Home / ಲೇಖನ / ವಿಜ್ಞಾನ / ಮಾಲಿನ್ಯ ರಹಿತ ಹೊಗೆಯುಗಳದ ರಿಕ್ಷಾಗಳು

ಮಾಲಿನ್ಯ ರಹಿತ ಹೊಗೆಯುಗಳದ ರಿಕ್ಷಾಗಳು

ಪೆಟ್ರೋಲ್ ಬಳೆಸುವ ದ್ವಿಚಕ್ರವಾಹನಗಳು ಅದರಲ್ಲೂ ಎರಡು ಸ್ಟ್ರೋಕ್‌ಗಳ ಯಂತ್ರಗಳು ಅತಿ ಹೆಚ್ಚು ಹೈಡ್ರೋ ಇಂಗಾಲದ ಮಲೀನ ಹೊಗೆಯನ್ನು ಹೊರಗೆಡವುತ್ತವೆ. ಇದರಿಂದ ಜೀವಕುಲದ ಉಸಿರಾಟಕ್ಕೆ ತೊಂದರೆ ಎಂಬ ಸತ್ಯ ಎಲ್ಲರಿಗೂ ಗೊತ್ತು. ಅದರಲ್ಲೂ ಕೆಲವರು ಪೆಟ್ರೋಲ್‌ನಲ್ಲಿ ಡೀಸೆಲ್ ಎಣ್ಣೆಯನ್ನು ಬೆರೆಯಿಸಿದಾಗ ಶಬ್ದವೂ ಕೂಡ ಕರ್ಕಶವಾಗುವುದಲ್ಲದೇ ಇನ್ನಷ್ಟು ಮಲೀನಯುಕ್ತ ವಾಯುಮಾಲಿನ್ಯವಾಗುತ್ತದೆ.

ಈ ವಾಯುಮಾಲಿನ್ಯವನ್ನು ಕಡಿಮೆಗೊಳಿಸಲು “ಜಿ ಮತ್ತು ಟಿ ಯುಗೋಟೆಕ್” ಎಂಬ ಕಂಪನಿಯೊಂದು ಒಂದು ಉಪಕರಣವೊಂದನ್ನು ತಯಾರಿಸಿದೆ. ಇದನ್ನು ಬಿಡಿಭಾಗದಂತೆ ರಿಕ್ಷಾಗಳಿಗೆ ಜೋಡಿಸಬಹುದು. ಇದು ಪೆಟ್ರೋಲನ್ನು ಪ್ರೊಪೇನ್ ಆಗಿ ಪರಿವರ್ತಿಸುತ್ತದೆ. ಪ್ರತಿಭಾಗದಲ್ಲಿ ೧೨ ಲೀಟರ್ ಸಾಮರ್ಥ್ಯದ ಟ್ಯಾಂಕ್ ಮತ್ತು ಮೈಕ್ರೋ ಪ್ರೊಸೆಸಲ್ ನಿಯಂತ್ರಣವಿರುತ್ತದೆ. ಇದು ವಾಹನ ಬಳಸುವ ಪೆಟ್ರೋಲನ್ನು ನಿಯಂತ್ರಿಸುತ್ತದೆ. ದೇಶದಲ್ಲಿ ಇದರ ಪ್ರಯೋಗ ಈಗಾಗಲೇ ನಡೆದಿದೆ. ಜಗತ್ತಿನಲ್ಲಿ ಇದೊಂದು ಪ್ರಥಮ ಪ್ರಯೋಗವೆಂದು ಹೇಳಲಾಗುತ್ತದೆ. ಜಿ ಮತ್ತು ಟಿ ಯುಗೋಟೆಕ್ ಕಂಪನಿಯ ನಿರ್ವಾಹಕ ನಿರ್ದೇಶಕರಾದ ರಾಜೀವ ಸವಾರಾ ಅವರ ಪ್ರಕಾರ ಪ್ರೋಪೇನ್ನಿಂದ ಚಲಿಸುವ ರಿಕ್ಷಾಗಳು ಹೈಡ್ರೋಕಾರ್ಬನ್, ಕಾರ್ಬನ್ ಮೊನಾಕ್ಸೈಡ್ ಮತ್ತು ನೈಟ್ರೋಜನ್ ಆಕ್ಸೈಡ್‌ಗಳಂತಹ ವಿಷಾನಿಲಗಳ ಕ್ಷಮತೆಯೇನೂ ಕಡಿಮೆಯಾಗಲಾರದು. ಬದಲಾಗಿ ಸುರಕ್ಷೆಗೂಳ್ಳುತ್ತದೆ. ಪ್ರೋಪೇನನ್ನು ಬದಲಿ ಇಂಧನವಾಗಿ ಭಾರತದಲ್ಲಿ ನಿಷೇಧಿಸಲಾಗಿದೆ. ಏಕೆಂದರೆ ಅದು ವಿರಳವಾಗಿ ದೊರೆಯುವ ರಾಸಾಯನಿಕ ವಸ್ತು, ಆದರೆ ಜಿ ಮತ್ತು ಟಿ ಕಂಪನಿಯು ಪ್ರಾಯೋಗಿಕವಾಗಿ ದೆಹಲಿಯಲ್ಲಿ ಈ ಉಪಕರಣವನ್ನು ಬಳಸಲು ನ್ಯಾಯಾಲಯದ ಅನುಮತಿ ಪಡೆದಿದೆ.

