Home / ಕವನ / ಕವಿತೆ / ನರ-ವಾನರ

ನರ-ವಾನರ

ಕಾಡಿನ ಕೋತಿ ಬಿದುರಿನ ಚದುರೆ ಖಾಸ ಬಂಗ್ಲಿ ಬೋನಲ್ಲಿ……….
ವಿಕಾರ! ವಿಕಟ! ನಗೆಗೇಡೆಂದು ಹಳಿವರು ನಾವು ಮಾನವರು!
ಗಡವಮಂಗ, ಬಾಲದಕೋತಿ, ಮೊಂಡು ಬಾಲ, ನೀಲಮೂಗು,
ಈ ಪರಿಯುಂಟು ಮಂಗಗಳು ಹಣ್ಣೆ ತಿಂದು ಜೀವಿಪವು;
ಸಂಶಯ ಬಂತು ಆಕೆಗೆ! ನೀವೇ ನೆಂಬಿರಿ ಉತ್ತಮರೆ?
ಮಾನವರು ನಾವು! ವಾನರರು ಅವು! ಯಾರು ಹೇಳಿ ನಗೆಗೀಡು?
ಕೂದಲು ಉದುರೆ, ಹಲ್ಲು ಕಳಚೆ, ಗುಳ್ಳೆಗಣ್ಣು ಗಜ್ಜುಗವಾಗೆ!
ಚರ್ಮವೊಂದೇ ವ್ಯತ್ಯಾಸ! ವಸ್ತ್ರವೊಂದೇ ವ್ಯತ್ಯಾಸ!
ಎಂಥ ವಿಕಾರ ಅಡಗಿದೆ ಇಲ್ಲಿ ಮಾನವ ದೇಹದಲ್ಲಿ……..!
ಪರಿಯಿಷ್ಟೆ ಇನ್ನೂ ಸೂಕ್ಷ್ಮ ತೋರಿಸಬಲ್ಲೆ -ತೋರಿಸಿ ನಿಮ್ಮ ನೋಯಿಸಲೊಲ್ಲೆ!
ಆದರೆ, ನೋಡಿ, ಒಮ್ಮಾತಿನಲ್ಲಿ ಇದ್ದರೆ ಬೋನಿನ ಒಳಗಡೆ ನಾವು
ಕಾಣುವವೆಷ್ಟೋ ಅವಕಿಂತ ಅ-ವ-ಲ-ಕ್ಷ-ಣ!…………….
ತುಸುವೂ ಇಲ್ಲ ವ್ಯಾಯಾಮ! ಯೌವ್ವನ ಕಳೆಯಲು ಪರಿತಾಪ!
ನುಂಗುವುದಂತೂ ಲಾಡು, ಚಿರೋಟಿ ತಿಂದರೆ ಅರಗದು ನಮಗೇ ಗೊತ್ತು!
ಗುಡ್ಡದ ಗಾತ್ರ, ತಂಬಾಕು ಸೇದಲು ಸಾಲದು ನಿತ್ಯ ನಿತ್ಯ!
ಸಾಗರದಷ್ಟು ಸಾರಾಯಿ ಕುಡಿಯದೆ ತೃಪ್ತಿ ನಮಗೆಲ್ಲಿ?
ಯಾಕೋ ಏನೋ ಯಾರಿಗೆ ಗೊತ್ತು ಮಾನವರೆಲ್ಲರ ಪರಿಯಷ್ಟೆ!
ಕಾಯಗಳನ್ನು ಕಸುವಾಗಿಡಲು ಹಣ್ಣೇತಿಂದು ಇರಬಹುದಲ್ಲ?
ಆದರೆ ನೋಡಿ ಹಣ್ಣೆಲ್ಲ ವಾನರರಾಹಾರ!

