ಮಾಲಿನ್ಯ ರಹಿತ ಹೊಗೆಯುಗಳದ ರಿಕ್ಷಾಗಳು

ಮಾಲಿನ್ಯ ರಹಿತ ಹೊಗೆಯುಗಳದ ರಿಕ್ಷಾಗಳು

ಪೆಟ್ರೋಲ್ ಬಳೆಸುವ ದ್ವಿಚಕ್ರವಾಹನಗಳು ಅದರಲ್ಲೂ ಎರಡು ಸ್ಟ್ರೋಕ್‌ಗಳ ಯಂತ್ರಗಳು ಅತಿ ಹೆಚ್ಚು ಹೈಡ್ರೋ ಇಂಗಾಲದ ಮಲೀನ ಹೊಗೆಯನ್ನು ಹೊರಗೆಡವುತ್ತವೆ. ಇದರಿಂದ ಜೀವಕುಲದ ಉಸಿರಾಟಕ್ಕೆ ತೊಂದರೆ ಎಂಬ ಸತ್ಯ ಎಲ್ಲರಿಗೂ ಗೊತ್ತು. ಅದರಲ್ಲೂ ಕೆಲವರು ಪೆಟ್ರೋಲ್‌ನಲ್ಲಿ ಡೀಸೆಲ್ ಎಣ್ಣೆಯನ್ನು ಬೆರೆಯಿಸಿದಾಗ ಶಬ್ದವೂ ಕೂಡ ಕರ್ಕಶವಾಗುವುದಲ್ಲದೇ ಇನ್ನಷ್ಟು ಮಲೀನಯುಕ್ತ ವಾಯುಮಾಲಿನ್ಯವಾಗುತ್ತದೆ.

ಈ ವಾಯುಮಾಲಿನ್ಯವನ್ನು ಕಡಿಮೆಗೊಳಿಸಲು “ಜಿ ಮತ್ತು ಟಿ ಯುಗೋಟೆಕ್” ಎಂಬ ಕಂಪನಿಯೊಂದು ಒಂದು ಉಪಕರಣವೊಂದನ್ನು ತಯಾರಿಸಿದೆ. ಇದನ್ನು ಬಿಡಿಭಾಗದಂತೆ ರಿಕ್ಷಾಗಳಿಗೆ ಜೋಡಿಸಬಹುದು. ಇದು ಪೆಟ್ರೋಲನ್ನು ಪ್ರೊಪೇನ್ ಆಗಿ ಪರಿವರ್ತಿಸುತ್ತದೆ. ಪ್ರತಿಭಾಗದಲ್ಲಿ ೧೨ ಲೀಟರ್ ಸಾಮರ್ಥ್ಯದ ಟ್ಯಾಂಕ್ ಮತ್ತು ಮೈಕ್ರೋ ಪ್ರೊಸೆಸಲ್ ನಿಯಂತ್ರಣವಿರುತ್ತದೆ. ಇದು ವಾಹನ ಬಳಸುವ ಪೆಟ್ರೋಲನ್ನು ನಿಯಂತ್ರಿಸುತ್ತದೆ. ದೇಶದಲ್ಲಿ ಇದರ ಪ್ರಯೋಗ ಈಗಾಗಲೇ ನಡೆದಿದೆ. ಜಗತ್ತಿನಲ್ಲಿ ಇದೊಂದು ಪ್ರಥಮ ಪ್ರಯೋಗವೆಂದು ಹೇಳಲಾಗುತ್ತದೆ. ಜಿ ಮತ್ತು ಟಿ ಯುಗೋಟೆಕ್ ಕಂಪನಿಯ ನಿರ್ವಾಹಕ ನಿರ್ದೇಶಕರಾದ ರಾಜೀವ ಸವಾರಾ ಅವರ ಪ್ರಕಾರ ಪ್ರೋಪೇನ್ನಿಂದ ಚಲಿಸುವ ರಿಕ್ಷಾಗಳು ಹೈಡ್ರೋಕಾರ್ಬನ್, ಕಾರ್ಬನ್ ಮೊನಾಕ್ಸೈಡ್ ಮತ್ತು ನೈಟ್ರೋಜನ್ ಆಕ್ಸೈಡ್‌ಗಳಂತಹ ವಿಷಾನಿಲಗಳ ಕ್ಷಮತೆಯೇನೂ ಕಡಿಮೆಯಾಗಲಾರದು. ಬದಲಾಗಿ ಸುರಕ್ಷೆಗೂಳ್ಳುತ್ತದೆ. ಪ್ರೋಪೇನನ್ನು ಬದಲಿ ಇಂಧನವಾಗಿ ಭಾರತದಲ್ಲಿ ನಿಷೇಧಿಸಲಾಗಿದೆ. ಏಕೆಂದರೆ ಅದು ವಿರಳವಾಗಿ ದೊರೆಯುವ ರಾಸಾಯನಿಕ ವಸ್ತು, ಆದರೆ ಜಿ ಮತ್ತು ಟಿ ಕಂಪನಿಯು ಪ್ರಾಯೋಗಿಕವಾಗಿ ದೆಹಲಿಯಲ್ಲಿ ಈ ಉಪಕರಣವನ್ನು ಬಳಸಲು ನ್ಯಾಯಾಲಯದ ಅನುಮತಿ ಪಡೆದಿದೆ.

