Home / ಲೇಖನ / ಇತರೆ / ಬಿಳಿಯ ಬಣ್ಣದ ಕತೆ

ಬಿಳಿಯ ಬಣ್ಣದ ಕತೆ

ಬಿಳಿಯ ಬಣ್ಣ ಬಿಳಿಯ ಬಟ್ಟೆ ಬರೆ ಇತ್ಯಾದಿಗಳಿಂದ ಕೆಲ ಸೋಂಕುಗಳು ಬರುತ್ತಿವೆಯೆಂದು ಬೆಂಗಳೂರಿನ ಖಾಸಗಿ ವೈದ್ಯ ಕಾಲೇಜಿನ ಎಡ್ಮಂಡ್ ಫರ್‍ನಾಂಡಿಸ್ ಅವರು ನಡೆಸಿದ ಸಂಶೋಧನೆಯಿಂದ ದೃಢಪಟ್ಟಿದೆ.

ಶ್ರೀಯುತರು ತಮ್ಮ ವರದಿಯನ್ನು ಕೇಂದ್ರ ಸರ್‍ಕಾರದ ಆರೋಗ್ಯ ಕುಟುಂಬ ಕಲ್ಯಾಣ ಇಲಾಖೆ ಶೀಘ್ರ ನಿರ್‍ಧಾರ ಕೈಗೊಳ್ಳಬೇಕೆಂದು ಎಡ್ಮಂಡ್ ಫರ್‍ನಾಂಡಿಸ್ ಅಗ್ರಹಿಸಿದ್ದಾನೆ.

ಬಿಳಿ ಬಟ್ಟೆ ಬರೆ ಧರಿಸುವವರಿಗೊಂದು ಶಾಕ್ ನೀಡಿದ್ದಾನೆ ! ಬರೀ ಬಿಳಿ ಬಟ್ಟೆ ಧರಿಸುವುದರಿಂದ ವೃತ್ತಿಪರ ವೈದ್ಯರಾಗಲು ಮದರ್ ಥೇರಿಸಾ ಆಗಲು ಸಾಧ್ಯವಿಲ್ಲ. ರೋಗಿಗಳಿಗೆ ಭರವಸೆಯ ಉತ್ತಮ ಶೂಶ್ರೂಷೆ ನೀಡುವವರಾಗಿರಬೇಕು ಎಂದು ಶಿಫಾರಸ್ಸು ಕೂಡಾ ಮಾಡಿದ್ದಾನೆ.

ಶತ ಶತಮಾನಗಳಿಂದಲೂ ಬಿಳಿ ಬಟ್ಟೆ ಧರಿಸುವುದು ವಾಡಿಕೆ ಸಂಪ್ರದಾಯವಾಗಿ ಬಂದಿದೆ. ಈ ಬಿಳಿಯ ಬಟ್ಟೆಗಳೇ ವೈರಸ್‌ಗಳನ್ನು ಹರಡುತ್ತಿದೆಯೆಂಬುದು ಹಲವರಿಗೆ ತಿಳಿದಿರುವುದಿಲ್ಲ.

ವೈದ್ಯರು- ವಿದ್ಯಾರ್ಥಿಗಳು, ಆಸ್ಪತ್ರೆಯ ಸಿಬ್ಬಂದಿ, ಬರೀಯ ಬಿಳಿ ಬಟ್ಟೆ ಧರಿಸಿ ಎಲ್ಲ ಕಡೆ, ಹೊರ ಒಳಗೆ ಅಡ್ಡಾಡುವರು. ಇದರಿಂದಾಗಿ ಸೊಂಕುಗಳು ಹರಡಲು ರೋಗ ಉಲ್ಬಣಗೊಳ್ಳಲು ಕಾರಣವಾಗಿದೆಯೆಂದು ದೃಢ ಪಡಿಸಿರುವರು.