ಹಣ್ಣು ಎಂದರೆ ಸಾಮಾನ್ಯ ಅಲ್ಲವು ಕೇಳಿ ನಿವೆಲ್ಲ!
ಬೇಸಿಗೆ ಬಿಸಿಲು, ಮಾಗೀ ಗಾಳೀ, ಭೂಮೀ ಸಾರ, ಜಡಿಮಳೆಯು
ಎಲ್ಲ ಸೇರಿ ಹಣ್ಣಿನ ರೂಪ ತಿಳಿಯದೆ? ನಿಮಗೆ? ಈ ಗುಟ್ಟು?
ದೇಹವ ಶೋಧಿಸಿ, ಮಿದುಳನು ತೊಳೆದು,
ದ್ವೇಷದ ದೋಷದ, ಇಲ್ಲಣ ತೊಡೆದು
ಮಾನವ ದೇಹವ ದೇವರ ಭಾವಕೆ ಸರಿಸಮನೆನಿಸಲು ಹಣ್ಣೇ ಬೇಕು!
ಆದರೆ, ನಾವು ದೇವರ ನೋಡಿಸಿ ಹಾ-ಯಾ-ಗಿ-ಹೆ-ವು!…………….
ಅದಕೇ ತಾನೇ, ಅವು ತಾವಾಗಿ ಕಾಣುತ ನಮ್ಮನುಹರಿದೂ ಹಾರೀ,
ಹತ್ತೀ, ಕುಣಿದೂ!…………..
ಬೆಳಗೂ ಬೈಗೂ, ತಲೆಕೆಳಗಾಗಿ ನೇತುಬಿದ್ದಿವೆ ಬೋನಲ್ಲಿ!
ಮಾಡುತಿಹನೆ ಅಪಹಾಸ್ಯ? ಮಾಡುತಿಹವೆ ನೀತಿಬೋಧೆ?
ನಗರದ ನರರ ಪರಿಮಿಷ್ಟೆ! ಬೋನಿನ ವಾನರರರಿವಷ್ಟೆ
ಅದು ನೋಡಿದರೆ ದೈವತ್ವ! ಅದರ ವಿಕಾರವೆ ನಮಗೆ ಮಹತ್ವ!
*****

Tagged:

Leave a Reply

Your email address will not be published. Required fields are marked *

ಅವಳು ಯಾವ ಹುಡುಗರ ಜೊತ ನಿಂತು ಮಾತನಾಡಿದರೂ ಶ್ರೀಕಾಂತನಪಾಲಿಗೆ ಆ ಹುಡುಗರು ವಿಲನ್‌ಗಳಂತೆಯೇ ಭಾಸವಾಗುತ್ತಿದ್ದರು. ಅವಳು ತನ್ನ ಕಾಲೇಜಿನ ಲೆಕ್ಚರರ್‌ಗಳು ಪಾಠ ಮಾಡುವ ವೈಖರಿ ಸ್ಟೈಲು ಹೈಲುಗಳ ಕುರಿತು ಬಣ್ಣಿಸುವಾಗಲೂ ಕೇಳಲಾಗದೆ ಶ್ರೀಯ ಹೊಟ್ಟೆಯಲೆಲ್ಲಾ ತಳಮಳ. ಅಷ್ಟೇಕೆ ಅವಳು ತನ್ನ ತ...

ಬೆಳಿಗ್ಗೆ ಏಳರ ಸಮಯ ಮೈಸೂರಿನ ರೋಹಿಣಿ ಲಾಡ್ಜ್‌ನ ಕೊಠಡಿ ಸಂಖ್ಯೆ ೧೦೩. ಪೋಲೀಸರು, ಪತ್ರಕರ್ತರು, ಫೊಟೋ ಗ್ರಾಫರ್‌ಗಳಿಂದ ತುಂಬಿಹೋಗಿದೆ. ಬೆಳ್ಳಂ ಬೆಳಿಗ್ಗೆಯೇ ಯುವತಿಯೊಬ್ಬಳ ಕೊಲೆ ನಡೆದುಹೋಗಿದೆ. ಲಾಡ್ಜ್‌ನ ಹೊರಗೆ ಜನರು ಕುತೂಹಲಭರಿತರಾಗಿ ಸೇರಿದ್ದಾರೆ. ಸೇರಿದ್ದ ಜನರನ್ನು ನಿಯಂತ್ರ...

