Home / ಕವನ / ಕೋಲಾಟ / ದುಃಖ ಮಾಡ್ಯಾಳೆ ಗೌರೀ

ದುಃಖ ಮಾಡ್ಯಾಳೆ ಗೌರೀ

ತಂದನಾನ ತಾನ ನನ್ನ ತಾನನ ತಂದೇನಾನಾ
ತಾನನ ತಂದೇನಾ ತಂದನ್ನಾನಾ || ೧ ||

ಮಕ್ಕಳ ಇಲ್ಲೇಂದೆ ದುಕ್ಕ ಮಾಡ್ಯಳೆ ಗೌರೀ
ದುಕ್ಕ ಮಾಡ್ಯಾಳೆ ಗೌರೀ || ೨ ||

ಮಕ್ಕಳ ಬೇಡಿದಳೇ ಶಿವನಲ್ಲಿ ಪಾಪಿಯ ಗೌರೀ
ತಾನಂದನ್ನ ತಾನನಾಽ ತಂದೋನಾನಾ || ೩ ||

ರೊಟ್ಟೀ ಸುಟ್ಟಳೆ ಗೌರೀ | ಶಿಕ್ಕದ ಮೇಲ್ ಮಡಗ್ಯಾಳು
ಅಕ್ಕನ ಮಕ್ಕಳು ಮನೆಗೆ ಬಂದೋ | ಪಾಪಿಯ ಗೌರೀ || ೪ ||

ಅವರಕೆ ಸೂರ ಕೊಡನಿಲ್ಲ | ತಂದನಾ ತಾನಾ
ಅಕ್ಕನ ಮಕ್ಕಳಿಗೆ ಸೂರಕೊಡನಿಲ್ಲ | ಪಾಪಿಯ ಗೌರೀ || ೫ ||

“ನಿನಗ್ಯಾಕೆ ಮತ್ತರು ಸಂತನವೇ” ತಾನಂದನ್ನಾ
“ಕುಂಟ ನನಗೆ ಬೇಡ ಕುರುಡ ನನಗೆ ಬೇಡ || ೬ ||

ಗೆಜ್ಜೆಕಾಲ ಕೊಮರನ ಕೊಡೊವನಗೆಂದಳು | ಪಾಪಿಯ ಗೌರಿ
“ಕುಂಟನೂ ನಾನೇನು ಕೋಡೇ ಕುರುಡಾನೂ ನಾನೇನು ಕೋಡ || ೭ ||

ಗೆಜ್ಜೆಕಾಲ ಕೊಮರನ ಕೊಡ್ವೇ ನಿನಗೇ” | ಪಾಪಿಯ ಗೌರಿ
“ಬಾಳೆ ನೆಟ್ಟಿಕೋಳೆ ನೀನು | ಬಾಳೆಗೆ ನೀರೆರಕೋಳೇ ಗೌರಿ || ೮ ||

ಬಾಳಿಗೆ ಸಾವಿರ ಸಂತಾನ ಬರತೀದೇ | ಪಾಪಿಯ ಗೌರಿ
ಆದರಕಂಡ ಜಾನ ಮರಕೋಳೆ” ತಾನಂದನ್ನಾ || ೯ ||

ತೆಂಗ ನೆಟ್ಟಿಕೋಳೇ ನೀನೂ ತೆಂಗಿಗ್ ನೀರೆರಕೋಳೆ
ತೆಂಗು ಸಾವಿರದು ಫಲ ಬರತೀದೇ ತಾನಂದನಾ || ೧೦ ||

“ಕುಂಟನು ಬೇಡ ನನಗೆ ಕುರುಡನು ಬೇಡ ನನಗೆ
ಬಂಜೆಯೆಂಬಂಥ ಶಬದ ಮರಕೋಡೋ ತಾನಂದನಾನ್ನ || ೧೧ ||
*****
ಹೇಳಿದವರು: ತೊಳಶು ನಾಗು ಗುನಗ, ಅಡಲೂರು ತಾಲೂಕ: ಅಂಕೋಲಾ

ಈ ಬರಹವು ಕ್ರಿಯೇಟಿವ್ ಕಾಮನ್ಸ್ ಹಕ್ಕುಪದ್ಧತಿಯ ೪.೦ ಅಂತಾರಾಷ್ಟ್ರೀಯ ಪರವಾನಗಿಯನ್ನು ಹೊಂದಿದ್ದು ವಾಣಿಜ್ಯೇತರ ಉದ್ದೇಶಕ್ಕಾಗಿ ಬಳಸಿಕೊಳ್ಳಲಾಗಿದೆ.

