ಸಾವಿತ್ರಿ

(ಕೆಲವು ಸಾಲುಗಳು)

ಕಾಂಬನೊಬ್ಬ ಒಳಗಿಹನು ಬಲ್ಲನೋರಣದ ಹಂಚು-ಸಂಚು.
ಅದು ಕಾಣದಣ್ಣ ಕಾಲಲ್ಲೆ ಇದು ಅಡಿಗಡಿಗು ಅದರ ಅಂಚು.
ಊದಿ ಉಸಿರನುಬ್ಬಿಸುವನೆಮ್ಮ ಕಣ್ಣಾಚೆ ಶಿಖರಗಳಿಗೆ
ಹುಟ್ಟು-ಬಾಳುಗಳ ದರಿಗೆ ನೂಗಿದೊಲು ಹಿಂದೆ ಒಮ್ಮೆ ನಮಗೆ
ಕಾಲಪಥಿಕನಾ ಕಿವಿಗೆ ಮುಟ್ಟಿತಾ ಕರೆಯು, ಕೇಳಿ ಸೊಲ್ಲ
ಒಂಟಿಯಾಗಿ ಏಕಾಂತಿಯಾಗಿ ಅದರಾಳವವನೆ ಬಲ್ಲ.
ಹೊರಟ ಯಾತ್ರಿ ದಿಕ್ತಟದ ಶಕ್ತಿಯಲಿ ಮೂಕಮುಗ್ಧನಾಗಿ.
* * *

ಕಾಲ-ಜನಿತ ಮಾನವರ ಈ ಜ್ಞಾನ ಇತ್ತು ಮೊದಲು ಅವಗೆ
ಬೆಳಕು-ಮನದ ತೆರೆ ಸರಿದು ಹಿಂದೆ ಅವ ಹೊಕ್ಕನಾಗ ಒಳಗೆ.
ನಮ್ಮ ಬಗೆಗೆ ಕೇವಲದ ಕಣ್ಗೆಮರೆಯಾಗಿ ಮುಸುಕ ನಡುವೆ
ಗೂಢಗವಿಯ ಅವ ಕಂಡ, ಮತ್ತೆ ಮುಂದಾ ರಹಸ್ಯದ್ವಾರ
ಆತ್ಮನೊಳಗಿನಾ ದೃಷ್ಟಿ ದಾನದಾ ಬಾವಿ ಅದರ ಬಳಿಗೆ
ಅಲ್ಲಿ ಇತ್ತು ಶ್ರೀವಿಜಯಪಕ್ಷಿ ಕಾವ್ಗೊಡುತ ಧ್ಯಾನಲೀನ
ಇಲ್ಲ ಬೆಳಕೆ ಆಕಾಶ ಸರ್ವಸರ್ವತ್ರ ಜ್ಞಾನತಾನ.
ಪ್ರಾಣಸ್ಪಂದನವು ನಿಂತುಬಿಟ್ಟರೂ ಸಾವು ದುಮುಕ ಸಲ್ಲ.
ಉಸಿರು ಹಿಂಗಿಯೂ ಬಗೆಯು ಇಂಗಿಯೂ ಆತ ಬದುಕಬಲ್ಲ.
* * *

ದೇವರೆಚ್ಚರಿವ ಉದಯರಾಗ ಬ್ರಾಹ್ಮೀಮುಹೂರ್ತದಲ್ಲಿ
ದಿವ್ಯಘಟನೆ ಘಟಿಸುವದು ಇತ್ತು ಆ ದೇವಯಾನದಲ್ಲಿ
ತನ್ನ ಶಾಶ್ವತಿಯ ಗರ್ಭಗುಡಿಯ ನಿರ್ದೀಪ್ತ ಐಕ್ಯವಲ್ಲಿ
ಮೌನದಂಚಿನಲಿ ಮೈಯು ಚಾಚಿ ಮಲಗಿತ್ತು ಮಿಸುಕದಾಗಿ.
ನಿಶೆಯ ಮಹಮನವು ಏನೊ ಮುಂಗಂಡು ಸ್ವಯಂ ಲೀನವಾಗಿ.
ಅನಿರ್ಭೇದ್ಯವಿದು ಇದು ಅಪಾರ ಎನಿಸುವದಗಾಧ ಚಿಂತೆ
ಆ ಅಮೂರ್ತ ಆನಂತ್ಯದಾಳ ಪಾತಾಳಖಾತ ಬಂತೇ
ಕಣ್ಣು ಮುಚ್ಚಿದಾ ಧ್ಯಾನಗಮ್ಯ ಸಂಕೇತ ಚಿತ್ರದಂತೆ.
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಬಾಳಿದು ಕಾಳೆಗದ ಕಣ!
Next post ಸುಭದ್ರೆ – ೭

