ಮುರುಳಿ ಮೌನವಾಗಿದೆ

ಏಕೆ ಮುರಳೀ
ನಿನ್ನ ಕೊಳಲು ನುಡಿಯದಾಗಿದೆ
ಸಪ್ತವರ್ಣ ಸಪ್ತಸ್ವರ
ಮಿಡಿಯದಾಗಿದೆ

ರಾಗನಂದನದಲೀ ಪಿಕವು
ರೆಕ್ಕೆ ಮುರಿದು ಅಡಗಿದೆ
ಭಾವತಂತಿ ಕಡಿದು ಹೋಗಿ
ರಾಗ ಸೆಲೆಯು ಉಡುಗಿದೆ

ತಂಪೆಲರಲಿ ಸಿಡಿಮದ್ದಿನ
ಗಂಧಕವು ತುಂಬಿದೆ
ತಣ್ಣೀರಲು ಕಣ್ಣೀರಿನ
ಲಾವಾರಸ ಬೆರೆತಿದೆ

ಓಟದಲ್ಲೇ ಕಾವ್ಯ ಉದಿಪ
ಕಾಲವೆಲ್ಲಿ ಹೋಗಿದೆ
ಕಿರುನಗೆಗಳು ದಾವಾನಲವಾಗಿ
ಕಾವ್ಯ ದಹಿಸಿದೆ

ಕಾವ್ಯ ಸೆಲೆಯ ನೂರುಬೇರು
ಕಮರಿ ಹೋಗಿ ಬಿಟ್ಟಿದೆ
ಧನಕನಕದ ಝಣಝಣದಲಿ
ಭಾವಲೋಕ ಬತ್ತಿದೆ

ಅಡ್ಡಗೋಡೆ ಕುಟ್ಟಿ ಕೆಡೆವ
ಕಾವ್ಯ ಹುಟ್ಟಬೇಕಿದೆ
ಮನುಜಕುಲವು ಒಂದೇ ಎಂಬ
ನಾದ ನುಡಿಸಲಾಗದೆ

ಮುರಳೀ ಓ ಮುರಳೀ
ಏಕೆ ಮುರಳಿ, ಎಕೆ ಮುರಳಿ
ಏಕೆ ಮುರಳೀ
ನಿನ್ನ ಕೊಳಲು
ಮೌನವಾಗಿದೆ?

೨೦೦೨
*****

 

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಜೀವನ ಕಾವ್ಯ
Next post ಧ್ಯಾನಿಸಬಹುದಾದ ದೇವರು

ಸಣ್ಣ ಕತೆ

  • ಹೃದಯ ವೀಣೆ ಮಿಡಿಯೆ….

    ಒಂದು ವಾರದಿಂದಲೇ ಮನೆಯಲ್ಲಿ ತಯಾರಿ ನಡೆದಿತ್ತು. ತಂಗಿಯನ್ನು ನೋಡಲು ಬೆಂಗಳೂರಿನಿಂದ ವರ ಬರುವವನಿದ್ದ. ಗೋಪಿ ಅವಳನ್ನು ಆ ವರನ ಹೆಸರೆತ್ತಿ ಚುಡಾಯಿಸುತ್ತಿದ್ದ, ರೇಗಿಸುತ್ತಿದ್ದ. ಅವಳ ಕೆನ್ನೆ ಕೆಂಪಗೆ… Read more…

  • ಉಪ್ಪು

    ಸಂಜೆ ಮೆಸ್ಸಿನಲ್ಲಿ ಚಹಾ ಕುಡಿಯುತ್ತಿದ್ದಾಗ ಎದುರು ಕುಳಿತ ಪ್ರೊಫ಼ೆಸರ್ ಬಾನಲಗಿಯವರು ಕೇಳಿದರು : "ಸ್ಟೈಲಿಸ್ಟಿಕ್ಸ್ ಬಗ್ಗೆ ನಿನ್ನ ಅಭಿಪ್ರಾಯ ಏನು?" ಅವರು ಬಿಸಿಯಾದ ಚಹಾದ ನೀರನ್ನು ಜಾಡಿಯಿಂದ… Read more…

  • ಶಾಕಿಂಗ್ ಪ್ರೇಮ ಪ್ರಕರಣ

    ಅವನು ಅವಳನ್ನು ದಿನವೂ ತಪ್ಪದೇ ನೋಡುತ್ತಿದ್ದ. ಅವಳು ಕಾಲೇಜಿಗೆ ಹೋಗುವ ಹೊತ್ತಿಗೆ ಅವಳನ್ನು ಹಿಂಬಾಲಿಸುತ್ತಿದ್ದ. ಕಾಲೇಜು ಬಿಡುವ ಹೊತ್ತಿಗೆ ಗೇಟಿನ ಎದುರು ಕಾದು ನಿಂತು ಮತ್ತೆ ಹಿಂಬಾಲಿಸುತ್ತಿದ್ದ.… Read more…

  • ಕೇರೀಜಂ…

    ಮಂಜೇಲ್ಮುಂಜೇಲಿ ಯೆದ್ಬೇಗ್ನೇ ಕೇರ್ಮುಂದ್ಗಡೆ ಸಿವಪ್ಪ ಚೂರಿ, ಕತ್ತಿ, ಕುಡ್ಗೋಲು, ಯಿಳ್ಗೆಮಣೆ, ಕೊಡ್ಲಿನ... ಮಸ್ಗೆಲ್ಗೆ ಆಕಿ, ಗಸ್ಗಾಸಾ... ನುಣ್ಗೆ ತ್ವಟ್ವಟ್ಟೇ... ನೀರ್ಬಟ್ಗಾಂತಾ, ಜ್ವಲ್ಸುರ್ಗಿಗ್ಯಾಂತಾ, ಅವ್ಡುಗಚ್ಗೊಂಡೂ ಮಸೆಯತೊಡ್ಗಿದ್ವನ... ಕಟ್ದಿ ತುರ್ಬು,… Read more…

  • ಗ್ರಹಕಥಾ

    [ಸತಿಯು ಪತಿಯ ಹಾಗೂ ಪತಿಯು ಸತಿಯ ಮನೋವೃತ್ತಿಗಳನ್ನು ಅರಿತು ಪರಸ್ಪರರು ಪರಸ್ಪರರನ್ನು ಸಂತೋಷಗೊಳಿಸಿದರೆ ಮಾತ್ರ ಸಂಸಾರವು ಉಭಯತರಿಗೂ ಸುಖಮಯವಾಗುತ್ತದೆ ಹೊರತಾಗಿ, ಅವರಲ್ಲಿ ಯಾರಾದರೊಬ್ಬರು ಅಹಂಭಾವದಿಂದ ಪ್ರೇರಿತರಾಗಿ, ಪರರ… Read more…

cheap jordans|wholesale air max|wholesale jordans|wholesale jewelry|wholesale jerseys