Home / ಲೇಖನ / ವಿಜ್ಞಾನ / ತಂಬಾಕಿನ ‘ನಿಕೋಟಿನ್’ನಿಂದ ಸಸ್ಯಗಳ ರೋಗ ನಿವಾರಕ ಔಷಧಿ

ತಂಬಾಕಿನ ‘ನಿಕೋಟಿನ್’ನಿಂದ ಸಸ್ಯಗಳ ರೋಗ ನಿವಾರಕ ಔಷಧಿ

‘ತಂಬಾಕು’ ಭಾರತದ ವಾಣಿಜ್ಯ ಬೆಳೆಯಾಗಿದ್ದು, “ನಿಕೋಟಿಯಾನ್ ಟಿಬ್ಯಾತಮ್” ಎಂಬ ಸಸ್ಯವರ್ಗಕ್ಕೆ ಸೇರಿದೆ. ಆಂಧ್ರಪ್ರದೇಶ, ಕರ್ನಾಟಕ, ತಮಿಳುನಾಡು, ಉತ್ತರ ಪ್ರದೇಶ, ಗುಜರಾತ್ ಮುಂತಾದ ರಾಜ್ಯಗಳಲ್ಲಿ ಇದನ್ನು ಹೆಚ್ಚಾಗಿ ಬೆಳೆಯುತ್ತಾರೆ. ಇದರ ಸೇವನೆ ಆರೋಗ್ಯಕ್ಕೆ ಹಾನಿಕರ, ಎಂದು ವೈದ್ಯಕೀಯವಾಗಿ ದೃಧೀಕರಿಸಿದೆಯಾದರೂ ಈ ವ್ಯಾಮೋಹದಿಂದ ಬಹಳಜನ ಹೊರಬರಲಾಗಿಲ್ಲ.

ತಂಬಾಕಿನಲ್ಲಿರುವ ‘ನಿಕೋಟಿನ್’ ಅಪಾಯಕಾರಿ ವಿಷವಾಗಿದ್ದು ಇದರ ಅರ್ಧ ಹನಿಯನ್ನು ಸೇವಿಸಿದರೆ ಮನುಷ್ಯನ ಪ್ರಾಣವೇ ಹೋಗಬಹುದು. ಈ ನಿಕೋಟಿನ್ ಜತೆಗೆ ಪರ್ಘರಾತ್, ಪೈರಿಡಿನ್, ಅವೋನಿಯಾ, ಆಲ್ಡಿಹೈಡ್, ಎಂಬ ವಿಷಕಾರಕ ವಸ್ತುಗಳು ಈ ತಂಬಾಕಿನಲ್ಲಿವೆ. ಇಂಥಹ ಅಪಾಯಕಾರಕ ತಂಬಾಕನ್ನು ನಮ್ಮ ವಿಜ್ಞಾನಿಗಳು ರೈತನಿಗೆ ಉಪಯುಕ್ತವಾಗುವಂತೆ ೧೯೮೨ರಲ್ಲಿ ಸಂಶೋಧಿಸಿದ್ದಾರೆ. ರೈತನು ಬೆಳೆಯುವ ಈ ಸೊಪ್ಪು, ರೈತನ ಬೆಳೆಗಳನ್ನು ಹಾಳುಗೆಡುವ ಕೀಟಗಳನಾಶಕ್ಕೆ ಬಳಸಲಾಗುತ್ತದೆ. ಮತ್ತು ಇದು ಜನಪ್ರಿಯ ಕೀಟನಾಶಕವೂ ಕೂಡ ಆಗಿದೆ. ಈ ಕೀಟನಾಶಕವು ಬಿಳಿ ನೊಣ, ಸಸ್ಯ ಹೇನು, ಥ್ರಿಪ್ಸ್ ಮತು ನುಸಿಪೀಡೆಗಳ ನಿಯಂತ್ರಣಕ್ಕೆ ಹಾಗೂ ಅವುಗಳ ನಾಶಕ್ಕೆ ತುಂಬ ಉಪಕಾರಿಯಾಗಿದೆ. ತಂಬಾಕಿನಲ್ಲಿರುವ ‘ನಿಕೋಟಿನ್’ ಕೀಟನಾಶಕವು ಕೀಟಗಳ ಶ್ವಾಸನಳಿಕೆ, ತ್ವಚೆ ಮತ್ತು ಆಹಾರದ ಮೂಲಕ ದೇಹವನ್ನು ಒಳಸೇರಿ ಅವುಗಳ ನರಮಂಡಲದ ಕಾರ್ಯಚಟುವಟಿಕೆಯಲಿ ಏರುಪೇರುಂಟಾಗಿ ಅವು ಸಾಯುವಂತೆ ಮಾಡುತ್ತದೆ.

