ಸಾವಿತ್ರಿ

(ಕೆಲವು ಸಾಲುಗಳು)

ಕಾಂಬನೊಬ್ಬ ಒಳಗಿಹನು ಬಲ್ಲನೋರಣದ ಹಂಚು-ಸಂಚು.
ಅದು ಕಾಣದಣ್ಣ ಕಾಲಲ್ಲೆ ಇದು ಅಡಿಗಡಿಗು ಅದರ ಅಂಚು.
ಊದಿ ಉಸಿರನುಬ್ಬಿಸುವನೆಮ್ಮ ಕಣ್ಣಾಚೆ ಶಿಖರಗಳಿಗೆ
ಹುಟ್ಟು-ಬಾಳುಗಳ ದರಿಗೆ ನೂಗಿದೊಲು ಹಿಂದೆ ಒಮ್ಮೆ ನಮಗೆ
ಕಾಲಪಥಿಕನಾ ಕಿವಿಗೆ ಮುಟ್ಟಿತಾ ಕರೆಯು, ಕೇಳಿ ಸೊಲ್ಲ
ಒಂಟಿಯಾಗಿ ಏಕಾಂತಿಯಾಗಿ ಅದರಾಳವವನೆ ಬಲ್ಲ.
ಹೊರಟ ಯಾತ್ರಿ ದಿಕ್ತಟದ ಶಕ್ತಿಯಲಿ ಮೂಕಮುಗ್ಧನಾಗಿ.
* * *

ಕಾಲ-ಜನಿತ ಮಾನವರ ಈ ಜ್ಞಾನ ಇತ್ತು ಮೊದಲು ಅವಗೆ
ಬೆಳಕು-ಮನದ ತೆರೆ ಸರಿದು ಹಿಂದೆ ಅವ ಹೊಕ್ಕನಾಗ ಒಳಗೆ.
ನಮ್ಮ ಬಗೆಗೆ ಕೇವಲದ ಕಣ್ಗೆಮರೆಯಾಗಿ ಮುಸುಕ ನಡುವೆ
ಗೂಢಗವಿಯ ಅವ ಕಂಡ, ಮತ್ತೆ ಮುಂದಾ ರಹಸ್ಯದ್ವಾರ
ಆತ್ಮನೊಳಗಿನಾ ದೃಷ್ಟಿ ದಾನದಾ ಬಾವಿ ಅದರ ಬಳಿಗೆ
ಅಲ್ಲಿ ಇತ್ತು ಶ್ರೀವಿಜಯಪಕ್ಷಿ ಕಾವ್ಗೊಡುತ ಧ್ಯಾನಲೀನ
ಇಲ್ಲ ಬೆಳಕೆ ಆಕಾಶ ಸರ್ವಸರ್ವತ್ರ ಜ್ಞಾನತಾನ.
ಪ್ರಾಣಸ್ಪಂದನವು ನಿಂತುಬಿಟ್ಟರೂ ಸಾವು ದುಮುಕ ಸಲ್ಲ.
ಉಸಿರು ಹಿಂಗಿಯೂ ಬಗೆಯು ಇಂಗಿಯೂ ಆತ ಬದುಕಬಲ್ಲ.
* * *

ದೇವರೆಚ್ಚರಿವ ಉದಯರಾಗ ಬ್ರಾಹ್ಮೀಮುಹೂರ್ತದಲ್ಲಿ
ದಿವ್ಯಘಟನೆ ಘಟಿಸುವದು ಇತ್ತು ಆ ದೇವಯಾನದಲ್ಲಿ
ತನ್ನ ಶಾಶ್ವತಿಯ ಗರ್ಭಗುಡಿಯ ನಿರ್ದೀಪ್ತ ಐಕ್ಯವಲ್ಲಿ
ಮೌನದಂಚಿನಲಿ ಮೈಯು ಚಾಚಿ ಮಲಗಿತ್ತು ಮಿಸುಕದಾಗಿ.
ನಿಶೆಯ ಮಹಮನವು ಏನೊ ಮುಂಗಂಡು ಸ್ವಯಂ ಲೀನವಾಗಿ.
ಅನಿರ್ಭೇದ್ಯವಿದು ಇದು ಅಪಾರ ಎನಿಸುವದಗಾಧ ಚಿಂತೆ
ಆ ಅಮೂರ್ತ ಆನಂತ್ಯದಾಳ ಪಾತಾಳಖಾತ ಬಂತೇ
ಕಣ್ಣು ಮುಚ್ಚಿದಾ ಧ್ಯಾನಗಮ್ಯ ಸಂಕೇತ ಚಿತ್ರದಂತೆ.
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಬಾಳಿದು ಕಾಳೆಗದ ಕಣ!
Next post ಸುಭದ್ರೆ – ೭

