ಮಾಲಿನ್ಯ ರಹಿತ ಹೊಗೆಯುಗಳದ ರಿಕ್ಷಾಗಳು

ಮಾಲಿನ್ಯ ರಹಿತ ಹೊಗೆಯುಗಳದ ರಿಕ್ಷಾಗಳು

ಪೆಟ್ರೋಲ್ ಬಳೆಸುವ ದ್ವಿಚಕ್ರವಾಹನಗಳು ಅದರಲ್ಲೂ ಎರಡು ಸ್ಟ್ರೋಕ್‌ಗಳ ಯಂತ್ರಗಳು ಅತಿ ಹೆಚ್ಚು ಹೈಡ್ರೋ ಇಂಗಾಲದ ಮಲೀನ ಹೊಗೆಯನ್ನು ಹೊರಗೆಡವುತ್ತವೆ. ಇದರಿಂದ ಜೀವಕುಲದ ಉಸಿರಾಟಕ್ಕೆ ತೊಂದರೆ ಎಂಬ ಸತ್ಯ ಎಲ್ಲರಿಗೂ ಗೊತ್ತು. ಅದರಲ್ಲೂ ಕೆಲವರು ಪೆಟ್ರೋಲ್‌ನಲ್ಲಿ ಡೀಸೆಲ್ ಎಣ್ಣೆಯನ್ನು ಬೆರೆಯಿಸಿದಾಗ ಶಬ್ದವೂ ಕೂಡ ಕರ್ಕಶವಾಗುವುದಲ್ಲದೇ ಇನ್ನಷ್ಟು ಮಲೀನಯುಕ್ತ ವಾಯುಮಾಲಿನ್ಯವಾಗುತ್ತದೆ.

ಈ ವಾಯುಮಾಲಿನ್ಯವನ್ನು ಕಡಿಮೆಗೊಳಿಸಲು “ಜಿ ಮತ್ತು ಟಿ ಯುಗೋಟೆಕ್” ಎಂಬ ಕಂಪನಿಯೊಂದು ಒಂದು ಉಪಕರಣವೊಂದನ್ನು ತಯಾರಿಸಿದೆ. ಇದನ್ನು ಬಿಡಿಭಾಗದಂತೆ ರಿಕ್ಷಾಗಳಿಗೆ ಜೋಡಿಸಬಹುದು. ಇದು ಪೆಟ್ರೋಲನ್ನು ಪ್ರೊಪೇನ್ ಆಗಿ ಪರಿವರ್ತಿಸುತ್ತದೆ. ಪ್ರತಿಭಾಗದಲ್ಲಿ ೧೨ ಲೀಟರ್ ಸಾಮರ್ಥ್ಯದ ಟ್ಯಾಂಕ್ ಮತ್ತು ಮೈಕ್ರೋ ಪ್ರೊಸೆಸಲ್ ನಿಯಂತ್ರಣವಿರುತ್ತದೆ. ಇದು ವಾಹನ ಬಳಸುವ ಪೆಟ್ರೋಲನ್ನು ನಿಯಂತ್ರಿಸುತ್ತದೆ. ದೇಶದಲ್ಲಿ ಇದರ ಪ್ರಯೋಗ ಈಗಾಗಲೇ ನಡೆದಿದೆ. ಜಗತ್ತಿನಲ್ಲಿ ಇದೊಂದು ಪ್ರಥಮ ಪ್ರಯೋಗವೆಂದು ಹೇಳಲಾಗುತ್ತದೆ. ಜಿ ಮತ್ತು ಟಿ ಯುಗೋಟೆಕ್ ಕಂಪನಿಯ ನಿರ್ವಾಹಕ ನಿರ್ದೇಶಕರಾದ ರಾಜೀವ ಸವಾರಾ ಅವರ ಪ್ರಕಾರ ಪ್ರೋಪೇನ್ನಿಂದ ಚಲಿಸುವ ರಿಕ್ಷಾಗಳು ಹೈಡ್ರೋಕಾರ್ಬನ್, ಕಾರ್ಬನ್ ಮೊನಾಕ್ಸೈಡ್ ಮತ್ತು ನೈಟ್ರೋಜನ್ ಆಕ್ಸೈಡ್‌ಗಳಂತಹ ವಿಷಾನಿಲಗಳ ಕ್ಷಮತೆಯೇನೂ ಕಡಿಮೆಯಾಗಲಾರದು. ಬದಲಾಗಿ ಸುರಕ್ಷೆಗೂಳ್ಳುತ್ತದೆ. ಪ್ರೋಪೇನನ್ನು ಬದಲಿ ಇಂಧನವಾಗಿ ಭಾರತದಲ್ಲಿ ನಿಷೇಧಿಸಲಾಗಿದೆ. ಏಕೆಂದರೆ ಅದು ವಿರಳವಾಗಿ ದೊರೆಯುವ ರಾಸಾಯನಿಕ ವಸ್ತು, ಆದರೆ ಜಿ ಮತ್ತು ಟಿ ಕಂಪನಿಯು ಪ್ರಾಯೋಗಿಕವಾಗಿ ದೆಹಲಿಯಲ್ಲಿ ಈ ಉಪಕರಣವನ್ನು ಬಳಸಲು ನ್ಯಾಯಾಲಯದ ಅನುಮತಿ ಪಡೆದಿದೆ.

