ಗೋ – ಕುಲದ ಹಾಡು

ಗೋಪಾಲನ ಗೆಜ್ಜೆಯ ಗಲ ಗಲ ತುಂಬುತ್ತಿದೆ ಕಿವಿಯ
ಯಶೋದೆಯ ಜೋಗುಳದ ಹಾಡು
ತಟ್ಟಿ ಮಲಗಿಸಿದೆ ಇವನ ಜಗದೋದ್ಧಾರನ
ಈ ರಾತ್ರಿ ಯಾಕೆ ತಣ್ಣಗಿದೆ? ಬೇಸಿಗೆಯ ಉರಿ ಸೆಕೆಯು
ಜೀವ ಹಿಂಡಿ ಬೆವರು ಬಸಿಯಿಸಬೇಕು ಅದರ ಬದಲು
ತಣ್ಣನೆಯ ಗಾಳಿ ಕಚಗುಳಿ ಇಟ್ಟು ಜೀವ ನಲಿದಿದೆ
ನಂದಗೋಕುಲದ ರಾತ್ರಿ ಮಲ್ಲಿಗೆಯೊಂದು
ಅರಳಿ ಕಿಲ ಕಿಲ ನಕ್ಕಿದೆ ಅದೇ ಪರಿಮಳ
ತುಂಬಿ ತಡೆಯದಾಗಿದೆ ತನ್ನ ಸಂತೋಷ
ನನ್ನ ಘ್ರಾಣೇಂದ್ರಿಯ

ನಂದಗೋಕುಲದಲೊಬ್ಬ ತುಂಟ ಚುರುಕಿನ ಹುಡುಗ
ಬೆಣ್ಣೆಯಲ್ಲಿ ಹಲ್ಲುತಿಕ್ಕಿ ಹಾಲಲ್ಲಿ ಮುಖ ತೊಳೆದಿದ್ದು
ಅದೋ ತೊಟ್ಟಿಕ್ಕುತ್ತಿದೆ ಇಲ್ಲಿ ಅದಕ್ಕೆ ಬಾಯ್ತೆರೆದ
ಈ ಗೋವುಗಳು ಬಯ್ತುಂಬುವ ತವಕಕ್ಕೆ
ಜೀವ ಸಲ್ಲಿಸಿವೆ

ತನ್ನ ವಿನೋದದಲ್ಲೇ ಮಗ್ನ ಆ ನಗ್ನ
ಕೃಷ್ಣನನ್ನು ಕೊಳಲೂದ ಕರೆಯಲು
ಅವನ ಉಸಿರಿನ ಹಾದಿ ಹಿಡಿದು
ಹಾರಿದೆ ನನ್ನ ಜೀವದ ಹಕ್ಕಿ
ನಂದಗೋಕುಲದ ಬಾಗಿಲುಗಳು ಬೇಡ
ಕಿಟಕಿ ತರೆದರೂ ಸಾಕು
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಐಸುರ ಛೇ ಇದು ಏನು ಮೊಹರಮದ್ಹಬ್ಬ
Next post ಹಂತಗಳು

ಸಣ್ಣ ಕತೆ

  • ಆಮಿಷ

    ರಮಾ ಕುರ್ಚಿಯನ್ನೊರಗಿ ಕುಳಿತಿದ್ದಳು. ದುಃಖವೇ ಮೂರ್ತಿವೆತ್ತಂತೆ ಕುಳಿತಿದ್ದ ಅವಳ ಹೃದಯದಲ್ಲಿ ಭೀಕರ ಕೋಲಾಹಲ ನಡೆದಿತ್ತು. ಕಣ್ಣುಗಳು ಆಳಕ್ಕಿಳಿದಿದ್ದವು. ದೇಹದ ಅಣು ಅಣುವೂ ನೋವಿನಿಂದ ಮಿಡಿಯುತ್ತಿತ್ತು. "ತಾನೇಕೆ ದುಡುಕಿಬಿಟ್ಟೆ?… Read more…

  • ಕಳಕೊಂಡವನು

    ಸುಮಾರು ಒಂದು ಗಂಟೆಯ ಪಯಣದಿಂದ ಸುಸ್ತಾದ ಅವನು ಬಸ್ಸಿನಿಂದ ಇಳಿದು ರಸ್ತೆಯ ಬದಿಗೆ ಬಂದು ನಿಂತು ತನ್ನ ಕೈಗಡಿಯಾರ ದೃಷ್ಟಿಸಿದ. ಮಧ್ಯಾಹ್ನ ಒಂದು ಗಂಟೆ. ಒಮ್ಮೆ ಮುಖ… Read more…

  • ಟೋಪಿ ಮಾರುತಿ

    "ಏ ಕಾಗಿ, ಕಾಳೀ ಮಗನ! ಯಾಕ ಕೂಗ್ತೀಯಾ?" ಭಾವಿಯಲ್ಲಿಯ ಹಗ್ಗ ಮೇಲೆ ಕೆಳಗೆ ಹೋಗುತ್ತಿರುತ್ತದೆ. ಒಂದು ಮೊಳ ಹಗ್ಗ ಸೇದಿದರೆ ಅರ್‍ಧ ಮೊಳ ಒಳಗೆ ಸೇರಿರುತ್ತದೆ. "ಥೂ… Read more…

  • ಬಿರುಕು

    ಚಂಪಾ ಹಾಲು ತುಂಬಿದ ಲೋಟ ಕೈಯಲ್ಲಿ ಹಿಡಿದು ಒಳಗೆ ಬಂದಳು. ಎಂದಿನಂತೆ ಮೇಜಿನ ಮೇಲಿಟ್ಟು ಮಾತಿಲ್ಲದೆ ಹೊರಟು ಹೋಗುತ್ತಿದ್ದ ಅವಳು ಹೊರಡುವ ಸೂಚನೆಯನ್ನೇ ತೋರದಿದ್ದಾಗ ಮೂರ್‍ತಿ ಬೆಚ್ಚಿ… Read more…

  • ಜುಡಾಸ್

    "ಪೀಟರ್" "ಪ್ರಭು" "ಇನ್ನು ಮೂರುದಿನ ಮಾತ್ರ, ಪೀಟರ್. ಅನಂತರ...." ಮಾತು ಅರ್ಧಕ್ಕೆ ನಿಂತಿತು. ಯೇಸುಕ್ರಿಸ್ತ ತನ್ನ ಶಿಷ್ಯರೊಂದಿಗೆ ಕಾಲುನಡಿಗೆಯಲ್ಲಿ ಜೆರೂಸಲೆಂ ನಗರಕ್ಕೆ ನಡೆದು ಬರುತ್ತಿದ್ದ. ಹನ್ನೆರಡುಜನ ಶಿಷ್ಯರೂ… Read more…

cheap jordans|wholesale air max|wholesale jordans|wholesale jewelry|wholesale jerseys