ಕಾತರ

ಎತ್ತ ಸಾಗಿದೆ ಈ ಬದುಕು
ಇದಕ್ಕಿಲ್ಲ ಕಿಂಚಿತ್ತು ದೈವ ಬೆಳಕು
ಹಗಲು ರಾತ್ರಿಗಳ ಚಂಚಲ ಮನದತ್ತ ಸಾಗಿ
ತನ್ನ ಮರೆತು ಕೆದುರುತ್ತಿದೆ ಹುಳಕು

ತನು ಇದು ದೈವ ಮಂದಿರ
ಇದನು ಗುಡಿಸಿ ಪವಿತ್ರ ಗೊಳಿಸು
ಬಹಿರ್‍ಮುಖ ಮನವ ಎಳೆದು ತಂದು
ಆತ್ಮ ಜತೆಗೂಡಿ ಶಿವನ ಪ್ರತಿಷ್ಠಾಪಿಸು

ವಿಷಯ ಸುಖಗಳದತ್ತ ವಾಲದಿರು
ಹೃದಯ ಭಾವಗಳ ಆರಾಧಿಸು
ಎದೆಯ ಗೂಡಿನಲಿ ಆತ್ಮ ದೇವ
ಅವನ ಪೂಜಿಸಿ ನಿತ್ಯ ವಿರಾಜಿಸು

ಸಂಸಾರ ಸಾಗರ ಬಲು ಭಾರಿ
ಎಳೆಯುತ್ತಿದೆ ನಿನ್ನ ಬಾರಿ ಬಾರಿ
ಬದುಕು ಮಾಡುವದಷ್ಟೇ ಛಲವಿರಲಿ
ಪರಮಾತ್ಮನ ಕಾಣುವ ಬಲವಿರಲಿ

ಕ್ಷಣವೂ ಬಿಡದೆ ದೇವ ಧ್ಯಾನಿಸು
ಅವನ ಮೂರುತಿ ನಿತ್ಯ ಆರಾಧಿಸು
ಯಾವ ಕ್ಷಣವೂ ಆಗಲಿದೆ ಪ್ರಭುದರ್‍ಶನ
ಮಾಣಿಕ್ಯ ವಿಠಲನಿಗೆ ಕಾತರಿಸು
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಉಮರನ ಒಸಗೆ – ೧೨
Next post ಪಾಪಿಯ ಪಾಡು – ೧೫

ಸಣ್ಣ ಕತೆ

  • ಮುದುಕನ ಮದುವೆ

    ಎಂಬತ್ತುನಾಲ್ಕು ವರ್ಷದ ನಿವೃತ್ತ ಡಾಕ್ಟರ್ ಶ್ಯಾಮರಾಯರಿಗೆ ೩೮ ವರ್ಷದ ಗೌರಮ್ಮನನ್ನು ಮದುವೆಯಾದಾಗ ಅದು ವೃತ್ತಪತ್ರಿಕೆಗಳಲ್ಲಿ ದೊಡ್ಡ ಅಕ್ಷರಗಳಲ್ಲಿ ಬಂದು ಒಂದು ರೀತಿಯ ಆಶ್ಚರ್ಯ, ಕೋಲಾಹಲ ಎಬ್ಬಿಸಿತ್ತು. ಡಾ.… Read more…

  • ಆ ರಾತ್ರಿ

    ಆ ದಿನ ಮಧ್ಯಾಹ್ನ ವಸಂತನ ಮನೆಯಲ್ಲಿ ಬಹಳ ಗಡಿಬಿಡಿ! ವಸಂತ ತಾನು ಕೂಡುವ ಕೋಣೆಯನ್ನು ಅತ್ಯಂತ ಶಿಸ್ತಿನಿಂದ ಇಡುವ ಕಾರ್ಯದಲ್ಲಿ ಮಗ್ನನಾಗಿದ್ದನು. ಗಡಿಯಾರದ ಮುಳ್ಳುಗಳು ಎರಡು ಗಂಟೆಯಾದುದನ್ನು… Read more…

  • ಟೋಪಿ ಮಾರುತಿ

    "ಏ ಕಾಗಿ, ಕಾಳೀ ಮಗನ! ಯಾಕ ಕೂಗ್ತೀಯಾ?" ಭಾವಿಯಲ್ಲಿಯ ಹಗ್ಗ ಮೇಲೆ ಕೆಳಗೆ ಹೋಗುತ್ತಿರುತ್ತದೆ. ಒಂದು ಮೊಳ ಹಗ್ಗ ಸೇದಿದರೆ ಅರ್‍ಧ ಮೊಳ ಒಳಗೆ ಸೇರಿರುತ್ತದೆ. "ಥೂ… Read more…

  • ಶಾಕಿಂಗ್ ಪ್ರೇಮ ಪ್ರಕರಣ

    ಅವನು ಅವಳನ್ನು ದಿನವೂ ತಪ್ಪದೇ ನೋಡುತ್ತಿದ್ದ. ಅವಳು ಕಾಲೇಜಿಗೆ ಹೋಗುವ ಹೊತ್ತಿಗೆ ಅವಳನ್ನು ಹಿಂಬಾಲಿಸುತ್ತಿದ್ದ. ಕಾಲೇಜು ಬಿಡುವ ಹೊತ್ತಿಗೆ ಗೇಟಿನ ಎದುರು ಕಾದು ನಿಂತು ಮತ್ತೆ ಹಿಂಬಾಲಿಸುತ್ತಿದ್ದ.… Read more…

  • ಬಲಿ

    ಅವಳು ಭಾಗಶಃ ಚಟ್ಟೆಯಾದ ಕಪ್ಪು ಬಣ್ಣಕ್ಕೆ ತಿರುಗಿದ ಅಲ್ಯೂಮೀನಿಯಂ ತಟ್ಟೆಯೊಳಗೆ ಸ್ವಲ್ಪ ಹಾಲು ಸುರಿದು ಅದಕ್ಕೆ ಸ್ವಲ್ಪ ನೀರನ್ನು ಬೆರೆಸಿ, ಒಲೆಯ ಮೇಲಿಟ್ಟು ಮುಚ್ಚಳ ಮುಚ್ಚಿದಳು. ಒಲೆಯ… Read more…