ಮಾಲಿನ್ಯ ರಹಿತ ಹೊಗೆಯುಗಳದ ರಿಕ್ಷಾಗಳು

ಮಾಲಿನ್ಯ ರಹಿತ ಹೊಗೆಯುಗಳದ ರಿಕ್ಷಾಗಳು

ಪೆಟ್ರೋಲ್ ಬಳೆಸುವ ದ್ವಿಚಕ್ರವಾಹನಗಳು ಅದರಲ್ಲೂ ಎರಡು ಸ್ಟ್ರೋಕ್‌ಗಳ ಯಂತ್ರಗಳು ಅತಿ ಹೆಚ್ಚು ಹೈಡ್ರೋ ಇಂಗಾಲದ ಮಲೀನ ಹೊಗೆಯನ್ನು ಹೊರಗೆಡವುತ್ತವೆ. ಇದರಿಂದ ಜೀವಕುಲದ ಉಸಿರಾಟಕ್ಕೆ ತೊಂದರೆ ಎಂಬ ಸತ್ಯ ಎಲ್ಲರಿಗೂ ಗೊತ್ತು. ಅದರಲ್ಲೂ ಕೆಲವರು ಪೆಟ್ರೋಲ್‌ನಲ್ಲಿ ಡೀಸೆಲ್ ಎಣ್ಣೆಯನ್ನು ಬೆರೆಯಿಸಿದಾಗ ಶಬ್ದವೂ ಕೂಡ ಕರ್ಕಶವಾಗುವುದಲ್ಲದೇ ಇನ್ನಷ್ಟು ಮಲೀನಯುಕ್ತ ವಾಯುಮಾಲಿನ್ಯವಾಗುತ್ತದೆ.

ಈ ವಾಯುಮಾಲಿನ್ಯವನ್ನು ಕಡಿಮೆಗೊಳಿಸಲು “ಜಿ ಮತ್ತು ಟಿ ಯುಗೋಟೆಕ್” ಎಂಬ ಕಂಪನಿಯೊಂದು ಒಂದು ಉಪಕರಣವೊಂದನ್ನು ತಯಾರಿಸಿದೆ. ಇದನ್ನು ಬಿಡಿಭಾಗದಂತೆ ರಿಕ್ಷಾಗಳಿಗೆ ಜೋಡಿಸಬಹುದು. ಇದು ಪೆಟ್ರೋಲನ್ನು ಪ್ರೊಪೇನ್ ಆಗಿ ಪರಿವರ್ತಿಸುತ್ತದೆ. ಪ್ರತಿಭಾಗದಲ್ಲಿ ೧೨ ಲೀಟರ್ ಸಾಮರ್ಥ್ಯದ ಟ್ಯಾಂಕ್ ಮತ್ತು ಮೈಕ್ರೋ ಪ್ರೊಸೆಸಲ್ ನಿಯಂತ್ರಣವಿರುತ್ತದೆ. ಇದು ವಾಹನ ಬಳಸುವ ಪೆಟ್ರೋಲನ್ನು ನಿಯಂತ್ರಿಸುತ್ತದೆ. ದೇಶದಲ್ಲಿ ಇದರ ಪ್ರಯೋಗ ಈಗಾಗಲೇ ನಡೆದಿದೆ. ಜಗತ್ತಿನಲ್ಲಿ ಇದೊಂದು ಪ್ರಥಮ ಪ್ರಯೋಗವೆಂದು ಹೇಳಲಾಗುತ್ತದೆ. ಜಿ ಮತ್ತು ಟಿ ಯುಗೋಟೆಕ್ ಕಂಪನಿಯ ನಿರ್ವಾಹಕ ನಿರ್ದೇಶಕರಾದ ರಾಜೀವ ಸವಾರಾ ಅವರ ಪ್ರಕಾರ ಪ್ರೋಪೇನ್ನಿಂದ ಚಲಿಸುವ ರಿಕ್ಷಾಗಳು ಹೈಡ್ರೋಕಾರ್ಬನ್, ಕಾರ್ಬನ್ ಮೊನಾಕ್ಸೈಡ್ ಮತ್ತು ನೈಟ್ರೋಜನ್ ಆಕ್ಸೈಡ್‌ಗಳಂತಹ ವಿಷಾನಿಲಗಳ ಕ್ಷಮತೆಯೇನೂ ಕಡಿಮೆಯಾಗಲಾರದು. ಬದಲಾಗಿ ಸುರಕ್ಷೆಗೂಳ್ಳುತ್ತದೆ. ಪ್ರೋಪೇನನ್ನು ಬದಲಿ ಇಂಧನವಾಗಿ ಭಾರತದಲ್ಲಿ ನಿಷೇಧಿಸಲಾಗಿದೆ. ಏಕೆಂದರೆ ಅದು ವಿರಳವಾಗಿ ದೊರೆಯುವ ರಾಸಾಯನಿಕ ವಸ್ತು, ಆದರೆ ಜಿ ಮತ್ತು ಟಿ ಕಂಪನಿಯು ಪ್ರಾಯೋಗಿಕವಾಗಿ ದೆಹಲಿಯಲ್ಲಿ ಈ ಉಪಕರಣವನ್ನು ಬಳಸಲು ನ್ಯಾಯಾಲಯದ ಅನುಮತಿ ಪಡೆದಿದೆ.

