ಬರಹ

ದೇವಾ ನಿನಗೊಂದು ಕೋರಿಕೆ
ಮಾಡದಿರು ನನ್ನ ಬದುಕು ತೋರಿಕೆ
ಹೃದಯದಲಿ ಅರಳಲಿ ಜ್ಞಾನ
ಆ ಜ್ಞಾನದಲ್ಲಿ ಬೆಳಗಲಿ ದಿವ್ಯ ಧ್ಯಾನ

ಈ ವಿಶಾಲ ಲೋಕದಲ್ಲೂ ನಾ
ನಿನ್ನ ಕೃಪೆಯಿಲ್ಲದೆ ತಬ್ಬಲಿ
ನನ್ನವರೆಂಬುವವರೆಲ್ಲ ಇಲ್ಲಿ
ಹುಟ್ಟು ಸಾವಿನ ಮಾತ್ರ ಮಧ್ಯದಲಿ

ಓ ಪ್ರವಾದಿ ಮಹಾನ ಸಂತರೆ
ಎನ್ನ ಮುನ್ನಡೆಸಿ ಕಾಪಾಡಿ
ನಿಮ್ಮ ದಾರಿಯಲಿ ನಡೆದ ನನಗೆ
ಆಶೀರ್‍ವದಿಸಿ ಹರೆಸಿ ಹಾಡಿ

ಸ್ವಾರ್‍ಥ ಬಾಳಿನಲ್ಲಿಗ ಮನವು ನಿಲ್ಲದು
ರಾಮಾ ನಿಮ್ಮ ನೆನಪೆ ಕಾಡುವುದು
ಕಷ್ಟ ಸುಖ ರಂಜನೆಗಳಲ್ಲೂ
ದೇವಾ ನಿನ್ನ ಸ್ಮರಣೆ ಮಾಡುವುದು

ಹರಿದು ಹೋಗುತ್ತಿವೆ ಕಂಗಳ ನೀರು
ನಿಮ್ಮ ರೂಪ ದರುಶನಕ್ಕೆ ಈ ವಿರಹ
ಎನ್ನ ಚಿತ್ತದಲ್ಲಿಲ್ಲ ಕಿಮಚಿತ್ತು ಪಾಪ
ಮಾಣಿಕ್ಯ ವಿಠಲನಿಗೆ ಭಕ್ತಿ ಬರಹ
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಉಮರನ ಒಸಗೆ – ೧೦
Next post ಪಾಪಿಯ ಪಾಡು – ೧೩

ಸಣ್ಣ ಕತೆ

  • ಮನೆ “ಮಗಳು” ಗರ್ಭಿಣಿಯಾದಾಗ

    ಮನೆ ಮಗಳು "ಸೋನಿ" ಉಡಿ ತುಂಬುವ ಸಮಾರಂಭ. ಬೆಳಗಾವಿ ಜಿಲ್ಲೆಯ ಸದಲಗಾ ಪಟ್ಟಣದ ಪೀರ ಗೌಡಾ ಪಾಟೀಲ ಹಾಗೂ ಅವರ ತಮ್ಮ ಮಹದೇವ ಪಾಟೀಲರಿಗೆ ಎಲ್ಲಿಲ್ಲದ ಸಂಭ್ರಮವಾಯಿತು.… Read more…

  • ಕತೆಗಾಗಿ ಜತೆ

    ರಾಜರ ಮನಿಲಿ ವಂದ್ ಮಡವಾಳವ ಬಟ್ಟೆ ಶೆಳೀಲಿಕ್ಕಿದಿದ್ದ. ಅವನಿಗೆ ನೆಂಟ್ರ ಮನಿಗೆ ವಂದಿವ್ಸ ಹೋಗಬೇಕು ಹೇಳಿರೆ ಸೌಡಾಗುದಿಲ್ಲ. ನಿತ್ಯೆ ಬಟ್ಟೆ ಶೆಳುದ್ ವಂದೇಯ. ವಂದಾನೊಂದ ದಿವಸ ಇವತ್… Read more…

  • ಎರಡು ಮದುವೆಗಳು

    ಮುಂಗಾರು ಮಳೆಗಳು ಸರಿಯಾಗಿ ಬಾರದೇ ಭುವನೇಶ್ವರದ ಹಳ್ಳಿಯ ಜನರಲ್ಲಿ ಒಂದು ರೀತಿಯ ಕಳವಳವಾಗಿತ್ತು. ಮಳೆ ಬಂದರೆ ಬೆಳೆ, ಬೆಳೆ ಆದರೆ ಬಾಳು ಎಂದು ಬದುಕುತ್ತಿದ್ದ ಅವರಿಗೆ ಏನು… Read more…

  • ಅಹಮ್ ಬ್ರಹ್ಮಾಸ್ಮಿ

    ಬಹುಶಃ ಮೊದಲ ಬಾರಿ ನಾನು ಅವನನ್ನು ನೋಡುತ್ತಿರಬೇಕು. ಅವನು ಅಕಸ್ಮತ್ತಾಗಿ ನನ್ನ ಕಣ್ಣಿಗೆ ಬಿದ್ದನೋ, ಅಲ್ಲಾ ಅವನೇ ನಾನು ಕಾಣುವ ಹಾಗೆ ಎದುರಿಗೆ ಬಂದನೋ ಎಂಬ ವಿಷಯದಲ್ಲಿ… Read more…

  • ಜಡ

    ಮಾರಯ್ಯನನ್ನು ಅವನ ಹಳ್ಳಿಯಲ್ಲಿ ಹಲವರು ಹಲವು ಹೆಸರುಗಳಿಂದ ಕರೆಯುತ್ತಿದ್ದರು. ಹಾಗಾಗಿ ಅವನ ನಿಜವಾದ ಪೂರ್ತಿ ಹೆಸರು ಮಾರಯ್ಯನೆಂಬುವುದು ಸಮಯ ಬಂದಾಗ ಅವನಿಗೆ ಒತ್ತಿ ಹೇಳಬೇಕಾಗಿ ಬರುತ್ತಿತ್ತು. ಅಂತಹ… Read more…

cheap jordans|wholesale air max|wholesale jordans|wholesale jewelry|wholesale jerseys