Home / ಲೇಖನ / ವಿಜ್ಞಾನ / ತಂಬಾಕಿನ ‘ನಿಕೋಟಿನ್’ನಿಂದ ಸಸ್ಯಗಳ ರೋಗ ನಿವಾರಕ ಔಷಧಿ

ತಂಬಾಕಿನ ‘ನಿಕೋಟಿನ್’ನಿಂದ ಸಸ್ಯಗಳ ರೋಗ ನಿವಾರಕ ಔಷಧಿ

‘ತಂಬಾಕು’ ಭಾರತದ ವಾಣಿಜ್ಯ ಬೆಳೆಯಾಗಿದ್ದು, “ನಿಕೋಟಿಯಾನ್ ಟಿಬ್ಯಾತಮ್” ಎಂಬ ಸಸ್ಯವರ್ಗಕ್ಕೆ ಸೇರಿದೆ. ಆಂಧ್ರಪ್ರದೇಶ, ಕರ್ನಾಟಕ, ತಮಿಳುನಾಡು, ಉತ್ತರ ಪ್ರದೇಶ, ಗುಜರಾತ್ ಮುಂತಾದ ರಾಜ್ಯಗಳಲ್ಲಿ ಇದನ್ನು ಹೆಚ್ಚಾಗಿ ಬೆಳೆಯುತ್ತಾರೆ. ಇದರ ಸೇವನೆ ಆರೋಗ್ಯಕ್ಕೆ ಹಾನಿಕರ, ಎಂದು ವೈದ್ಯಕೀಯವಾಗಿ ದೃಧೀಕರಿಸಿದೆಯಾದರೂ ಈ ವ್ಯಾಮೋಹದಿಂದ ಬಹಳಜನ ಹೊರಬರಲಾಗಿಲ್ಲ.

ತಂಬಾಕಿನಲ್ಲಿರುವ ‘ನಿಕೋಟಿನ್’ ಅಪಾಯಕಾರಿ ವಿಷವಾಗಿದ್ದು ಇದರ ಅರ್ಧ ಹನಿಯನ್ನು ಸೇವಿಸಿದರೆ ಮನುಷ್ಯನ ಪ್ರಾಣವೇ ಹೋಗಬಹುದು. ಈ ನಿಕೋಟಿನ್ ಜತೆಗೆ ಪರ್ಘರಾತ್, ಪೈರಿಡಿನ್, ಅವೋನಿಯಾ, ಆಲ್ಡಿಹೈಡ್, ಎಂಬ ವಿಷಕಾರಕ ವಸ್ತುಗಳು ಈ ತಂಬಾಕಿನಲ್ಲಿವೆ. ಇಂಥಹ ಅಪಾಯಕಾರಕ ತಂಬಾಕನ್ನು ನಮ್ಮ ವಿಜ್ಞಾನಿಗಳು ರೈತನಿಗೆ ಉಪಯುಕ್ತವಾಗುವಂತೆ ೧೯೮೨ರಲ್ಲಿ ಸಂಶೋಧಿಸಿದ್ದಾರೆ. ರೈತನು ಬೆಳೆಯುವ ಈ ಸೊಪ್ಪು, ರೈತನ ಬೆಳೆಗಳನ್ನು ಹಾಳುಗೆಡುವ ಕೀಟಗಳನಾಶಕ್ಕೆ ಬಳಸಲಾಗುತ್ತದೆ. ಮತ್ತು ಇದು ಜನಪ್ರಿಯ ಕೀಟನಾಶಕವೂ ಕೂಡ ಆಗಿದೆ. ಈ ಕೀಟನಾಶಕವು ಬಿಳಿ ನೊಣ, ಸಸ್ಯ ಹೇನು, ಥ್ರಿಪ್ಸ್ ಮತು ನುಸಿಪೀಡೆಗಳ ನಿಯಂತ್ರಣಕ್ಕೆ ಹಾಗೂ ಅವುಗಳ ನಾಶಕ್ಕೆ ತುಂಬ ಉಪಕಾರಿಯಾಗಿದೆ. ತಂಬಾಕಿನಲ್ಲಿರುವ ‘ನಿಕೋಟಿನ್’ ಕೀಟನಾಶಕವು ಕೀಟಗಳ ಶ್ವಾಸನಳಿಕೆ, ತ್ವಚೆ ಮತ್ತು ಆಹಾರದ ಮೂಲಕ ದೇಹವನ್ನು ಒಳಸೇರಿ ಅವುಗಳ ನರಮಂಡಲದ ಕಾರ್ಯಚಟುವಟಿಕೆಯಲಿ ಏರುಪೇರುಂಟಾಗಿ ಅವು ಸಾಯುವಂತೆ ಮಾಡುತ್ತದೆ.