Tagged:

Leave a Reply

Your email address will not be published. Required fields are marked *

ಹೆರಿಗೆ ನೋವಿನಿಂದ ಸಂಕಟಪಡುತ್ತಿದ್ದ ಹೆಂಡತಿ ಗಂಗಾಳನ್ನು ಆಸ್ಪತ್ರೆಗೆ ಚಿಕ್ಕಣ್ಣ ಕರೆದುಕೊಂಡು ಬಂದಾಗ ಔಟ್ ಪೇಶಂಟ್ ವಿಭಾಗ ಗಿಜಿಗುಟ್ಟುತ್ತಿತ್ತು. ಗುಂಪುಕಟ್ಟಿ ನಿಂತಿದ್ದ ಮಹಿಳೆಯರ ಸಾಲನ್ನು ಛೇಧಿಸಿಕೊಂಡು ವೈದ್ಯರ ಮೇಜಿನ ಬಳಿ ಬಂದು ನಿಂತ ಅವನ ತೋಳುಗಳಲ್ಲಿ ಎರಡೂವರೆ ವರ್ಷದ ಮಗುವ...

ನಾಡಿಗೆ ಸ್ವಾತಂತ್ರ ಬಂದಿದೆ. ಎಲ್ಲೆಲ್ಲೂ ಸ್ವೈರಾಚಾರ ಹೆಚ್ಚಿದೆ. ಸ್ವಾತಂತ್ರವೆಂದರೆ ಸ್ವೇಚ್ಛಾಚಾರ ಎನ್ನುವಂತೆ ನಾಡಿನ ಜನ ವರ್ತಿಸುತ್ತಿದೆ; ಬಹುದಿನದ ಸಾಧನೆಯಿಂದ ಪಡೆದ ಸಿದ್ದಿಯನ್ನು ಮಣ್ಣುಗೂಡಿಸುತ್ತಲಿದೆ. ಇದನ್ನು ತಡೆಯಲಿಕ್ಕೆ ಭಾರತದ “ಹಳ್ಳಿ-ಹಳ್ಳಿಗಳಲ್ಲಿಯೂ ಗ್ರಾಮ ಸುರಕ್ಷಕ...

“ವತ್ಸಲಾ……..!” ನಿಟ್ಟುಸುರಿನೊಂದಿಗೆ ಕುಮಾರನು ಆರಾಮ ಕುರ್‍ಚಿಯ ಮೇಲೆ ದೊಪ್ಪನೆ ಬಿದ್ದು ಕೊಂಡನು. ಚಿಕ್ಕಬಾಲಕನೊಬ್ಬನು ಕಿಡಿಕಿಯಲ್ಲಿ ಹಣಿಕಿ ಹಾಕಿ “ಕುಮಾರಣ್ಣ” ಎಂದು ಕೂಗಿದಂತಾಯಿತು. ಎದ್ದು ನೋಡುತ್ತಾನೆ; ಕೆಂಪು ಮಸಿಯಿಂದ ವಿಳಾಸ ಬರೆದ...

“ಭೀಮಾ ಮಾಸ್ತರರನ್ನು ಇಷ್ಟ ಮೋಟರ ಸ್ಟಾಂಡಿನ ತನಕ ಕಳಿಸಿ ಬಾರಪ್ಪಾ.” ಬಾಯಕ್ಕ ನೆರೆಮನೆಯವರ ಆಳಿಗೆ ವಿನಯದಿಂದ ಹೇಳಿ ನನ್ನ ಕಡೆಗೆ ಹೊರಳಿ ಅಂದಳು: “ಬಿಡಿರಿ, ನಿಮ್ಮ ಬ್ಯಾಗ ತಗೊಂಡ ಬರತಾನ ಭೀಮಾ” “ಯಾತಕ್ಕ? ನಾ ಕೈಯೊಳಗ ಸಹಜ ಒಯ್ಯತೇನೆ” ನಾನು ಹೀಗೆ ಹೇಳಿದೆನಾದರೂ ಭೀಮಪ್...

ಸಿಗರೆಟ್‌ನ್ನು ಕೊನೆಯ ಸಲ ಎಳೆದು ಬದಿಗಿದ್ದ ಅಶ್‌ಟ್ರೆಯಲ್ಲಿ ಹಾಕಿದ. ಮೂರು ದಿನಗಳಿಂದ ಹೇಳಲಾಗದಂತಹ ಯಾತನೆ ಅವನನ್ನು ಹಿಂತಿಸುತ್ತಿದೆ. ಇದ್ದಿದ್ದು ಮಿತ್ರನ ಮಾತುಗಳು ಬಂದು ಕಿವಿಗೆ ಅಪ್ಪಳಿಸಿ ಎತ್ತ ನೋಡಿದರೂ ಅವನದೆ ಮುಖ ಕಾಣುತ್ತಿದೆ. “ನಾ ಹೇಳುವದನ್ನು ಅರ್‍ಥಮಾಡಿ ಕೊಳ್ಳು...