ತೋಳ

ತೋಳ ಬಂದಿತು ತೋಳ ಹುಲಿಯ ಚರ್‍ಮವ ಹೊದ್ದು,
ಸುಭಗಾಕೃತಿಯ ಮಾನಿಸನ ರೂಪವನು ತಳೆದು
ಶೀಲ ಸಭ್ಯತೆಗಳಲಿ ಉಚಿತವಾಗಿಯೇ ಬೆಳೆದು,
ತೋಳ ಬಂದಿತು ತೋಳ ಮನುಜಾಕೃತಿಯ ಕದ್ದು!
ಅತಿಥಿಸತ್ಕಾರದಿಂದಾದರಿಸಿದೆನು ಎದ್ದು,
ನಯವಿನಯದಿಂದದರ ವಾದದ್ವಯವನು ತೊಳೆದು.
ನನ್ನೆದೆಯಲಂಕರಿಸೆ ಭಯದಂಕುರವು ಮೊಳೆದು,-
ತೋಳ ಬಂದಿತು ತೋಳ ಹುಲಿಯ ಚರ್‍ಮವ ಹೊದ್ದು.

ತೋಳದುಸಿರಿಗೆ ನಂದಿತೆನ್ನ ನಂದಾದೀಪ
ಅದರ ನೋಟಕೆ ಕಮರಿತೆನ್ನ ಮನೆಹೂಬಳ್ಳಿ
ಬಾಳ್ವುದೆನಲೀ ವೃಕೋದರನ ಸೋಲಿಸಿ, ತಳ್ಳಿ,-
ಮೆಲಕಾಡಿಸಿತ್ತದುವೆ ಸಾಕುಮೊಲವನು ಮೆದ್ದು.
ದೂರದಲಿ ಮಾನಿಸನು; ತೋಳ ಬರಲು ಸಮೀಪ!
ತೋಳ ಬಂದಿತು ತೋಳ, ಮನುಜಾಕೃತಿಯ ಕದ್ದು!
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ವಿಶ್ವ ಜಂಗಮ ದೀಪ ಬೆಳಗಬೇಕು
Next post ಕಾಡುತಾವ ನೆನಪುಗಳು – ೨೮

ಸಣ್ಣ ಕತೆ

  • ನಂಟಿನ ಕೊನೆಯ ಬಲ್ಲವರಾರು?

    ಕುಳಿತವನು ಅಲುಗದಂತೆ ತದೇಕ ಚಿತ್ತದಿಂದ ಕಡಲನ್ನು ನೋಡುತ್ತಿದ್ದ. ಹಾಗೇ ಕುಳಿತು ಅರ್ಧಗಂಟೆ ಕಳೆದಿತ್ತು. ಮೊಲದ ಬಾರಿಗೆ ಕಡಲ ಕಂಡವನ ಚಿತ್ತ ಕಲಕುವುದೇಕೆಂದು ಕುಳಿತಲ್ಲೇ ಅವನನ್ನು ಬಿಟ್ಟು ತಿರುಗಾಡಿ… Read more…

  • ಗಂಗೆ ಅಳೆದ ಗಂಗಮ್ಮ

    ಕನ್ನಡ ನಾಡು ಆರ್ಯದ್ರಾವಿಡ ಸಂಸ್ಕೃತಿಗಳನ್ನು ಅರಗಿಸಿಕೊಂಡು ತನ್ನದಾದ ಒಂದು ಉಚ್ಚ ಸಂಸ್ಕೃತಿಯಿಂದ ಬಹು ಪುರಾತನ ಕಾಲದಿಂದಲೂ ಕೀರ್ತಿಯನ್ನು ಪಡೆದಿದೆ. ಇಂತಹ ನಾಡಿನಲ್ಲಿ ಕಾಣುವ ಅವಶೇಷಗಳು ಒಂದೊಂದು ಹಿರಿಸಂಸ್ಕೃತಿಯ… Read more…

  • ಏಡಿರಾಜ

    ಚಲೋ ವಂದು ಅರಸು ಮನಿ, ಗಂಡ-ಹೆಂಡ್ತಿ ದೊಡ್ಡ ಮನ್ತಾನದಲ್ ಆಳ್ಕತಿದ್ರು. ಆವಾಗೆ ಆ ಅರಸೂಗೆ ಗಂಡ್ ಹುಡ್ಗರಿಲ್ಲ. ಸಂತತ್ಯಲ್ಲ, ಇದ್ರದು ನಿಚ್ಚಾ ಕೆಲ್ಸಯೇನಪ್ಪ ಅರಸು ಹಿಂಡ್ತಿದು, ಮನಿ… Read more…

  • ಯಿದು ನಿಜದಿ ಕತೀ…

    ಯೀ ಕತೀನ ನಾ... ಯೀಗಾಗ್ಲೇ, ಬರ್ಲೇಬೇಕಾಗಿತ್ತು! ಆದ್ರೆ ನಾ ಯೀತನ್ಕ...  ಯಾಕೆ ಬರ್ಲೀಲ್ಲ? ನನ್ಗೇ ಗೊತ್ತಿಲ್ಲ. ಯಿದು ನಡೆದಿದ್ದು... ೧೯೬೬ರಲ್ಲಿ. ‘ವುಗಾದಿ ಮುಂದೆ ತಗಾದಿ...’ ಅಂಬಂಗೆ,  ವುಗಾದಿ… Read more…

  • ರಣಹದ್ದುಗಳು

    ಗರ್ಭಿಣಿಯರ ನೋವು ಚೀರಾಟಗಳಿಗೆ ಡಾಕ್ಟರ್ ಸರಳಾಳ ಕಿವಿಗಳೆಂದೋ ಕಿವುಡಾಗಿ ಬಿಟ್ಟಿವೆ. ಸರಳ ಮಾಮೂಲಿ ಎಂಬಂತೆ ಆ ಹಳ್ಳಿ ಹೆಂಗಸರನ್ನು ಪರೀಕ್ಷಿಸಿದ್ದಳು. ಹೆಂಗಸು ಹೆಲ್ತಿಯಾಗಿದ್ದರೂ ಒಂದಷ್ಟು ವೀಕ್ ಇದ್ದಾಳೇಂತ… Read more…