ಸಣ್ಣ ಕತೆ

  • ಮಲ್ಲೇಶಿಯ ನಲ್ಲೆಯರು

    ಹೇಮರಡ್ಡಿ ಪ್ರಭುಗಳು ಒಂದು ಊರಿನ ದೇಸಾಯರು. ಆ ಗ್ರಾಮದ ಉತ್ಪನ್ನವು ಆರೇಳು ಸಾವಿರ ರೂಪಾಯಿ ಇರುವದಲ್ಲದೆ ದೇಸಾಯರಿಗೆ ತೋಟ ಪಟ್ಟಿ ಮನೆಯ ಒಕ್ಕಲತನಗಳಿಂದಾದರೂ ಪ್ರಾಪ್ತಿಯು ಚನ್ನಾಗಿತ್ತು. ಅವರೊಂದು… Read more…

  • ಪಾಠ

    ಚೈತ್ರ ಮಾಸದ ಮಧ್ಯ ಕಾಲ. ಬೇಸಿಗೆ ಕಾಲಿಟ್ಟಿದೆ. ವಸಂತಾಗಮನ ಈಗಾಗಾಲೇ ಆಗಿದೆ. ಊರಲ್ಲಿ ಸುಗ್ಗಿ ಸಮಯ. ಉತ್ತರ ಕರ್ನಾಟಕದ ನಮ್ಮ ಭಾಗದಲ್ಲಿ ಹತ್ತಿ ಜೋಳ ಪ್ರಮುಖ ಬೆಳೆಗಳು.… Read more…

  • ನಿಂಗನ ನಂಬಿಗೆ

    ಹೊಸಳ್ಳಿ ನೋಡುವದಕ್ಕೆ ಸಣ್ಣದಾದರೂ ಕಣ್ಣಿಗೆ ಅಂದವಾಗಿದೆ. ಬೆಳವಲ ನಾಡಿನಲ್ಲಿ ಬರಿ ಬಯಲೆಂದು ಟೀಕೆ ಮಾಡುವವರಿಗೆ ಹೊಸಳ್ಳಿ ಕೂಗಿ ಹೇಳುತ್ತಿದೆ - ತಾನು ಮಲೆನಾಡ ಮಗಳೆಂದು ! ಊರ… Read more…

  • ಬಲಿ

    ಅವಳು ಭಾಗಶಃ ಚಟ್ಟೆಯಾದ ಕಪ್ಪು ಬಣ್ಣಕ್ಕೆ ತಿರುಗಿದ ಅಲ್ಯೂಮೀನಿಯಂ ತಟ್ಟೆಯೊಳಗೆ ಸ್ವಲ್ಪ ಹಾಲು ಸುರಿದು ಅದಕ್ಕೆ ಸ್ವಲ್ಪ ನೀರನ್ನು ಬೆರೆಸಿ, ಒಲೆಯ ಮೇಲಿಟ್ಟು ಮುಚ್ಚಳ ಮುಚ್ಚಿದಳು. ಒಲೆಯ… Read more…

  • ಒಂಟಿ ತೆಪ್ಪ

    ನಮ್ಮ ಕಂಪೆನಿಗೆ ಹೊಸದಾಗಿ ಕೆಲಸಕ್ಕೆ ಸೇರಿದ ಕ್ಲೇರಾಳ ಬಗ್ಗೆ ನಾನು ತಿಳಿದುಕೊಳ್ಳಲು ಪ್ರಯತ್ನಿಸಿದಷ್ಟೂ ಅವಳು ನಿಗೂಢವಾಗುತ್ತಿದ್ದಳು. ನಾಲಗೆಯ ಚಪಲದಿಂದ ಸಹ-ಉದ್ಯೋಗಿಗಳು ಅವಳ ಬಗ್ಗೆ ಇಲ್ಲಸಲ್ಲದ ಆರೋಪಗಳನ್ನು ಹೊರಿಸಿದರೂ… Read more…