ಭವಾಗ್ನಿ

ದಿನೆ ದಿನೆ ನಿನ್ನ ಕಾಣಲೆಂಬ
ನನ್ನ ಮನವು ತವಕಿಸುತ್ತಿದೆ
ನಿನ್ನ ಪಡೆಯದೆ ಇನ್ನೇನು ಅರ್‍ಥ
ಬದುಕು ಭವಸಾಗರವಾಗಿದೆ

ನಿ ಅನಂತ ಕೋಟಿ ಬ್ರಹ್ಮಾಂಡ ನಾಯಕ
ನಾನೋ ಎಲ್ಲೊ ಇರುವ ದೀನ ಜೀವಿ
ನೀನು ನನ್ನ ದನಿ ಆಲಿಸದೆ ಇರಲಾರೆ
ನಿನ್ನಲುಂಟು ನನ್ನ ಮೇಲೆತ್ತುವ ಠೀವಿ

ಜ್ಞಾನ ಅಜ್ಞಾನಗಳು ಬೇಡ ನನಗೆ
ಸಿರಿ ಬಡತನವೂ ಬೇಡ ದೊರೆ
ನಿನ್ನಲಿ ನಾನೇನು ಬೇಡಿದರೂ
ಸ್ವಾರ್‍ಥವೇ ವಿನಃ ಆಗದು ಮೊರೆ

ಮನಸ್ಸಿನಾಲೋಚನೆಯ ಕಣದಲ್ಲೂ
ನಿನ್ನ ಸ್ಮರಣೆಯೊಂದೇ ಕಾಡಿರಲಿ
ನೀ ನಿರದ ಯಾವ ಭಾಗ್ಯವೂ ನನಗೆ
ತೃಣ ಸಮಾನವೇ ಆಗಿರಲಿ

ಇನ್ನೂ ಕಾಡಬೇಡ ಓ ಗೋವಿಂದ
ತಾಳಲಾರೆ ಈ ವಿರಹ ಅಗ್ನಿ
ನಿನ್ನ ಪ್ರೀತಿಯಲಿ ಕರಗದೆ ನಾ
ಮಾಣಿಕ್ಯ ವಿಠಲನಲ್ಲದ ಭವಾಗ್ನಿ
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಉಮರನ ಒಸಗೆ – ೪೫
Next post ಮಲ್ಲಿ – ೨೩

ಸಣ್ಣ ಕತೆ

  • ದುರಾಶಾ ದುರ್ವಿಪಾಕ

    "ಒಳ್ಳೇದು, ಅವನನ್ನು ಒಳಗೆ ಬರಹೇಳು" ಎಂದು ಪ್ರೇಮಚಂದನು- ಘನವಾದ ವ್ಯಾಪಾರಸ್ಥನು- ಆಢ್ಯತೆಯಿಂದ, ತಾನು ಆಡುವ ಒಂದೊಂದು ಶಬ್ದವನ್ನು ತೂಕಮಾಡಿ ಚಲ್ಲುವಂತೆ ಸಾವಕಾಶವಾಗಿ ನುಡಿದನು. ಬಾಗಿಲಲ್ಲಿ ನಿಂತಿದ್ದ ವೃದ್ಧ… Read more…

  • ಗಂಗೆ ಅಳೆದ ಗಂಗಮ್ಮ

    ಕನ್ನಡ ನಾಡು ಆರ್ಯದ್ರಾವಿಡ ಸಂಸ್ಕೃತಿಗಳನ್ನು ಅರಗಿಸಿಕೊಂಡು ತನ್ನದಾದ ಒಂದು ಉಚ್ಚ ಸಂಸ್ಕೃತಿಯಿಂದ ಬಹು ಪುರಾತನ ಕಾಲದಿಂದಲೂ ಕೀರ್ತಿಯನ್ನು ಪಡೆದಿದೆ. ಇಂತಹ ನಾಡಿನಲ್ಲಿ ಕಾಣುವ ಅವಶೇಷಗಳು ಒಂದೊಂದು ಹಿರಿಸಂಸ್ಕೃತಿಯ… Read more…

  • ಅಮ್ಮ

    ‘ಅಮ್ಮನ್ಗೆ ಯಿಡೀ ರಾತ್ರೆಲ್ಲ ವಾಂತಿ ಭೇದಿ ವುಬ್ಸ ಆಯಾಸ... ಕುತ್ರೂಸಾ... ಬಾಳಾ ಯೆಚ್ಕುಡ್ಮೆಯಾಗಿ ರಾಮ್ಪಾರ್ದ ಡಾಕಿಟ್ರಾತ್ರ ತೋರ್ಸಿದ್ರು ಗುಣಾಗಿಲ್ಲ! ನೀ ಆದಷ್ಟು ಗಡಾನೇ ವೂರ್ಗೆ ಬಾಣ್ಣ...’ ಸೇಕ್ರಿ,… Read more…

  • ಜಡ

    ಮಾರಯ್ಯನನ್ನು ಅವನ ಹಳ್ಳಿಯಲ್ಲಿ ಹಲವರು ಹಲವು ಹೆಸರುಗಳಿಂದ ಕರೆಯುತ್ತಿದ್ದರು. ಹಾಗಾಗಿ ಅವನ ನಿಜವಾದ ಪೂರ್ತಿ ಹೆಸರು ಮಾರಯ್ಯನೆಂಬುವುದು ಸಮಯ ಬಂದಾಗ ಅವನಿಗೆ ಒತ್ತಿ ಹೇಳಬೇಕಾಗಿ ಬರುತ್ತಿತ್ತು. ಅಂತಹ… Read more…

  • ಎರಡು…. ದೃಷ್ಟಿ!

    ದೀಪಾವಳಿಯು ಸಮೀಪಿಸಿದ್ದಿತು. ದೀಪಾವಳಿಯನ್ನು ನಾವು ಪಂಚಾಗ ನೋಡದೆ ತಿಳಿದುಕೊಳ್ಳಬಹುದು. ಅದು ಹೇಗೆ? ದೀಪಾವಳಿ ಪೂರ್ವರಂಗದ ಸುಳಿವು ನಮಗೇ ಗೊತ್ತೇ ಆಗುವದು. ಮನೆಯಲ್ಲಿ ಕರಚೀ ಕಾಯಿ, ಚಿರೋಟಿಗಳನ್ನು ಕರಿಯುವ… Read more…