ಕೀಟನಾಶಕವನ್ನು ತಯಾರಿಸುವ ವಿಧಾನ : ಈ ಕ್ರಿಮಿನಾಶಕವನ್ನು ರೈತರು ಮನೆಯಲ್ಲಿಯೇ ತಯಾರಿಸಬಹುದಾಗಿದೆ. ಮೊದಲು ೧೦ ಲೀಟರ್ ನೀರು, ಒಂದು ಕೆ.ಜಿ. ಯಷ್ಟಾದ ತಾಜಾ ತಂಬಾಕಿನ ಎಲೆಗಳನ್ನು ತೆಗೆದುಕೊಳ್ಳಬೇಕು. ಈ ತಂಬಾಕಿನ ಎಲೆಗಳನ್ನು ಹತ್ತು ಲೀಟರ್ ನೀರನಲ್ಲಿ ಹಾಕಿ ಚೆನ್ನಾಗಿ ಕುದಿಸಬೇಕು. ನೀರಿನಲ್ಲಿ ಕುದಿಸಿ ಹದಗೊಂಡ ಎಲೆಗಳನ್ನು ಹಿಂಡಿ ಕಷಾಯ ತಯಾರಿಸಬೇಕು ಈ ಕಷಾಯಕ್ಕೆ ಪುನಹ ೧೦ ಲೀಟರ್ ನೀರನ್ನು ಸೇರಿಸಿ ಚನ್ನಾಗಿ ಕಲಕಬೇಕು. ಈ ಕಷಾಯವು ಚನ್ನಾಗಿ ಕೆಲಸ ಮಾಡಲು ಹಾಗೂ ಬೆಳಗಳ ಮೇಲೆ ಸರಿಯಾಗಿ ಹರಡಲು ಸಿಂಪಡಿಸುವ ಮುನ್ನ ಕಷಾಯಕ್ಕೆ ೧೦೦ ಗ್ರಾಂ ಸಾಬೂನಿನ (ಸೋಪಿನ ಪುಡಿ) ಪುಡಿಯನ್ನು ಸೇರಿಸಬೇಕು. ಇದು ಮಾರುಕಟ್ಟೆಯಲ್ಲಿ ಪುಡಿರೂಪದಲ್ಲಿ ಹಾಗೂ ದ್ರವ ರೂಪದಲಿ ದೊರೆಯುತ್ತದೆ. ‘ನಿಕೋಟಿನ್’ ಪುಡಿಯನ್ನು ಸಸ್ಯಗಳ ಮೇಲೆ ಸಿಂಪಡಿಸಿದಾಗ ಅದು ವಾತಾವರಣದಲ್ಲಿರುವ ತೇವಾಂಶದೊಡನೆ ಬೆರೆತು ‘ನಿಕೋಟಿನ್’ ಎಂಬ ವಿಷ ವಸ್ತುವನ್ನು ಬಿಡುಗಡೆ ಮಾಡಿ ಕೀಟಗಳು ನಾಶವಾಗುತ್ತವೆ. ದ್ರವರೂಪದ ತಂಬಾಕನ್ನು ಸಿಂಪಡಿಸುವಾಗ ಸುಣ್ಣ ಅಥವಾ ಸಾಬೂನಿನ ಪುಡಿಯನ್ನು ಮಿಶ್ರಮಾಡಿ ಚನ್ನಾಗಿ ಕಲಿಸಿ ಸಿಂಪಡಿಸಬೇಕು.
*****

Tagged:

Leave a Reply

Your email address will not be published. Required fields are marked *

ಬೆಳಗಿನ ಜಾವ ಆಗಲೇ ಐದು ಬಡಿದಿತ್ತು. ಎಲ್ಲೋ ಮಾಮರದಲ್ಲಿ ಕೋಗಿಲೆಯೂ ಕುಹೂ ಕುಹೂ ಎಂದು ಹಾಡುತಿತ್ತು. ಅಲ್ಲಲ್ಲಿ ಗಿಡಮರಗಳಲ್ಲಿ ಹಕ್ಕಿಗಳ ಚಿಲಿಚಿಲಿ ಕಲರವದೊಂದಿಗೆ ಸುಪ್ರಭಾತ ಹಾಡುತ್ತಿದ್ದವು. ಪ್ರಶಾಂತವಾದ ವಾತಾವರಣದಲ್ಲಿ ಸ್ವಾಮೀಜಿ, ಬೆಳಗಿನ ಪೂಜೆ ಮುಗಿಸಿ, ನಿತ್ಯದಂತೆ ಮಠದ ಪಾಕಶಾ...

