ವಿಗ್ರಹ

ಹೌದು, ನನಗವನು ಗೊತ್ತಿದ್ದ. ವರ್ಷಗಟ್ಟಲೆ ಅವನೊಡನೆ ಇದ್ದೆ.
ಚಿನ್ನದಂಥ ಮನುಷ್ಯ, ಕಲ್ಲಿನಷ್ಟು ಗಟ್ಟಿ. ಸುಸ್ತಾಗಿದ್ದ.
ಪೆರುಗ್ವೇಯಲ್ಲಿ ಅಪ್ಪ ಅಮ್ಮನನ್ನು ಬಿಟ್ಟು
ಮಕ್ಕಳನ್ನು ಬಿಟ್ಟು, ಮಾವ ಚಿಕ್ಚಪ್ಪಂದಿರನ್ನು ಬಿಟ್ಟು
ಹೊಸದಾಗಿ ಭಾವನಂಟರಾದವರನ್ನು ಬಿಟ್ಟು,
ಮನೆ ಬಿಟ್ಟು, ಸಾಕಿದ್ದ ಕೋಳಿ ಬಿಟ್ಟು,
ಅರ್ಧ ಓದಿದ್ದ, ಇನ್ನೂ ಓದದೇ ಇದ್ದ ಪುಸ್ತಕ ಬಿಟ್ಟು
ಹೋಗಿದ್ದ. ಬಾಗಿಲು ತಟ್ಟಿದಾಗ ಅವನೆ ತೆರೆದ,
ಪೊಲೀಸರು ಹಿಡಿದುಕೊಂಡು ಹೋದರು.
ಹೊಡೆದರು, ಫ್ರಾನ್ಸು, ಡೆನ್ಮಾರ್‍ಕು
ಸ್ಪೇನು, ಇಟಲಿ ಹೋದಲೆಲ್ಲ ರಕ್ತಕಾರಿಕೊಂಡ.
ಅಲೆದಾಡುತ್ತಲೇ ಸತ್ತ. ನನಗೀಗ ಅವನ ಮುಖ ಕಾಣುತ್ತಿಲ್ಲ.
ಗಂಭೀರ ಮೌನ ಕೇಳಿಸುತ್ತಿಲ್ಲ. ಆಮೇಲೆ ಒಮ್ಮೆ,
ಬಿರುಗಾಳಿ ರಾತ್ರಿಯಲ್ಲಿ,
ಬೆಟ್ಟಕ್ಕೆ ಹಿಮದ ನಯ ಬಟ್ಟೆ ಕವಿಯುತ್ತಿದ್ದಾಗ,
ಕುದುರೆ ಮೇಲೆ ಹೋಗುತ್ತಾ
ಅಲ್ಲಿ, ದೂರದಲ್ಲಿ, ಗೆಳೆಯನನ್ನು ಕಂಡೆ.
ಕಲ್ಲಿನಲ್ಲಿ ಮೂಡಿದ್ದ ಮುಖ,
ಕಾಡು ಹವೆಯ ಧಿಕ್ಕರಿಸಿದ ಭಾವ,
ಪೀಡಿತರ ನರಳಾಟವನ್ನು ಮುಖಕ್ಕೆ ತಂದಪ್ಪಳಿಸುವ ಗಾಳಿ.
ಅಲ್ಲಿ ಗಡೀಪಾರಾದವನು ನೆಲೆ ಮುಟ್ಟಿದ.
ತನ್ನದೇ ದೇಶದಲ್ಲಿ ಕಲ್ಲಾಗಿ ಬದುಕಿದ.
*****
ಮೂಲ: ಪಾಬ್ಲೋ ನೆರುಡಾ / Pablo Neruda

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ನಮಿಸುವೆ ಶಾರದೆ
Next post ವ್ಯಾಕರಣ ಮತ್ತು ದೇವರು

ಸಣ್ಣ ಕತೆ

  • ಯಿದು ನಿಜದಿ ಕತೀ…

    ಯೀ ಕತೀನ ನಾ... ಯೀಗಾಗ್ಲೇ, ಬರ್ಲೇಬೇಕಾಗಿತ್ತು! ಆದ್ರೆ ನಾ ಯೀತನ್ಕ...  ಯಾಕೆ ಬರ್ಲೀಲ್ಲ? ನನ್ಗೇ ಗೊತ್ತಿಲ್ಲ. ಯಿದು ನಡೆದಿದ್ದು... ೧೯೬೬ರಲ್ಲಿ. ‘ವುಗಾದಿ ಮುಂದೆ ತಗಾದಿ...’ ಅಂಬಂಗೆ,  ವುಗಾದಿ… Read more…

  • ಇರುವುದೆಲ್ಲವ ಬಿಟ್ಟು

    ನಿಂತ ರೈಲು ಬೋಗಿಯೊಳಗಿಂದ ನನ್ನ ದೃಷ್ಟಿ ಹೊರಗಿನ ನಿಲ್ದಾಣವನ್ನು ವೀಕ್ಷಿಸುತ್ತಿತ್ತೇ ಹೊರತು ನನ್ನ ಮನಸ್ಸು ಮಾತ್ರ ನಾಗಾಲೋಟದಿಂದ ಓಡುತ್ತಿತ್ತು. ಒಂದು ರೀತಿಯಲ್ಲಿ ಆಲೋಚನೆಗಳು ನನ್ನ ಗೆಳೆಯ ಎಂದೇ… Read more…

  • ಬಾಗಿಲು ತೆರೆದಿತ್ತು

    ಆ ಮನೆಯ ಮುಂದಿನ ಬಾಗಿಲು ಯಾವಾಗಲೂ ಇಕ್ಕಿರುವುದು! ನನ್ನ ಓದುವ ಕೋಣೆಯ ಕಿಡಿಕೆಯೊಳಗಿಂದ ಆ ಮನೆಯ ಬಾಗಿಲು ಕಾಣುವುದು. ನಾನು ಕಿಡಿಕೆಯೊಳಗಿಂದ ಎಷ್ಟೋ ಸಲ ಅತ್ತ ಕಡೆ… Read more…

  • ಆನುಗೋಲು

    ರೈಲು ನಿಲ್ದಾಣದಲ್ಲಿ ನಿಂತಿತು! "ಪೇಪರ! ಡೇಲಿ ಪೇಪರ!........ಟಾಯಿಮ್ಸ, ಫ್ರೀ ಪ್ರೆಸ್, ಸಕಾಳ! ಪ್ಲಾಟ ಫಾರ್ಮ ಮೇಲಿನ ಜನರ ನೂರೆಂಟು ಗದ್ದಲದಲ್ಲಿ ಈ ಧ್ವನಿಯು ಎದ್ದು ಕೇಳಿಸುತ್ತಿತ್ತು. ಹೋಗುವವರ… Read more…

  • ಆಪ್ತಮಿತ್ರ

    ಧಾರಾಕಾರವಾಗಿ ಮಳೆ ಸುರಿಯುತ್ತಿತ್ತು. ದೊಡ್ಡದೊಡ್ಡ ಮರಗಳು ಭೋರ್ ಎಂದು ಬೀಸುವ ಗಾಳಿಯಲ್ಲಿ ತೂಗಾಡುತ್ತಿದ್ದವು. ಇಂಗ್ಲೆಂಡಿನ ಆ ಚಳಿ ಮಳೆಯಲ್ಲಿ ಎರಡು ಆಪ್ತಮಿತ್ರ ಜೀವಗಳು ಒಂದನ್ನು ಅನುಸರಿಸಿ ಇನ್ನೊಂದು… Read more…