ಸ್ಥಳೀಯ ಸರಕಾರಕ್ಕೆ ಈ ಪ್ರಯೋಗದ ಫಲಿತಾಂಶಗಳನ್ನು ಮೇಲ್ವಿಚಾರಣೆ ಮಾಡಲೂ ಕೋರ್ಟ್ ಆದೇಶಿಸಿದೆ. ಪ್ರತಿ ರಿಕ್ಷಾಗೆ ಪ್ರೊಪೇನ್ ಟ್ಯಾಂಕ್ ಜೋಡಿಸಲು ೧೨,೦೦೦ ರೂಪಾಯಿಗಳಷ್ಟು ಖರ್ಚಾಗುತ್ತದೆ. ಈ ಪ್ರಯೋಗವು ಯಶಸ್ವಿಯಾದರೆ ಸರಕಾರವೇ ಪ್ರೋಪೇನ್ ಪರಿವರ್ತನೆಯ ಯಂತ್ರಗಳನ್ನು ಕೊಂಡುಕೊಂಡು ರಿಕ್ಷಾ ಮಾಲೀಕರಿಗೆ ಸರಬರಾಜು ಮಾಡುವ ಯೋಜನೆ ಇದೆ. ಇದಕ್ಕೆ ತಗಲುವ ಅಧಿಕ ಖರ್ಚನ್ನು ಹೆಚ್ಚಿನ ಪ್ರಮಾಣದ ಇಂಧನಕರದಿಂದ ಪಡೆಯಲಾಗುವುದು. ಪೆಟ್ರೋಲಿಗಿಂತ ಪ್ರೊಫೇನ್ ಸುಮಾರು ಅರ್ಧದಷ್ಟು ಅಗ್ಗವಾಗಿರುವುದರಿಂದ ಇದನ್ನು ಮುಂದೊಂದು ದಿನ ಎಲ್ಲ ಕಡೆ ಲಾಭದಾಯಕವಾಗಿ ಬಳಸಬಹುದು. ಇಂತಹ ರಿಕ್ಷಾಗಳು ಎಲ್ಲೆಡೆ ಚಲಾವಣೆಗೊಂಡರೆ ಒಂದಿಷ್ಟು ಪರಿಸರಕ್ಕೆ ಒಳ್ಳೆಯದಾಗಬಹುದೇನೋ?
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಬಲು ತರಿದು ವರದಿ ಮಾಡಿದರದು ಕವನವಾದೀತೇ ?
Next post ಈ ದೇಹವು ನಿನ್ನದೇ