ಸ್ಥಳೀಯ ಸರಕಾರಕ್ಕೆ ಈ ಪ್ರಯೋಗದ ಫಲಿತಾಂಶಗಳನ್ನು ಮೇಲ್ವಿಚಾರಣೆ ಮಾಡಲೂ ಕೋರ್ಟ್ ಆದೇಶಿಸಿದೆ. ಪ್ರತಿ ರಿಕ್ಷಾಗೆ ಪ್ರೊಪೇನ್ ಟ್ಯಾಂಕ್ ಜೋಡಿಸಲು ೧೨,೦೦೦ ರೂಪಾಯಿಗಳಷ್ಟು ಖರ್ಚಾಗುತ್ತದೆ. ಈ ಪ್ರಯೋಗವು ಯಶಸ್ವಿಯಾದರೆ ಸರಕಾರವೇ ಪ್ರೋಪೇನ್ ಪರಿವರ್ತನೆಯ ಯಂತ್ರಗಳನ್ನು ಕೊಂಡುಕೊಂಡು ರಿಕ್ಷಾ ಮಾಲೀಕರಿಗೆ ಸರಬರಾಜು ಮಾಡುವ ಯೋಜನೆ ಇದೆ. ಇದಕ್ಕೆ ತಗಲುವ ಅಧಿಕ ಖರ್ಚನ್ನು ಹೆಚ್ಚಿನ ಪ್ರಮಾಣದ ಇಂಧನಕರದಿಂದ ಪಡೆಯಲಾಗುವುದು. ಪೆಟ್ರೋಲಿಗಿಂತ ಪ್ರೊಫೇನ್ ಸುಮಾರು ಅರ್ಧದಷ್ಟು ಅಗ್ಗವಾಗಿರುವುದರಿಂದ ಇದನ್ನು ಮುಂದೊಂದು ದಿನ ಎಲ್ಲ ಕಡೆ ಲಾಭದಾಯಕವಾಗಿ ಬಳಸಬಹುದು. ಇಂತಹ ರಿಕ್ಷಾಗಳು ಎಲ್ಲೆಡೆ ಚಲಾವಣೆಗೊಂಡರೆ ಒಂದಿಷ್ಟು ಪರಿಸರಕ್ಕೆ ಒಳ್ಳೆಯದಾಗಬಹುದೇನೋ?
*****

Tagged:

Leave a Reply

Your email address will not be published. Required fields are marked *

ಮಳೆ ಜೋರಾಗಿ ಸುರಿಯುತ್ತಿತ್ತು. ಚಾವಣಿ ತೂತಾಗಿ ಸೋರುತ್ತಿದ್ದುದರಿಂದ ಸಾವಿತ್ರಿಗೆ ನಿದ್ದೆ ಇರಲಿಲ್ಲ. ಅವಳ ಉಗ್ಗವನದೂ ಅದೇ ಕತೆ. ಒಂದು ಮೂಲೆಯಲ್ಲಿ ಉಗ್ಗವನಿಗೆ ಒರಗಿಕೊಂಡು ಹಳೇ ಕಂಬಳಿ ಹೊದ್ದು ಸಾವಿತ್ರಿ ತೂಕಡಿಸುತ್ತಿದ್ದಳು. ಬಾಗಿಲ ಸಂದಿನಿಂದ ಆಗಾಗ ಚಳಕ್ಕನೆ ಕಾಣಿಸಿಕೊಳ್ಳುವ ಮಿ...