ಸ್ಥಳೀಯ ಸರಕಾರಕ್ಕೆ ಈ ಪ್ರಯೋಗದ ಫಲಿತಾಂಶಗಳನ್ನು ಮೇಲ್ವಿಚಾರಣೆ ಮಾಡಲೂ ಕೋರ್ಟ್ ಆದೇಶಿಸಿದೆ. ಪ್ರತಿ ರಿಕ್ಷಾಗೆ ಪ್ರೊಪೇನ್ ಟ್ಯಾಂಕ್ ಜೋಡಿಸಲು ೧೨,೦೦೦ ರೂಪಾಯಿಗಳಷ್ಟು ಖರ್ಚಾಗುತ್ತದೆ. ಈ ಪ್ರಯೋಗವು ಯಶಸ್ವಿಯಾದರೆ ಸರಕಾರವೇ ಪ್ರೋಪೇನ್ ಪರಿವರ್ತನೆಯ ಯಂತ್ರಗಳನ್ನು ಕೊಂಡುಕೊಂಡು ರಿಕ್ಷಾ ಮಾಲೀಕರಿಗೆ ಸರಬರಾಜು ಮಾಡುವ ಯೋಜನೆ ಇದೆ. ಇದಕ್ಕೆ ತಗಲುವ ಅಧಿಕ ಖರ್ಚನ್ನು ಹೆಚ್ಚಿನ ಪ್ರಮಾಣದ ಇಂಧನಕರದಿಂದ ಪಡೆಯಲಾಗುವುದು. ಪೆಟ್ರೋಲಿಗಿಂತ ಪ್ರೊಫೇನ್ ಸುಮಾರು ಅರ್ಧದಷ್ಟು ಅಗ್ಗವಾಗಿರುವುದರಿಂದ ಇದನ್ನು ಮುಂದೊಂದು ದಿನ ಎಲ್ಲ ಕಡೆ ಲಾಭದಾಯಕವಾಗಿ ಬಳಸಬಹುದು. ಇಂತಹ ರಿಕ್ಷಾಗಳು ಎಲ್ಲೆಡೆ ಚಲಾವಣೆಗೊಂಡರೆ ಒಂದಿಷ್ಟು ಪರಿಸರಕ್ಕೆ ಒಳ್ಳೆಯದಾಗಬಹುದೇನೋ?
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಬಲು ತರಿದು ವರದಿ ಮಾಡಿದರದು ಕವನವಾದೀತೇ ?
Next post ಈ ದೇಹವು ನಿನ್ನದೇ

ಸಣ್ಣ ಕತೆ

  • ಟೋಪಿ ಮಾರುತಿ

    "ಏ ಕಾಗಿ, ಕಾಳೀ ಮಗನ! ಯಾಕ ಕೂಗ್ತೀಯಾ?" ಭಾವಿಯಲ್ಲಿಯ ಹಗ್ಗ ಮೇಲೆ ಕೆಳಗೆ ಹೋಗುತ್ತಿರುತ್ತದೆ. ಒಂದು ಮೊಳ ಹಗ್ಗ ಸೇದಿದರೆ ಅರ್‍ಧ ಮೊಳ ಒಳಗೆ ಸೇರಿರುತ್ತದೆ. "ಥೂ… Read more…

  • ನಿರೀಕ್ಷೆ

    ಆ ಹಣ್ಣು ಮುದುಕ ಎಲ್ಲಿಂದ ಬರುತ್ತಾನೆ, ಎಲ್ಲಿಗೆ ಹೋಗುತ್ತಾನೆ ಎಂದು ಯಾರಿಗೂ ತಿಳಿಯದು. ಆದರೆ ಎಲ್ಲರೂ ಅವನನ್ನು ಕಲ್ಲು ಬೆಂಚಿನ ಮುದುಕ ಎಂದೇ ಕರೆಯುತ್ತಾರೆ. ಪ್ರೈಮರಿ ಶಾಲೆಯ… Read more…

  • ವಲಯ

    ಅವಳ ಕೈ ಬೆರಳುಗಳು ನನ್ನ ಮುಖದ ಮೇಲೆ ಲಯಬದ್ಧವಾಗಿ ಚಲಿಸುತ್ತಿವೆ. ಕಂಗಳ ಮೇಲೆ ಅದೊಂದು ತರಹ ಮಂಪರು ಮೆತ್ತ-ಮೆತ್ತಗೆ ಹಾರಾಡತೊಡಗುತ್ತಿದೆ! ನಾಳೆ ಹೋಗಬೇಕಾದ ‘ಪಾರ್ಟಿ’ ಗೆ ಈಗಾಗಲೇ… Read more…

  • ಸಂಶೋಧನೆ

    ವೇಣುಗೋಪಾಲನ ಜೀವನ ಬೆಳಗು ರಾತ್ರಿಗಳಂತೆ ಒಂದೇ ಮಾಂತ್ರಿಕತೆಗೆ ಹೊಂದಿಕೊಂಡಿತ್ತು. ಬೆಳಿಗ್ಗೆ ಏಳುವುದು ನೈಸರ್ಗಿಕ ವಿಧಿಗಳಿಂದ ಮುಕ್ತನಾಗಿ ಕಾಫಿ ಕುಡಿಯುತ್ತಾ ಅಂದಿನ ದಿನಪತ್ರಿಕೆ ಓದುವುದು, ಓದಿದ್ದರ ಬಗ್ಗೆ ಚಿಂತಿಸುತ್ತಾ… Read more…

  • ಮೌನವು ಮುದ್ದಿಗಾಗಿ!

    ಮೋಹನರಾಯರು ರಗ್ಗಿನ ಮಸಕು ತೆಗೆದು ಸುತ್ತಲೂ ನೋಡಲು ಇನ್ನೂ ಎಲ್ಲವೂ ಶಾಂತವಾಗಿಯೇ ಇದ್ದಿತು. ಬೆಳಗಿನ ಜಾವವು ಜಾರಿ, ಸೂರ್ಯನು ಮೇಲಕ್ಕೇರಿದುದು ಅವರಿಗೆ ಅರಿವೇ ಇರಲಿಲ್ಲ. ಅಷ್ಟು ಗಾಢ… Read more…