ಕೀಟನಾಶಕವನ್ನು ತಯಾರಿಸುವ ವಿಧಾನ : ಈ ಕ್ರಿಮಿನಾಶಕವನ್ನು ರೈತರು ಮನೆಯಲ್ಲಿಯೇ ತಯಾರಿಸಬಹುದಾಗಿದೆ. ಮೊದಲು ೧೦ ಲೀಟರ್ ನೀರು, ಒಂದು ಕೆ.ಜಿ. ಯಷ್ಟಾದ ತಾಜಾ ತಂಬಾಕಿನ ಎಲೆಗಳನ್ನು ತೆಗೆದುಕೊಳ್ಳಬೇಕು. ಈ ತಂಬಾಕಿನ ಎಲೆಗಳನ್ನು ಹತ್ತು ಲೀಟರ್ ನೀರನಲ್ಲಿ ಹಾಕಿ ಚೆನ್ನಾಗಿ ಕುದಿಸಬೇಕು. ನೀರಿನಲ್ಲಿ ಕುದಿಸಿ ಹದಗೊಂಡ ಎಲೆಗಳನ್ನು ಹಿಂಡಿ ಕಷಾಯ ತಯಾರಿಸಬೇಕು ಈ ಕಷಾಯಕ್ಕೆ ಪುನಹ ೧೦ ಲೀಟರ್ ನೀರನ್ನು ಸೇರಿಸಿ ಚನ್ನಾಗಿ ಕಲಕಬೇಕು. ಈ ಕಷಾಯವು ಚನ್ನಾಗಿ ಕೆಲಸ ಮಾಡಲು ಹಾಗೂ ಬೆಳಗಳ ಮೇಲೆ ಸರಿಯಾಗಿ ಹರಡಲು ಸಿಂಪಡಿಸುವ ಮುನ್ನ ಕಷಾಯಕ್ಕೆ ೧೦೦ ಗ್ರಾಂ ಸಾಬೂನಿನ (ಸೋಪಿನ ಪುಡಿ) ಪುಡಿಯನ್ನು ಸೇರಿಸಬೇಕು. ಇದು ಮಾರುಕಟ್ಟೆಯಲ್ಲಿ ಪುಡಿರೂಪದಲ್ಲಿ ಹಾಗೂ ದ್ರವ ರೂಪದಲಿ ದೊರೆಯುತ್ತದೆ. ‘ನಿಕೋಟಿನ್’ ಪುಡಿಯನ್ನು ಸಸ್ಯಗಳ ಮೇಲೆ ಸಿಂಪಡಿಸಿದಾಗ ಅದು ವಾತಾವರಣದಲ್ಲಿರುವ ತೇವಾಂಶದೊಡನೆ ಬೆರೆತು ‘ನಿಕೋಟಿನ್’ ಎಂಬ ವಿಷ ವಸ್ತುವನ್ನು ಬಿಡುಗಡೆ ಮಾಡಿ ಕೀಟಗಳು ನಾಶವಾಗುತ್ತವೆ. ದ್ರವರೂಪದ ತಂಬಾಕನ್ನು ಸಿಂಪಡಿಸುವಾಗ ಸುಣ್ಣ ಅಥವಾ ಸಾಬೂನಿನ ಪುಡಿಯನ್ನು ಮಿಶ್ರಮಾಡಿ ಚನ್ನಾಗಿ ಕಲಿಸಿ ಸಿಂಪಡಿಸಬೇಕು.
*****

Tagged:

Leave a Reply

Your email address will not be published. Required fields are marked *

(ಒಂದು ಐತಿಹಾಸಿಕ ಕತೆ) ಹ್ಹಃ ಹ್ಹಃ ಹ್ಹಃ! ಅಹ್ಹಃ ಅಹ್ಹಃ ಅಹ್ಹಃ!! ಗಝುನಿ ಮಹಮೂದನಿಗೆ ಹಿಡಿಸಲಾರದ ನಗೆ. ನಕ್ಕು ನಕ್ಕು ಅವನ ಹೊಟ್ಟೆ ನೋಯುತ್ತಿದ್ದಿತು. ಆದರೂ ಅವನ ಆ ತಿರಸ್ಕಾರದ ನಗೆ ತಡೆಯಲಾರದಾಯಿತು. ಅದೊಂದು ಸುಪ್ರಸಿದ್ದವಾದ ಸೋಮನಾಥ ದೇವಾಲಯ. ಭಾರತದ ವೈಭವವನ್ನು ವಿಶ್ವಕ್ಕೆ ತೋ...

