ಕಾತರ

ಎತ್ತ ಸಾಗಿದೆ ಈ ಬದುಕು
ಇದಕ್ಕಿಲ್ಲ ಕಿಂಚಿತ್ತು ದೈವ ಬೆಳಕು
ಹಗಲು ರಾತ್ರಿಗಳ ಚಂಚಲ ಮನದತ್ತ ಸಾಗಿ
ತನ್ನ ಮರೆತು ಕೆದುರುತ್ತಿದೆ ಹುಳಕು

ತನು ಇದು ದೈವ ಮಂದಿರ
ಇದನು ಗುಡಿಸಿ ಪವಿತ್ರ ಗೊಳಿಸು
ಬಹಿರ್‍ಮುಖ ಮನವ ಎಳೆದು ತಂದು
ಆತ್ಮ ಜತೆಗೂಡಿ ಶಿವನ ಪ್ರತಿಷ್ಠಾಪಿಸು

ವಿಷಯ ಸುಖಗಳದತ್ತ ವಾಲದಿರು
ಹೃದಯ ಭಾವಗಳ ಆರಾಧಿಸು
ಎದೆಯ ಗೂಡಿನಲಿ ಆತ್ಮ ದೇವ
ಅವನ ಪೂಜಿಸಿ ನಿತ್ಯ ವಿರಾಜಿಸು

ಸಂಸಾರ ಸಾಗರ ಬಲು ಭಾರಿ
ಎಳೆಯುತ್ತಿದೆ ನಿನ್ನ ಬಾರಿ ಬಾರಿ
ಬದುಕು ಮಾಡುವದಷ್ಟೇ ಛಲವಿರಲಿ
ಪರಮಾತ್ಮನ ಕಾಣುವ ಬಲವಿರಲಿ

ಕ್ಷಣವೂ ಬಿಡದೆ ದೇವ ಧ್ಯಾನಿಸು
ಅವನ ಮೂರುತಿ ನಿತ್ಯ ಆರಾಧಿಸು
ಯಾವ ಕ್ಷಣವೂ ಆಗಲಿದೆ ಪ್ರಭುದರ್‍ಶನ
ಮಾಣಿಕ್ಯ ವಿಠಲನಿಗೆ ಕಾತರಿಸು
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಉಮರನ ಒಸಗೆ – ೧೨
Next post ಪಾಪಿಯ ಪಾಡು – ೧೫

ಸಣ್ಣ ಕತೆ

  • ಕೇರೀಜಂ…

    ಮಂಜೇಲ್ಮುಂಜೇಲಿ ಯೆದ್ಬೇಗ್ನೇ ಕೇರ್ಮುಂದ್ಗಡೆ ಸಿವಪ್ಪ ಚೂರಿ, ಕತ್ತಿ, ಕುಡ್ಗೋಲು, ಯಿಳ್ಗೆಮಣೆ, ಕೊಡ್ಲಿನ... ಮಸ್ಗೆಲ್ಗೆ ಆಕಿ, ಗಸ್ಗಾಸಾ... ನುಣ್ಗೆ ತ್ವಟ್ವಟ್ಟೇ... ನೀರ್ಬಟ್ಗಾಂತಾ, ಜ್ವಲ್ಸುರ್ಗಿಗ್ಯಾಂತಾ, ಅವ್ಡುಗಚ್ಗೊಂಡೂ ಮಸೆಯತೊಡ್ಗಿದ್ವನ... ಕಟ್ದಿ ತುರ್ಬು,… Read more…

  • ಆಮಿಷ

    ರಮಾ ಕುರ್ಚಿಯನ್ನೊರಗಿ ಕುಳಿತಿದ್ದಳು. ದುಃಖವೇ ಮೂರ್ತಿವೆತ್ತಂತೆ ಕುಳಿತಿದ್ದ ಅವಳ ಹೃದಯದಲ್ಲಿ ಭೀಕರ ಕೋಲಾಹಲ ನಡೆದಿತ್ತು. ಕಣ್ಣುಗಳು ಆಳಕ್ಕಿಳಿದಿದ್ದವು. ದೇಹದ ಅಣು ಅಣುವೂ ನೋವಿನಿಂದ ಮಿಡಿಯುತ್ತಿತ್ತು. "ತಾನೇಕೆ ದುಡುಕಿಬಿಟ್ಟೆ?… Read more…

  • ಹುಟ್ಟು

    ಶಾದಿ ಮಹಲ್‌ನ ಒಳ ಆವರಣದಲ್ಲಿ ದೊಡ್ಡ ಹಾಲ್‌ನಲ್ಲಿ ಹೆಂಗಸರೆಲ್ಲಾ ಸೇರಿದ್ದರು. ಹೊರಗಡೆ ಹಾಕಿದ್ದ ಶಾಮಿಯಾನದಲ್ಲಿ ಗಂಡಸರು ನೆರೆದಿದ್ದರು. ಒಂದು ಕಡೆಯ ಎತ್ತರವಾದ ವೇದಿಕೆಯ ಮೇಲೆ ಮದುವೆ ಗಂಡು,… Read more…

  • ಕೆಂಪು ಲುಂಗಿ

    ಬೇಸಿಗೆಯ ರಜೆ ಬಂತೆಂದರೆ ಅಮ್ಮಂದಿರ ಗೋಳು ಬೇಡ; ಮಕ್ಕಳೆಲ್ಲಾ ಮನೆಯಲ್ಲೇ... ಟೀವಿಯ ಎದುರಿಗೆ ಇಲ್ಲವಾದರೆ ಅಂಗಳದ ಸೀಬೆಮರ ಮತ್ತು ಎತ್ತರವಾದ ಕಾಂಪೌಂಡಿನ ಗೋಡೆಗಳ ಮೇಲೆ.... ಯಾರಾದರೂ ಬಿದ್ದರೆ,… Read more…

  • ಕೂನನ ಮಗಳು ಕೆಂಚಿಯೂ….

    ಬೊಮ್ಮನಹಳ್ಳಿ ಸಂತೆಯಿಂದ ದಲ್ಲಾಳಿಗೆ ಸಂಚಾಗಾರ ಎಂದು ನೂರು ರೂಪಾಯಿ ಸೇರಿ ಒಂದು ಸಾವಿರದ ಒಂದುನೂರು ಕೊಟ್ಟು ತಂದ ’ಚೆನ್ನಿ’ಕರುಹಾಕಿ ಮೂರು ತಿಂಗಳಲ್ಲಿ ಕೊಟ್ಟಿಗೆಯೊಳಗೆ ಕಾಲು ಜಾರಿ ಬಿದ್ದದ್ದೆ… Read more…

cheap jordans|wholesale air max|wholesale jordans|wholesale jewelry|wholesale jerseys