“ಇನ್ನು ಗೇಣಿ ಕೊಡಬೇಕಾಗಿಲ್ಲವಂತೆ. ಒಕ್ಕಲಿಗೇ ಭೂಮಿಯಂತೆ.” ಊರಲ್ಲಿ ದಟ್ಟವಾಗಿ ಹಬ್ಬಿದ್ದ ಆ ವಾರ್‍ತೆ ಕುಂಞಂಬುನಲ್ಲಿ ಅಸಾಧ್ಯ ಕುತೂಹಲ ಕೆರಳಿಸಿತ್ತು. ಗೇಣಿ ಕೊಡದಿದ್ದರೆ ಧನಿಗಳು ಬಿಟ್ಟಾರೆಯೆ? ಗೇಣಿ ಕೊಡದೆ ಬೇರೆಯವರ ಭೂಮಿಯನ್ನು ಇಟ್ಟುಕೊಳ್ಳುವುದು ತಪ್ಪಲ್ಲವೆ? ಕು...

“ಮಮ್ಮಿ ! ಮಮ್ಮಿ ! ಬೇಗ ಬಾ” “ಅಡಿಗೆ ಮಾಡುತ್ತಾ ಇದ್ದೇನೆ, ಯಾಕೆ ಕಿರಿಚಿಕೊಳ್ಳುತ್ತಾ ಇದ್ದಿಯಾ ರೋಜಿ? ಬರುತ್ತೀನಿ ತಾಳು” ಎಂದಳು ಕೆಲಸದಲ್ಲಿ ನಿರತ ತಾಯಿ. “ಮಮ್ಮಿ! ಒಂದು ನಿಮಿಷ ಬಂದು ನೋಡು, ಕಾಗೆ ಪುಟ್ಟ ಅಳಿಲನ್ನು ಕುಕ್ಕಿ ನೋವು ಮಾಡುತ್ತಾ ...

ಈ ದಿನ ಹಿತ್ತಲ ತುಂಬ ಪಾರಿಜಾತ ಹೂವು ಸುರಿದಿದೆ. ಮತ್ತೆ ಸಂಪಿಗೆ ಮರದಿಂದ ಹೂವರಳಿ ಘಮ್ಮೆಂದು ವಾಸನೆ ಹರಿದಿದೆ. ಎರಡು ಪರಿಮಳ ಸೇರಿ ಎದೆಯಾಳಕೆ ಇಳಿದು ಒಳಗೊಳಗೆ ಒಂಥರಾ ಭಾವ ವಿಸ್ಮಯ ಅರಳಿದೆ. ಅಮ್ಮ ಒಲೆಯ ಮೇಲೆ ಕಡುಬು ಬೇಯಿಸುತ್ತಿದ್ದಾಳೆ. ಕೊಟ್ಟೆ ಕಡುಬಿನ ವಾಸನೆ ಇಡೀ ಮನೆಯನ್ನು ಪಸ...

ಆ ದಿನ, ಡಾಕ್ಟರ್ ಪಾರ್ವತಿಯವರಿಗೆ ಆತಂಕದ ದಿನ! ಒಂದು ವಿಧದ ಚಂಡಮಾರುತವನ್ನೆಬ್ಬಿಸಿದಂತಹ ಘಟನೆಯಿಂದ ನಗರದ ಅನೇಕರೂ, ಗಣ್ಯರೂ ಸೇರಿದಂತೆ, ಆ ಕೋರ್‍ಟಿನಲ್ಲಿ ಜನಸಂದಣಿ ಕಿಕ್ಕಿರಿದಿತ್ತು. ಆ ನಗರದ ಪ್ರಖ್ಯಾತ ವೈದ್ಯ ಡಾಕ್ಟರ್ ಪಾರ್ವತಿದೇವಿಯವರು ಸಾಕ್ಷಿ ನೀಡಬೇಕಾಗಿದ್ದರಿಂದ ಕೋರ್ಟಿನ ...

“ಭಟ್ಟರೇ, ನಿಮಗೆ ಹೇಳಲೊ? ಇಘ್ನೇಶ್ವರರಾಯರು ಅಂದರೆ ನಮ್ಮ ಜಾತಿಗೇ ಭೂಷಣ. ಅವರು ವಕೀಲಿ ಮಾಡಲು ಸುರು ಮಾಡಿದಂದಿನಿಂದ ಬೇರೆ ಜಾತಿಯವರ ಸೊಕ್ಕು ಮುರಿದಿದೆ. ಈಗ ಶೆಟ್ಟಿ ಶಾನಬೋಗರೆಲ್ಲ ಅವರಿಗೆ ರಾಯರೇ ಎಂದು ಸಲಾಮು ಮಾಡುವವರೇ! ನಿಮಗೆ ಹೇಳಲೊ? ಅದು ಒಬ್ಬೊಬ್ಬರ ಜನ್ಮಕುಂಡಲಿ ಇದ್ದ...