೨೦೦೭ ರಲ್ಲಿ ಯುನೈಟೆಡ್ ಕಿಂಗ್ ಡಮ್‌ನಲ್ಲಿ ನೀಳ ತೋಳಿನ ಕೋಟ್ ಧರಿಸುವುದನ್ನು ನಿಲ್ಲಿಸುವ ಬಗ್ಗೆ ನಿಷೇಧ ಹೇರುವ ನಿರ್ಧಾರ ಕೈ ಗೊಂಡಿರುವರು.

೨೦೦೯ ರಲ್ಲಿ ಅಮೇರಿಕ ವೈದ್ಯಕೀಯ ಸಂಸ್ಥೆ ಅದನ್ನು ಅನುಸರಿಸಲು ಮುಂದಾಯಿತು. ಆದರೆ ಪ್ರತಿರೋಧದ ಹಿನ್ನಲೆಯಲ್ಲಿ ಅಂಥ ನಿರ್‍ಧಾರ ಕೈಗೊಳ್ಳಲು ಸಾಧ್ಯವಾಗಲಿಲ್ಲ ಎಂದು ಎಡ್ಮಂಡ್ ಫರ್‍ನಾಂಡಿಸ್ ತಮ್ಮ ಸಂಶೋಧನೆಯಲ್ಲಿ ವಿವರಿಸಿದ್ದಾರೆ.

ಹೀಗೆ ಸಂಶೋಧನೆ ಕೈಗೊಳ್ಳುತ್ತಾ ಹೋದಂತೆಲ್ಲ ಹೊಸ ಹೊಸ ವಿಚಾರಗಳು ಹೊರ ಹೊಮ್ಮುತ್ತವೆ!

ನಾವು-ನೀವು ಎಲ್ಲರೂ ಸೇರಿ-ಎಡ್ಮಂಡ್ ಫರ್‍ನಾಂಡಿಸ್ ಅವರಿಗೆ ಆಲ್ ದಿ ಬೆಸ್ಟ್ ಹೇಳೋಣವಲ್ಲವೇ?
*****

Tagged:

Leave a Reply

Your email address will not be published. Required fields are marked *

(ಒಂದು ಐತಿಹಾಸಿಕ ಕತೆ) ಹ್ಹಃ ಹ್ಹಃ ಹ್ಹಃ! ಅಹ್ಹಃ ಅಹ್ಹಃ ಅಹ್ಹಃ!! ಗಝುನಿ ಮಹಮೂದನಿಗೆ ಹಿಡಿಸಲಾರದ ನಗೆ. ನಕ್ಕು ನಕ್ಕು ಅವನ ಹೊಟ್ಟೆ ನೋಯುತ್ತಿದ್ದಿತು. ಆದರೂ ಅವನ ಆ ತಿರಸ್ಕಾರದ ನಗೆ ತಡೆಯಲಾರದಾಯಿತು. ಅದೊಂದು ಸುಪ್ರಸಿದ್ದವಾದ ಸೋಮನಾಥ ದೇವಾಲಯ. ಭಾರತದ ವೈಭವವನ್ನು ವಿಶ್ವಕ್ಕೆ ತೋ...

ಸರಲಾಕ್ಷ ಹುಲಿಮೀಸೆಯು ಮನೆಯಲ್ಲಿ ಬಂದಿರಲಾರಂಭಿಸಿದಂದಿನಿಂದ ತಾನು ತೊಂದರೆಗೊಂಡು ಬೇಸತ್ತು ಹೋಗಿರುವೆನೆಂದು ವಸತಿಗೃಹದ ಸ್ವಾಮಿನಿಯಾದ ಲೀಲಾಬಾಯಿಯು ದೂರಿಕೊಳ್ಳುತ್ತಿದ್ದಳು. “ಕೆಟ್ಟ ಮೋರೆಯವರೂ ಅಸಭ್ಯರೂ ಸುಟ್ಟಮನೆಯವರೂ ಸುಡದ ಮನೆಯವರೂ ತೆರವಿಲ್ಲದೆ ನನ್ನ ಮನೆಗೆ ಬರುತ್ತಿರುವ...