ಸಣ್ಣ ಕತೆ

  • ಸಾವಿಗೊಂದು ಸ್ಮಾರಕ

    ಶಾಲೆಯ ಮಾಸ್ತರ್ ಆಗಿ ಗಜರಾಜ ಸಿಂಗ್ ಅವರು ಪ್ರೈಮರಿ ಶಾಲೆಯ ಮಕ್ಕಳಿಗೆ ಹೇಳಿಕೊಡುತ್ತಿದ್ದ ಮೊದಲ ಪಾಠವೆಂದರೆ "ತಂದೆ ತಾಯಿಯನ್ನು ಗೌರವಿಸಿ, ಅವರೇ ನಿಮ್ಮ ಪಾಲಿನ ದೈವ" ಎಂದು.… Read more…

  • ದೇವರು ಮತ್ತು ಅಪಘಾತ

    ಊರಿನ ಕೊನೆಯಂಚಿನಲ್ಲಿದ್ದ ಕೆರೆಯಂಗಳದಲ್ಲಿ ಅಣಬೆಗಳಂತೆ ಮೈವೆತ್ತಿದ್ದ ಗುಡಿಸಲುಗಳಲ್ಲಿ ಕೊನೆಯದು ಅವಳದಾಗಿತ್ತು. ನಾಲ್ಕೈದು ಸಾರಿ ಮುನಿಸಿಪಾಲಿಟಿಯವರು ಆ ಗುಡಿಸಲುಗಳನ್ನು ಕಿತ್ತು ಹಾಕಿದ್ದರೂ ಮನುಷ್ಯ ಪ್ರಾಣಿಗಳ ಸೂರಿನ ಅದಮ್ಯ ಅವಶ್ಯಕ… Read more…

  • ನಂಟಿನ ಕೊನೆಯ ಬಲ್ಲವರಾರು?

    ಕುಳಿತವನು ಅಲುಗದಂತೆ ತದೇಕ ಚಿತ್ತದಿಂದ ಕಡಲನ್ನು ನೋಡುತ್ತಿದ್ದ. ಹಾಗೇ ಕುಳಿತು ಅರ್ಧಗಂಟೆ ಕಳೆದಿತ್ತು. ಮೊಲದ ಬಾರಿಗೆ ಕಡಲ ಕಂಡವನ ಚಿತ್ತ ಕಲಕುವುದೇಕೆಂದು ಕುಳಿತಲ್ಲೇ ಅವನನ್ನು ಬಿಟ್ಟು ತಿರುಗಾಡಿ… Read more…

  • ಲೋಕೋಪಕಾರ!

    ಸಾಥಿ ಶಿವರಾವ ಅವರಿಗೆ ಬಹು ದೊಡ್ಡ ಚಿಂತೆ! ಅವರು ಅನೇಕ ಪ್ರಶ್ನೆಗಳನ್ನು ಬಹು-ಸರಳವಾಗಿ ಬಿಡಿಸುತ್ತಿದ್ದರು. ಪರೀಕ್ಷೆಯಲ್ಲಿ ಅನೇಕ ಪ್ರಶ್ನೆಗಳಿಗೆ ಉತ್ತರ ಬರೆದಿದ್ದಾರು. ಆದರೆ ಎಂತಹ ದೊಡ್ಡ ಪ್ರಶ್ನೆ… Read more…

  • ನಾಗನ ವರಿಸಿದ ಬಿಂಬಾಲಿ…

    ಬಿಂಬಾಲಿ ಬೋಯ್ ತನ್ನ ಅಮ್ಮ ಅಣ್ಣ ಅತ್ತಿಗೆ ಜೊತೆ ಅಟಲಾ ಎಂಬ ಒರಿಸ್ಸಾದ ಹಳ್ಳಿಯಲ್ಲಿ ವಾಸಿಸುತ್ತಿದ್ದಳು. ತಂದೆಯ ಮರಣದ ಮುಂಚೆಯೆ ಅವಳ ಹಿರಿಯಕ್ಕನ ಮದುವೆಯಾಗಿತ್ತು. ತಂದೆ ಬದುಕಿದ್ದಾಗ… Read more…

cheap jordans|wholesale air max|wholesale jordans|wholesale jewelry|wholesale jerseys