ಬರಹ

ದೇವಾ ನಿನಗೊಂದು ಕೋರಿಕೆ
ಮಾಡದಿರು ನನ್ನ ಬದುಕು ತೋರಿಕೆ
ಹೃದಯದಲಿ ಅರಳಲಿ ಜ್ಞಾನ
ಆ ಜ್ಞಾನದಲ್ಲಿ ಬೆಳಗಲಿ ದಿವ್ಯ ಧ್ಯಾನ

ಈ ವಿಶಾಲ ಲೋಕದಲ್ಲೂ ನಾ
ನಿನ್ನ ಕೃಪೆಯಿಲ್ಲದೆ ತಬ್ಬಲಿ
ನನ್ನವರೆಂಬುವವರೆಲ್ಲ ಇಲ್ಲಿ
ಹುಟ್ಟು ಸಾವಿನ ಮಾತ್ರ ಮಧ್ಯದಲಿ

ಓ ಪ್ರವಾದಿ ಮಹಾನ ಸಂತರೆ
ಎನ್ನ ಮುನ್ನಡೆಸಿ ಕಾಪಾಡಿ
ನಿಮ್ಮ ದಾರಿಯಲಿ ನಡೆದ ನನಗೆ
ಆಶೀರ್‍ವದಿಸಿ ಹರೆಸಿ ಹಾಡಿ

ಸ್ವಾರ್‍ಥ ಬಾಳಿನಲ್ಲಿಗ ಮನವು ನಿಲ್ಲದು
ರಾಮಾ ನಿಮ್ಮ ನೆನಪೆ ಕಾಡುವುದು
ಕಷ್ಟ ಸುಖ ರಂಜನೆಗಳಲ್ಲೂ
ದೇವಾ ನಿನ್ನ ಸ್ಮರಣೆ ಮಾಡುವುದು

ಹರಿದು ಹೋಗುತ್ತಿವೆ ಕಂಗಳ ನೀರು
ನಿಮ್ಮ ರೂಪ ದರುಶನಕ್ಕೆ ಈ ವಿರಹ
ಎನ್ನ ಚಿತ್ತದಲ್ಲಿಲ್ಲ ಕಿಮಚಿತ್ತು ಪಾಪ
ಮಾಣಿಕ್ಯ ವಿಠಲನಿಗೆ ಭಕ್ತಿ ಬರಹ
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಉಮರನ ಒಸಗೆ – ೧೦
Next post ಪಾಪಿಯ ಪಾಡು – ೧೩

ಸಣ್ಣ ಕತೆ

  • ಅವನ ಹೆಸರಲ್ಲಿ

    ಎಂದಿನಂತೆ ಬೆಳಿಗ್ಗೆ ಮಾಮೂಲಿ ಸಮಯಕ್ಕೆ ಎಚ್ಚರವಾದರೂ, ಎಂದಿನ ಉಲ್ಲಾಸ ನನ್ನಲ್ಲಿರಲಿಲ್ಲ. ತಿರುಗುತ್ತಿರುವ ಫ್ಯಾನಿನತ್ತ ದೃಷ್ಟಿ ಇಟ್ಟು ಮಲಗಿಕೊಂಡೇ ಆಲೋಚನೆ ಮಾಡುತ್ತಿದ್ದೆ. ನಿನ್ನೆ ತಾನೇ ಸರಕಾರಿ ಕೆಲಸದಿಂದ ನಿವೃತ್ತಿಯಾಗಿ… Read more…

  • ವಿಷಚಕ್ರ

    "ಚಂದ್ರು, ಒಳಗೆ ಬಾಮ್ಮ. ಮಳೆ ಬರುತ್ತೆ." ತಾಯಿ ಕೂಗಿದುದನ್ನು ಕೇಳಿ ಚಂದ್ರು ನಕ್ಕ. ಒಳಕ್ಕೆ ಬರುವುದಿರಲಿ, ಪಕ್ಕದ ಮನೆಯ ಹುಡುಗಿ ವೇದಳೊಂದಿಗೆ ಆಡುತ್ತಿದ್ದುದನ್ನು ನಿಲ್ಲಿಸಲೂ ಇಲ್ಲ. "ನೋಡೇ-ನಾನು… Read more…

  • ಗಿಣಿಯ ಸಾಕ್ಷಿ

    ಹತ್ತಿರವಿದ್ದ ನೆರೆಹೊರೆಯ ಮನೆಯವರಿಗೆ ಗಿಣಿಯ ಕೀರಲು ಕಿರುಚಾಟ ಕೂಗಾಟ ಸತತವಾಗಿ ಕೇಳಿಬಂದಾಗ ಅವರು ಅಲ್ಲಿಗೆ ಧಾವಿಸಿ ಬಂದಿದ್ದರು. ಗೌರಿಯು ಕಳೇಬರವಾಗಿ ಬಿದ್ದಿರುವುದು ನೋಡಿ ಅವರಿಗೆ ದಿಗ್ಭ್ರಾಂತಿಯಾಯಿತು. ಅವಳ… Read more…

  • ಆ ರಾಮ!

    ಮೇಲೆ ವಿಶಾಲವಾದ ನೀಲಮಯ ನಭೋಮಂಡಲ. ಲೋಕವನ್ನೆ ಅವಲೋಕಿಸ ಹೊರಟವನಂತೆ ದಿನಮಣಿಯು ದೀಪ್ತಿಯುಳ್ಳವನಾಗಿ ಮೂಡಣದಲ್ಲಿ ನಿಂತಿದ್ದಾನೆ. ಅವನ ಪ್ರಖರ ಕಿರಣಗಳು ನೀರಿನೆಲೆಗಳ ಮೇಲೆ ಕೆಳಗು ಮೇಲಾಗುತ್ತಿವೆ. ಚಿಕ್ಕವರು ದೊಡ್ಡವರು… Read more…

  • ಕೆಂಪು ಲುಂಗಿ

    ಬೇಸಿಗೆಯ ರಜೆ ಬಂತೆಂದರೆ ಅಮ್ಮಂದಿರ ಗೋಳು ಬೇಡ; ಮಕ್ಕಳೆಲ್ಲಾ ಮನೆಯಲ್ಲೇ... ಟೀವಿಯ ಎದುರಿಗೆ ಇಲ್ಲವಾದರೆ ಅಂಗಳದ ಸೀಬೆಮರ ಮತ್ತು ಎತ್ತರವಾದ ಕಾಂಪೌಂಡಿನ ಗೋಡೆಗಳ ಮೇಲೆ.... ಯಾರಾದರೂ ಬಿದ್ದರೆ,… Read more…