ಸ್ಥಳೀಯ ಸರಕಾರಕ್ಕೆ ಈ ಪ್ರಯೋಗದ ಫಲಿತಾಂಶಗಳನ್ನು ಮೇಲ್ವಿಚಾರಣೆ ಮಾಡಲೂ ಕೋರ್ಟ್ ಆದೇಶಿಸಿದೆ. ಪ್ರತಿ ರಿಕ್ಷಾಗೆ ಪ್ರೊಪೇನ್ ಟ್ಯಾಂಕ್ ಜೋಡಿಸಲು ೧೨,೦೦೦ ರೂಪಾಯಿಗಳಷ್ಟು ಖರ್ಚಾಗುತ್ತದೆ. ಈ ಪ್ರಯೋಗವು ಯಶಸ್ವಿಯಾದರೆ ಸರಕಾರವೇ ಪ್ರೋಪೇನ್ ಪರಿವರ್ತನೆಯ ಯಂತ್ರಗಳನ್ನು ಕೊಂಡುಕೊಂಡು ರಿಕ್ಷಾ ಮಾಲೀಕರಿಗೆ ಸರಬರಾಜು ಮಾಡುವ ಯೋಜನೆ ಇದೆ. ಇದಕ್ಕೆ ತಗಲುವ ಅಧಿಕ ಖರ್ಚನ್ನು ಹೆಚ್ಚಿನ ಪ್ರಮಾಣದ ಇಂಧನಕರದಿಂದ ಪಡೆಯಲಾಗುವುದು. ಪೆಟ್ರೋಲಿಗಿಂತ ಪ್ರೊಫೇನ್ ಸುಮಾರು ಅರ್ಧದಷ್ಟು ಅಗ್ಗವಾಗಿರುವುದರಿಂದ ಇದನ್ನು ಮುಂದೊಂದು ದಿನ ಎಲ್ಲ ಕಡೆ ಲಾಭದಾಯಕವಾಗಿ ಬಳಸಬಹುದು. ಇಂತಹ ರಿಕ್ಷಾಗಳು ಎಲ್ಲೆಡೆ ಚಲಾವಣೆಗೊಂಡರೆ ಒಂದಿಷ್ಟು ಪರಿಸರಕ್ಕೆ ಒಳ್ಳೆಯದಾಗಬಹುದೇನೋ?
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಬಲು ತರಿದು ವರದಿ ಮಾಡಿದರದು ಕವನವಾದೀತೇ ?
Next post ಈ ದೇಹವು ನಿನ್ನದೇ

