ಮುರುಳಿ ಮೌನವಾಗಿದೆ

ಏಕೆ ಮುರಳೀ
ನಿನ್ನ ಕೊಳಲು ನುಡಿಯದಾಗಿದೆ
ಸಪ್ತವರ್ಣ ಸಪ್ತಸ್ವರ
ಮಿಡಿಯದಾಗಿದೆ

ರಾಗನಂದನದಲೀ ಪಿಕವು
ರೆಕ್ಕೆ ಮುರಿದು ಅಡಗಿದೆ
ಭಾವತಂತಿ ಕಡಿದು ಹೋಗಿ
ರಾಗ ಸೆಲೆಯು ಉಡುಗಿದೆ

ತಂಪೆಲರಲಿ ಸಿಡಿಮದ್ದಿನ
ಗಂಧಕವು ತುಂಬಿದೆ
ತಣ್ಣೀರಲು ಕಣ್ಣೀರಿನ
ಲಾವಾರಸ ಬೆರೆತಿದೆ

ಓಟದಲ್ಲೇ ಕಾವ್ಯ ಉದಿಪ
ಕಾಲವೆಲ್ಲಿ ಹೋಗಿದೆ
ಕಿರುನಗೆಗಳು ದಾವಾನಲವಾಗಿ
ಕಾವ್ಯ ದಹಿಸಿದೆ

ಕಾವ್ಯ ಸೆಲೆಯ ನೂರುಬೇರು
ಕಮರಿ ಹೋಗಿ ಬಿಟ್ಟಿದೆ
ಧನಕನಕದ ಝಣಝಣದಲಿ
ಭಾವಲೋಕ ಬತ್ತಿದೆ

ಅಡ್ಡಗೋಡೆ ಕುಟ್ಟಿ ಕೆಡೆವ
ಕಾವ್ಯ ಹುಟ್ಟಬೇಕಿದೆ
ಮನುಜಕುಲವು ಒಂದೇ ಎಂಬ
ನಾದ ನುಡಿಸಲಾಗದೆ

ಮುರಳೀ ಓ ಮುರಳೀ
ಏಕೆ ಮುರಳಿ, ಎಕೆ ಮುರಳಿ
ಏಕೆ ಮುರಳೀ
ನಿನ್ನ ಕೊಳಲು
ಮೌನವಾಗಿದೆ?

೨೦೦೨
*****

 

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಜೀವನ ಕಾವ್ಯ
Next post ಧ್ಯಾನಿಸಬಹುದಾದ ದೇವರು

ಸಣ್ಣ ಕತೆ

  • ವಾಮನ ಮಾಸ್ತರರ ಏಳು ಬೀಳು

    "ಏಳು!" ಅಂದರು ವಾಮನ ಮಾಸ್ತರರು. ರಾಜಪ್ಪ ಏಳಲಿಲ್ಲ. ಎಂದಿನಂತೆ ಕಿಟಿಕಿಯ ಹೊರಗೆ ಹೆದ್ದಾರಿಯಲ್ಲಿ ಹೋಗುತ್ತಿದ್ದ ವಾಹನಗಳನ್ನೂ ದಾರಿಹೋಕರನ್ನೂ ನೋಡುತ್ತ, ಡೆಸ್ಕಿನ ಮೇಲೆ ಬಲಗೈಯ ಸೊಂಟು ಊರಿ, ಕೈಯಮೇಲೆ… Read more…

  • ವಿಷಚಕ್ರ

    "ಚಂದ್ರು, ಒಳಗೆ ಬಾಮ್ಮ. ಮಳೆ ಬರುತ್ತೆ." ತಾಯಿ ಕೂಗಿದುದನ್ನು ಕೇಳಿ ಚಂದ್ರು ನಕ್ಕ. ಒಳಕ್ಕೆ ಬರುವುದಿರಲಿ, ಪಕ್ಕದ ಮನೆಯ ಹುಡುಗಿ ವೇದಳೊಂದಿಗೆ ಆಡುತ್ತಿದ್ದುದನ್ನು ನಿಲ್ಲಿಸಲೂ ಇಲ್ಲ. "ನೋಡೇ-ನಾನು… Read more…

  • ತೊಳೆದ ಮುತ್ತು

    ಕರ್ನಾಟಕದಲ್ಲಿ ನಮ್ಮ ಮನೆತನವು ಪ್ರತಿಷ್ಠಿತವಾದದ್ದು. ವರ್ಷಾ ನಮಗೆ ಇನಾಮು ಭೂಮಿಗಳಿಂದ ಎರಡು- ಮೂರು ಸಾವಿರ ರೂಪಾಯಿಗಳ ಉತ್ಪನ್ನ. ನಮ್ಮ ತಂದೆಯವರಾದ ರಾವಬಹಾದ್ದೂರ ಅನಂತರಾಯರು ಡೆಪುಟಿ ಕಲೆಕ್ಟರರಾಗಿ ಪೆನ್ಶನ್ನ… Read more…

  • ಅಂತರಂಗ ಶುದ್ಧಿ ಬಹಿರಂಗ ಶುದ್ಧಿ

    ಸ್ವಾಮೀಜಿಗಳಿಗೆ ಈವತ್ತಂತೂ ಮೈ ತುರಿಸಿಕೊಳ್ಳಲೂ ಪುರುಸೊತ್ತಿಲ್ಲ. ಹಲವು ಕಾರ್ಯಕ್ರಮಗಳ ಒತ್ತಡ, ರಾಜಕಾರಣಿಗಳ ಭೇಟಿ ಜೊತೆಗೆ ತಂಡೋಪತಂಡವಾಗಿ ಆಶೀರ್ವಾದ ಬೇಡಿ ಬರುವ ಭಕ್ತರ ಕಿರಿಕಿರಿ. ಇದರ ಮದ್ಯೆ ಜಪತಪ,… Read more…

  • ಕೇರೀಜಂ…

    ಮಂಜೇಲ್ಮುಂಜೇಲಿ ಯೆದ್ಬೇಗ್ನೇ ಕೇರ್ಮುಂದ್ಗಡೆ ಸಿವಪ್ಪ ಚೂರಿ, ಕತ್ತಿ, ಕುಡ್ಗೋಲು, ಯಿಳ್ಗೆಮಣೆ, ಕೊಡ್ಲಿನ... ಮಸ್ಗೆಲ್ಗೆ ಆಕಿ, ಗಸ್ಗಾಸಾ... ನುಣ್ಗೆ ತ್ವಟ್ವಟ್ಟೇ... ನೀರ್ಬಟ್ಗಾಂತಾ, ಜ್ವಲ್ಸುರ್ಗಿಗ್ಯಾಂತಾ, ಅವ್ಡುಗಚ್ಗೊಂಡೂ ಮಸೆಯತೊಡ್ಗಿದ್ವನ... ಕಟ್ದಿ ತುರ್ಬು,… Read more…