Home / ಕವನ / ಕವಿತೆ / ಕೃಷ್ಣನ್ ಕುಟ್ಟಿ

ಕೃಷ್ಣನ್ ಕುಟ್ಟಿ

ಕೆಲವರು ಕಾಲದ ಜೊತೆಗೆ
ಸರಳರೇಖೆಯ ಹಾಗೆ ಬೆಳೆಯಬಲ್ಲರು
ಕೃಷ್ಣನ್ ಕುಟ್ಟಿ
ಬೆಳೆದಿದ್ದು ಬೇರೆಯ ಥರ
ಅಪ್ಪ ಸತ್ತಾಗ ಕೃಷ್ಣನ್ ಕುಟ್ಟಿ
ಹದಿನೈದು ವರ್ಷದ ಹುಡುಗ
ತ್ರಿವೇಂದ್ರಮ್ ಸಮೀಪದ ಹುಡುಗ
ತ್ರಿವೇಂದ್ರಮ್ ತಲುಪಿದ ಹುಡುಗ
ತ್ರಿವೇಂದ್ರಮ್‍ನಲ್ಲಿ ನಿಂತ ಹುಡುಗ
ಈಗ ಹುಡುಗನಲ್ಲ ಆ ಹುಡುಗ

ಹುಡುಗರು ಬೆಳೆಯುತ್ತಾರೆ ಕಾಲದ ಜೊತೆಗೆ
ಹುಡುಗರು ಚಲಿಸುತ್ತಾರೆ ಬದುಕಿನ ಗತಿಗೆ
ಒಬ್ಬೊಬ್ಬರದೂ ಒಂದೊಂದು ಥರ
ಕೃಷ್ಟನ್ ಕುಟ್ಟಿ
ಕಡಲಿನ ಅಂಚಿಗೆ ಬಾಗಿದ
ವಯೋವೃದ್ಧ ತೆಂಗಿನ ಮರ

ಅವನ ಬದುಕೇ ಒಂದು ಕೋವಲಮ್ ಸಮುದ್ರ
ಮನೆಯ ಮಾಡಿನ ಹಾಗೆ ನೂರಾರು ಛಿದ್ರ
ಈಗ ಹುಡುಗನಲ್ಲ ಆ ಹುಡುಗ
ಅವನ ಪುಟ್ಟ ಕೂಸನ್ನು
ಎತ್ತಿ ಒಯ್ದಿದೆ ಮೃತ್ಯು ಎಂಬ ಭೀಕರ ಗಿಡುಗ

ಕೆಲವರು ಕಾಲದ ಜೊತೆಗೆ
ಸರಳರೇಖೆಯ ಹಾಗೆ ಚಲಿಸಬಲ್ಲರು
ಕೃಷ್ಣನ್ ಕುಟ್ಟಿ
ಬದುಕಿದ್ದು ಬೇರೆಯ ಥರ.
*****

Tagged:

Leave a Reply

Your email address will not be published. Required fields are marked *

ನಾಡಿಗೆ ಸ್ವಾತಂತ್ರ ಬಂದಿದೆ. ಎಲ್ಲೆಲ್ಲೂ ಸ್ವೈರಾಚಾರ ಹೆಚ್ಚಿದೆ. ಸ್ವಾತಂತ್ರವೆಂದರೆ ಸ್ವೇಚ್ಛಾಚಾರ ಎನ್ನುವಂತೆ ನಾಡಿನ ಜನ ವರ್ತಿಸುತ್ತಿದೆ; ಬಹುದಿನದ ಸಾಧನೆಯಿಂದ ಪಡೆದ ಸಿದ್ದಿಯನ್ನು ಮಣ್ಣುಗೂಡಿಸುತ್ತಲಿದೆ. ಇದನ್ನು ತಡೆಯಲಿಕ್ಕೆ ಭಾರತದ “ಹಳ್ಳಿ-ಹಳ್ಳಿಗಳಲ್ಲಿಯೂ ಗ್ರಾಮ ಸುರಕ್ಷಕ...