ಸಣ್ಣ ಕತೆ

  • ಕರಿ ನಾಗರಗಳು

    ಚಿತ್ರ: ಆಂಬರ್‍ ಕ್ಲೇ ಇಶಾಂ ನಮಾಜಿಗೆ (ರಾತ್ರೆಯ ನಮಾಜು) ಮೊದಲು ಅರಬ್ಬಿ ಪುಸ್ತಕವನ್ನು ಬ್ಯಾಗಿನೊಳಗಿಟ್ಟುಕೊಂಡು, ಅದನ್ನು ದುಪಟ್ಟದೊಳಗೆ ಮರೆ ಮಾಡಿಕೊಂಡು ಓಡಿ ಬಂದ, ತರನ್ನುಮ್‌ ನೀರು ಹರಿಯುತ್ತಿದ್ದ… Read more…

  • ಜುಡಾಸ್

    "ಪೀಟರ್" "ಪ್ರಭು" "ಇನ್ನು ಮೂರುದಿನ ಮಾತ್ರ, ಪೀಟರ್. ಅನಂತರ...." ಮಾತು ಅರ್ಧಕ್ಕೆ ನಿಂತಿತು. ಯೇಸುಕ್ರಿಸ್ತ ತನ್ನ ಶಿಷ್ಯರೊಂದಿಗೆ ಕಾಲುನಡಿಗೆಯಲ್ಲಿ ಜೆರೂಸಲೆಂ ನಗರಕ್ಕೆ ನಡೆದು ಬರುತ್ತಿದ್ದ. ಹನ್ನೆರಡುಜನ ಶಿಷ್ಯರೂ… Read more…

  • ಆವರ್ತನೆ

    ಒಬ್ಬ ಸಾಹಿತಿಯನ್ನು ನೋಡುವ ಕುತೂಹಲ ಯಾರಿಗಿಲ್ಲ? ಪಕ್ಕದೂರಿನ ಹೈಸ್ಕೂಲಿನಲ್ಲಿ ಕಾದಂಬರಿಕಾರ ಅ.ರ.ಸು.ರವರ ಕಾರ್ಯಕ್ರಮವಿದೆಯೆಂಬ ಸುದ್ದಿ ಕೇಳಿ ನಾವು ನೋಡಲು ಹೋದೆವು. ಅ.ರ.ಸು.ರವರ ಕೃತಿಗಳನ್ನು ನಾವಾರೂ ಹೆಚ್ಚಾಗಿ ಓದಿರಲಾರೆವು.… Read more…

  • ಎರಡು ಮದುವೆಗಳು

    ಮುಂಗಾರು ಮಳೆಗಳು ಸರಿಯಾಗಿ ಬಾರದೇ ಭುವನೇಶ್ವರದ ಹಳ್ಳಿಯ ಜನರಲ್ಲಿ ಒಂದು ರೀತಿಯ ಕಳವಳವಾಗಿತ್ತು. ಮಳೆ ಬಂದರೆ ಬೆಳೆ, ಬೆಳೆ ಆದರೆ ಬಾಳು ಎಂದು ಬದುಕುತ್ತಿದ್ದ ಅವರಿಗೆ ಏನು… Read more…

  • ಮಂಜುಳ ಗಾನ

    ಶ್ರೀ ಸರಸ್ವತಿ ಕಾಲೇಜಿನ ಪಾಠಪ್ರವಚನಗಳ ಬಗ್ಗೆ ಎರಡನೆ ಮಾತಿಲ್ಲ. ಅತ್ಯಂತ ಉತ್ತಮ ಗುಣಮಟ್ಟದ ಶಿಕ್ಷಣ ವಿದ್ಯಾರ್ಥಿಗಳಿಗೆ ದೊರಕುತ್ತಿತ್ತು. ಆದರೆ ಈ ಕಾಲೇಜಿನ ವಿಶೇಷವೆಂದರೆ ವಿದ್ಯಾರ್ಥಿಗಳ ಮತ್ತು ಉಪನ್ಯಾಸಕರ… Read more…