ಒರೆಸಿಬಿಡು ಬೇಕಾದರೆ ಗೋಳಿಡುವ ಈ ದುರ್ಬಲ ಬದುಕನ್ನು,
ಬೋರ್ಡಿನ ಮೇಲೆ ಬರೆದ ಅಲ್ಪಾಯುಷಿ ಅಕ್ಷರಗಳನ್ನು
ಡಸ್ಟರು ಸುಮ್ಮನೆ ಒರೆಸಿಬಿಡುವಂತೆ.
ನಿನ್ನವರ್ತುಲಕ್ಕೆ ಮತ್ತೆ ಹೆಜ್ಜೆ ಇಡಲು ಕಾದಿದ್ದೇನೆ
ನಾನು ಹೆಜ್ಜೆ ಇಟ್ಟು ನಡೆದು ಬಳಲಿದ
ಹಾದಿಗಳೆಲ್ಲ ನಿನ್ನಲ್ಲಿ ತಲುಪಿ ನೆಲೆಗೊಳ್ಳಲಿ ಬಿಡು.
ನಡೆ ನಡೆಯುತ್ತ ನನ್ನ ನಿಜ ದಂದುಗ
ಮರೆವೆಗೆ ಸಂದಿತ್ತು-ನಾನಿಲ್ಲಿಗೆ ಮತ್ತೆ ಬಂದಿರುವುದೇ ಸಾಕ್ಷಿ.
ನನ್ನ ಮಾತು ವಚನವಾಗದೆ ಬರಿಯ ರಚನೆಯಾಗಿತ್ತು.
ದಡಕ್ಕೊಮ್ಮೆ ಬಡಿದು ಉಲಿಯುವ ನಿನ್ನ ಅಲೆದನಿ
ಕೇಳಿದಾಗ ಒಮ್ಮೊಮ್ಮೆ, ಮರೆತ ತನ್ನೂರನ್ನು ನೆನೆವ
ಅಳಿಮನದವನಂತೆ ನನ್ನೆದೆ ತಳಮಳಗೊಳ್ಳುತ್ತಿತ್ತು.
ನೀಲವಿಸ್ತಾರಕ್ಕೆ ಎದೆತೆರೆದೊಡ್ಡಿ ಹರಡಿರುವ ನಿನ್ನ ಬಯಲ ಸೌಂದಯರ್ಯಕ್ಕಿಂತ
ನಟ್ಟ ನಡುಹಗಲ ಬಿಸಿಲುರಿಯಲ್ಲಿ, ನಿರ್ಜನ ದಡದಲ್ಲಿ,
ಕೇಳುವ ನಿನ್ನ ಅಲೆಗಳ ಸದ್ದಿರದ ಏದುಬ್ಬಸದ ದನಿ
ಪಾಠ ಕಲಿಸಿದೆ ನನಗೆ ಶರಣು ಶರಣು ನಿನಗೆ.
ಬೆಳಕಿನ ಕಿರಣದೊಂದು ಅಣುವು ಮಾತ್ರ ನಾನು.
ಉರಿವುದೊಂದು ಬಿಟ್ಟು ಇನ್ಯಾವ ಅರ್ಥವೂ ಇಲ್ಲ ನನಗೆ.
*****
ಮೂಲ: ಯೂಜೀನ್ ಮಾಂಟೇಲ್ / Eugenio Montale
Related Post
ಸಣ್ಣ ಕತೆ
-
ನಂಟಿನ ಕೊನೆಯ ಬಲ್ಲವರಾರು?
ಕುಳಿತವನು ಅಲುಗದಂತೆ ತದೇಕ ಚಿತ್ತದಿಂದ ಕಡಲನ್ನು ನೋಡುತ್ತಿದ್ದ. ಹಾಗೇ ಕುಳಿತು ಅರ್ಧಗಂಟೆ ಕಳೆದಿತ್ತು. ಮೊಲದ ಬಾರಿಗೆ ಕಡಲ ಕಂಡವನ ಚಿತ್ತ ಕಲಕುವುದೇಕೆಂದು ಕುಳಿತಲ್ಲೇ ಅವನನ್ನು ಬಿಟ್ಟು ತಿರುಗಾಡಿ… Read more…
-
ಗದ್ದೆ
ಅದೊಂದು ಬೆಟ್ಟದ ಊರು. ಪುಟ್ಟ ಪುಟ್ಟ ಗುಡ್ಡಕ್ಕೆ ತಾಗಿಕೊಂಡು ಸಂದಿಯಲ್ಲಿ ಗೊಂದಿಯಲ್ಲಿ ಎದ್ದ ಗುಡಿಸಲುಗಳು ಅರ್ಥಾತ್ ಈ ಜೀವನ ಕಳೆಯೋ ಬಗೆಯಲಿ ಕಟ್ಟಿಕೊಂಡ ಪುಟ್ಟ ಮನೆಗಳು ಹೊತ್ತು… Read more…
-
ಬಸವನ ನಾಡಿನಲಿ
೧೯೯೧ರಲ್ಲಿ ನಾ ವಿಭಾಗೀಯ ಸಾರಿಗೆ ಅಧಿಕಾರಿ ಎಂದು ಬಡ್ತಿ ಹೊಂದಿದೆ! ಇಷ್ಟಕ್ಕೆ ಕೆಲವರು ಹೊಟ್ಟೆ ಉರಿ ಬಿದ್ದರು. ಪ್ರಾಮಾಣಿಕರು, ಶೋಷಿತರು, ವಂಚಿತರು, ಪಾಪದವರು, ಮುಂದೆ ಬರಲಿ ಎಂಬ… Read more…
-
ದಿನಚರಿಯ ಪುಟದಿಂದ
ಮಂಗಳೂರಿನ ಹೃದಯ ಭಾಗದಿಂದ ಸುಮಾರು ೧೫ ಕಿ.ಮೀ. ದೂರದಲ್ಲಿರುವ ಚಿತ್ರಾಪುರ ಪೇಟೆ ಕೆಲವು ವಿಷಯಗಳಲ್ಲಿ ಪ್ರಖ್ಯಾತಿಯನ್ನು ಹೊಂದಿದೆ. ಸಿಟಿಬಸ್ಸುಗಳು ಇಲ್ಲಿ ಓಡಾಡುತ್ತಿಲ್ಲವಾದರೂ ಬಸ್ಸುಗಳಿಗೇನೂ ಕಮ್ಮಿಯಿಲ್ಲ. ಎಕ್ಸ್ಪ್ರೆಸ್ ಬಸ್ಸುಗಳು… Read more…
-
ಅಪರೂಪದ ಬಾಂಧವ್ಯ
ಹೆತ್ತ ತಾಯಿ ಬಿಟ್ಟುಹೋದ ಎರಡು ಮುಂಗಸಿ ಮರಿಗಳು ಅನಾಥವಾಗಿ ಚೀರಾಡುತ್ತಿದ್ದುದು, ಮನೆಯ ಮಕ್ಕಳ ಕಣ್ಣಿಗೆ ಬಿದ್ದಿತು. "ಅಪ್ಪಾ ಇಲ್ಲಿ ನೋಡು, ಮುಂಗುಸಿ ಮರಿ ಅಳುತ್ತಾ ಇವೆ. ಅದಕ್ಕೆ… Read more…