“ವತ್ಸಲಾ……..!” ನಿಟ್ಟುಸುರಿನೊಂದಿಗೆ ಕುಮಾರನು ಆರಾಮ ಕುರ್‍ಚಿಯ ಮೇಲೆ ದೊಪ್ಪನೆ ಬಿದ್ದು ಕೊಂಡನು. ಚಿಕ್ಕಬಾಲಕನೊಬ್ಬನು ಕಿಡಿಕಿಯಲ್ಲಿ ಹಣಿಕಿ ಹಾಕಿ “ಕುಮಾರಣ್ಣ” ಎಂದು ಕೂಗಿದಂತಾಯಿತು. ಎದ್ದು ನೋಡುತ್ತಾನೆ; ಕೆಂಪು ಮಸಿಯಿಂದ ವಿಳಾಸ ಬರೆದ...

“ಭೀಮಾ ಮಾಸ್ತರರನ್ನು ಇಷ್ಟ ಮೋಟರ ಸ್ಟಾಂಡಿನ ತನಕ ಕಳಿಸಿ ಬಾರಪ್ಪಾ.” ಬಾಯಕ್ಕ ನೆರೆಮನೆಯವರ ಆಳಿಗೆ ವಿನಯದಿಂದ ಹೇಳಿ ನನ್ನ ಕಡೆಗೆ ಹೊರಳಿ ಅಂದಳು: “ಬಿಡಿರಿ, ನಿಮ್ಮ ಬ್ಯಾಗ ತಗೊಂಡ ಬರತಾನ ಭೀಮಾ” “ಯಾತಕ್ಕ? ನಾ ಕೈಯೊಳಗ ಸಹಜ ಒಯ್ಯತೇನೆ” ನಾನು ಹೀಗೆ ಹೇಳಿದೆನಾದರೂ ಭೀಮಪ್...

ಸಿಗರೆಟ್‌ನ್ನು ಕೊನೆಯ ಸಲ ಎಳೆದು ಬದಿಗಿದ್ದ ಅಶ್‌ಟ್ರೆಯಲ್ಲಿ ಹಾಕಿದ. ಮೂರು ದಿನಗಳಿಂದ ಹೇಳಲಾಗದಂತಹ ಯಾತನೆ ಅವನನ್ನು ಹಿಂತಿಸುತ್ತಿದೆ. ಇದ್ದಿದ್ದು ಮಿತ್ರನ ಮಾತುಗಳು ಬಂದು ಕಿವಿಗೆ ಅಪ್ಪಳಿಸಿ ಎತ್ತ ನೋಡಿದರೂ ಅವನದೆ ಮುಖ ಕಾಣುತ್ತಿದೆ. “ನಾ ಹೇಳುವದನ್ನು ಅರ್‍ಥಮಾಡಿ ಕೊಳ್ಳು...

ಬೆಳಿಗ್ಗೆಯಿಂದ ಕತ್ತಲೆಯವರೆಗೂ ಬಸ್ ಸ್ಟಾಂಡಿನಲ್ಲಿ ಬಸ್ಸುಗಳಿಗೆ ಹತ್ತಿ ಇಳಿದುಕೊಂಡು ಎಷ್ಟು ಗೋಗರೆದು ಬಿಕ್ಷೆ ಬೇಡಿದರೂ ಆ ಹುಡುಗನಿಗೆ ಮಧ್ಯಾಹ್ನದ ಊಟ ಮಾಡುವಷ್ಟು ಹಣ ಸಂಗ್ರಹವಾಗುತ್ತಿರಲಿಲ್ಲ. ಮಧ್ಯಾಹ್ನ ಬಿಸ್ಕಿಟು ಮತ್ತು ನಲ್ಲಿ ನೀರು ಕುಡಿದು ಹಸಿವು ತಣಿಸಿದರೂ ರಾತ್ರಿಯ ಊಟಕ್ಕ...