ಸರಲಾಕ್ಷ ಹುಲಿಮೀಸೆಯು ಮನೆಯಲ್ಲಿ ಬಂದಿರಲಾರಂಭಿಸಿದಂದಿನಿಂದ ತಾನು ತೊಂದರೆಗೊಂಡು ಬೇಸತ್ತು ಹೋಗಿರುವೆನೆಂದು ವಸತಿಗೃಹದ ಸ್ವಾಮಿನಿಯಾದ ಲೀಲಾಬಾಯಿಯು ದೂರಿಕೊಳ್ಳುತ್ತಿದ್ದಳು. “ಕೆಟ್ಟ ಮೋರೆಯವರೂ ಅಸಭ್ಯರೂ ಸುಟ್ಟಮನೆಯವರೂ ಸುಡದ ಮನೆಯವರೂ ತೆರವಿಲ್ಲದೆ ನನ್ನ ಮನೆಗೆ ಬರುತ್ತಿರುವ...

ಅವಳು ಅಡುಗೆ ಮನೆಯ ಕಪ್ಪಾದ ಡಬ್ಬಿಗಳನ್ನು, ಉಳಿದ ಸಾಮಾನುಗಳನ್ನು ತೆಗೆದು ತೊಳೆಯಲು ಆ ಮಣ್ಣಿನ ಮಾಡು ಹಂಚಿನ ಮನೆಯ ಮುಂದಿನ ತೆಂಗಿನಕಟ್ಟೆಯಲ್ಲಿ ಹಾಕಿದ ಅಗಲ ಹಾಸುಗಲ್ಲ ಮೇಲೆ ಕೈಲಿ ಹಿಡಿದಷ್ಟು ತಂದು ತಂದು ಇಡುತ್ತಿದ್ದಳು. ಏಳರ ಬಾಲೆ ಮಗಳು ಕೂಡ ತನ್ನ ಕೈಗೆ ಎತ್ತುವಂತಹ ಡಬ್ಬಿಗಳನ್ನು...

ಆಹಾ! ಏನು ಕಡಲು! ಅ೦ತವಿಲ್ಲದ ಕಡಲು!! ಅಪಾರವಾಗಿಹ ಕಡಲು! ದಿಟ್ಟಿ ತಾಗದ ಕಡಲು!! ಆ ಕಡಲ ಒಡಲಲ್ಲಿ ಏನು ತೆರೆ! ಏನು ನೊರೆ!! ಏನು ಅಂದ! ಎನಿತು ಚಂದ! ಬಿಚ್ಚಿ ಮುಚ್ಚುವ ಅದರ ನಯವಾದ ತುಟಿಗಳು ಹೊನ್ನರವಿ ಎಸೆದಿರುವ ಚಿನ್ನದಲುಗಳೇಸು! ಬಣ್ಣ ಬಣ್ಣಗಳುಗುವ ಅಚ್ಚು ಪಡಿಯಚ್ಚುಗಳ ಹೊಳಪಿನ ಏನ...

ಸರ್, ಗುಡ್ ಮಾರ್ನಿಂಗ್, ಮೇ ಐ ಕಮೀನ್ ಸರ್ – ನಿತ್ಯ ಆಫೀಸಿನ ಅವಧಿ ಪ್ರಾರಂಭವಾಗುತ್ತಲೇ ಹಿಂದಿನ ದಿನ ರೆಡಿ ಮಾಡಿದ ಹತ್ತಾರು ಕಾಗದ ಪತ್ರಗಳಿಗೆ ಸಹಿ ಪಡೆಯಲು, ಇಲ್ಲವೇ ಹಿಂದಿನ ದಿನದ ಎಲ್ಲ ಫೈಲುಗಳ ಚೆಕ್ ಮಾಡಿಸಲು, ಕೈಯಲ್ಲಿ ಫೈಲುಗಳ ಕಟ್ಟು ಹಿಡಿದು ಬಾಗಿಲ ಮರೆಯಲ್ಲಿ ನಿಂತು ...

ಕೋತಿಯಿಂದ ನಿಮಗಿನ್ನೆಂಥಾ ಭಾಗ್ಯ! ನೀವು ಹೇಳುವ ಮಾತು ಸರಿ! ಬಿಡಿ! ತುಂಗಮ್ಮನವರೆ. ಇದೇನೆಂತ ಹೇಳುವಿರಿ! ಯಾರಾದರೂ ನಂಬುವ ಮಾತೇನರೀ! ಕೊತೀಂತೀರಿ. ಬಹುಲಕ್ಷಣವಾಗಿತ್ತಿರಿ ಎಂತೀರಿ? ಅದು ಹೇಗೋ ಎನೋ, ನಾನಂತೂ ನಂಬಲಾರನರೀ!” “ಹೀಗೆಂತ ನೆರ ಮನೆ ಪುಟ್ಟಮ್ಮನವರು ಹೇಳಿದರು....

ಕೀಲಿಕರಣ: ಎಂ ಎನ್ ಎಸ್ ರಾವ್