ದೀಪಾವಳಿಯ ಸೂಟಿಯನ್ನು ಕಳೆಯಲು ಊರಿಗೆ ಹೋಗಿದ್ದೆ. ಹಳ್ಳಿಗೆ ಹೋದಾಗೆಲ್ಲ ಕತೆಯ ಸುಬ್ಬಣ್ಣನ ಮನೆಗೆ ಹೋಗದಿದ್ದರೆ ನನ್ನ ಮನಸ್ಸು ಕೇಳುವದಿಲ್ಲ. ಊರಿಗೆ ಬಂದು ತನ್ನ ಮನೆಗೆ ಬರದಿದ್ದರೆ ಸುಬ್ಬಣ್ಣ ಬಿಡುತ್ತಾನೇ? ಅವನ ಆಮಂತ್ರಣ ಬರುವ ಮುಂಚೆಯೇ ಹೋಗುವದು ಉಚಿತವೆಂದು ತೋರಿತು. ಅವನ ಕತೆ ಕೇ...

ಒಂದು ತಿಂಗಳ ಮಗು ಹೆನ್ರಿ ನೋಡಲು ಬಲು ಮುದ್ದಾಗಿದ್ದ. ಸೇಬಿನ ಕೆನ್ನೆಗಳು, ದೊಡ್ಡ ಕಪ್ಪು ಕಣ್ಣುಗಳು, ತಲೆಯಲ್ಲಿ ಕೆಂಚು ಕೂದಲು, ನೀಳ ಮೂಗು, ಮುದ್ದಾದ ಪುಟ್ಟ ಬಾಯಿ, ನೋಡಿದೊಡನೆ ಹೇಳಬಹುದಿತ್ತು ಆ ಮಗು ಬ್ರಿಟಿಷ್ ತಂದೆ ತಾಯಿಗೆ ಹುಟ್ಟಿದವನೆಂದು. ತಂದೆ ಸ್ಮಿಥ್ ಮತ್ತು ತಾಯಿ ಮೇರಿಗೆ...

ಕೊನೆಗೊಮ್ಮೆ ಶಂಕರ ಹೂಂಗುಟ್ಟಲೇಬೇಕಾಯಿತು. “ಹುಡುಗಿ ಮನಸ್ಸಿಗೆ ಬಂದರೆ ಮಾತ್ರ ಆಗಿ. ಈ ವಿಷಯದಲ್ಲಿ ಒತ್ತಾಯಮಾಡಬರುತ್ತದೆಯೇ?” ಎಂದು ಶಿವರಾಮ ಹೆಗಡೆಯವರು ಶಂಕರನನ್ನು ಹೊರಡಿಸಿದರು. ದಾರಿಯುದ್ದಕ್ಕೂ ಹೆಗಡೆಯವರು ತಮ್ಮ ಮಗಳ ಗುಣಗಾನವನ್ನು ಪ್ರಸ್ತುತ ಅಪ್ರಸ್ತುತ ಪ್ರಶಂಸೆಗಳಿಂದ...

ಅಡಿಗೆಯ ಮನೆಯಿಂದ ಉಮೆಯು ಓಡಿ ಬಂದು “ನೀರಿನ ಕೊಡದ ಬಳಿಗೆ ಒಂದು ಕಪ್ಪೆ ಕುಳಿತಿದೆ. ಹೊರಗೆ ಹಾಕಿ ಕೊಡಿ” ಅಂದಳು. ತನಗೆ ಹೆದರದವಳು ಒಂದು ಕಪ್ಪೆಗೆ ಅಂಜುತ್ತಾಳಲ್ಲ ಅಂದುಕೊಂಡು ಉಮೇಶ ಒಳಗೆ ಬಂದ. ಕಪ್ಪೆಯು ಭದ್ರಾಸನ ಹಾಕಿತ್ತು. ಉಮೇಶ ಒಂದು ಸೌದೆಯಿಂದ ಕೊಡವನ್ನು ಕುಟ್ಟಿ...

ಹೊಲದ ಬದುವಿನ ಮೇಲೆ ಸಿದ್ದವ್ವ ಕುಳಿತಿದ್ದಳು. ಬಿಳಿ ಜ್ವಾಳದ ತೆನೆಗಳ ಮೇಲೆ ಹಾಯ್ದ ಗಾಳಿ ಒಂದೇ ಸಮನೆ ಬೀಸುತ್ತಿತ್ತು. ಇದೇ ಹೊಲದಲ್ಲಿ ತಾನು ಬಾಲ್ಯವನ್ನೆಲ್ಲಾ ಕಳೆದದ್ದು ನೆನಪಾಗಿ ಎಂಬತ್ತೈದರ ಸಿದ್ದವ್ವಳಿಗೆ ಮೈಯಲ್ಲಿ ಹರೆಯ ಉಕ್ಕಿ ಬಂದಂಗೆ ಆಯ್ತು. ತನ್ನ ಸೊರಗಿ ತೆಳುವಾದ ಕೈ ಕಾಲು...