ಸಣ್ಣ ಕತೆ

  • ಆನುಗೋಲು

    ರೈಲು ನಿಲ್ದಾಣದಲ್ಲಿ ನಿಂತಿತು! "ಪೇಪರ! ಡೇಲಿ ಪೇಪರ!........ಟಾಯಿಮ್ಸ, ಫ್ರೀ ಪ್ರೆಸ್, ಸಕಾಳ! ಪ್ಲಾಟ ಫಾರ್ಮ ಮೇಲಿನ ಜನರ ನೂರೆಂಟು ಗದ್ದಲದಲ್ಲಿ ಈ ಧ್ವನಿಯು ಎದ್ದು ಕೇಳಿಸುತ್ತಿತ್ತು. ಹೋಗುವವರ… Read more…

  • ವಿಷಚಕ್ರ

    "ಚಂದ್ರು, ಒಳಗೆ ಬಾಮ್ಮ. ಮಳೆ ಬರುತ್ತೆ." ತಾಯಿ ಕೂಗಿದುದನ್ನು ಕೇಳಿ ಚಂದ್ರು ನಕ್ಕ. ಒಳಕ್ಕೆ ಬರುವುದಿರಲಿ, ಪಕ್ಕದ ಮನೆಯ ಹುಡುಗಿ ವೇದಳೊಂದಿಗೆ ಆಡುತ್ತಿದ್ದುದನ್ನು ನಿಲ್ಲಿಸಲೂ ಇಲ್ಲ. "ನೋಡೇ-ನಾನು… Read more…

  • ಗುಲ್ಬಾಯಿ

    ನಮ್ಮ ಪರಮಮಿತ್ರರಾದ ಗುಂಡೇರಾವ ಇವರ ನೇತ್ರರೋಗದ ಚಿಕಿತ್ಸೆ ಗಾಗಿ ನಾವು ಮೂವರು ಮಿರ್ಜಿಯಲ್ಲಿರುವ ಡಾಕ್ಟರ ವಾಲ್ನೆಸ್ ಇವರ ಔಷಧಾಲಯಕ್ಕೆ ಬಂದಿದ್ದೆವು. ಗುಂಡೇರಾಯರು ಹಗಲಿರುಳು ಔಷಧಾಲಯದಲ್ಲಿಯೇ ಇರಬೇಕಾಗಿರುವದರಿಂದ ಆ… Read more…

  • ಕತೆಗಾಗಿ ಜತೆ

    ರಾಜರ ಮನಿಲಿ ವಂದ್ ಮಡವಾಳವ ಬಟ್ಟೆ ಶೆಳೀಲಿಕ್ಕಿದಿದ್ದ. ಅವನಿಗೆ ನೆಂಟ್ರ ಮನಿಗೆ ವಂದಿವ್ಸ ಹೋಗಬೇಕು ಹೇಳಿರೆ ಸೌಡಾಗುದಿಲ್ಲ. ನಿತ್ಯೆ ಬಟ್ಟೆ ಶೆಳುದ್ ವಂದೇಯ. ವಂದಾನೊಂದ ದಿವಸ ಇವತ್… Read more…

  • ಅಪರೂಪದ ಬಾಂಧವ್ಯ

    ಹೆತ್ತ ತಾಯಿ ಬಿಟ್ಟುಹೋದ ಎರಡು ಮುಂಗಸಿ ಮರಿಗಳು ಅನಾಥವಾಗಿ ಚೀರಾಡುತ್ತಿದ್ದುದು, ಮನೆಯ ಮಕ್ಕಳ ಕಣ್ಣಿಗೆ ಬಿದ್ದಿತು. "ಅಪ್ಪಾ ಇಲ್ಲಿ ನೋಡು, ಮುಂಗುಸಿ ಮರಿ ಅಳುತ್ತಾ ಇವೆ. ಅದಕ್ಕೆ… Read more…