಲ್ಲ ದವಡೆ!
– ಅಜ್ಞಾತ
*****

Tagged:

Leave a Reply

Your email address will not be published. Required fields are marked *

ಮಳೆ ಜೋರಾಗಿ ಸುರಿಯುತ್ತಿತ್ತು. ಚಾವಣಿ ತೂತಾಗಿ ಸೋರುತ್ತಿದ್ದುದರಿಂದ ಸಾವಿತ್ರಿಗೆ ನಿದ್ದೆ ಇರಲಿಲ್ಲ. ಅವಳ ಉಗ್ಗವನದೂ ಅದೇ ಕತೆ. ಒಂದು ಮೂಲೆಯಲ್ಲಿ ಉಗ್ಗವನಿಗೆ ಒರಗಿಕೊಂಡು ಹಳೇ ಕಂಬಳಿ ಹೊದ್ದು ಸಾವಿತ್ರಿ ತೂಕಡಿಸುತ್ತಿದ್ದಳು. ಬಾಗಿಲ ಸಂದಿನಿಂದ ಆಗಾಗ ಚಳಕ್ಕನೆ ಕಾಣಿಸಿಕೊಳ್ಳುವ ಮಿ...

ದೀಪಾವಳಿಯ ಸೂಟಿಯನ್ನು ಕಳೆಯಲು ಊರಿಗೆ ಹೋಗಿದ್ದೆ. ಹಳ್ಳಿಗೆ ಹೋದಾಗೆಲ್ಲ ಕತೆಯ ಸುಬ್ಬಣ್ಣನ ಮನೆಗೆ ಹೋಗದಿದ್ದರೆ ನನ್ನ ಮನಸ್ಸು ಕೇಳುವದಿಲ್ಲ. ಊರಿಗೆ ಬಂದು ತನ್ನ ಮನೆಗೆ ಬರದಿದ್ದರೆ ಸುಬ್ಬಣ್ಣ ಬಿಡುತ್ತಾನೇ? ಅವನ ಆಮಂತ್ರಣ ಬರುವ ಮುಂಚೆಯೇ ಹೋಗುವದು ಉಚಿತವೆಂದು ತೋರಿತು. ಅವನ ಕತೆ ಕೇ...

ಒಂದು ತಿಂಗಳ ಮಗು ಹೆನ್ರಿ ನೋಡಲು ಬಲು ಮುದ್ದಾಗಿದ್ದ. ಸೇಬಿನ ಕೆನ್ನೆಗಳು, ದೊಡ್ಡ ಕಪ್ಪು ಕಣ್ಣುಗಳು, ತಲೆಯಲ್ಲಿ ಕೆಂಚು ಕೂದಲು, ನೀಳ ಮೂಗು, ಮುದ್ದಾದ ಪುಟ್ಟ ಬಾಯಿ, ನೋಡಿದೊಡನೆ ಹೇಳಬಹುದಿತ್ತು ಆ ಮಗು ಬ್ರಿಟಿಷ್ ತಂದೆ ತಾಯಿಗೆ ಹುಟ್ಟಿದವನೆಂದು. ತಂದೆ ಸ್ಮಿಥ್ ಮತ್ತು ತಾಯಿ ಮೇರಿಗೆ...

ಕೊನೆಗೊಮ್ಮೆ ಶಂಕರ ಹೂಂಗುಟ್ಟಲೇಬೇಕಾಯಿತು. “ಹುಡುಗಿ ಮನಸ್ಸಿಗೆ ಬಂದರೆ ಮಾತ್ರ ಆಗಿ. ಈ ವಿಷಯದಲ್ಲಿ ಒತ್ತಾಯಮಾಡಬರುತ್ತದೆಯೇ?” ಎಂದು ಶಿವರಾಮ ಹೆಗಡೆಯವರು ಶಂಕರನನ್ನು ಹೊರಡಿಸಿದರು. ದಾರಿಯುದ್ದಕ್ಕೂ ಹೆಗಡೆಯವರು ತಮ್ಮ ಮಗಳ ಗುಣಗಾನವನ್ನು ಪ್ರಸ್ತುತ ಅಪ್ರಸ್ತುತ ಪ್ರಶಂಸೆಗಳಿಂದ...

ಅಡಿಗೆಯ ಮನೆಯಿಂದ ಉಮೆಯು ಓಡಿ ಬಂದು “ನೀರಿನ ಕೊಡದ ಬಳಿಗೆ ಒಂದು ಕಪ್ಪೆ ಕುಳಿತಿದೆ. ಹೊರಗೆ ಹಾಕಿ ಕೊಡಿ” ಅಂದಳು. ತನಗೆ ಹೆದರದವಳು ಒಂದು ಕಪ್ಪೆಗೆ ಅಂಜುತ್ತಾಳಲ್ಲ ಅಂದುಕೊಂಡು ಉಮೇಶ ಒಳಗೆ ಬಂದ. ಕಪ್ಪೆಯು ಭದ್ರಾಸನ ಹಾಕಿತ್ತು. ಉಮೇಶ ಒಂದು ಸೌದೆಯಿಂದ ಕೊಡವನ್ನು ಕುಟ್ಟಿ...

ಹೊಲದ ಬದುವಿನ ಮೇಲೆ ಸಿದ್ದವ್ವ ಕುಳಿತಿದ್ದಳು. ಬಿಳಿ ಜ್ವಾಳದ ತೆನೆಗಳ ಮೇಲೆ ಹಾಯ್ದ ಗಾಳಿ ಒಂದೇ ಸಮನೆ ಬೀಸುತ್ತಿತ್ತು. ಇದೇ ಹೊಲದಲ್ಲಿ ತಾನು ಬಾಲ್ಯವನ್ನೆಲ್ಲಾ ಕಳೆದದ್ದು ನೆನಪಾಗಿ ಎಂಬತ್ತೈದರ ಸಿದ್ದವ್ವಳಿಗೆ ಮೈಯಲ್ಲಿ ಹರೆಯ ಉಕ್ಕಿ ಬಂದಂಗೆ ಆಯ್ತು. ತನ್ನ ಸೊರಗಿ ತೆಳುವಾದ ಕೈ ಕಾಲು...