ಅವಳು ಅಡುಗೆ ಮನೆಯ ಕಪ್ಪಾದ ಡಬ್ಬಿಗಳನ್ನು, ಉಳಿದ ಸಾಮಾನುಗಳನ್ನು ತೆಗೆದು ತೊಳೆಯಲು ಆ ಮಣ್ಣಿನ ಮಾಡು ಹಂಚಿನ ಮನೆಯ ಮುಂದಿನ ತೆಂಗಿನಕಟ್ಟೆಯಲ್ಲಿ ಹಾಕಿದ ಅಗಲ ಹಾಸುಗಲ್ಲ ಮೇಲೆ ಕೈಲಿ ಹಿಡಿದಷ್ಟು ತಂದು ತಂದು ಇಡುತ್ತಿದ್ದಳು. ಏಳರ ಬಾಲೆ ಮಗಳು ಕೂಡ ತನ್ನ ಕೈಗೆ ಎತ್ತುವಂತಹ ಡಬ್ಬಿಗಳನ್ನು...

ಆಹಾ! ಏನು ಕಡಲು! ಅ೦ತವಿಲ್ಲದ ಕಡಲು!! ಅಪಾರವಾಗಿಹ ಕಡಲು! ದಿಟ್ಟಿ ತಾಗದ ಕಡಲು!! ಆ ಕಡಲ ಒಡಲಲ್ಲಿ ಏನು ತೆರೆ! ಏನು ನೊರೆ!! ಏನು ಅಂದ! ಎನಿತು ಚಂದ! ಬಿಚ್ಚಿ ಮುಚ್ಚುವ ಅದರ ನಯವಾದ ತುಟಿಗಳು ಹೊನ್ನರವಿ ಎಸೆದಿರುವ ಚಿನ್ನದಲುಗಳೇಸು! ಬಣ್ಣ ಬಣ್ಣಗಳುಗುವ ಅಚ್ಚು ಪಡಿಯಚ್ಚುಗಳ ಹೊಳಪಿನ ಏನ...

ಸರ್, ಗುಡ್ ಮಾರ್ನಿಂಗ್, ಮೇ ಐ ಕಮೀನ್ ಸರ್ – ನಿತ್ಯ ಆಫೀಸಿನ ಅವಧಿ ಪ್ರಾರಂಭವಾಗುತ್ತಲೇ ಹಿಂದಿನ ದಿನ ರೆಡಿ ಮಾಡಿದ ಹತ್ತಾರು ಕಾಗದ ಪತ್ರಗಳಿಗೆ ಸಹಿ ಪಡೆಯಲು, ಇಲ್ಲವೇ ಹಿಂದಿನ ದಿನದ ಎಲ್ಲ ಫೈಲುಗಳ ಚೆಕ್ ಮಾಡಿಸಲು, ಕೈಯಲ್ಲಿ ಫೈಲುಗಳ ಕಟ್ಟು ಹಿಡಿದು ಬಾಗಿಲ ಮರೆಯಲ್ಲಿ ನಿಂತು ...

ಕೋತಿಯಿಂದ ನಿಮಗಿನ್ನೆಂಥಾ ಭಾಗ್ಯ! ನೀವು ಹೇಳುವ ಮಾತು ಸರಿ! ಬಿಡಿ! ತುಂಗಮ್ಮನವರೆ. ಇದೇನೆಂತ ಹೇಳುವಿರಿ! ಯಾರಾದರೂ ನಂಬುವ ಮಾತೇನರೀ! ಕೊತೀಂತೀರಿ. ಬಹುಲಕ್ಷಣವಾಗಿತ್ತಿರಿ ಎಂತೀರಿ? ಅದು ಹೇಗೋ ಎನೋ, ನಾನಂತೂ ನಂಬಲಾರನರೀ!” “ಹೀಗೆಂತ ನೆರ ಮನೆ ಪುಟ್ಟಮ್ಮನವರು ಹೇಳಿದರು....

ಕೀಲಿಕರಣ: ಕಿಶೋರ್ ಚಂದ್ರ