೧ ಗೌರಿಯ ಹಬ್ಬವು ಕಳೆದು ಕೆಲವು ದಿನಗಳಾಗಿದ್ದುವು. ಭಾಗೀರಥಮ್ಮನೂ ಅವಳ ಜೊತೆಯ ಹುಡುಗಿಯರೂ ಒಂದೊಂದು ದಿನವನ್ನು ಕಳೆಯುವುದೂ ಒಂದೊಂದು ಯುಗವನ್ನು ಕಳೆದಂತೆ ಕಷ್ಟವಾಗಿದ್ದಿತು. ಅವರು ಎಷ್ಟು ಕುತೂಹಲದಿಂದ ಬಯಸಿದರೂ ದಿನಗಳು ಬೇಗ ಬೇಗ ಉರುಳಲೊಲ್ಲವು. ಒಂದು ದಿನ ಅವರೆಲ್ಲರೂ ಸೇರಿ ಕವಡೆಯ...

ಸಂಜೆ ನಾಲ್ಕು ಗಂಟೆಯಾದರೆ ಸಾಕು. ಅವರೆಲ್ಲರೂ ಒಬ್ಬೊಬ್ಬರಾಗಿ ಬಂದು ಸೇರುತ್ತಾರೆ. ಅದೊಂದು ಪಂಚಾಯಿತಿ ಕಟ್ಟೆ ಇದ್ದಂತೆ. ಮಧ್ಯದಲ್ಲೊಂದು ಸಿಮೆಂಟ್ ಬೆಂಚು, ಅದರ ಎಡ, ಬಲ ಎರಡೂ ಕಡೆ ಇವರೇ ಒಂದಷ್ಟು ಕಲ್ಲು ಚಪ್ಪಡಿಗಳನ್ನು ಎಳೆದು ತಂದು ಕೊಡುವುದಕ್ಕೆ ಪೀಠಗಳನ್ನು ಮಾಡಿಕೊಂಡಿದ್ದಾರೆ. ಸ...

ತಿಮ್ಮಣ್ಣ ನಮ್ಮೂರಿನ ಪಕ್ಕದ ಹಳ್ಳಿಯಲ್ಲಿನ ಅಡುಗೆ ಭಟ್ಟ ತಿಪ್ಪಾಭಟ್ಟರ ಮಗ. ತಿಪ್ಪಾಭಟ್ಟರಿಗೆ ಮದುವೆಯಾಗಿ ಹತ್ತು ವರ್ಷ ಕಳೆದರೂ ಮಕ್ಕಳಾಗಿರಲಿಲ್ಲ. ಕೊನೆಗೆ ಪಕ್ಕದ ಮನೆಯ ಕಮಲಾಕ್ಷಮ್ಮನ ಸಲಹೆ ಮೇರೆಗೆ ಮಗುವಾದರೆ ತಿರುಪತಿಗೆ ಹೋಗಿ ಬರುವ ಹರಕೆ ಹೊತ್ತರು. ತಿಮ್ಮಪ್ಪನ ಕೃಪಾಕಟಾಕ್ಷವೋ ...

ಬೆಳಗಿನ ಜಾವ ಆಗಲೇ ಐದು ಬಡಿದಿತ್ತು. ಎಲ್ಲೋ ಮಾಮರದಲ್ಲಿ ಕೋಗಿಲೆಯೂ ಕುಹೂ ಕುಹೂ ಎಂದು ಹಾಡುತಿತ್ತು. ಅಲ್ಲಲ್ಲಿ ಗಿಡಮರಗಳಲ್ಲಿ ಹಕ್ಕಿಗಳ ಚಿಲಿಚಿಲಿ ಕಲರವದೊಂದಿಗೆ ಸುಪ್ರಭಾತ ಹಾಡುತ್ತಿದ್ದವು. ಪ್ರಶಾಂತವಾದ ವಾತಾವರಣದಲ್ಲಿ ಸ್ವಾಮೀಜಿ, ಬೆಳಗಿನ ಪೂಜೆ ಮುಗಿಸಿ, ನಿತ್ಯದಂತೆ ಮಠದ ಪಾಕಶಾ...