ಕರುಣೆಯಿಲ್ಲವೆ ನಿನಗೆ ನನ್ನ ಮೇಲೆ

ಕರುಣೆಯಿಲ್ಲವೆ ನಿನಗೆ ನನ್ನ ಮೇಲೆ
ನಿದ್ರೆ ಕೊಡದೆ ನನ್ನ ನೀನು ಕಾಡುವೆಯಲ್ಲೆ
ಯಾಕೆ ಏನು ಎಷ್ಟು ಕಾಲ ನನಗೆ ಈ ನೆಲೆ?
ಹೃದಯವಿದ್ದರೆ ಉಳಿಸು ಅಥವಾ ಕೊಲ್ಲು ಇಲ್ಲೆ /ಪ//

ಹಗಲು ರಾತ್ರಿಗಿರುವ ಬೇಧ ಮರೆತು ಹೋಗಿದೆ
ಹಸಿವು ಬಾಯಾರಿಕೆ ಜೊತೆಗೆ ಕಳೆದು ಹೋಗಿದೆ
ಕಣ್ಣು ಬಿಟ್ಟರೆ ನೀನೆ; ಮುಚ್ಚಿದರೂ ಸಹಿತ
ಇಂಥಾ ನನ್ನೊಡನೆ ಸರಿಯೆ ಕಣ್ಣಾ ಮುಚ್ಚಾಲೆಯಾಟ!

ನೂರು ರಾಗ ಹೊಮ್ಮಿವೆ ನಿನ್ನನು ಅರಸಿ
ಒಂದೆ ದನಿ ಅಲ್ಲಿದೆ ನಿನ್ನನು ಬಯಸಿ
ಆದರೂ ನಿನಗಿಲ್ಲವೆ ಅಂತಃಕರಣ
ಸಿಗದೆ ಕಾಡಲು ನೀ ಹೇಳು ಏನು ಕಾರಣ

ಪ್ರೀತಿಯ ಕರೆ ಕೇಳಲು ಕರುಳಿದ್ದರೂ ಸಾಕು
ಅದು ತುಂಬಿ ಮೊರೆಯಲು ಕೊರಳು ಏಕೆ ಬೇಕು
ಅರಿವಾಗದೆ ಇದು ನಿನಗೆ? ಆತ್ಮವಂಚನೆ ಬೇಡ
ವಿರಹ ಗೀತೆಯೇ ಹಿತವೆ? ಸುಳ್ಳು ಹೇಳಬೇಡ
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಕ್ಷಮೆ
Next post ಪಡೆದೇನೆ ಸಮಾಧಾನ !

ಸಣ್ಣ ಕತೆ

  • ದುರಾಶಾ ದುರ್ವಿಪಾಕ

    "ಒಳ್ಳೇದು, ಅವನನ್ನು ಒಳಗೆ ಬರಹೇಳು" ಎಂದು ಪ್ರೇಮಚಂದನು- ಘನವಾದ ವ್ಯಾಪಾರಸ್ಥನು- ಆಢ್ಯತೆಯಿಂದ, ತಾನು ಆಡುವ ಒಂದೊಂದು ಶಬ್ದವನ್ನು ತೂಕಮಾಡಿ ಚಲ್ಲುವಂತೆ ಸಾವಕಾಶವಾಗಿ ನುಡಿದನು. ಬಾಗಿಲಲ್ಲಿ ನಿಂತಿದ್ದ ವೃದ್ಧ… Read more…

  • ಬಾಗಿಲು ತೆರೆದಿತ್ತು

    ಆ ಮನೆಯ ಮುಂದಿನ ಬಾಗಿಲು ಯಾವಾಗಲೂ ಇಕ್ಕಿರುವುದು! ನನ್ನ ಓದುವ ಕೋಣೆಯ ಕಿಡಿಕೆಯೊಳಗಿಂದ ಆ ಮನೆಯ ಬಾಗಿಲು ಕಾಣುವುದು. ನಾನು ಕಿಡಿಕೆಯೊಳಗಿಂದ ಎಷ್ಟೋ ಸಲ ಅತ್ತ ಕಡೆ… Read more…

  • ಕೂನನ ಮಗಳು ಕೆಂಚಿಯೂ….

    ಬೊಮ್ಮನಹಳ್ಳಿ ಸಂತೆಯಿಂದ ದಲ್ಲಾಳಿಗೆ ಸಂಚಾಗಾರ ಎಂದು ನೂರು ರೂಪಾಯಿ ಸೇರಿ ಒಂದು ಸಾವಿರದ ಒಂದುನೂರು ಕೊಟ್ಟು ತಂದ ’ಚೆನ್ನಿ’ಕರುಹಾಕಿ ಮೂರು ತಿಂಗಳಲ್ಲಿ ಕೊಟ್ಟಿಗೆಯೊಳಗೆ ಕಾಲು ಜಾರಿ ಬಿದ್ದದ್ದೆ… Read more…

  • ಮೃಗಜಲ

    "People are trying to work towards a good quality of life for tomorrow instead of living for today, for many… Read more…

  • ಗುಲ್ಬಾಯಿ

    ನಮ್ಮ ಪರಮಮಿತ್ರರಾದ ಗುಂಡೇರಾವ ಇವರ ನೇತ್ರರೋಗದ ಚಿಕಿತ್ಸೆ ಗಾಗಿ ನಾವು ಮೂವರು ಮಿರ್ಜಿಯಲ್ಲಿರುವ ಡಾಕ್ಟರ ವಾಲ್ನೆಸ್ ಇವರ ಔಷಧಾಲಯಕ್ಕೆ ಬಂದಿದ್ದೆವು. ಗುಂಡೇರಾಯರು ಹಗಲಿರುಳು ಔಷಧಾಲಯದಲ್ಲಿಯೇ ಇರಬೇಕಾಗಿರುವದರಿಂದ ಆ… Read more…

cheap jordans|wholesale air max|wholesale jordans|wholesale jewelry|wholesale jerseys