Home / ಕವನ / ಕವಿತೆ / ಸಾವಿತ್ರಿ

ಸಾವಿತ್ರಿ

(ಕೆಲವು ಸಾಲುಗಳು)

ಕಾಂಬನೊಬ್ಬ ಒಳಗಿಹನು ಬಲ್ಲನೋರಣದ ಹಂಚು-ಸಂಚು.
ಅದು ಕಾಣದಣ್ಣ ಕಾಲಲ್ಲೆ ಇದು ಅಡಿಗಡಿಗು ಅದರ ಅಂಚು.
ಊದಿ ಉಸಿರನುಬ್ಬಿಸುವನೆಮ್ಮ ಕಣ್ಣಾಚೆ ಶಿಖರಗಳಿಗೆ
ಹುಟ್ಟು-ಬಾಳುಗಳ ದರಿಗೆ ನೂಗಿದೊಲು ಹಿಂದೆ ಒಮ್ಮೆ ನಮಗೆ
ಕಾಲಪಥಿಕನಾ ಕಿವಿಗೆ ಮುಟ್ಟಿತಾ ಕರೆಯು, ಕೇಳಿ ಸೊಲ್ಲ
ಒಂಟಿಯಾಗಿ ಏಕಾಂತಿಯಾಗಿ ಅದರಾಳವವನೆ ಬಲ್ಲ.
ಹೊರಟ ಯಾತ್ರಿ ದಿಕ್ತಟದ ಶಕ್ತಿಯಲಿ ಮೂಕಮುಗ್ಧನಾಗಿ.
* * *

ಕಾಲ-ಜನಿತ ಮಾನವರ ಈ ಜ್ಞಾನ ಇತ್ತು ಮೊದಲು ಅವಗೆ
ಬೆಳಕು-ಮನದ ತೆರೆ ಸರಿದು ಹಿಂದೆ ಅವ ಹೊಕ್ಕನಾಗ ಒಳಗೆ.
ನಮ್ಮ ಬಗೆಗೆ ಕೇವಲದ ಕಣ್ಗೆಮರೆಯಾಗಿ ಮುಸುಕ ನಡುವೆ
ಗೂಢಗವಿಯ ಅವ ಕಂಡ, ಮತ್ತೆ ಮುಂದಾ ರಹಸ್ಯದ್ವಾರ
ಆತ್ಮನೊಳಗಿನಾ ದೃಷ್ಟಿ ದಾನದಾ ಬಾವಿ ಅದರ ಬಳಿಗೆ
ಅಲ್ಲಿ ಇತ್ತು ಶ್ರೀವಿಜಯಪಕ್ಷಿ ಕಾವ್ಗೊಡುತ ಧ್ಯಾನಲೀನ
ಇಲ್ಲ ಬೆಳಕೆ ಆಕಾಶ ಸರ್ವಸರ್ವತ್ರ ಜ್ಞಾನತಾನ.
ಪ್ರಾಣಸ್ಪಂದನವು ನಿಂತುಬಿಟ್ಟರೂ ಸಾವು ದುಮುಕ ಸಲ್ಲ.
ಉಸಿರು ಹಿಂಗಿಯೂ ಬಗೆಯು ಇಂಗಿಯೂ ಆತ ಬದುಕಬಲ್ಲ.
* * *

ದೇವರೆಚ್ಚರಿವ ಉದಯರಾಗ ಬ್ರಾಹ್ಮೀಮುಹೂರ್ತದಲ್ಲಿ
ದಿವ್ಯಘಟನೆ ಘಟಿಸುವದು ಇತ್ತು ಆ ದೇವಯಾನದಲ್ಲಿ
ತನ್ನ ಶಾಶ್ವತಿಯ ಗರ್ಭಗುಡಿಯ ನಿರ್ದೀಪ್ತ ಐಕ್ಯವಲ್ಲಿ
ಮೌನದಂಚಿನಲಿ ಮೈಯು ಚಾಚಿ ಮಲಗಿತ್ತು ಮಿಸುಕದಾಗಿ.
ನಿಶೆಯ ಮಹಮನವು ಏನೊ ಮುಂಗಂಡು ಸ್ವಯಂ ಲೀನವಾಗಿ.
ಅನಿರ್ಭೇದ್ಯವಿದು ಇದು ಅಪಾರ ಎನಿಸುವದಗಾಧ ಚಿಂತೆ
ಆ ಅಮೂರ್ತ ಆನಂತ್ಯದಾಳ ಪಾತಾಳಖಾತ ಬಂತೇ
ಕಣ್ಣು ಮುಚ್ಚಿದಾ ಧ್ಯಾನಗಮ್ಯ ಸಂಕೇತ ಚಿತ್ರದಂತೆ.
*****

Tagged:

Leave a Reply

Your email address will not be published. Required fields are marked *

ಅವಳು ಯಾವ ಹುಡುಗರ ಜೊತ ನಿಂತು ಮಾತನಾಡಿದರೂ ಶ್ರೀಕಾಂತನಪಾಲಿಗೆ ಆ ಹುಡುಗರು ವಿಲನ್‌ಗಳಂತೆಯೇ ಭಾಸವಾಗುತ್ತಿದ್ದರು. ಅವಳು ತನ್ನ ಕಾಲೇಜಿನ ಲೆಕ್ಚರರ್‌ಗಳು ಪಾಠ ಮಾಡುವ ವೈಖರಿ ಸ್ಟೈಲು ಹೈಲುಗಳ ಕುರಿತು ಬಣ್ಣಿಸುವಾಗಲೂ ಕೇಳಲಾಗದೆ ಶ್ರೀಯ ಹೊಟ್ಟೆಯಲೆಲ್ಲಾ ತಳಮಳ. ಅಷ್ಟೇಕೆ ಅವಳು ತನ್ನ ತ...

ಬೆಳಿಗ್ಗೆ ಏಳರ ಸಮಯ ಮೈಸೂರಿನ ರೋಹಿಣಿ ಲಾಡ್ಜ್‌ನ ಕೊಠಡಿ ಸಂಖ್ಯೆ ೧೦೩. ಪೋಲೀಸರು, ಪತ್ರಕರ್ತರು, ಫೊಟೋ ಗ್ರಾಫರ್‌ಗಳಿಂದ ತುಂಬಿಹೋಗಿದೆ. ಬೆಳ್ಳಂ ಬೆಳಿಗ್ಗೆಯೇ ಯುವತಿಯೊಬ್ಬಳ ಕೊಲೆ ನಡೆದುಹೋಗಿದೆ. ಲಾಡ್ಜ್‌ನ ಹೊರಗೆ ಜನರು ಕುತೂಹಲಭರಿತರಾಗಿ ಸೇರಿದ್ದಾರೆ. ಸೇರಿದ್ದ ಜನರನ್ನು ನಿಯಂತ್ರ...

೧ ಗೌರಿಯ ಹಬ್ಬವು ಕಳೆದು ಕೆಲವು ದಿನಗಳಾಗಿದ್ದುವು. ಭಾಗೀರಥಮ್ಮನೂ ಅವಳ ಜೊತೆಯ ಹುಡುಗಿಯರೂ ಒಂದೊಂದು ದಿನವನ್ನು ಕಳೆಯುವುದೂ ಒಂದೊಂದು ಯುಗವನ್ನು ಕಳೆದಂತೆ ಕಷ್ಟವಾಗಿದ್ದಿತು. ಅವರು ಎಷ್ಟು ಕುತೂಹಲದಿಂದ ಬಯಸಿದರೂ ದಿನಗಳು ಬೇಗ ಬೇಗ ಉರುಳಲೊಲ್ಲವು. ಒಂದು ದಿನ ಅವರೆಲ್ಲರೂ ಸೇರಿ ಕವಡೆಯ...

ಸಂಜೆ ನಾಲ್ಕು ಗಂಟೆಯಾದರೆ ಸಾಕು. ಅವರೆಲ್ಲರೂ ಒಬ್ಬೊಬ್ಬರಾಗಿ ಬಂದು ಸೇರುತ್ತಾರೆ. ಅದೊಂದು ಪಂಚಾಯಿತಿ ಕಟ್ಟೆ ಇದ್ದಂತೆ. ಮಧ್ಯದಲ್ಲೊಂದು ಸಿಮೆಂಟ್ ಬೆಂಚು, ಅದರ ಎಡ, ಬಲ ಎರಡೂ ಕಡೆ ಇವರೇ ಒಂದಷ್ಟು ಕಲ್ಲು ಚಪ್ಪಡಿಗಳನ್ನು ಎಳೆದು ತಂದು ಕೊಡುವುದಕ್ಕೆ ಪೀಠಗಳನ್ನು ಮಾಡಿಕೊಂಡಿದ್ದಾರೆ. ಸ...

ತಿಮ್ಮಣ್ಣ ನಮ್ಮೂರಿನ ಪಕ್ಕದ ಹಳ್ಳಿಯಲ್ಲಿನ ಅಡುಗೆ ಭಟ್ಟ ತಿಪ್ಪಾಭಟ್ಟರ ಮಗ. ತಿಪ್ಪಾಭಟ್ಟರಿಗೆ ಮದುವೆಯಾಗಿ ಹತ್ತು ವರ್ಷ ಕಳೆದರೂ ಮಕ್ಕಳಾಗಿರಲಿಲ್ಲ. ಕೊನೆಗೆ ಪಕ್ಕದ ಮನೆಯ ಕಮಲಾಕ್ಷಮ್ಮನ ಸಲಹೆ ಮೇರೆಗೆ ಮಗುವಾದರೆ ತಿರುಪತಿಗೆ ಹೋಗಿ ಬರುವ ಹರಕೆ ಹೊತ್ತರು. ತಿಮ್ಮಪ್ಪನ ಕೃಪಾಕಟಾಕ್ಷವೋ ...

ಬೆಳಗಿನ ಜಾವ ಆಗಲೇ ಐದು ಬಡಿದಿತ್ತು. ಎಲ್ಲೋ ಮಾಮರದಲ್ಲಿ ಕೋಗಿಲೆಯೂ ಕುಹೂ ಕುಹೂ ಎಂದು ಹಾಡುತಿತ್ತು. ಅಲ್ಲಲ್ಲಿ ಗಿಡಮರಗಳಲ್ಲಿ ಹಕ್ಕಿಗಳ ಚಿಲಿಚಿಲಿ ಕಲರವದೊಂದಿಗೆ ಸುಪ್ರಭಾತ ಹಾಡುತ್ತಿದ್ದವು. ಪ್ರಶಾಂತವಾದ ವಾತಾವರಣದಲ್ಲಿ ಸ್ವಾಮೀಜಿ, ಬೆಳಗಿನ ಪೂಜೆ ಮುಗಿಸಿ, ನಿತ್ಯದಂತೆ ಮಠದ ಪಾಕಶಾ...